Wednesday, October 14, 2015

ಅರಸು ನಿನ್ನೊಳಹಂತೆ ಎಲ್ಲಿಹುದೊ ಎಂತಿಹುದೊ (792)

ಅರಸು ನಿನ್ನೊಳಹಂತೆ ಎಲ್ಲಿಹುದೊ ಎಂತಿಹುದೊ |
ಸಿರಿಯಾಶೆ ಸುಖದಾಶೆ ಬಂಧುಜನದಾಶೆ ||
ಬಿರುದು ಯಶದಾಶೆಗಳು ಬೇರೆ ರೂಪದಲಿಪ್ಪ |
ಗರುವವೆಲ್ಲವದಹುದು - ಮರುಳ ಮುನಿಯ || (೭೯೨)

(ನಿನ್ನ+ಒಳು+ಅಹಂತೆ)(ಎಲ್ಲಿ+ಇಹುದೊ)(ಎಂತು+ಇಹುದೊ)(ಗರುವ+ಎಲ್ಲ+ಅದು+ಅಹುದು)

ನಿನ್ನೊಳಗಡೆ ಅಹಂಭಾವವು ಎಲ್ಲಿ ಮತ್ತು ಯಾವ ರೂಪದಲ್ಲಿದೆಯೆಂದು ಹುಡುಕು. ಐಶ್ವರ್ಯವನ್ನು ಸಂಪಾದಿಸುವ ಆಶೆ, ಸುಖವನ್ನನುಭವಿಸುವ ಆಶೆ, ಬಂಧುಜನಗಳ ಜೊತೆ ಸಂಭ್ರಮದಿಂದಿರುವ ಬಯಕೆ, ಹೆಸರು, ಕೀರ್ತಿ ಮತ್ತು ಗೆಲುವುಗಳನ್ನು ಗಳಿಸುವ ಅಪೇಕ್ಷೆಗಳು, ಇವುಗಳೆಲ್ಲವೂ ಬೇರೆ ಬೇರೆ ರೂಪದಲ್ಲಿರುವ ಅಹಂಕಾರಗಳೇ ಹೌದು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Search out the ego in you and find out where and how it is,
The craving for wealth, sensual pleasures and loving relations
The craving for fame and titles are all egoism
Masquerading in various guises – Marula Muniya (792)
(Translation from "Thus Sang Marula Muniya" by Sri. Narasimha Bhat)

Friday, September 4, 2015

ಕಡಲೆರಡು ಸೃಷ್ಟಿಯಲಿ ನೀರರಾಶಿಯದೊಂದು (791)

ಕಡಲೆರಡು ಸೃಷ್ಟಿಯಲಿ ನೀರರಾಶಿಯದೊಂದು |
ಬಿಡುಗೊಳದ ಮನುಜಮಾನಸರಾಶಿಯೊಂದು ||
ಅಡಿಗಡುಗಳುಂಟು ನೀರ‍್ಗದನೆಳೆವ ಭಟರುಂಟು |
ತಡೆಯುಂಟೆ ನರಮನಕೆ? - ಮರುಳ ಮುನಿಯ || (೭೯೧)

(ಕಡಲ್+ಎರಡು)(ನೀರ+ರಾಶಿ+ಅದು+ಒಂದು)(ಮನುಜ+ಮಾನಸರಾಶಿ+ಒಂದು)(ಅಡಿಗಡುಗಳು+ಉಂಟು)(ನೀರ‍್ಗೆ+ಅದನ್+ಎಳೆವ)(ಭಟರು+ಉಂಟು)(ತಡೆ+ಉಂಟೆ)

ಸೃಷ್ಟಿಯಲ್ಲಿ ಎರಡು ಸಮುದ್ರಗಳಿವೆ. ಒಂದು ನೀರಿನರಾಶಿ. ಮತ್ತೊಂದು ನಿರಂತರವಾಗಿ ಹರಿಯುತ್ತಿರುವ ಮನುಷ್ಯನ ಮನಸ್ಸಿನ ವಿಚಾರಧಾರೆ. ಆ ನೀರಿನ ಕೆಳಗಡೆ ಗಡಿಗಳಿವೆ(ಅಡಿಗಡುಗಳು). ಅದನ್ನು ನೀರಿಗೆ ಎಳೆಯುವ ಸೇವಕರೂ ಇದ್ದಾರೆ. ಮನುಷ್ಯನ ಮನಸ್ಸಿಗೆ ತಡೆಗಳಿಲ್ಲ. ಅದು ಎಲ್ಲಿ ಬೇಕಾದರೂ ಹಾರುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Two oceans in creation, one is the vast mass of water
The other is the restless mass of human mind,
Bottom and borders there are to the ocean and brave men there are to measure them,
But who is there to check human mind? - Marula Muniya (791)
(Translation from "Thus Sang Marula Muniya" by Sri. Narasimha Bhat)

Thursday, September 3, 2015

ಸೈಸುವನೆ ಜೈಸುವನು ತಾಳ್ಮೆಯೇ ಮೇಲ್ಮೆಯೈ (790)

ಸೈಸುವನೆ ಜೈಸುವನು ತಾಳ್ಮೆಯೇ ಮೇಲ್ಮೆಯೈ |
ಸಾಸರೋಷಗಳಹುದು ದೋಷ ಭೀಷಣವು ||
ಸೈಸೇನು ಸೋಲಲ್ಲ ಅನ್ಯಾಯದೊಪ್ಪಲ್ಲ |
ಸೈಸುತೆದುರಿಸು ವಿಧಿಯ - ಮರುಳ ಮುನಿಯ || (೭೯೦)

(ಸಾಸ+ರೋಷಗಳ್+ಅಹುದು)(ಸೈಸುತ+ಎದುರಿಸು)

ಸಹಿಸು(ಸೈಸು)ವವನೇ ಜಯಿಸುತ್ತಾನೆ. ತಾಳುಮೆಯೇ ಮೇಲೇಳುವುದು. ತಾಳಿದವನು ಬಾಳಿಯಾನು. ವಿಚಾರಶೂನ್ಯ ಅಪೇಕ್ಷೆ (ಸಾಸ) ಮತ್ತು ಕೋಪ(ರೋಷ)ಗಳಿಂದ, ತಪ್ಪು ಮತ್ತು ಭಯಂಕರ(ಭೀಷಣ) ಅನಾಹುತಗಳಾಗಬಹುದು. ಸಹಿಸಿಕೊಂಡಿರುವುದು ಸೋತುಹೋದಂತೇನಲ್ಲ. ಅದು ಅನ್ಯಾಯವನ್ನು ಒಪ್ಪಿಕೊಂಡಂತೆಯೂ ಅಲ್ಲ. ಆದುದ್ದರಿಂದ ಸಹಿಸಿಕೊಂಡೇ ವಿಧಿಯನ್ನು ಎದುರಿಸು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

He who endures wins, patience itself is excellence,
Mad adventure and anger may end is dangerous blunder
Endurance isn’t defeat and acquiescence isn’t injustice
Endure and bravely face the Fate – Marula Muniya (790)
(Translation from "Thus Sang Marula Muniya" by Sri. Narasimha Bhat) #dvg,#kagga

Wednesday, September 2, 2015

ಸಹನೆ ಜೀವಕೆ ವಿಜಯ ಸಹಿಸು ಬಂದುದನೆಲ್ಲ (789)

ಸಹನೆ ಜೀವಕೆ ವಿಜಯ ಸಹಿಸು ಬಂದುದನೆಲ್ಲ |
ಸಹಿಸು ಬೇಡದ ಬಂದ ಪಾಡನೆಲ್ಲ |
ಸಹನೆ ನಿನ್ನಾತ್ಮವನು ಗಟ್ಟಿಪಡಿಪಭ್ಯಾಸ |
ವಿಹಿತವದು ಮನುಜಂಗೆ - ಮರುಳ ಮುನಿಯ || (೭೮೯)

(ಗಟ್ಟಿಪಡಿಪ+ಅಭ್ಯಾಸ)

ಒಂದು ಜೀವಕ್ಕೆ ಗೆಲುವು ಸಹನೆಯಿಂದ ಬರುತ್ತದೆ. ಆದುದ್ದರಿಂದ ನೀನು ಕೇಳಿಕೊಳ್ಳದಿದ್ದರೂ ಸಹ ನಿನ್ನ ಪಾಲಿಗೆ ಬಂದುದ್ದನೆಲ್ಲಾವನ್ನೂ ನೀನು ಸಹನೆಯಿಂದ ತಾಳಿಕೊ. ಅದು ನಿನ್ನ ಆತ್ಮವನ್ನು ಗಟ್ಟಿಗೊಳಿಸುವ ಸಾಧನವಾಗಿದೆ. ಮನುಷ್ಯನಿಗೆ ಬಾಳಲು ಯೋಗ್ಯವಾದ ಮಾರ್ಗ ಅದು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Endurance itself is success in life and therefore endure all that comes to you
Endure all joys and sorrows that come to you unmasked
Endurance is an exercise that strengthens your self
It is quite essential to man – Marula Muniya (789)
(Translation from "Thus Sang Marula Muniya" by Sri. Narasimha Bhat)

Tuesday, September 1, 2015

ಸತ್ತ್ವರಜತಮಗಳ ಸ್ಪರ್ಧೆಯೆ ಜಗಲ್ಲೀಲೆ (788)

ಸತ್ತ್ವರಜತಮಗಳ ಸ್ಪರ್ಧೆಯೆ ಜಗಲ್ಲೀಲೆ |
ಎತ್ತರದಲೆಯ ತೆರೆಯ ಬೀಳೇಳು ಕಡಲು ||
ಉತ್ತಮನು ಲೀಲೆಯಂ ಲೀಲೆಯೆಂದಾಡುವನು |
ಅತ್ತು ನಿಂತರು (ಕೆಲರು)-ಮರುಳ ಮುನಿಯ || (೭೮೮)

(ಎತ್ತರದ+ಅಲೆಯ)(ಬೀಳ್+ಏಳು)

ಸತ್ತ್ವ, ರಜಸ್ಸು ಮತ್ತು ತಮೋಗುಣಗಳು ಒಂದರ ಜೊತೆ ಇನ್ನೊಂದು ಸ್ಪರ್ಧಿಸುತ್ತಿರುವುದೇ ಈ ಜಗತ್ತಿನ ಆಟ. ಸಮುದ್ರದಲ್ಲಿ ಒಂದು ತೆರೆಯು ಮೇಲಕ್ಕೆ ಎದ್ದು ಪುನಃ ಕೆಳಕ್ಕೆ ಬೀಳುತ್ತದೆ. ಶ್ರೇಷ್ಠವಾಗಿ ಜೀವನವನ್ನು ನಡೆಸುವವನು, ಇದು ಒಂದು ಆಟವೆಂದು ತಿಳಿದುಕೊಂಡು ಆ ಆಟವನ್ನು ನಿಯಮಗಳಿಗನುಸಾರವಾಗಿ ಚೆನ್ನಾಗಿ ಆಡುತ್ತಾನೆ. ಮಿಕ್ಕವರು ದುಃಖಿಸುತ್ತಾ ಇರುತ್ತಾರೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The world play is a competition among satva, rajas and tamas
The sea is just the rise and fall of high waves
The wise considers this play as play
But others waste their lives in grieving – Marula Muniya (788)
(Translation from "Thus Sang Marula Muniya" by Sri. Narasimha Bhat)

Tuesday, August 25, 2015

ಪುರುಷನೋಲಗವೆಲ್ಲ ಮರಣದೂಳಿಗವೆನುತ (787)

ಪುರುಷನೋಲಗವೆಲ್ಲ ಮರಣದೂಳಿಗವೆನುತ |
ಕೊರಗುತಿರಲಪ್ಪುದೇನ್? (ಅದು ತಪ್ಪಿತೇನು?)||
ನರಜನುಮ ಪರಿಶುದ್ಧಿಯವಕಾಶವರಿತದನು |
ಪರಿಪುಷ್ಟಿಯನು ಗಳಿಸು - ಮರುಳ ಮುನಿಯ || (೭೮೭)

(ಪುರುಷನ+ಓಲಗವೆಲ್ಲ)(ಮರಣದ+ಊಳಿಗ+ಎನುತ)(ಕೊರಗುತ+ಇರಲ್+ಅಪ್ಪುದು+ಏನ್)(ಪರಿಶುದ್ಧಿಯ+ಅವಕಾಶ+ಅರಿತು+ಅದನು)

ಮನುಷ್ಯನ ದರ್ಬಾರು ಮತ್ತು ದೌಲತ್ತುಗಳೆಲ್ಲವೂ (ಓಲಗ) ಕೊನೆಗೆ ಒಂದು ದಿನ ಸಾವನ್ನು ಅಪ್ಪಲು ನಡೆಸುತ್ತಿರುವ ಚಾಕರಿ ಎಂದೆನುತ್ತಾ, ದುಃಖಿಸುತ್ತಿದ್ದರೇನು ಬಂತು? ಇದನ್ನು ತಪ್ಪಿಸಲಾಗುವುದೇನು? ಮನುಷ್ಯ ಜನ್ಮವು ಅವನು ಅತ್ಯಂತ ಶುದ್ಧನಾಗಲು ಪರಮಾತ್ಮನು ಕೊಟ್ಟಿರುವ ಒಂದು ಸದಾವಕಾಶ. ಇದನ್ನು ನೀನು ತಿಳಿದುಕೊಂಡು ನಿನ್ನ ಜೀವನವು ಸಮೃದ್ಧಿಯಾಗುವಂತೆ (ಪರಿಪುಷ್ಟ) ಮಾಡಿಕೊ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Even a royal life of man is mere menial service under master Death
What do you gain by grieving so?
Human life is an opportunity for purification
Know this and acquire excellence – Marula Muniya (787)
(Translation from "Thus Sang Marula Muniya" by Sri. Narasimha Bhat)


Friday, August 14, 2015

ಪೂರ್ವಜನ್ಮದ ಕರ್ಮಮನುಭವಿಸಲಹುದೀಗ (786)

ಪೂರ್ವಜನ್ಮದ ಕರ್ಮಮನುಭವಿಸಲಹುದೀಗ |
ಭಾವಿ ಕಾಲವುಮಿಹುದು ಶೇಷ ಮಿಕ್ಕಿರಲು ||
ಜೀವಕ್ಕೆ ಹಿಂದುಂಟು ಮುಂದುಂಟು ಮುಗಿವಿಲ್ಲ |
ಆವಗಂ ನೆನೆದು ಬಾಳ್ - ಮರುಳ ಮುನಿಯ || (೭೮೬)

(ಕರ್ಮಂ+ಅನುಭವಿಸಲ್+ಅಹುದು+ಈಗ)(ಕಾಲವುಂ+ಇಹುದು)(ಹಿಂದು+ಉಂಟು)(ಮುಂದು+ಉಂಟು)()

