Showing posts with label ಸೃಷ್ಟಿಯೊಳು ದಂಡಾರ್ಹರಾರೆಂದು ಕೇಳಿದೊಡೆ. Show all posts
Showing posts with label ಸೃಷ್ಟಿಯೊಳು ದಂಡಾರ್ಹರಾರೆಂದು ಕೇಳಿದೊಡೆ. Show all posts

Tuesday, January 13, 2015

ಸೃಷ್ಟಿಯೊಳು ದಂಡಾರ್ಹರಾರೆಂದು ಕೇಳಿದೊಡೆ (719)

ಸೃಷ್ಟಿಯೊಳು ದಂಡಾರ್ಹರಾರೆಂದು ಕೇಳಿದೊಡೆ |
ಸೃಷ್ಟಿಕರ್ತನೆ ಮೊದಲು ದಂಡ್ಯನೆಂಬೆನು ನಾಂ ||
ಸೊಟ್ಟನವನಿರಿಸಿಟ್ಟು ನೆಟ್ಟಗಿಸು ನೀನೆಂಬ |
ಕಟ್ಟಲೆಯದೇಂ ನ್ಯಾಯ? - ಮರುಳ ಮುನಿಯ || (೭೧೯)

(ದಂಡ+ಅರ್ಹರ್+ಆರ್+ಎಂದು)(ದಂಡ್ಯನ್+ಎಂಬೆನು)(ಸೊಟ್ಟನ್+ಅವನ್+ಇರಿಸಿ+ಇಟ್ಟು)(ನೆಟ್ಟಗೆ+ಇಸು)(ನೀನ್+ಎಂಬ)(ಕಟ್ಟಲೆ+ಅದು+ಏಂ)

ಸೃಷ್ಟಿಯಲ್ಲಿ ಯಾರನ್ನು ಶಿಕ್ಷೆಗೆ ಗುರಿಪಡಿಸಬೇಕೆಂದು ನನ್ನನ್ನು ಕೇಳಿದರೆ, ಮೊಟ್ಟ ಮೊದಲಿಗೆ ಸೃಷ್ಟಿಕರ್ತನಾದ ಪರಮಾತ್ಮನನ್ನೇ ಶಿಕ್ಷೆಗೆ ಗುರಿಪಡಿಸಬೇಕೆಂದು ನಾನು ಹೇಳುತ್ತೇನೆ. ಪ್ರಪಂಚದ ಸೃಷ್ಟಿಯಲ್ಲಿ ಅನೇಕಾನೇಕ ಡೊಂಕುಗಳನ್ನಿರಿಸಿ ಇದನ್ನು ನೀನು ಸರಿಪಡಿಸು ಎನ್ನುವ ನಿಯಮದಲ್ಲಿ ನ್ಯಾಯವೆಲ್ಲಿದೆ?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Who is the culprit to be punished first in this creation?
I would say that the Creator Himself is to be punished first.
Is it just on His part to create a world teeming with distortions
And then ordering us to set them right? – Marula Muniya (719)
(Translation from "Thus Sang Marula Muniya" by Sri. Narasimha Bhat)