Showing posts with label ಲೀನಮಾಗಿಹುದಂತು ವಿಶದಮೀ ಕನ್ನಡಂ. Show all posts
Showing posts with label ಲೀನಮಾಗಿಹುದಂತು ವಿಶದಮೀ ಕನ್ನಡಂ. Show all posts

Tuesday, December 23, 2014

ಲೀನಮಾಗಿಹುದಂತು ವಿಶದಮೀ ಕನ್ನಡಂ (710)

ಲೀನಮಾಗಿಹುದಂತು ವಿಶದಮೀ ಕನ್ನಡಂ |
ಕ್ಷೋಣಿಯೊಳಗೆಂದನಾ ಸುಕವಿ ನೃಪತುಂಗಂ ||
ನೀನುಮಂತು ವಿಲೀನ ವಿಶ್ವಜನಜೀವನದಿ |
ದಾನದಿಂದಲೆ ವಿಶದ - ಮರುಳ ಮುನಿಯ || (೭೧೦)

(ಲೀನಂ+ಆಗಿ+ಇಹುದು+ಅಂತು)(ವಿಶದಂ+ಈ)(ಕ್ಷೋಣಿ+ಒಳಗೆ+ಎಂದನ್+ಆ)(ನೀನುಂ+ಅಂತು)

ಈ ಜಗತ್ತಿನ ಕೋಟಿ ಕೋಟಿ ಕನ್ನಡಿಗರಲ್ಲಿ ಕನ್ನಡವು ಮ್ರೆಯುತ್ತಿದೆ. ಈ ರೀತಿ ಕನ್ನಡ ಭಾಷೆಯು ಪ್ರಪಂಚ(ಕ್ಷೋಣಿ)ದಲ್ಲಿ ಸೇರಿಕೊಂಡು ಹೋಗಿದ್ದರೂ, ಸ್ಪಷ್ಟ(ವಿಶದ)ವಾಗಿ ಗೋಚರಿಸುತ್ತದೆ ಎಂದು ಶ್ರೇಷ್ಠ ಕವಿ ನೃಪತುಂಗನು ಹೇಳಿರುವನು. ಹಾಗೆಯೇ ಜಗತ್ತಿನ ಕೋಟ್ಯಾಂತರ ಜನರಲ್ಲಿ ನೀನು ಲೀನನಾಗಿದ್ದು ದಾನದಿಂದ ಮತ್ತು ಕೊಡುಗೆಗಳಿಂದ ಅವ್ಯಕ್ತನಾಗಿ ಕಾಣಿಸಿಕೊ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Poet Nrumatunga sang that Kannada is very well-known
And it lives merged all over the world.
You too should likewise be one with the life of the whole humanity
And become noteworthy by charity – Marula Muniya (710)
(Translation from "Thus Sang Marula Muniya" by Sri. Narasimha Bhat)