ನಾವು ಈವಾಗ ನಮ್ಮ ಹಿಂದಿನ ಜನ್ಮಗಳ ಕರ್ಮಗಳ ಫಲಗಳನ್ನನುಭವಿಸಲು ಹುಟ್ಟಿದ್ದೇವೆ. ಆದರೆ ಆ ಕರ್ಮಫಲಗಳ ಋಣಶೇಷಗಳಿನ್ನೂ ಇರುವುದರಿಂದ, ಭವಿಷ್ಯತ್ತಿನಲ್ಲೂ ನಾವು ಅವುಗಳನ್ನು ತೀರಿಸಬೇಕಾಗುತ್ತದೆ. ಒಂದು ಜೀವಕ್ಕೆ ಭೂತ ಮತ್ತು ಭವಿಷ್ಯತ್ತುಗಳೆರಡೂ ಇವೆ. ಮುಕ್ತಾಯ ಮಾತ್ರ ಇಲ್ಲ. ಇದನ್ನು ನೀನು ಎಂದೆಂದಿಗೂ ಜ್ಞಾಪಕದಲ್ಲಿಟ್ಟುಕೊಂಡು ನಿನ್ನ ಜೀವನವನ್ನು ನಡೆಸು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

You should experience the fruit of Karma of your past lives
You have your future lives if any balance still remains
A soul has a past and a future but it has no end
Keep this in mind always and live- Marula Muniya (786)
(Translation from "Thus Sang Marula Muniya" by Sri. Narasimha Bhat)

Tuesday, July 21, 2015

ಹಳೆಯ ಮನೆ ಮಳೆಯ ಹೊಡೆತದಿನುರುಳಿ ಮಣ್ಣಪ್ಪು(785)

ಹಳೆಯ ಮನೆ ಮಳೆಯ ಹೊಡೆತದಿನುರುಳಿ ಮಣ್ಣಪ್ಪು-|
ದಿಳೆಗೆ ದಿನದಿನದ ಪಾಡದರೊಳತಿಶಯವೇಂ? ||
ಅಳಿದ ಮನೆಯನು ಮರಳಿ ಕಟ್ಟಿ ನಿಲ್ಲಿಸಿ ಬಾಳ |
ಬೆಳಗಿದೊಡೆ ಸುಕೃತ ಕಥೆ - ಮರುಳ ಮುನಿಯ || (೭೮೫)

(ಹೊಡೆತದಿಂ+ಉರುಳಿ)(ಮಣ್ಣ್+ಅಪ್ಪುದು+ಇಳೆಗೆ)(ಪಾಡು+ಅದರೊಳ್+ಅತಿಶಯ+ಏಂ)

ಒಂದು ಹಳೆಯ ಮನೆಯು ಮಳೆಯ ಹೊಡೆತದಿಂದ ಬಿದ್ದು ಭೂಮಿ(ಇಳೆ)ಯಲ್ಲಿ ಸೇರಿಕೊಂಡು ಅದರ ಮಣ್ಣಲ್ಲಿ ಮಣ್ಣಾಗಿ ಹೋಗುತ್ತದೆ. ನಮ್ಮ ದಿನನಿತ್ಯದ ಅವಸ್ಥೆಗಳೂ ಇದಕ್ಕಿಂತ ಬೇರೆಯೇನಲ್ಲ? ಬಿದ್ದು ನಾಶವಾಗಿ ಹೋಗಿರುವ ಮನೆಯನ್ನು ಪುನಃ ಎತ್ತಿ ಕಟ್ಟಿ ಅದರಲ್ಲಿ ವಾಸಿಸುವವರ ಬಾಳು ಬೆಳಗುವಂತೆ ಮಾಡುವುದೇ ಪುಣ್ಯದ ಕೆಲಸ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

An old house crumbling under heavy rain
And becoming one with the earth is an everyday occurrence
And there’s no wonder in it, But reconstructing the fallen house
And lighting up one’s life is noble righteous act- Marula Muniya (785)
(Translation from "Thus Sang Marula Muniya" by Sri. Narasimha Bhat)

Thursday, July 16, 2015

ಸಹಿಸುವುದು ಸವಿಯುವುದು ಕಹಿಯೂಟ ಸವಿಯುವುದು (784)

ಸಹಿಸುವುದು ಸವಿಯುವುದು ಕಹಿಯೂಟ ಸವಿಯುವುದು |
ಬಹುವಾಯಿತೆಂದೆನದೆ ಕಹಿಯ ಸಹಿಸುವುದು ||
ಕಹಿ-ಸಿಹಿಗಳೆರಡಲ್ಲಮೊಂದೆಯೆನಿಪನ್ನೆಗಂ |
ಸಹಿಸುವುದು ಬಂದುದನು - ಮರುಳ ಮುನಿಯ || (೭೮೪)

(ಬಹು+ಆಯಿತು+ಎಂದು+ಎನದೆ)(ಸಿಹಿಗಳು+ಎರಡಲ್ಲಂ+ಒಂದೆ+ಎನಿಪ+ಅನ್ನೆಗಂ)

ಬಂದುದ್ದನ್ನು ತಾಳ್ಮೆಯಿಂದ ಸಹಿಸುವುದು. ಸಿಹಿಯಾದುದನ್ನು ಸವಿಯುವುದು. ಕಹಿಯಾಗಿರುವ ಊಟವನ್ನು ಮಾಡಿಯೂ ತಾಳ್ಮೆಯಿಂದಿರುವುದು. ಇದು ನನಗೆ ಸಾಕಾಯಿತೆನ್ನದೆ ಆ ಕಹಿಯನ್ನು ತಾಳಿಕೊಳ್ಳುವುದು. ಕಹಿ ಮತ್ತು ಸಿಹಿಗಳು ಬೇರೆ ಅಲ್ಲ, ಎರಡೂ ನನಗೆ ಸಮಾನ ಎಂಬ ಭಾವ ಸಿದ್ಧಿಸುವವರೆಗೂ ತಾಳ್ಮೆಯಿಂದಿದ್ದು, ಬಂದುದ್ದನ್ನೆಲ್ಲ ಸಹಿಸುತ್ತಿರು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Enduring enduring and enjoying even bitter food
Enduring bitterness, without grumbling that it is too bitter
Enduring everything till sweetness and bitterness become the same to you,
Endure everything that comes your way – Marula Muniya (784)
(Translation from "Thus Sang Marula Muniya" by Sri. Narasimha Bhat)

Wednesday, July 1, 2015

ಒಳಿತು ಕೇಡುಗಳೆರಡು ನಿನ್ನನುಭವದ ರೀತಿ (783)

ಒಳಿತು ಕೇಡುಗಳೆರಡು ನಿನ್ನನುಭವದ ರೀತಿ |
ಕಳವಳದಿನಾಚೆ ಮೇಲಿಹುದು ಪರಸತ್ತ್ವ ||
ಕಳಚು ನೀಂ ಸ್ವಾರ್ಥವನು ಬಳಕೆಯಾಚಾರವನು |
ತೊಳಗು ನಿಃಸ್ವಾರ್ಥದಲಿ - ಮರುಳ ಮುನಿಯ || (೭೮೩)

(ಕೇಡುಗಳ್+ಎರಡು)(ಕಳವಳದಿಂ+ಆಚೆ)(ಬಳಕೆ+ಆಚಾರವನು)

ಒಳ್ಳೆಯದು ಮತ್ತು ಕೆಡಕುಗಳು ನಿನ್ನ ಅನುಭವಗಳ ಬಗೆಗಳ ಮೇಲೆ ಅವಲಂಬಿಸಿರುತ್ತವೆ. ತಳಮಳಗಳ ಸ್ಥಿತಿ ಮೀರಿ ಪರಮಾತ್ಮನ ಅಸ್ತಿತ್ತ್ವ ಇರುತ್ತದೆ. ನೀನು ಸ್ವಪ್ರಯೋಜನವನ್ನು ಮತ್ತು ರೂಢಿಯಲ್ಲಿರುವ ಸಂಪ್ರದಾಯಗಳನ್ನು ಬಿಟ್ಟು ಪರೋಪಕಾರದಲ್ಲಿ ನಿರತನಾಗು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Good and evil depend on how you experience things,
The Truth is far above all anxieties and worries
Give up selfishness and the worn out customs
And shine with the glory of selflessness – Marula Muniya (783)
(Translation from "Thus Sang Marula Muniya" by Sri. Narasimha Bhat)

Thursday, June 25, 2015

ತರಣಿ ಜಲವಾಯುಗಳ ಸಿರಿಯೆನುವನೇ ನರನು(782)

ತರಣಿ ಜಲವಾಯುಗಳ ಸಿರಿಯೆನುವನೇ ನರನು?|
ಸರಿಸಮದೊಳೆಲ್ಲರಿಂಗಿಹ ಪುರುಳು ಪುರುಳೇಂ? ||
ಹೆರರಿಗಿಲ್ಲದೆ ತನ್ನಮಾತ್ರಕಿಹ ಸಿರಿಯೆ ಸಿರಿ |
ತರತಮವೆ ಜನದೆಣಿಕೆ - ಮರುಳ ಮುನಿಯ || (೭೮೨)

(ಸರಿಸಮದೊಳ್+ಎಲ್ಲರಿಂಗೆ+ಇಹ)(ಹೆರರಿಗೆ+ಇಲ್ಲದೆ)(ತನ್ನಮಾತ್ರಕೆ+ಇಹ)(ಜನದ+ಎಣಿಕೆ)

ಸೂರ್ಯ, ನೀರು ಮತ್ತು ಗಾಳಿಗಳನ್ನು ತನಕೆ ದೊರಕಿರುವ ಸಿರಿ, ಸಂಪತ್ತುಗಳೆಂದು ಮನುಷ್ಯನು ಭಾವಿಸುವನೇನು? ಪ್ರತಿಯೊಬ್ಬ ಜೀವಿಗೂ ಸರಿಸಮಾನವಾಗಿ ಸಿಗುವಂತಹ ಸಾರಗಳನ್ನು ಅವನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಇತರರಿಗಿರದ ಮತ್ತು ತನಗೆ ಮಾತ್ರ ಇರುವಂತಹ ಸಿರಿ ಸಂಪತ್ತುಗಳನ್ನು ಮಾತ್ರ ಲೆಕ್ಕಕ್ಕೆ ತೆಗೆದುಕೊಳ್ಳುತ್ತಾನೆ. ಈ ಬಗೆಯ ಹೆಚ್ಚು ಕಡಿಮೆಗಳನ್ನೇ ಅವನು ಲೆಕ್ಕ ಹಾಕುವನು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Does man consider the sun, water and air as wealth?
Are the precious things that all men equally possess not wealth?
Real wealth is what possesses when all others don’t possess it?
With this perverse view men are busy comparing and contrasting – Marula Muniya (782)
(Translation from "Thus Sang Marula Muniya" by Sri. Narasimha Bhat)

Thursday, June 11, 2015

ಟಂಕಕವ ಮೊದಲು ನಿರವಿಸಿದವಂ ಪೊಸತೊಂದು (781)

ಟಂಕಕವ ಮೊದಲು ನಿರವಿಸಿದವಂ ಪೊಸತೊಂದು |
ಬೆಂಕಿಯಂ ನರ ಸೋದರರ ನಡುವೆ ತಂದಂ ||
ಅಂಕುರಿಸಿತಂದದರಿನೊಂದಸೂಯಾ ಸ್ಪರ್ಧೆ |
ಸಂಕಟವದನುಪಮವೊ - ಮರುಳ ಮುನಿಯ || (೭೮೧)

(ಪೊಸತು+ಒಂದು)(ಅಂಕುರಿಸಿತು+ಅಂದು+ಅದರಿನ್+ಒಂದು+ಅಸೂಯಾ)(ಸಂಕಟ+ಅದು+ಅನುಪಮವೊ)

ಮೊಟ್ಟಮೊದಲಿಗೆ ನಾಣ್ಯವನ್ನು ಮುದ್ರಿಸಿದವನು (ಟಂಕಕ) ಒಂದು ಹೊಸ (ಪೊಸ) ಬೆಂಕಿಯನ್ನು ಮನುಷ್ಯರ ಸೋದರ ಭಾವಗಳಲ್ಲಿ ತಂದಿಡಲು ಕಾರಣನಾದನು. ಹಣವನ್ನು ಗಳಿಸಲು ಅವತ್ತಿನ ದಿನ ಹೊಟ್ಟೆಕಿಚ್ಚಿ(ಅಸುಯಾ)ನಿಂದ ಕೂಡಿದ ಒಂದು ಸ್ಪರ್ಧೆಯು ಮನುಷ್ಯ ಮನುಷ್ಯರ ನಡುವೆ ಹುಟ್ಟಿತು (ಅಂಕುರಿಸಿತು). ಇದರಿಂದ ಉಂಟಾದ ಸಂಕಟಗಳಿಗೆ ಸಮನಾದ ಬೇರೆ ದುಃಖಗಳೇ ಇಲ್ಲ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The man who first invented the first coin in human history,
Brought a new fire to burn the hearts of his human brothers,
From money has sprouted the fire of jealousy and cut-throat competition
The affliction it causes is incomparable – Marula Muniya (781)
(Translation from "Thus Sang Marula Muniya" by Sri. Narasimha Bhat) #dvg,#kagga

Wednesday, June 10, 2015

ಕಮನಕಾರಣಿ ಸೃಷ್ಟಿ ಪೋಷಿಪಳ್ ಸ್ವಾರ್ಥತೆಯ (780)

ಕಮನಕಾರಣಿ ಸೃಷ್ಟಿ ಪೋಷಿಪಳ್ ಸ್ವಾರ್ಥತೆಯ |
ಸ್ವಮತಿಯತ್ನದಿನೆ ನಿಃಸ್ವಾರ್ಥಗುಣ ನಿನಗೆ ||
ಮಮತೆಯಿಂದಾತ್ಮ ಸಂಕೋಚ ನಿರ್ಮಮತೆಯಿಂ- |
ದಮಿತಾತ್ಮ ವಿಸ್ತಾರ - ಮರುಳ ಮುನಿಯ || (೭೮೦)

(ಮಮತೆಯಿಂದ+ಆತ್ಮ)(ನಿರ್ಮಮತೆಯಿಂದ+ಅಮಿತ+ಆತ್ಮ)

