Showing posts with label 242. Show all posts
Showing posts with label 242. Show all posts

Thursday, July 12, 2012

ಅರ್ಚನೆ ಜಪ ಧ್ಯಾನ ಯಾತ್ರೆ ಮನದ ಸ್ಥಿತಿಗೆ (242)

ಅರ್ಚನೆ ಜಪ ಧ್ಯಾನ ಯಾತ್ರೆ ಮನದ ಸ್ಥಿತಿಗೆ |
ಚರ್ಚೆ ತರ್ಕ ವಿಚಾರ ಮತಿಯ ವಿಶದತೆಗೆ ||
ಪೆರ‍್ಚಿದ ತಪೋಯೋಗಯಜ್ಞಾದಿಯಾತುಮದ |
ವರ್ಚಸ್ಸಿಗಪ್ಪುದೆಲೊ - ಮರುಳ ಮುನಿಯ || (೨೪೨)

(ತಪೋಯೋಗ+ಯಜ್ಞ+ಆದಿ+ಆತುಮದ)(ವರ್ಚಸ್ಸಿಗೆ+ಅಪ್ಪುದು+ಎಲೊ)

ಪೂಜೆ, ಜಪ, ಧ್ಯಾನ ಮತ್ತು ತೀರ್ಥಯಾತ್ರೆಗಳು ಮನಸ್ಸನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳುವುದಕ್ಕೂ, ವಾದ ವಿವಾದಗಳು, ತರ್ಕ ಮತ್ತು ಅಲೋಚನೆಗಳು ಬುದ್ಧಿಯ ಖಚಿತತೆಗೂ ಮತ್ತು ಇವೆಲ್ಲಕ್ಕಿಂತಲೂ ಮಿಗಿಲಾದ ತಪಸ್ಸು, ಯೋಗ ಮತ್ತು ಯಜ್ಞ ಇತ್ಯಾದಿಗಳು ಆತ್ಮದ ತೇಜಸ್ಸಿಗೂ ಯೋಗ್ಯವಾಗುತ್ತವೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Worship, prayer, meditation and pilgrimage are for mind’s welfare
Discussions and arguments for clear understanding
Penance and selfless service are taken up
To make the Atman radiant – Marula Muniya
(Translation from "Thus Sang Marula Muniya" by Sri. Narasimha Bhat)