Tuesday, August 25, 2015

ಪುರುಷನೋಲಗವೆಲ್ಲ ಮರಣದೂಳಿಗವೆನುತ (787)

ಪುರುಷನೋಲಗವೆಲ್ಲ ಮರಣದೂಳಿಗವೆನುತ |
ಕೊರಗುತಿರಲಪ್ಪುದೇನ್? (ಅದು ತಪ್ಪಿತೇನು?)||
ನರಜನುಮ ಪರಿಶುದ್ಧಿಯವಕಾಶವರಿತದನು |
ಪರಿಪುಷ್ಟಿಯನು ಗಳಿಸು - ಮರುಳ ಮುನಿಯ || (೭೮೭)

(ಪುರುಷನ+ಓಲಗವೆಲ್ಲ)(ಮರಣದ+ಊಳಿಗ+ಎನುತ)(ಕೊರಗುತ+ಇರಲ್+ಅಪ್ಪುದು+ಏನ್)(ಪರಿಶುದ್ಧಿಯ+ಅವಕಾಶ+ಅರಿತು+ಅದನು)

ಮನುಷ್ಯನ ದರ್ಬಾರು ಮತ್ತು ದೌಲತ್ತುಗಳೆಲ್ಲವೂ (ಓಲಗ) ಕೊನೆಗೆ ಒಂದು ದಿನ ಸಾವನ್ನು ಅಪ್ಪಲು ನಡೆಸುತ್ತಿರುವ ಚಾಕರಿ ಎಂದೆನುತ್ತಾ, ದುಃಖಿಸುತ್ತಿದ್ದರೇನು ಬಂತು? ಇದನ್ನು ತಪ್ಪಿಸಲಾಗುವುದೇನು? ಮನುಷ್ಯ ಜನ್ಮವು ಅವನು ಅತ್ಯಂತ ಶುದ್ಧನಾಗಲು ಪರಮಾತ್ಮನು ಕೊಟ್ಟಿರುವ ಒಂದು ಸದಾವಕಾಶ. ಇದನ್ನು ನೀನು ತಿಳಿದುಕೊಂಡು ನಿನ್ನ ಜೀವನವು ಸಮೃದ್ಧಿಯಾಗುವಂತೆ (ಪರಿಪುಷ್ಟ) ಮಾಡಿಕೊ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Even a royal life of man is mere menial service under master Death
What do you gain by grieving so?
Human life is an opportunity for purification
Know this and acquire excellence – Marula Muniya (787)
(Translation from "Thus Sang Marula Muniya" by Sri. Narasimha Bhat)


No comments:

Post a Comment