ಆಸೆಯನ್ನು ಹುಟ್ಟಿಸಲು ಕಾರಣಕರ್ತಳಾದ(ಕಮನಕಾರಣಿ) ಸೃಷ್ಟಿಯು ಮನುಷ್ಯನಲ್ಲಿ ಸ್ವಾರ್ಥತೆಯನ್ನು ಪೋಷಿಸುತ್ತಾಳೆ. ನಿನ್ನ ಸ್ವಂತ ಬುದ್ಧಿಯ ಉಪಯೋಗದಿಂದ ನೀನು ನಿನ್ನ ನಿಃಸ್ವಾರ್ಥ ಸ್ವಭಾವಗಳನ್ನು ಬೆಳಿಸಿಕೊಳ್ಳಬೇಕು. ಮಮಕಾರದಿಂದ ನಿನ್ನ ಆತ್ಮವು ಕುಗ್ಗಿಹೋಗುತ್ತದೆ. ಮಮಕಾರವಿಲ್ಲದಿರುವುದರಿಂದ ನಿನ್ನ ಆತ್ಮವು ಅಪಾರವಾಗಿ ವಿಸ್ತಾರವಾಗುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Nature who feeds desire fosters selfishness,
Selfishness is acquired only through hard self-effort,
Contraction of self by attachment and its infinite expansion
Through non-attachment – Marula Muniya (780)
(Translation from "Thus Sang Marula Muniya" by Sri. Narasimha Bhat)

Tuesday, June 9, 2015

ಜೇನು ಕಪ್ಪುರ ಕೇಸರಗಳು ಪಾಲಿನೊಳು (779)

ಜೇನು ಕಪ್ಪುರ ಕೇಸರಗಳು ಪಾಲಿನೊಳು |
ಲೀನ ವಿಶದಗಳಾಗಿ, ನಿರಹಮಹ ಸ್ವಾರ್ಥಂ ||
ಜ್ಞಾನಿ ಹಿತಕರನಿಹನು ಲೋಕಕ್ಕೆ ನಿಃಸ್ವಾರ್ಥ |
ಲೀನ ವಿಶದದ ಬಾಳು - ಮರುಳ ಮುನಿಯ || (೭೭೯)

(ವಿಶದಗಳ್+ಆಗಿ)(ನಿರಹಂ+ಅಹ)(ಹಿತಕರನ್+ಇಹನು)

ಜೇನುತುಪ್ಪ, ಪಚ್ಚ ಕರ್ಪೂರ ಮತ್ತು ಕೇಸರಿಗಳು ಹಾಲಿನಲ್ಲಿ ಬೆರೆತು ಕರಗಿಹೋದರೂ ಸಹ ಆ ಹಾಲನ್ನು ಆಸ್ವಾದಿಸುವವನ ನಾಲಿಗೆಗೆ ಸ್ಪಷ್ಟವಾಗಿ (ವಿಶದ) ಅವುಗಳ ಇರುವಿಕೆಯು ತಿಳಿಯುತ್ತದೆ. ಅದೇ ರೀತಿ ನಿರಹಂಕಾರ (ನಿರಹ) ಮತ್ತು ಸ್ವಾರ್ಥಗಳೂ ಸಹ, ಮನುಷ್ಯ ಜೀವಿಯಲ್ಲಿ ಅಡಗಿದ್ದರೂ ವ್ಯಕ್ತವಾಗುತ್ತಾ ಇರುತ್ತವೆ. ಜ್ಞಾನಿಯಾದರೋ ಸ್ವಾರ್ಥರಹಿತನಾಗಿ ಜಗತ್ತಿಗೇ ಒಳ್ಳೆಯದನ್ನು ಮಾಡುವವನಾಗಿರುತ್ತಾನೆ. ಅವನ ಜೀವನವು ಜಗತ್ತಿನಲ್ಲಿ ಸೇರಿಕೊಂಡು ಹೋಗಿದ್ದರೂ ಸಹ ಅವನ ಸ್ವಭಾವ ಮತ್ತು ಕಾರ್ಯಗಳು ಇತರರಿಗೆ ಸ್ಪಷ್ಟವಾಗಿ ಕಾಣಿಸುತ್ತವೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Honey, camphor and saffron dissolved in milk can’t be seen
But the sweetness and fragrance can be enjoyed,
Similarly the selfishness of a wise a sage gets dissolved and his selfishness only shines
He gives help and happiness to the world – Marula Muniya (778)
(Translation from "Thus Sang Marula Muniya" by Sri. Narasimha Bhat)

Monday, June 8, 2015

ಕಲಬೆರಕೆ ಜೀವಗತಿಯೊಳಿತಲ್ಲದುಗಳ ಬೆರಕೆ (778)

ಕಲಬೆರಕೆ ಜೀವಗತಿಯೊಳಿತಲ್ಲದುಗಳ ಬೆರಕೆ |
ಬೆಳಕು ನೆರಳಿನ ಬೆರಕೆ ಹುಳಿಸು ಸಿಹಿ ಬೆರಕೆ ||
ತಿಳಿವು ಮಬ್ಬಿನ ಬೆರಕೆ ಕೊಳಕು ಚೊಕ್ಕಟ ಬೆರಕೆ |
ಕಲಿ ಸೈಸಲುಭಯವನು - ಮರುಳ ಮುನಿಯ || (೭೭೮)

(ಜೀವಗತಿ+ಒಳಿತು+ಅಲ್ಲದುಗಳ)(ಸೈಸಲು+ಉಭಯವನು)

ಜೀವನದ ನಡಗೆಯಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದು ಎರಡೂ ಬೆರೆತಿರುತ್ತವೆ. ಅದು ಬೆಳಕು ಮತ್ತು ನೆರಳು, ಹುಳಿ ಮತ್ತು ಸಿಹಿ, ತಿಳುವಳಿಕೆ ಮತ್ತು ಅಜ್ಞಾನ, ಮಲಿನ ಮತ್ತು ನೈರ್ಮಲ್ಯ, ಇವುಗಳಂತೆ ಜತೆಗೂಡಿರುತ್ತವೆ. ಈ ಎರಡೂ ಬಗೆಗಳನ್ನು ಸಹಿಸುವುದನ್ನು ಕಲಿ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The course of life is a mixture, a mixture of good and evil,
A mixture of light and shade, a mixture of sour and sweetness,
A mixture of knowledge and ignorance, a mixture of the clean and the unclean
Learn to endure both – Marula Muniya (778)
(Translation from "Thus Sang Marula Muniya" by Sri. Narasimha Bhat)

Friday, May 29, 2015

ಗುರುವ ಬಿಡಲೊಲದು ಜನ ಪಿಡಿಯದವನನು ತೀರ (777)

ಗುರುವ ಬಿಡಲೊಲದು ಜನ ಪಿಡಿಯದವನನು ತೀರ |
ಧರಣಿಯಲಿ ನಿಂದಿರದು ಗಗನಕೈದದದು ||
ಅರೆಯದನುಮರೆಯಿದನುಮನುಗೂಡಿಸುತಲೆಂತೊ |
ಚರಿಸುವುದು ಹದವೆಣಿಸಿ - ಮರುಳ ಮುನಿಯ || (೭೭೭)

(ಬಿಡಲ್+ಒಲದು)(ಪಿಡಿಯದು+ಅವನನು)(ನಿಂತು+ಇರದು)(ಗಗನಕೆ+ಐದದು+ಅದು)(ಅರೆಯದನುಂ+ಅರೆಯಿದನುಂ+ಅನುಗೂಡಿಸುತಲ್+ಎಂತೊ)(ಹದ+ಎಣಿಸಿ)

ಜನಗಳು ಗುರುವನ್ನು ಹೇಗೆ ಬಿಡಿಲಾರರೋ, ಅದೇ ರೀತಿ ಅವರು ಅವನನ್ನು ಅತಿಶಯವಾಗಿ ಅನುಸರಿಸಲೂ ಆರರು. ಭೂಮಿಯ ಮೇಲೆ ನಿಂತುಕೊಂಡಿರುವುದಿಲ್ಲ, ಹಾಗೆಂದು ಆಕಾಶ(ಗಗನ)ವನ್ನು ಸೇರುವುದೂ ಇಲ್ಲ. ಅರೆದು ಪುಡಿ ಮಾಡಿರುವ ಮತ್ತು ಅರೆಯದೆ ಪುಡಿಯಾಗದಿರುವ ಎರಡನ್ನೂ ಹೊಂದಿಸಿಕೊಂಡು ಹದವನ್ನು ತಿಳಿದು ಲೋಕದಲ್ಲಿ ವರ್ತಿಸಬೇಕು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

People are unable either to leave their Guru or to trust him.
They are unable either to remain on the earth or to fly up in the sky,
Harmonize that half and this half some-how
And move forward with all caution – Marula Muniya (777)
(Translation from "Thus Sang Marula Muniya" by Sri. Narasimha Bhat)

Wednesday, May 20, 2015

ಸಂದೇಹವಿರಲಿ ಸಯ್ತಿರದೆ ಕುದಿಯುತ್ತಿರಲಿ (776)

ಸಂದೇಹವಿರಲಿ ಸಯ್ತಿರದೆ ಕುದಿಯುತ್ತಿರಲಿ |
ಹಿಂದು-ಮುಂದುಗಳ ನೆನೆದದು ಬೆದಕುತಿರಲಿ ||
ಎಂದೊ ಬೇಸಗೆಯಲೊಂದುದಿನ ಮಳೆ ಬರುವಂತೆ |
ಮುಂದೆ ನಿಲುವುದು ತಥ್ಯ - ಮರುಳ ಮುನಿಯ || (೭೭೬)

(ಸಂದೇಹ+ಇರಲಿ)(ಸಯ್ತು+ಇರದೆ)(ಕುದಿಯುತ್ತ+ಇರಲಿ)(ನೆನೆದು+ಅದು)(ಬೆದಕುತ+ಇರಲಿ)(ಬೇಸಗೆಯಲಿ+ಒಂದುದಿನ)

ಮನಸ್ಸಿನಲ್ಲಿ ಶಂಕೆಗಳಿರಲಿ. ಆ ಸಂದೇಹಗಳು ಸಮಾಧಾನವನ್ನು (ಸುಯ್ತು) ಕಾಣದೆ ಕುದಿಯುತ್ತಲೇ ಇರಲಿ. ಹಿಂದು ಮತ್ತು ಮುಂದುಗಳನ್ನು ಜ್ಞಾಪಿಸಿಕೊಂಡು ಆ ಸಂದೇಹಗಳು ತಡಕಾಟದಲ್ಲಿರಲಿ (ಬೆದುಕುತಿರಲಿ). ಬೇಸಿಗೆಯ ದಿನಗಳಲ್ಲಿ ಎಂದೋ ಒಂದು ದಿವಸ ಮಳೆಯು ಬಂದು ಧರೆಯನ್ನು ತಂಪಾಗಿಸುವಂತೆ, ಸತ್ಯ(ತಥ್ಯ)ವೂ ಒಂದು ದಿನ ಎದುರಿಗೆ ಬಂದು ಶಂಕೆಗಳಿಗೆ ಸಮಾಧಾನವನ್ನು (ತಣಿಪು) ನೀಡುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Let there be doubt, let it boil in deep discontent,
Let it probe about the past and the future and explore them.
Like the rain that fails on someday in hot summer
Truth will rain down and cool the earth – Marula Muniya (776)
(Translation from "Thus Sang Marula Muniya" by Sri. Narasimha Bhat) #dvg,#kagga

ಸಂದೇಹ ಮೊದಲಿರದ ನಂಬುಗೆಯದೇಂ ಪಾಯ? (775)

ಸಂದೇಹ ಮೊದಲಿರದ ನಂಬುಗೆಯದೇಂ ಪಾಯ? |
ಬಂಧವಿರದಾಗಾರ ಗಾಳಿಯೆಡೆ ಸೊಡರು ||
ದ್ವಂದ್ವವಾದದಿನನಾವೃತವಾಗೆ ಸೂಕ್ಷ್ಮಕಣ್ |
ಮುಂದೆ ನಿಲುವುದು ತಥ್ಯ - ಮರುಳ ಮುನಿಯ || (೭೭೫)

(ಮೊದಲ್+ಇರದ)(ನಂಬುಗೆ+ಅದು+ಏಂ)(ಬಂಧವಿರದ+ಆಗಾರ)(ಗಾಳಿ+ಎಡೆ)(ದ್ವಂದ್ವವಾದದಿನ್+ಅನಾವೃತ+ಆಗೆ)

ಮೊಟ್ಟಮೊದಲಿನಲ್ಲಿ ಸಂದೇಹವೇ ಇರದಂತಹ ನಂಬಿಕೆಗಳು ಎಂತಹ ಅಡಿಗಲ್ಲಾದೀತು? ಅದು ಸರಿಯಾಗಿ ಕಟ್ಟದಿರುವ (ಬಂಧ) ಮನೆ (ಆಗಾರ) ಮತ್ತು ಗಾಳಿಯಿರುವ ಜಗದಲ್ಲಿಟ್ಟಿರುವ ದೀಪ(ಸೊಡರ್)ದಂತೆ ಕುಸಿದು, ಆರಿಹೋಗುತ್ತದೆ. ಸೂಕ್ಷ್ಮವಾಗಿರುವ ಕಣ್ಣುಗಳು ದ್ವಂದ್ವ ತರ್ಕಗಳಿಂದ ದೂರ ಸರಿದಾಗ (ಅನಾವೃತ) ಆ ಕಣ್ಣುಗಳ ಮುಂದೆ ಸತ್ಯ(ತಥ್ಯ)ವು ಬಂದು ನಿಂತುಕೊಳ್ಳುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Belief should grow after genuine doubt. If not it is similar to a house
Build without foundation and an open lamp exposes to wind
When your subtle eye is uncovered by opposing arguments,
Truth will stand face to face – Marula Muniya (775)
(Translation from "Thus Sang Marula Muniya" by Sri. Narasimha Bhat)

Monday, May 18, 2015

ಸಂದೇಹವೇಂ ಮನದೊಳ್? ಇರಲಿ, ಕುದಿಗೊಂಡಿರಲಿ (774)

ಸಂದೇಹವೇಂ ಮನದೊಳ್? ಇರಲಿ, ಕುದಿಗೊಂಡಿರಲಿ |
ಬೆಂದಲ್ಲದಿಳಿದೀತೆ ತಿಳಿವಿನೊಳಸಾರ ||
ತಂದೆ ನಿಶ್ಚಯಕೆ ಸಂಶಯ ಬುದ್ಧಿಮಥನದಿಂ |
ಬಂದಪುದು ತತ್ತ್ವಸುಧೆ - ಮರುಳ ಮುನಿಯ || (೭೭೪)

(ಕುದಿಗೊಂಡು+ಇರಲಿ)(ಬೆಂದ್+ಅಲ್ಲದೆ+ಇಳಿದೀತೆ)(ತಿಳಿವಿನ್+ಒಳಸಾರ)(ಬಂದ್+ಅಪುದು)

