Showing posts with label ತತ್ತ್ವ ಭಾಸ್ಕರ ದೀಪ್ತಿಯೆರಡೆಡೆಗೆ ಜೀವಕ್ಕೆ. Show all posts
Showing posts with label ತತ್ತ್ವ ಭಾಸ್ಕರ ದೀಪ್ತಿಯೆರಡೆಡೆಗೆ ಜೀವಕ್ಕೆ. Show all posts

Monday, December 15, 2014

ತತ್ತ್ವ ಭಾಸ್ಕರ ದೀಪ್ತಿಯೆರಡೆಡೆಗೆ ಜೀವಕ್ಕೆ (707)

ತತ್ತ್ವ ಭಾಸ್ಕರ ದೀಪ್ತಿಯೆರಡೆಡೆಗೆ ಜೀವಕ್ಕೆ |
ಮಸ್ತಕದ ಗಿರಿಶಿಖರದಲಿ ಶಾಸ್ತ್ರವೊಂದು ||
ಹೃತ್ಸಾನುವೊಳ್ ಕಾವ್ಯ ನಿಂತು ಹಿತಮಿರೆ ತಂಗಿ |
ಮೃಚ್ಛಿಲೆಗೆ ಸಂಸ್ಕಾರ - ಮರುಳ ಮುನಿಯ || (೭೦೭)

(ದೀಪ್ತಿ+ಎರಡು+ಎಡೆಗೆ)(ಹೃತ್+ಸಾನು+ಒಳ್)(ಹಿತಂ+ಇರೆ)(ಮೃತ್+ಶಿಲೆ)

ತತ್ತ್ವ ಮತ್ತು ಸೂರ್ಯನ ಕಿರಣಗಳು ಜೀವದ ಎರಡು ಬದಿಗಳು ಇದ್ದಂತೆ ಶಿರಸ್ಸೆಂಬ(ಮಸ್ತಕ) ಬೆಟ್ಟದ ತುದಿಯಲ್ಲಿ ಶಾಸ್ತ್ರ ಮತ್ತು ಹೃದಯವೆಂಬ ಬೆಟ್ಟದ ತಪ್ಪಲಿ(ಸಾನು)ನಲ್ಲಿ ಕಾವ್ಯವು ಹಿತವಾಗಿ ನೆಲೆಯೂರಿದರೆ ಮಣ್ಣು (ಮೃತ್) ಮತ್ತು ಕಲ್ಲು(ಶಿಲೆ)ಗಳಿಂದ ಕೂಡಿದ ಈ ದೇಹದ ಶುದ್ಧ ಮಾಡುವಿಕೆಯಾಗುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The sum of divine truth shines at two places in man,
The sunbeams settle as shastras on the hill top of humanhead
The rays as poetry fall into hillside valley giving comfort
Both refine the soil and stone in the human being – Marula Muniya (707)
(Translation from "Thus Sang Marula Muniya" by Sri. Narasimha Bhat)