ನಿನ್ನ ಮನಸ್ಸಿನಲ್ಲಿ ಶಂಕೆಗಳುಂಟೋ? ಅದು ಹಾಗೆ ಕುದಿಯುತ್ತಾ ಇರಲಿ ಬಿಡು. ಸರಿಯಾಗಿ ಪಕ್ವವಾದ ಹೊರತು ತಿಳುವಳಿಕೆಗೆ ಒಳಗಿನ ಸಾರ ಅಂತರಂಗಕ್ಕೆ ಇಳಿಯಲಾರದು. ತಾನು ಗೊತ್ತು ಮಾಡಿಕೊಂಡಿರುವ ನಿರ್ಣಯಕ್ಕೆ ಸಂದೇಹಗಳುಂಟಾದಾಗ, ಬುದ್ಧಿಯನ್ನುಪಯೋಗಿಸಿ ಕೂಲಂಕುಶವಾಗಿ ವಿಚಾರ ಮಾಡುವುದರಿಂದ ಪರಮಾತ್ಮನ ತತ್ತ್ವಾಮೃತ(ಸುಧೆ)ಯು ದೊರಕುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

What’s the doubt lurking in your mind? Let it boil well
Will the essence of wisdom flow out unless it is baked well?
Doubt is the father of decision; the ambrosia of Truth comes out
Only when you churn your intellect well – Marula Muniya
(Translation from "Thus Sang Marula Muniya" by Sri. Narasimha Bhat) #dvg,#kagga

Thursday, May 14, 2015

ಮನುಜಯಂತ್ರವ ಪೋಲ್ವ ಯಂತ್ರವಿನ್ನೆಲ್ಲಿಹುದು? (773)

ಮನುಜಯಂತ್ರವ ಪೋಲ್ವ ಯಂತ್ರವಿನ್ನೆಲ್ಲಿಹುದು? |
ಮನದವೊಲು ಗರಗಸದ ಚಕ್ರವಿನ್ನೆಲ್ಲಿ? ||
ಅನಿಲಗತಿಯಿಂ ವಿಚಲ ತರವಲ್ತೆ ಮನದ ಗತಿ |
ಮನ ಕೊಂಕು ಜನ ಡೊಂಕು - ಮರುಳ ಮುನಿಯ || (೭೭೩)

(ಯಂತ್ರ+ಇನ್ನೆಲ್ಲಿ+ಇಹುದು)(ಚಕ್ರ+ಇನ್ನೆಲ್ಲಿ)

ಮನುಷ್ಯನ ರಚನೆಯನ್ನು ಹೋಲುವ ಬೇರೆ ಯಾವ ಯಂತ್ರಗಳು ಎಲ್ಲಿವೆ? ಮನುಷ್ಯನ ಗರಗಸದಂತಿರುವ ಮನಸ್ಸಿನ ಚಕ್ರ ಇನ್ನೆಲ್ಲಾದರೂ ಉಂಟೇನು? ಮನಸ್ಸಿನ ಚಲನೆಯೂ ಗಾಳಿಯ ಚಲನೆಯಂತೆ ಚಂಚಲ(ವಿಚಲ)ವಲ್ಲವೇ? ಮನಸ್ಸು ವಕ್ರವಿದ್ದಂತೆ, ಜನಗಳೂ ವಕ್ರ ಸ್ವಭಾವದವರಾಗಿದ್ದಾರೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Where is the machine comparable to human machine?
Where is the wheel-saw similar to human mind?
Is not mind’s velocity far more than that of the wind?
When mind is crooked man becomes wicked – Marula Muniya (773)
(Translation from "Thus Sang Marula Muniya" by Sri. Narasimha Bhat)

Tuesday, May 12, 2015

ಎನಗಾಗದೊಳಿತಾರ‍್ಗಮಾಗದಿರಲೆನ್ನದಿರು (772)

ಎನಗಾಗದೊಳಿತಾರ‍್ಗಮಾಗದಿರಲೆನ್ನದಿರು |
ತನು ಭೇದದಿಂದಾತ್ಮ ಭೇದವೆಣಿಸದಿರು ||
ಮನದ ರಾಜ್ಯದೊಳೆಲ್ಲರೆಲ್ಲೊಳಿತುಗಳನು ನೀ- |
ನನುಭವಿಸಲಾರೆಯಾ? - ಮರುಳ ಮುನಿಯ || (೭೭೨)

(ಎನಗೆ+ಆಗದ+ಒಳಿತು+ಆರ‍್ಗಂ+ಆಗದಿರಲಿ+ಎನ್ನದಿರು)(ಭೇದದಿಂದ+ಆತ್ಮ)(ಭೇದ+ಎಣಿಸದೆ+ಇರು)(ರಾಜ್ಯದೊಳ್+ಎಲ್ಲರ+ಎಲ್ಲ+ಒಳಿತುಗಳನು)(ನೀನ್+ಅನುಭವಿಸಲಾರೆಯಾ)

ನನಗೆ ಆಗದಿರುವ ಒಳ್ಳೆಯದು ಇತರರಿಗೂ ಆಗಬಾರದು ಎಂದು ಹೇಳಬೇಡ. ದೇಹದಿಂದ ದೇಹಕ್ಕೆ ಕಂಡುಬರುವ ವ್ಯತ್ಯಾಸಗಳಿಂದ ಆತ್ಮ-ಆತ್ಮಗಳಲ್ಲಿ ಭೇದ ಭಾವಗಳನ್ನು ಕಲ್ಪಿಸಬೇಡ. ನಿನ್ನ ಮನಸ್ಸಿನ ರಾಜ್ಯದಲ್ಲಿ ನೀನು ಎಲ್ಲರ ಹಿತಗಳನ್ನು ಅನುಭವಿಸಲಾರೆಯೇನು?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Say not that none else should enjoy the happiness that you couldn’t enjoy,
Discriminate not between self and self though the bodies are different
Can’t you enjoy all the happiness of all the people
In the kingdom of your mind? – Marula Muniya (772)
(Translation from "Thus Sang Marula Muniya" by Sri. Narasimha Bhat)

Friday, May 8, 2015

ಗೃಹಿಧರ್ಮವನು ನಿನ್ನ ಮಹಿಯ ಚೌರ್ಯಕೆ ಹೊದಿಸಿ (771)

ಗೃಹಿಧರ್ಮವನು ನಿನ್ನ ಮಹಿಯ ಚೌರ್ಯಕೆ ಹೊದಿಸಿ |
ಸಹಜ ಲೋಭಿತೆಯ ನಿಃಸ್ಪೃಹತೆಯೆನ್ನುವುದೆ? ||
ವಹಿಪುದು ಕುಟುಂಬ ಭಾರವನಾತ್ಮದೆಲುಬುಗಳು |
ಸಹಿಸಲಹ ಮಿತಿಯೊಳಗೆ - ಮರುಳ ಮುನಿಯ || (೭೭೧)

(ಭಾರವನ್+ಆತ್ಮದ+ಎಲುಬುಗಳು)(ಸಹಿಸಲು+ಅಹ)

ನಿನ್ನ ದಿನನಿತ್ಯದ ಗೃಹಕೃತ್ಯದ ಧರ್ಮಪಾಲನೆಗಳನ್ನು ಈ ಜಗತ್ತಿನಲ್ಲಿ(ಮಹಿ) ನೀನು ಮಾಡುವ ಕಳ್ಳತನ(ಚೌರ್ಯಕ್ಕೆ)ಕ್ಕೆ ಹೊದಿಸಿ, ಸಹಜವಾಗಿರುವ ನಿನ್ನ ಜಿಪುಣತನವನ್ನು ನೀನು ಪ್ರಾಮಾಣಿಕ ಮತ್ತು ನಿಃಸ್ವಾರ್ಥ (ನಿಃಸ್ಪೃಹತೆ) ಬುದ್ಧಿ ಎಂದೆನ್ನುವೆಯೇನು? ಸಂಸಾರದ ಭಾರಗಳನ್ನು ನಿನ್ನ ಆತ್ಮದ ಮೂಳೆಗಳು (ಎಲುಬುಗಳು) ಸಹಿಸಲು ಸಾಧ್ಯವಾದಷ್ಟು ಮಿತಿಯೊಳಗೆ ಹೊತ್ತುಕೊಳ್ಳುತ್ತವೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Grab not the land of others under the garb of householder’s duty
Label not your inborn greed as selflessness,
Bear your family burden only as much as
The bones of your self can endure – Marula Muniya (771)
(Translation from "Thus Sang Marula Muniya" by Sri. Narasimha Bhat)

Thursday, May 7, 2015

ತಬ್ಬಿಕೊಳದಿರು ಹಸುಳೆ ನಿನ್ನದಾದೊಡಮದನು (770)

ತಬ್ಬಿಕೊಳದಿರು ಹಸುಳೆ ನಿನ್ನದಾದೊಡಮದನು |
ತಬ್ಬಲಿಯ ಮುಂದೆ ಅವನೆದೆಯೊಳದರಿಂದೆ ||
ಅಬ್ಬೆ ತನಗಿಲ್ಲ ತನ್ನನು ಕೇಳ್ವರಿಲ್ಲೆನ್ನು- |
ವುಬ್ಬೆಗಂ ಪುಟ್ಟೀತು - ಮರುಳ ಮುನಿಯ || (೭೭೦)

(ತಬ್ಬಿಕೊಳದೆ+ಇರು)(ನಿನ್ನದು+ಆದೊಡಂ+ಅದನು)(ಅವನ+ಎದೆಯೊಳ್+ಅದರಿಂದೆ)(ಕೇಳ್ವರ್+ಇಲ್ಲ+ಎನ್ನುವ+ಉಬ್ಬೆಗಂ)

ಮಗುವು ನಿನ್ನದೇ ಆದರೂ ಸಹ, ಅದನ್ನು ಒಬ್ಬ ತಂದೆತಾಯಿಗಳಿಲ್ಲದಿರುವ ತಬ್ಬಲಿ ಮಗುವಿನ ಮುಂದೆ ತಬ್ಬಿಕೊಂಡು ಮುದ್ದಿಸಬೇಡ. ಏಕೆಂದರೆ ಆವಾಗ ಆ ತಬ್ಬಲಿಯ ಹೃದಯದ ಒಳಗಡೆ ತನಗೆ ತಾಯಿ (ಅಬ್ಬೆ) ಇಲ್ಲ, ಆದ್ದರಿಂದ ತನ್ನನ್ನು ನೋಡಿಕೊಳ್ಳುವವರು ಯಾರೂ ಇಲ್ಲ, ಎನ್ನುವ ದುಃಖ ಮತ್ತು ದುಮ್ಮಾನಗಳು (ಉಬ್ಬೆಗ) ಹುಟ್ಟಬಹುದು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Embrace not the child, though it is your own
In front of an orphan as his heart may burn
With the feeling that he is motherless and there’s none
To look after him – Marula Muniya (770)
(Translation from "Thus Sang Marula Muniya" by Sri. Narasimha Bhat) #dvg,#kagga

Monday, May 4, 2015

ಅಣುವ ಸೀಳಲುಬಹುದು ಕಣವನೆಣಿಸಲುಬಹುದು (769)

ಅಣುವ ಸೀಳಲುಬಹುದು ಕಣವನೆಣಿಸಲುಬಹುದು |
ತಣು ಬಿಸಿಗಳೊತ್ತಡವ ಪಿಡಿದಳೆಯಬಹುದು ||
ಗಣಿಸಲಳವೇ ಪ್ರೇಮ ಸುಖ ದುಃಖ ಮಹಿಮೆಗಳ |
ಮನದ ಮೂಲವತರ್ಕ್ಯ - ಮರುಳ ಮುನಿಯ || (೭೬೯)

(ಬಿಸಿಗಳ+ಒತ್ತಡವ)(ಪಿಡಿದು+ಅಳೆಯಬಹುದು)(ಗಣಿಸಲು+ಅಳವೇ)(ಮೂಲವು+ಅತರ್ಕ್ಯ)

ಅಣುವನ್ನು ಸೀಳಿ ಅದರಿಂದ ಉಪಯೋಗಗಳನ್ನು ಪಡೆಯಬಹುದು. ಸೂಕ್ಷ್ಮಕಣಗಳನ್ನು ಲೆಕ್ಕ ಹಾಕಬಹುದು. ತಂಪು (ತಣಿ) ಮತ್ತು ಶಾಖಗಳ ಒತ್ತಡಗಳನ್ನು ಹಿಡಿದು ಅಳತೆ ಮಾಡಬಹುದು. ಆದರೆ ಒಲವು, ಪ್ರೀತಿ, ದುಃಖ, ದುಮ್ಮಾನಗಳ ಹಿರಿಮೆಗಳನ್ನು ಅಳತೆ ಮಾಡಿ ಲೆಕ್ಕ ಹಾಕಲು ಸಾಧ್ಯವೇನು? ಮನಸ್ಸಿನಲ್ಲಿ ಉದ್ಭವಿಸುವ ಭಾವನೆಗಳನ್ನು ತರ್ಕಕ್ಕೆ ಸಿಗಲಾರವು (ಅತರ್ಕ್ಯ).
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

You can split atoms and count particles,
You can measure the intensity of cold and heat,
But can you count the wondrous powers of love, happiness and sorrow?
The root of mind lies beyond logic – Marula Muniya (769)
(Translation from "Thus Sang Marula Muniya" by Sri. Narasimha Bhat)

Thursday, April 30, 2015

ಹಗೆ ಬೇರೆ ನಿನಗಿಲ್ಲ ಕೆಳೆ ಬೇರೆ ನಿನಗಿಲ್ಲ (768)

ಹಗೆ ಬೇರೆ ನಿನಗಿಲ್ಲ ಕೆಳೆ ಬೇರೆ ನಿನಗಿಲ್ಲ ||
ಸೊಗವೊ ದುಗಡವೊ ನಿನಗೆ ನೀಂ ಮಾಡಿದಂತೆ ||
ಬಿಗಿ ಮನಸಿನಲೆತವಂ ಬಿಗಿಯಿಂದ್ರಿಯಂಗಳಂ |
ಜಗಕೆ ನೀನೊಡನಾಡಿ - ಮರುಳ ಮುನಿಯ || (೭೬೮)

(ಮನಸಿನ+ಅಲೆತವಂ)(ಬಿಗಿ+ಇಂದ್ರಿಯಂಗಳಂ)(ನೀನ್+ಒಡನಾಡಿ)

ನಿನಗೆ ಬೇರೆ ಯಾರೂ ವೈರಿಗಳಿಲ್ಲ. ಹಾಗೆಯೇ ಬೇರೆ ಯಾರೂ ಸ್ನೇಹಿತ(ಕೆಳೆ)ರೂ ಸಹ ಇಲ್ಲ. ಸುಖ ಮತ್ತು ದುಃಖಗಳು ನೀನು ಮಾಡಿದಂತೆ ಆಗುತ್ತವೆ. ನಿನ್ನ ಮನಸ್ಸು ದಿಕ್ಕುಗೆಟ್ಟು ಗಾಳಿಪಟದಂತೆ ಅಲೆಯುವುದನ್ನು ಹಿಡಿತದಲ್ಲಿಟ್ಟಿಕೊ. ಹಾಗೆಯೇ ಇಂದ್ರಿಯಗಳ ಚೇಷ್ಟೆಯನ್ನು ಸಹ ಕಟ್ಟಿನಿಲ್ಲಿಸಿಕೊಂಡಿರು. ಆವಾಗ ನೀನು ಇಡೀ ಲೋಕಕ್ಕೆ ಸ್ನೇಹಿತನಾಗುವೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

You have no other friend and no other foe
Your happiness or sorrow is your own creation
Restrain your straying mind and flying senses,
You are then a faithful companion to the world – Marula Muniya (768)
(Translation from "Thus Sang Marula Muniya" by Sri. Narasimha Bhat) #dvg,#kagga

Wednesday, April 29, 2015

ಸ್ವಾಂತದಿರ‍್ಕೊರಲೊಂದೆ ಪದವ ಪಾಡುವನಾಗು (767)

ಸ್ವಾಂತದಿರ‍್ಕೊರಲೊಂದೆ ಪದವ ಪಾಡುವನಾಗು |
ಸಂತತ ಜಗದ್ಗ್ರಂಥಿ ಸಡಿಲಿದವನಾಗು ||
ಅಂತರಾತ್ಮದಿನಿತರಮೊಂದುಮಿಲ್ಲದನಾಗು |
ಶಾಂತಿಸಂಸ್ಥಿತನಾಗು - ಮರುಳ ಮುನಿಯ || (೭೬೭)

(ಸ್ವಾಂತದ+ಇರ‍್ಕ+ಒರಲ್+ಒಂದೆ)(ಪಾಡುವನ್+ಆಗು)(ಜಗತ್+ಗ್ರಂಥಿ)(ಸಡಿಲಿದವನ್+ಆಗು)(ಅಂತರಾತ್ಮದಿನ್+ಇತರಂ+ಒಂದುಂ+ಇಲ್ಲದನ್+ಆಗು)(ಶಾಂತಿಸಂಸ್ಥಿತನ್+ಆಗು)

ನಿನ್ನ ಮನಸ್ಸಿ(ಸ್ವಾಂತ)ನ ಕೂಗಿನಿಂದ (ಒರಲ್) ಒಂದೇ ಹಾಡನ್ನು ಹಾಡುವನಾಗು. ಸದಾಕಾಲವೂ ಜಗತ್ತಿನ ಒಡನೆ ಇರುವ ಗಂಟುಗಳನ್ನು ಸಡಿಲಿಸಿಕೊಂಡು ಇರು. ನಿನ್ನ ಅಂತರಾತ್ಮವೊಂದನ್ನು ಬಿಟ್ಟು, ಇನ್ಯಾವುದನ್ನೂ ಇಲ್ಲದವನಾಗು. ಸದಾ ನೆಮ್ಮದಿಯ ಸ್ಥಿತಿಯನ್ನು ಹೊಂದು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Sing a happy song when you are in yourself and the throat cooperates
Keep all the worldly bonds always loose,
Have nothing else in your indwelling self,
Be ever established in peace – Marula Muniya (767)
(Translation from "Thus Sang Marula Muniya" by Sri. Narasimha Bhat)

Tuesday, April 28, 2015

ಹೊಟ್ಟೆಪಾಡಿಗದೊಂದು ಸದ್ಯ ದುಡಿವುದ್ಯೋಗ (766)

ಹೊಟ್ಟೆಪಾಡಿಗದೊಂದು ಸದ್ಯ ದುಡಿವುದ್ಯೋಗ |
ಕಷ್ಟದಲಿ ಪಾಲ್ಗೊಂಡು ನಗು ನಗಿಪ ಸತಿಯಳ್ ||
ನಿಷ್ಠೆ ಪೂಜೆಯಗೊಂಡು ಧೈರ್ಯತುಂಬುವ ದೈವ- |
ವಿಷ್ಟಿರಲು ಚಿಂತೆಯೇಂ? - ಮರುಳ ಮುನಿಯ || (೭೬೬)

(ಹೊಟ್ಟೆಪಾಡಿಗೆ+ಅದು+ಒಂದು)(ದುಡಿವ+ಉದ್ಯೋಗ)(ದೈವವಿಷ್ಟು+ಇರಲು)

ನಿನ್ನ ಅನ್ನ, ವಸತಿ, ವಸ್ತ್ರಗಳಿಗೆ ಸಾಕಾಗುವಷ್ಟು ವರಮಾನ ತರುವ ಸದ್ಯಕ್ಕಿರುವ ಒಂದು ಉದ್ಯೋಗ. ನಿನ್ನ ಕಷ್ಟಕಾಲದಲ್ಲಿ ಸಹಭಾಗಿನಿಯಾಗಿ ಸಂತಸ ತರುವ ಸತಿ. ಶ್ರದ್ಧೆ(ನಿಷ್ಠೆ)ಯಿಂದ ಪರಮಾತ್ಮನನ್ನು ಆರಾಧಿಸಿದಾಗ ಧೈರ್ಯವನ್ನು ತುಂಬುವ ದೇವರು. ಇವಿಷ್ಟೂ ನಿನ್ನ ಜೀವನದಲ್ಲಿ ಇದ್ದಮೇಲೆ ಚಿಂತೆ ಏಕೆ ಮಾಡಬೇಕು?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

A job at present to earn the daily bread,
A wife to share your sufferings and to keep you happy,
A deity to accept your faithful worship and to infuse self-confidence,
Why do you worry when you have all these? – Marula Muniya (766)
(Translation from "Thus Sang Marula Muniya" by Sri. Narasimha Bhat)

Wednesday, April 22, 2015

ಬಂದ ಸುಖವನು ಬಿಡದೆ ಬಾರದುದ ಬೇಕೆನದೆ (765)

ಬಂದ ಸುಖವನು ಬಿಡದೆ ಬಾರದುದ ಬೇಕೆನದೆ |
ದಂದುಗಂಬಡದೆ ಮನದೆಚ್ಚರವ ಬಿಡದೆ ||
ಸಂದುದನದೇಕೆನದೆ ಮುಂದದೇಂಗತಿಯೆನದೆ |
ಹೊಂದಿಕೊಳೊ ಬಂದುದಕೆ - ಮರುಳ ಮುನಿಯ || (೭೬೫)

(ಸಂದುದನ್+ಅದು+ಏಕೆ+ಎನದೆ)(ಮುಂದೆ+ಅದು+ಏಂ+ಗತಿಯೆನದೆ)

ನಿನಗೆ ಈಗ ದೊರಕಿರುವ ಸುಖ ಮತ್ತು ಸಂತೋಷಗಳನ್ನು ಕಳೆದುಕೊಳ್ಳದೆ, ನಿನಗೆ ಸಿಗದಿರುವ ಸುಖ ಮತ್ತು ಸಂತೋಷಗಳನ್ನು ಬಯಸದೆ, ತೊಂದರೆಗಳನ್ನು ಅನುಭವಿಸದೆ, ಮನಸ್ಸಿನ ಜಾಗ್ರತಾವಸ್ಥೆಯನ್ನು ಬಿಡದೆ, ನಿನಗೆ ಬಂದಿರುವುದನ್ನು ಅದು ಏಕೆಂದು ಪ್ರಶ್ನಿಸದೆ, ಭವಷ್ಯತ್ತಿನ ಬಗ್ಗೆ ಅತಿಯಾಗಿ ಚಿಂತಿಸದೆ, ನಿನಗಿರುವದಕ್ಕೆ ಒಗ್ಗಿಕೊಂಡು ಬಾಳು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Reject not the happiness that comes to you and crave not for that which doesn’t come
Do not be dejected in affliction, and be ever vigilant in mind,
Sorrow not for the past and worry not for the future,
Adjust yourself to the situation that arise in life – Marula Muniya (765)
(Translation from "Thus Sang Marula Muniya" by Sri. Narasimha Bhat)

Tuesday, April 21, 2015

ಜೀವ ತಾಂ ಬ್ರಹ್ಮದೈಶ್ವರ್ಯವದ ಗೌರವಿಸು (764)

ಜೀವ ತಾಂ ಬ್ರಹ್ಮದೈಶ್ವರ್ಯವದ ಗೌರವಿಸು |
ಜೀವದಶೆಯುಚ್ಚ ನೀಚಗಳ ನೀನರಿತು ||
ಜೀವಿತೋದ್ಧೃತಿಯನಾದನಿತಾಗಿಸೆಲ್ಲರ‍್ಗೆ |
ಜೀವಸಾಹ್ಯವೆ ಧರ್ಮ - ಮರುಳ ಮುನಿಯ || (೭೬೪)

(ಬ್ರಹ್ಮದ+ಐಶ್ವರ್ಯ+ಆದ)(ನೀನ್+ಅರಿತು)(ಜೀವಿತ+ಉದ್ಧೃತಿಯನ್+ಆದನಿತು+ಆಗಿಸು+ಎಲ್ಲರ‍್ಗೆ)

ಜೀವವು ಬ್ರಹ್ಮನ ಸಿರಿ, ಅದನ್ನು ಆದರಿಸು ಮತ್ತು ಮನ್ನಣೆ ಮಾಡು. ಜೀವದ ಸ್ಥಿತಿಯ ಶ್ರೇಷ್ಠತೆ ಮತ್ತು ಕೀಳುಗಳನ್ನು ನೀನು ತಿಳಿದುಕೊಂಡು, ಸರ್ವರ ಜೀವಿತದ ಏಳಿಗೆಗೆ ಆದಷ್ಟು ಪ್ರಯತ್ನಿಸು. ಒಂದು ಜೀವಿಯು ಇನ್ನೊಂದು ಜೀವಿಗೆ ಸಹಾಯ (ಸಾಹ್ಯ) ಮಾಡುವುದೇ ಧರ್ಮದ ನಿಜವಾದ ಲಕ್ಷಣ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Soul is the wealth of Brahma and you should respect it,
Understanding the rise and fall of the soul,
Help all as much as you can to elevate their souls to excellence,
Helping other beings itself is dharma – Marula Muniya (764)
(Translation from "Thus Sang Marula Muniya" by Sri. Narasimha Bhat) #dvg,#kagga

Monday, April 20, 2015

ಸೊಗವ ಪಸರಿಸಬೇಕು ಹಗೆಯ ಹೋಗೊಡಬೇಕು (763)

ಸೊಗವ ಪಸರಿಸಬೇಕು ಹಗೆಯ ಹೋಗೊಡಬೇಕು |
ಸೊಗವನಾಂತಾ ಕೃತಜ್ಞನ ಮೊಗದಿನೊಗೆವಾ ||
ನಗುಗಳಾನಂದಮಯ ಶಿವನೊಡಲ ಹೊಳಪಾಗಿ |
ಜಗವ ಕಂಗೊಳಿಯಿಪುವೊ - ಮರುಳ ಮುನಿಯ || (೭೬೩)

(ಸೊಗವನ್+ಆಂತ+ಆ)(ಮೊಗದಿಂ+ಒಗೆವ+ಆ)(ನಗುಗಳ್+ಆನಂದಮಯ)(ಶಿವನ+ಒಡಲ)(ಹೊಳಪು+ಆಗಿ)

ಸುಖ ಮತ್ತು ಸಂತೋಷಗಳನ್ನು ಎಲ್ಲೆಲ್ಲಿಯೂ ಹರಡ(ಪಸರಿಸ)ಬೇಕು. ದ್ವೇಷ ಮತ್ತು ಅಸೂಯೆಗಳನ್ನು ಹೊರದೂಡಬೇಕು. ಸುಖ ಮತ್ತು ಸಂತೋಷಗಳನ್ನು ಹೊಂದಿದ ಕೃತಜ್ಞನ ಮುಖ(ಮೊಗ)ದಿಂದ ಹೊರಹೊಮ್ಮಿದ ನಗೆಗಳು, ಸಂತೋಷ ತುಂಬಿರುವ ಶಿವನ ದೇಹದ ಕಾಂತಿಯಾಗಿ, ಪ್ರಪಂಚವನ್ನು ಪ್ರಕಾಶಿಸಿ, ಮನೋಹರವಾಗಿ ಕಾಣುವಂತೆ ಮಾಡುತ್ತವೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

We ought to spread happiness and drive away all enmity
The smiles shining then on the faces of the grateful persons,
Shine like the radiance of Shiva, the embodiment of happiness
And illuminate the world – Marula Muniya || (763)
(Translation from "Thus Sang Marula Muniya" by Sri. Narasimha Bhat)

Friday, April 17, 2015

ದೇವರೆನುವೊಂದು ಬೇರಿರ‍್ದೊಡೇನಿರದೊಡೇನ್ (762)

ದೇವರೆನುವೊಂದು ಬೇರಿರ‍್ದೊಡೇನಿರದೊಡೇನ್? |
ಜೀವನವೆ ದೈವಮಹಿಮೆಗೆ ಸಾಕ್ಷಿಯಲ್ತೆ? ||
ತೀವಿ ಸೌಂದರ್ಯಗಾಂಭೀರ್ಯಂಗಳಿಂ ಬಾಳಿ |
ದೇವ ಸಮನೆನಿಸು ನೀಂ - ಮರುಳ ಮುನಿಯ || (೭೬೨)

(ದೇವರ್+ಎನುವ+ಒಂದು)(ಬೇರೆ+ಇರ‍್ದೊಡೇನ್+ಇರದೊಡೆ+ಏನ್)(ಸಾಕ್ಷಿ+ಅಲ್ತೆ)

ದೇವರು ಎನ್ನುವ ಒಂದು ವಸ್ತು ಬೇರೆ ಇದ್ದರೆ ಅಥವಾ ಇಲ್ಲದಿದ್ದರೇನಂತೆ. ನಾವು ನಡೆಸುತ್ತಿರುವ ಜೀವನವೇ ಅವನ ಹಿರಿಮೆಗೆ ಪುರಾವೆ ಅಲ್ಲವೇನು? ಸೊಗಸು ಮತ್ತು ಘನತೆಗಳಿಂದ ಕೂಡಿದ ತುಂಬು ಜೀವನವನ್ನು ನಡೆಸಿ, ನೀನು ಪರಮಾತ್ಮನಿಗೆ ಯೋಗ್ಯನೆಂದೆನ್ನಿಕೊ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

What if an entity called God exists or not?
Is not this life a living proof of God’s greatness?
Live a full life with great grace and grandeur
And grow high to the stature of God – Marula Muniya (762)
(Translation from "Thus Sang Marula Muniya" by Sri. Narasimha Bhat)

Wednesday, April 15, 2015

ದೃಷ್ಟಿ ವಿಸ್ತೃತಮಾಗಿ ದಿಕ್ತಟಂಗಳ ಹಾಯ್ದು (761)

ದೃಷ್ಟಿ ವಿಸ್ತೃತಮಾಗಿ ದಿಕ್ತಟಂಗಳ ಹಾಯ್ದು |
ಸೃಷ್ಟಿಯೆಲ್ಲವನಾತ್ಮಭಾವವಾವರಿಸೆ ||
ಇಷ್ಟವೇಂ ಕಷ್ಟವೇನಾ ಮಹೈಕ್ಯಜ್ಞಂಗೆ |
ತುಷ್ಟನವನೇಗಳುಂ - ಮರುಳ ಮುನಿಯ || (೭೬೧)

(ವಿಸ್ತೃತಂ+ಆಗಿ)(ದಿಕ್+ತಟಂಗಳ)(ಸೃಷ್ಟಿಯೆಲ್ಲವನ್+ಆತ್ಮಭಾವ+ಆವರಿಸೆ)(ಇಷ್ಟ+ಏಂ)(ಕಷ್ಟ+ಏನ್+ಆ)(ಮಹ+ಐಕ್ಯಜ್ಞಂಗೆ)(ತುಷ್ಟನ್+ಅವನ್+ಏಗಳುಂ)

ನೋಡತಕ್ಕಂತಹ ನೋಟವು ವಿಸ್ತಾರಗೊಂಡು (ವಿಸ್ತೃತ), ದಿಗಂತ(ದಿಕ್ತಟ)ವನ್ನು ದಾಟಿ, ಸೃಷ್ಟಿಯ ಎಲ್ಲವೂ ಒಂದೇ ಎಂಬ ಆತ್ಮಭಾವನೆ ಆವರಿಸಿಕೊಳ್ಳಲು, ಸರ್ವವೂ ಬ್ರಹ್ಮವೇ ಎಂದು ತಿಳಿದವನಿಗೆ (ಐಕ್ಯಜ್ಞ) ಯಾವುದು ಇಷ್ಟ ಮತ್ತು ಇನ್ಯಾವುದು ಕಷ್ಟ? ಅವನು ಸದಾ (ಏಗಳುಂ) ಸಂತೃಪ್ತ(ತುಷ್ಟ)ನಾಗಿರುತ್ತಾನೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

When one’s vision expands and crosses the horizons
When his self sentiments fills and pervades the whole universe
The great unifier, the all embracing self rises above all joys and sorrows
Ever content is he – Marula Muniya (761)
(Translation from "Thus Sang Marula Muniya" by Sri. Narasimha Bhat)

Tuesday, April 14, 2015

ವಕ್ತ್ರಶಿರ ಕರ್ಣಾಕ್ಷಿಕರಪದಾದ್ಯಂಗಗಳು (760)

ವಕ್ತ್ರಶಿರ ಕರ್ಣಾಕ್ಷಿಕರಪದಾದ್ಯಂಗಗಳು |
ಮರ್ತ್ಯಸಾಮಾನ್ಯಂಗಳೆಲ್ಲರ‍್ಗಮಿಹವು ||
ಪೃಥ್ವೀಜೆ ಶೂರ್ಪಣಖಿಯರ‍್ಗೆ ರೇಖಾ ಮಾತ್ರ |
ವೆತ್ಯಾಸ ರೂಪದಲಿ - ಮರುಳ ಮುನಿಯ || (೫೭೦)

(ಕರ್ಣ+ಅಕ್ಷಿ+ಕರ+ಪದ+ಆದಿ+ಅಂಗಗಳು)(ಮರ್ತ್ಯಸಾಮಾನ್ಯಂಗಳ್+ಎಲ್ಲರ‍್ಗಂ+ಇಹವು)

ಮುಖ (ವಕ್ತ್ರ), ತಲೆ (ಶಿರ), ಕಿವಿ (ಕರ್ಣ), ಕಣ್ಣು (ಅಕ್ಷಿ), ಕೈ (ಕರ), ಕಾಲು (ಪದ) ಮತ್ತು ದೇಹದ ಇತ್ಯಾದಿ ಭಾಗಗಳು ಮನುಷ್ಯ (ಮರ್ತ್ಯ)ರೆಲ್ಲರಿಗೂ ಸಮಾನವಾಗಿರುತ್ತದೆ. ಸೀತೆ (ಪೃಥ್ವೀಜೆ) ಮತ್ತು ಶೂರ್ಪಣಖಿಯರಿಗೆ ರೂಪಸಾಮ್ಯದಲ್ಲಿ ಒಂದೇ ಒಂದು ಗೆರೆಯಷ್ಟು ಮಾತ್ರ ವ್ಯತ್ಯಾಸ ಅಷ್ಟೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Physical organs like face, head, ears, eyes, hands and feet
Are common to all men and almost all men posses them
The difference in appearances between Seetha and Shoorpanakha
Was only of a thin line – Marula Muniya (760)
(Translation from "Thus Sang Marula Muniya" by Sri. Narasimha Bhat)

Monday, April 13, 2015

ಕ್ಷಣವೆರಡಕೆರಡುಗತಿ ಕಾಲಪ್ರವಾಹದಲಿ (759)

ಕ್ಷಣವೆರಡಕೆರಡುಗತಿ ಕಾಲಪ್ರವಾಹದಲಿ |
ಕಣವೆರಡರಂದವೆರಡುಸಬು ರಾಶಿಯಲಿ ||
ದಿನದಿಂದ ದಿನ ಬೇರೆ ನರನಿಂದ ನರ ಬೇರೆ |
ಅನುರೂಪಿದಶೆ ಬಾಹ್ಯ - ಮರುಳ ಮುನಿಯ || (೭೫೯)

(ಕ್ಷಣ+ಎರಡಕೆ+ಎರಡುಗತಿ)(ಕಣ+ಎರಡರ+ಅಂದ+ಎರಡು+ಉಸಬು)

ಕಾಲ ಪ್ರವಾಹದಲ್ಲಿ ಒಂದೊಂದು ಕ್ಷಣವೂ ಬೇರೆ ಬೇರೆ ಮಾರ್ಗಗಳಲ್ಲಿ ಚಲಿಸುತ್ತಿರುತ್ತದೆ. ಒಂದು ಮರಳಿನ (ಉಸಬು) ರಾಶಿಯಲ್ಲಿ ಒಂದೊಂದು ಕಣವೂ ಬೇರೆ ಬೇರೆ ತರಹವಿರುವಂತೆ, ಒಂದು ದಿನದಂತೆ ಮತ್ತೊಂದು ದಿನವಿರುವುದಿಲ್ಲ. ಅದೇ ರೀತಿ ಒಬ್ಬ ಮನುಷ್ಯನು ಇನ್ನೊಬ್ಬನಿಗಿಂತ ಭಿನ್ನವಾಗಿರುತ್ತಾನೆ. ಹೊರ(ಬಾಹ್ಯ)ನೋಟದ ಸ್ಥಿತಿ(ದಶೆ)ಗೆ ಮಾತ್ರ ಒಬ್ಬರು ಇನ್ನೊಬ್ಬರಂತೆ ಕಾಣಿಸಿಕೊಳ್ಳುತ್ತಾನೆ. ಹೊರ(ಬಾಹ್ಯ)ನೋಟದ ಸ್ಥಿತಿ(ದಶೆ)ಗೆ ಮಾತ್ರ ಒಬ್ಬರು ಇನ್ನೊಬ್ಬರಂತೆ ಕಾಣಿಸಿಕೊಳ್ಳುತ್ತಾರೆ (ಅನುರೂಪ).
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Different are the paths of any two moments in the tide of time,
Different is the beauty of any two particles in a heap of sand
Day and day are different, man and man are different
Similarity is only an outward appearance – Marula Muniya (759)
(Translation from "Thus Sang Marula Muniya" by Sri. Narasimha Bhat)

Friday, April 10, 2015

ವ್ಯಕ್ತಿತೆಯೇ ವಿಶ್ವವೃಕ್ಷದೊಳನುದಿನದ ಕುಸುಮ (758)

ವ್ಯಕ್ತಿತೆಯೇ ವಿಶ್ವವೃಕ್ಷದೊಳನುದಿನದ ಕುಸುಮ |
ಮೌಕ್ತಿಕವದೀ ಜಗಜ್ಜಲಧಿಕುಹರಗಳೊಳ್ ||
ಪ್ರತ್ಯೇಕ ಜೀವಕಂ ಪ್ರತ್ಯೇಕವಿಹುದು ಗತಿ |
ಮುಕ್ತಿ ವೈಯಕ್ತಿಕವೊ - ಮರುಳ ಮುನಿಯ || (೭೫೮)

(ವಿಶ್ವವೃಕ್ಷದ+ಒಳು+ಅನುದಿನದ)(ಮೌಕ್ತಿಕವು+ಅದು+ಈ)(ಜಗತ್+ಜಲಧಿ+ಕುಹರಗಳ್+ಒಳ್)

ಪ್ರತಿಯೊಬ್ಬ ವ್ಯಕ್ತಿಯ ಸ್ವಂತ ವ್ಯಕ್ತಿತ್ವವೆಂಬುದೇ ಈ ಪ್ರಪಂಚದ ವೃಕ್ಷದಲ್ಲಿ ಪ್ರತಿದಿನವೂ ಕಾಣಿಸಿಕೊಳ್ಳುವ ಹೂವು. ಜಗತ್ತಿನ ಸಮುದ್ರದ ಆಳದಲ್ಲಿರುವ (ಕುಹರ) ಮುತ್ತು(ಮೌಕ್ತಿಕ)ಗಳಿವು. ಪ್ರತಿಯೊಬ್ಬ ಜೀವಿಗೂ ಪ್ರತ್ಯೇಕವಾದ ಗುರಿ ನಿಯಮಿಸಲ್ಪಟ್ಟಿದೆ. ಮುಕ್ತಿ ಮಾರ್ಗಗಳು ಆಯಾಯ ವ್ಯಕ್ತಿಗೆ ಸಂಬಂಧಸಿದ ವಿಚಾರ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Individuality is the flower blossoming everyday in the tree of the world
It is the pearl in the caves of the world ocean,
Every soul has its own road to tread,
Salvation is to be achieved by each individual soul – Marula Muniya (758)
(Translation from "Thus Sang Marula Muniya" by Sri. Narasimha Bhat)

Thursday, April 9, 2015

ನಾರಿಕೇಳವ ನೋಡು ಹೊರಗೆ ಗಡಸಿನ ಹೊದಕೆ (757)

ನಾರಿಕೇಳವ ನೋಡು ಹೊರಗೆ ಗಡಸಿನ ಹೊದಕೆ |
ನೀರಲೆವುದದರುದರದಲಿ ಸೃಷ್ಟಿಯಂತು ||
ಶಾರೀರ ಕೃತಿಗಳಲಿ ನಿಯಮವ ತೋರಿ |
ಸ್ವೈರವೆನಿಪಳು ಮನವ - ಮರುಳ ಮುನಿಯ || (೭೫೭)

(ನೀರ್+ಅಲೆವುದು+ಅದರ+ಉದರದಲಿ)(ಸ್ವೈರ+ಎನಿಪಳು)

ತೆಂಗಿನಕಾಯಿ(ನಾರಿಕೇಳ)ಯ ಹೊರಗಿನ ಚಿಪ್ಪು ಗಟ್ಟಿಯಾಗಿದ್ದರೂ ಸಹ ಅದರ ಒಳಗಡೆ ಮೃದುವಾದ ತಿರುಳು ಕೂಡಿ ಎಳನೀರು ತುಂಬಿರುತ್ತದೆ. ಸೃಷ್ಟಿಯ ವಿಚಾರ ಯಾವಾಗಲೂ ಹೀಗೆಯೇ ಇರುತ್ತದೆ. ದೇಹ (ಶಾರೀರ)ದ ಹೊರಗಿನ ರಚನೆಗಳಲ್ಲಿ ಹೋಲಿಕೆಗಳು ಕಾಣಿಸಿಕೊಳ್ಳುವ ನಿಯಮಗಳನ್ನು ತೋರಿಸಿ, ಮನಸ್ಸಿನೊಳಗೆ ಪ್ರತಿಯೊಬ್ಬರೂ ತಮ್ಮ ತಮ್ಮ ಇಚ್ಛೆ(ಸ್ವೈರ)ಯಂತೆ ನಡೆಯುವವರೆಂದೆನ್ನಿಸುವಳು ಪ್ರಕೃತಿ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Observe a coconut, the husk and shell covering it is quite hard
But sweet water moves in its bosom and so is Nature,
She displays similarities in its outward physical forms
But the mind within is different and free – Marula Muniya (757)
(Translation from "Thus Sang Marula Muniya" by Sri. Narasimha Bhat)

Wednesday, April 8, 2015

ಪ್ರಾಪಂಚಿಕದ ವಸ್ತು ವರ್ಗಂಗಳೊಳು ತೋರು- (756)

ಪ್ರಾಪಂಚಿಕದ ವಸ್ತು ವರ್ಗಂಗಳೊಳು ತೋರು- |
ವೌಪಮ್ಯವೇನದಾಮೂಲಾಗ್ರಮಲ್ತು ||
ಆಪಾತಮಾತ್ರವನು ಪರಕಿಸಲ್ ವ್ಯಕ್ತಿಯಲಿ |
ಸೋಪಾಧಿಕವೊ ಸಾಮ್ಯ - ಮರುಳ ಮುನಿಯ || (೭೫೬)

(ವರ್ಗಂಗಳ್+ಒಳು)(ತೋರುವ+ಔಪಮ್ಯ+ಏನ್+ಅದು+ಆಮೂಲಾಗ್ರಂ+ಅಲ್ತು )

ಪ್ರಪಂಚದ ಪದಾರ್ಥ ಮತ್ತು ಅವುಗಳ ಮೇಲ್ನೋಟಕ್ಕೆ ತೋರುವ ಹೋಲಿಕೆ(ಔಪಮ್ಯ)ಗಳು ಬುಡದಿಂದ ತುದಿಯವರೆಗೆ(ಆಮೂಲಾಗ್ರ) ಒಂದೇ ತರಹವಿರುವುದಿಲ್ಲ. ಒಬ್ಬ ವ್ಯಕ್ತಿಯ ಹೊರನೋಟ(ಆಪಾತ)ವನ್ನು ಮಾತ್ರ ನಾವು ಪರೀಕ್ಷಿಸಿ ನೋಡಿದಾಗ ಅಡ್ಡಿ ಅಡಚಣೆಗಳ ಜೊತೆ (ಸೋಪಾಧಿ) ಸಾದೃಶ್ಯಗಳು (ಸಾಮ್ಯ) ಸಹ ಕಾಣಿಸಿಕೊಳ್ಳುತ್ತವೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Similarities in the various things of nature
Are not comprehensive and absolute but only relative,
If we observe the outward similarities seen in individuals
It becomes evident that they are only relative – Marula Muniya (756)
(Translation from "Thus Sang Marula Muniya" by Sri. Narasimha Bhat)

Tuesday, April 7, 2015

ನೆಲ ಪರಿಯುತಿರೆ ಮನೆಯು (ನಿಂತೀತೆ ಮುರಿದದೆಯೆ?)

ನೆಲ ಪರಿಯುತಿರೆ ಮನೆಯು (ನಿಂತೀತೆ ಮುರಿದದೆಯೆ?)|
ಜಲ ಪರಿಯದಿರೆ ಜನರ್ ಕುಡಿಯಲಹುದೇನು? ||
ಜ್ವಲನ ತಂಪಾಗುವನೆ ಬಿಸಿಕೊಡುವರಾರಾಗ? |
ಕೆಲಸಮೊರ‍್ವರಿಗೊಂದು - ಮರುಳ ಮುನಿಯ || (೭೫೫)

(ಪರಿಯುತ+ಇರೆ)(ಪರಿಯದೆ+ಇರೆ)(ಕುಡಿಯಲ್+ಅಹುದು+ಏನು)(ತಂಪು+ಆಗುವನೆ)(ಬಿಸಿಕೊಡುವರ್+ಆರ್+ಆಗ)(ಕೆಲಸಂ+ಒರ‍್ವರಿಗೆ+ಒಂದು)

ಭೂಮಿಯು ಸ್ಥಿರವಾಗಿ ನಿಲ್ಲದೆ ನೀರಿನ ಪ್ರವಾಹದಂತೆ ಹರಿಯುತ್ತಿದ್ದರೆ, ಅದರ ಮೇಲೆ ಕಟ್ಟಿರುವ ಮನೆಯು ಮುರಿಯದೆ ನಿಂತುಕೊಳ್ಳಲಾದೀತೇನು? ಹಾಗೆಯೇ ನೀರು ಎಲ್ಲೂ ಹರಿಯದೆ ಒಂದೇ ಕಡೆ ನಿಂತುಕೊಂಡುಬಿಟ್ಟರೆ, ವಿವಿಧ ಪ್ರದೇಶದಲ್ಲಿರುವ ಜನರಿಗೆ ಕುಡಿಯಲು ನೀರು ಇರಲಾರದು. ಬೆಂಕಿಯು(ಜ್ವಲ) ಉಷ್ಣತೆಯನ್ನು ಕೊಡದೆ ತಣ್ಣಗಿದ್ದಲ್ಲಿ ಇನ್ಯಾರು ತಾನೆ ಶಾಖ ದೊರಕಿಸುತ್ತಾರೆ? ಈ ಪ್ರಪಂಚದಲ್ಲಿ ಪ್ರತಿಯೊಬ್ಬರಿಗೂ ಒಂದೊಂದು ಕಾರ್ಯವನ್ನು ಭಗವಂತನು ಗೊತ್ತುಪಡಿಸಿದ್ದಾನೆ. ಅವರು ಅದರಂತೆಯೇ ನಡೆದುಕೊಳ್ಳಬೇಕು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Won’t the house collapse when the earth itself starts swaying?
What will the people drink when there’s no rainfall and flow of water?
Who will produce heat when fire itself becomes cold?
Each has its own quality and duty – Marula Muniya (755)
(Translation from "Thus Sang Marula Muniya" by Sri. Narasimha Bhat)

Monday, April 6, 2015

ಇಂದ್ರಿಯನಿರೋಧದಿಂ ಸರಸ ಜೀವನ ಭಂಗ (754)

ಇಂದ್ರಿಯನಿರೋಧದಿಂ ಸರಸ ಜೀವನ ಭಂಗ |
ರುಂದ್ರ ರಾಸಿಕ್ಕದಿಂದಾತ್ಮಗತಿ ಭಂಗ ||
ದ್ವಂದ್ವದ ಸಮನ್ವಯದ ಬಂಧುರತೆಯಿಂದೆ ನೀಂ |
ಸಾಂದ್ರಾತ್ಮ ಜೀವಿಯಿರು - ಮರುಳ ಮುನಿಯ || (೭೫೪)

(ರಾಸಿಕ್ಕದಿಂದ+ಆತ್ಮಗತಿ)(ಸಾಂದ್ರ+ಆತ್ಮ)

ಇಂದ್ರಿಯಗಳನ್ನು ಪ್ರತಿಬಂಧಿಸಿ (ನಿರೋಧ) ನಡೆಯುವುದರಿಂದ ವಿನೋದಕರವಾದ ಜೀವನವು ಮುರಿದುಬೀಳುತ್ತದೆ. ಘೋರ ರೀತಿಯಲ್ಲಿ (ರುಂದ್ರ) ಇಂದ್ರಿಯ ಸುಖಾಭಿಲಾಶೆಗಳನ್ನು ಅನುಭವಿಸುವುದರಿಂದ, ಆತ್ಮದ ಸಹಜಗತಿ ಕುಂಠಿತವಾಗುತ್ತದೆ. ವೈರುದ್ದ್ಯದ ಹೊಂದಾಣಿಕೆ(ಸಮನ್ವಯ)ಯ ಸುಂದರತೆ(ಬಂಧುರತೆ)ಯಿಂದ ನೀನು ಉನ್ನತವಾದ ಆತ್ಮವನ್ನು ಹೊಂದಿರುವ ಜೀವಿಯಾಗಿರು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Suppression of senses jeopardizes happy harmonious life,
Excessive lasciviousness hinders the pilgrimage of self,
Harmoniously coordinate all dualities of life
And be a well-saturated soul – Marula Muniya (754)
(Translation from "Thus Sang Marula Muniya" by Sri. Narasimha Bhat)

Friday, April 3, 2015

ಹಸಿವಿರಿಯದಿರೆ ಜೀವವೆದ್ದು ನಡೆವಂತಿಲ್ಲ (753)

ಹಸಿವಿರಿಯದಿರೆ ಜೀವವೆದ್ದು ನಡೆವಂತಿಲ್ಲ |
ರಸದಾಶೆಯಿರದೆ ಹಸಿವಿನಲ್ಲಿ ಹುರುಪಿಲ್ಲ ||
ಅಸಮರುಚಿಯಿರದಂದು ರಸವಿವೇಕಿತೆಯಿಲ್ಲ |
ವಿಷಮವಿಂತುಪಯುಕ್ತ - ಮರುಳ ಮುನಿಯ || (೭೫೩)

(ಹಸಿವು+ಇರಿಯದೆ+ಇರೆ)(ಜೀವವು+ಎದ್ದು)(ನಡೆವಂತೆ+ಇಲ್ಲ)(ರಸದ+ಆಶೆ+ಇರದೆ)(ಹುರುಪು+ಇಲ್ಲ)(ಅಸಮರುಚಿ+ಇರದಂದು)(ವಿಷಮ+ಇಂತು+ಉಪಯುಕ್ತ)

ಹಸಿವು ಎನ್ನುವುದು ಜೀವಿಯನ್ನು ತಿವಿದು ಎಬ್ಬಿಸದಿದ್ದರೆ, ಜೀವಿಯು ಎದ್ದು ತನ್ನ ಹಸಿವನ್ನು ತಣಿಸಲು ಆಹಾರವನ್ನು ಹುಡುಕಿಕೊಂಡು ಹೋಗುತ್ತಿರಲಿಲ್ಲ. ಜಗತ್ತಿನ ರುಚಿಗಳನ್ನು ಉಣುವ ಬಯಕೆಗಳಿಲ್ಲದಿದ್ದಲ್ಲಿ ಆ ಹಸಿವನ್ನು ತಣಿಸುವುದರಲ್ಲಿ ಯಾವ ಉತ್ಸಾಹ(ಹುರುಪು)ವೂ ಇರುವುದಿಲ್ಲ. ಬೇರೆ ಬೇರೆ ರುಚಿಗಳಿಲ್ಲದಿದ್ದಲ್ಲಿ ರಸ ರುಚಿಗಳ ಬಗ್ಗೆ ವಿವೇಕಿತನವಿರುವುದಿಲ್ಲ. ಈ ಬಗೆಯಾಗಿ ಅಸಮತೆಯ ಗುಣ ಬಾಳಿಗೆ ಉಪಯುಕ್ತವಾಗಿರುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

If hunger doesn’t spur us we do not get up and walk,
Without desire for delicious dishes, hunger is quite uninteresting,
Without variety in tastes there’s no scope for joyful discrimination
Unevenness thus has its own uses – Marula Muniya (753)
(Translation from "Thus Sang Marula Muniya" by Sri. Narasimha Bhat)

Thursday, April 2, 2015

ಸ್ವೀಯ ಪರಕೀಯವೆಂಬಿಂದ್ರಿಯ ವಿಷಯವೆಂಬ (752)

ಸ್ವೀಯ ಪರಕೀಯವೆಂಬಿಂದ್ರಿಯ ವಿಷಯವೆಂಬ |
ಕಾಯ ಮಾನಸವೆಂಬ ರಸಿಕ ರಸವೆಂಬ ||
ಪ್ರೇಯಸೀ ಪ್ರಿಯವೆಂವ ಪ್ರಕೃತಿ ಪೂರುಷರೆಂಬ |
ಮಾಯೆಯಿಂ ದ್ವಂದ್ವಜಗ - ಮರುಳ ಮುನಿಯ || (೭೫೨)

(ಪರಕೀಯ+ಎಂಬ+ಇಂದ್ರಿಯ)

ತನ್ನದು (ಸ್ವೀಯ) ಮತ್ತು ಇತರರದು (ಪರಕೀಯ) ಎನ್ನುವ, ಇಂದ್ರಿಯ ಮತ್ತು ಭೋಗಭಿಲಾಷೆಗಳೆಂಬ, ದೇಹ ಮತ್ತು ಮನಸ್ಸು ಎನ್ನುವ, ರಸಗಳನ್ನು ಅಸ್ವಾದಿಸುವವನು ಮತ್ತು ರಸ ರುಚಿಗಳೆಂಬ, ಪ್ರಿಯೆ ಮತ್ತು ಪ್ರಯಕರ ಎಂಬ ಮತ್ತು ಪ್ರಕೃತಿ ಮತ್ತು ಪುರುಷ ಎನ್ನುವ, ಮಾಯೆಯ ಆಟದಿಂದ ಈ ಜಗತ್ತಿನ ವಿರುದ್ಧ ಜೋಡಿಗಳು ಮಾಡಲ್ಪಟ್ಟಿದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Dualities like the akin and the alien, senses and sense of objects,
Body and mind, beauty and love of beauty
The beloved and lover, Nature and Master of Nature
This whole world of dualities stems from Maya – Marula Muniya (752)
(Translation from "Thus Sang Marula Muniya" by Sri. Narasimha Bhat)

Tuesday, March 31, 2015

ತನ್ನ ಜೊತೆಗಿನ್ನೊರ‍್ವನಿರದೆ ಬಾಳ್ ಸವಿಯಿಲ್ಲ (751)

ತನ್ನ ಜೊತೆಗಿನ್ನೊರ‍್ವನಿರದೆ ಬಾಳ್ ಸವಿಯಿಲ್ಲ |
ಇನ್ನೊರ‍್ವನಿರಲನ್ಯತನವಿಲ್ಲದಿಲ್ಲ ||
ಅನ್ಯಮನವಿರೆ ಭಿನ್ನಮತ ಘರ್ಷೆಯಿರದಿಲ್ಲ |
ಭಿನ್ನದೊಳಭಿನ್ನನಿರು - ಮರುಳ ಮುನಿಯ || (೭೫೧)

(ಜೊತೆಗೆ+ಇನ್ನೊರ‍್ವನ್+ಇರದೆ)(ಇನ್ನೊರ‍್ವನ್+ಇರಲ್+ಅನ್ಯತನ+ಇಲ್ಲದೆ+ಇಲ್ಲ)(ಅನ್ಯಮನ+ಇರೆ)(ಘರ್ಷೆ+ಇರದೆ+ಇಲ್ಲ)(ಭಿನ್ನದ+ಒಳ್+ಅಭಿನ್ನನ್+ಇರು)

ಒಬ್ಬಂಟಿ ಜೀವನವು ಬೇಸರದಿಂದ ಕೂಡಿರುತ್ತದೆ. ತನ್ನ ಜೊತೆಗೆ ಸಂಗಡಿಗನೊಬ್ಬನಿದ್ದರೇನೇ ಜೀವನಕ್ಕೆ ರುಚಿ ಬರುವುದು. ಆದರೆ ಈ ರೀತಿಯಾಗಿ ಸಂಗಡಿಗನಿದ್ದರೂ ಸಹ, ಪ್ರತ್ಯೇಕತನ ಇದ್ದೇ ಇರುತ್ತದೆ. ಪ್ರತ್ಯೇಕವಾದ ಮನಸ್ಸಿರಲಾಗಿ, ಅಭಿಪ್ರಾಯ ವ್ಯತ್ಯಾಸಗಳು(ಭಿನ್ನಮತ) ಮತ್ತೂ ತಿಕ್ಕಾಟ(ಘರ್ಷೆ)ಗಳು ಇದ್ದೇ ಇರುತ್ತವೆ. ಆದ್ದರಿಂದ ನೀನು ಮಾತ್ರ ವ್ಯತ್ಯಾಸಗಳಲ್ಲಿ(ಭಿನ್ನದೊಳ್) ಘರ್ಷೆಣೆಯುಂಟಾಗದಂತೆ ಏಕಾತ್ಮವಾಗಿ ಇರು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

When there’s no companion there is no sweetness in life
Sense of separateness may persist even when there’s a companion
Other minds may cause different opinions and conflicts
But remain unruffled in spite of the outside splits – Marula Muniya
(Translation from "Thus Sang Marula Muniya" by Sri. Narasimha Bhat)

Monday, March 30, 2015

ದ್ವಂದ್ವವಿರೆ ಸುಂದರತೆ ಸುಂದರತೆಯಿಂದಾಶೆ (750)

ದ್ವಂದ್ವವಿರೆ ಸುಂದರತೆ ಸುಂದರತೆಯಿಂದಾಶೆ |
ಸಂದೀಪಿಸುವುದಾಶೆ ಜೀವಿತವ ಜೀವಂ ||
ಬಂಧುತೆಯನಾಗಿಪುದು ಬಾಂಧವ್ಯ ಸಂಸಾರ |
ದ್ವಂದ್ವ ಬಂಧನ ಸೃಷ್ಟಿ - ಮರುಳ ಮುನಿಯ || (೭೫೦)

(ದ್ವಂದ್ವ+ಇರೆ)(ಸುಂದರತೆ+ಇಂದ+ಆಶೆ)(ಸಂದೀಪಿಸುವುದು+ಆಶೆ)(ಬಂಧುತೆಯನ್+ಆಗಿಪುದು)

ತದ್ವಿರುದ್ಧತೆಗಳಿಂದ ಜೀವನಕ್ಕೆ ಸೊಗಸು ಬರುತ್ತದೆ. ಈ ಸೊಗಸನ್ನು ಹೊಂದಲು ಆಶೆಗಳು ಉದ್ಭವವಾಗುತ್ತವೆ. ಈ ರೀತಿಯಾಗಿ ಜೀವಿತವನ್ನು ಜೀವವು ಸೇರಲು ಆಶೆಯು ಕಾರಣಭೂತವಾಗುತ್ತದೆ. ನೆಂಟಸ್ತಿಕೆ ಮತ್ತು ಕುಟುಂಬ ಜೀವನಗಳು ಸಂಬಂಧಗಳನ್ನು ಉಂಟುಮಾಡುತ್ತವೆ. ಹೀಗೆ ಸೃಷ್ಟಿಯೆಲ್ಲ ಸಂಕೀರ್ಣ ಬಂಧನದಿಂದ ಕೂಡಿದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Beauty flowers from duality and from beauty arise desires,
Desires light up our lives and souls,
Desires build up relations and family is a formation of relations
This creation is a bond of dualities – Marula Muniya (750)
(Translation from "Thus Sang Marula Muniya" by Sri. Narasimha Bhat)

Friday, March 27, 2015

ಏತಕಿಂತಿದೆ ಜಗದ್ರಚನೆಯೆಂದೆನ್ನದಿರು (749)

ಏತಕಿಂತಿದೆ ಜಗದ್ರಚನೆಯೆಂದೆನ್ನದಿರು |
ಹೇತು ಕರ್ತೃವನರಿತು ನಿನಗಪ್ಪುದೇನು? ||
ನೀತಿಯೇನೆಂದು (ಲೋಕ) ಪ್ರಕೃತದಲಿ ಹಿತದ |
ರೀತಿಯನು ಬಗೆದು ತಿಳಿ - ಮರುಳ ಮುನಿಯ || (೭೪೯)

(ಏತಕೆ+ಇಂತು+ಇದೆ)(ಜಗದ್ರಚನೆ+ಎಂದು+ಎನ್ನದಿರು)(ಕರ್ತೃವನ್+ಅರಿತು)(ನಿನಗೆ+ಅಪ್ಪುದು+ಏನು)

ಜಗತ್ತನ್ನು ಈ ರೀತಿಯಾಗಿ ಏಕೆ ನಿರ್ಮಿಸಲಾಗಿದೆ ಎಂದೆನ್ನಬೇಡ. ಜಗತ್ತನ್ನು ರಚಿಸಿದವನ ಉದ್ದೇಶಗಳನ್ನು ನೀನು ತಿಳಿದುಕೊಂಡು ಆಗಬೇಕಾಗಿರುವುದೇನು? ಸದ್ಯದ ಪ್ರಪಂಚದ ನೀತಿ ನಿಯಮಗಳು ಏನೆಂಬುದನ್ನು ಮತ್ತು ಲೋಕಕ್ಕೆ ಹಿತವಾಗಿರುವುದರ ರೀತಿಯನ್ನು ಯೋಚಿಸಿ ತಿಳಿದಿಕೊಂಡರೆ ಅಷ್ಟು ಸಾಕು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Ask not why the world is arranged like this,
What do you gain by knowing the cause and the Creator?
Reflect on and find out your proper present duty
And the proper way to work for the world’s welfare – Marula Muniya (749)
(Translation from "Thus Sang Marula Muniya" by Sri. Narasimha Bhat)

Thursday, March 26, 2015

ದೇವನುದ್ದೇಶವೇನೆಂದೆನಲು ನೀನಾರು? (748)

ದೇವನುದ್ದೇಶವೇನೆಂದೆನಲು ನೀನಾರು? |
ಅವಶ್ಯಕವೆ ನಿನ್ನನುಜ್ಞೆಯಾತಂಗೆ? ||
ಆವುದೋ ಪ್ರಭುಚಿತ್ತವೇನೋ ಅವನ ನಿಮಿತ್ತ |
ಸೇವಕಂಗೇತಕದು? - ಮರುಳ ಮುನಿಯ || (೭೪೮)

(ದೇವನ+ಉದ್ದೇಶ+ಏನೆಂದು+ಎನಲು)(ನೀನ್+ಆರು)(ನಿನ್ನ+ಅನುಜ್ಞೆ+ಆತಂಗೆ)(ಪ್ರಭುಚಿತ್ತ+ಏನೋ)
(ಸೇವಕಂಗೆ+ಏತಕೆ+ಅದು)

ಪರಮಾತ್ಮನ ಅಭಿಪ್ರಾಯ ಮತ್ತು ಗುರಿಗಳೇನೆಂದು ಕೇಳಲು ನೀನಾರು? ನಿನ್ನ ಒಪ್ಪಿಗೆಯ (ಅನುಜ್ಞೆ) ಅವಶ್ಯಕತೆ ಅವನಿಗಿದೆಯೇನು? ಒಡೆಯ(ಪ್ರಭು)ನ ಮನಸ್ಸು (ಚಿತ್ತ) ಹೇಗಿರುವುದೋ, ಅವನ ಕಾರಣಗಳೇನಿವೆಯೋ, ಅದರ ಬಗ್ಗೆ ಸೇವಕನಾದ ನಿನಗೆ ಚಿಂತೆ ಏಕೆ?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Who are you to enquire into the intentions of God?
Is your command necessary for Him to act?
What’s in the mind of the Master? What’s the cause of His action?
Asking like this is none of the servant’s business – Marula Muniya (748)
(Translation from "Thus Sang Marula Muniya" by Sri. Narasimha Bhat)

Wednesday, March 25, 2015

ಅರಸುತ್ತ ತತ್ತ್ವವನು ಬಹುದೂರ ಚರಿಸದಿರು (747)

ಅರಸುತ್ತ ತತ್ತ್ವವನು ಬಹುದೂರ ಚರಿಸದಿರು |
ಅರಿವಿಗೆಟುಕಿದನಿತ್ತನೆಡೆಬಿಡದೆ ಚರಿಸು ||
ತರುವಿನವೊಲರಿವು ತಾನಾಗಿ ಬೆಳೆವುದು ಸಾಜ |
ಹೊರಗುಂಟೆ ಬೇರ್ ಸಸಿಗೆ - ಮರುಳ ಮುನಿಯ || (೭೪೭)

(ಚರಿಸದೆ+ಇರು)(ಅರಿವಿಗೆ+ಎಟುಕಿದನ್+ಇತ್ತನ್+ಎಡೆಬಿಡದೆ)(ತರುವಿನ+ವೊಲ್+ಅರಿವು)(ಹೊರಗೆ+ಉಂಟೆ)

ಪರಮಾತ್ಮನ ತತ್ತ್ವವನ್ನು ಹುಡುಕುತ್ತಾ ಬಹಳ ದೂರ ಹೋಗಬೇಡ. ನಿನ್ನ ತಿಳುವಳಿಕೆ ಬಂದುದನ್ನು ಆದಷ್ಟು ನಿರಂತರವಾಗಿ ಆಚರಿಸು. ಗಿಡ, ಮರ(ತರು)ಗಳಂತೆ ತಿಳುವಳಿಕೆ(ಅರಿವು)ಯೂ ಸಹ ಸಹಜವಾಗಿ ನಿನ್ನಲ್ಲಿ ಬೆಳೆಯಬೇಕು. ಒಂದು ಸಸಿಗೆ ಬೇರು ಹೊರಗಡೆ ಇರುತ್ತದೇನು? ಅದು ಸಹಜವಾಗಿ ಒಳಗಡೆಯೇ ಬೆಳೆಯುತ್ತಿರುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Go not too far exploring the Truth in remote regions,
Practice regularly what you understand well,
Your knowledge has to grow naturally on its own like a tree,
Do the roots of a plant grow above ground – Marula Muniya
(Translation from "Thus Sang Marula Muniya" by Sri. Narasimha Bhat)

Tuesday, March 24, 2015

ಆತುರಿಸದಿರು ಮುಕ್ತಿಗಾತುರಿಸದಿರು ತತ್ತ್ವ (746)

ಆತುರಿಸದಿರು ಮುಕ್ತಿಗಾತುರಿಸದಿರು ತತ್ತ್ವ- |
ಕಾತುರಿಸಬೇಡಾತ್ಮ ಪರಿಪಾಕಕೆಂದುಂ ||
ಆತುರಾನ್ನದೊಳರ್ಧಪಕ್ವಾತಿಪಕ್ವಗಳು |
ಯಾತನೆಗೆ ಮೂಲವಲೆ - ಮರುಳ ಮುನಿಯ || (೭೪೬)

(ಆತುರಿಸದೆ+ಇರು)(ಮುಕ್ತಿಗೆ+ಆತುರಿಸದೆ+ಇರು)(ತತ್ತ್ವಕೆ+ಆತುರಿಸಬೇಡ+ಆತ್ಮ)(ಪರಿಪಾಕಕೆ+ಎಂದುಂ)(ಆತುರ+ಅನ್ನದ+ಒಳ್+ಅರ್ಧಪಕ್ವ+ಅತಿಪಕ್ಷಗಳು)(ಮೂಲ+ಅಲೆ)

ಮೋಕ್ಷವನ್ನು ಪಡೆಯಲು ಆತುರಿಸಬೇಡ. ಪರಮಾತ್ಮನ ತತ್ತ್ವವನ್ನು ಅರಿಯಲು ಆತುರಪಡಬೇಡ. ಆತ್ಮವನ್ನು ಸಂಪೂರ್ಣವಾಗಿ ಪಕ್ವಗೊಳಿಸಲು ಆತುರದ ಕೆಲಸ ಮಾಡಿದರೆ ಆಗುವುದಿಲ್ಲ. ಅಕ್ಕಿಯನ್ನು ಬೇಯಿಸುವಾಗ ಆತುರಪಟ್ಟರೆ, ಕೆಲವು ಭಾಗದಲ್ಲಿರುವ ಅಕ್ಕಿಯು ಅರ್ಧಬೆಂದು ಕೆಲವು ಭಾಗದಲ್ಲಿರುವ ಅಕ್ಕಿಯು ಹೆಚ್ಚಾಗಿ ಬೆಂದುಹೋಗುತ್ತದೆ. ಆತುರದ ಕಾರ್ಯಗಳು ವೇದನೆಗೆ ಕಾರಣವಾಗುತ್ತವೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Hurry not for salvation and hurry not for the realization of the Truth
Hurry not for the ripening and refinement of the soul
Rice cooked in haste may become half cooked or overcooked
Hurry is the root of worry and pain – Marula Muniya
(Translation from "Thus Sang Marula Muniya" by Sri. Narasimha Bhat)

Monday, March 23, 2015

ದುರಿತಲೋಕದಿನಳಿವುದೆಂದೆನುತ ಕೇಳದಿರು (745)

ದುರಿತಲೋಕದಿನಳಿವುದೆಂದೆನುತ ಕೇಳದಿರು |
ಅರಿವರಾರದರ ಹುಟ್ಟೆಂದೊ ಮುಗಿವೆಂದೊ ||
ನೆರವೊ ನೀನದಕೆ ನೆರವಲ್ಲವೋ ಪೇಳದನು |
ಚರಿತೆ ನಿನ್ನದು ಮುಖ್ಯ - ಮರುಳ ಮುನಿಯ || (೭೪೫)
(ದುರಿತ+ಲೋಕದಿನ್+ಅಳಿವುದು+ಎಂದು+ಎನುತ)(ಅರಿವರ್+ಆರ್+ಅದರ)(ನೆರವು+ಅಲ್ಲವೋ)(ಪೇಳ್+ಅದನು)
ಜಗತ್ತಿನಿಂದ ಪಾಪ(ದುರಿತ)ಕಾರ್ಯಗಳು ಎಂದಿಗೆ ಕೊನೆಗೊಳ್ಳುತ್ತವೆಯೆಂದು ಕೇಳಬೇಡ. ಅವು ಯಾವಾಗ ಹುಟ್ಟುವುದೋ ಮತ್ತು ಎಂದಿಗೆ ಮುಗಿಯುತ್ತವೆಯೋ ಯಾರಿಗೂ ತಿಳಿಯದು. ಮುಖ್ಯವಾಗಿ ನೀನು ಆ ಕಾರ್ಯಗಳಿಗೆ ಸಹಾಯಕವಾಗಿರುವೆಯೋ ಇಲ್ಲವೋ, ಅದನ್ನು ಮೊದಲು ಹೇಳು. ಜಗತ್ತಿನಲ್ಲಿ ನೀನು ಹೇಗೆ ನಡೆದುಕೊಳ್ಳುತ್ತಿರುವೆ ಎನ್ನುವುದು ಮುಖ್ಯ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Ask not when sorrow and suffering would come to an end in the world,
Who knows when it started and when it will end?
But make sure whether you support it or oppose it,
Your conduct for the cause is of paramount importance – Marula Muniya (745)
(Translation from "Thus Sang Marula Muniya" by Sri. Narasimha Bhat)

Friday, March 20, 2015

ಏಕಾಂತದಂತೆ ಲೋಕಾಸ್ಥೆ ಮಠದಂತೆ ಮನೆ (744)

ಏಕಾಂತದಂತೆ ಲೋಕಾಸ್ಥೆ ಮಠದಂತೆ ಮನೆ |
ಬೇಕು ತತ್ತ್ವದ ತಾನೆ ಕಂಡನುಭವಿಸಲು ||
ಕಾಕುತ್ಸ್ಥನೇಂ ಯತಿಯೆ? ಗೋಕುಲೇಶಂ ವ್ರತಿಯೆ?
ಸಾಕಹಮ ತುಳಿದಿರಲು - ಮರುಳ ಮುನಿಯ || (೭೪೪)

(ಲೋಕ+ಆಸ್ಥೆ)(ಕಂಡು+ಅನುಭವಿಸಲು)(ಗೋಕುಲ+ಈಶಂ)(ಸಾಕು+ಅಹಮ)(ತುಳಿದು+ಇರಲು)

ಜಗತ್ತಿನ ಜೊತೆ ಪ್ರೀತಿಯಿಂದಿರಬೇಕು. ಆದರೆ ಒಬ್ಬಂಟಿಯಾಗಿ ಆಲೋಚಿಸುವಂತಿರಬೇಕು. ಮನೆಯನ್ನು ಅದು ಮಠವೆಂದಂತೆ ಭಾವಿಸಿ ಜೀವಿಸಬೇಕು. ಪರಮಾತ್ಮನ ತತ್ತ್ವವನ್ನು ನೋಡಿ ಅನುಭವಿಸಲು ಈ ಎರಡನ್ನು ಅನುಸರಿಸಬೇಕು. ಶ್ರೀರಾಮ(ಕಾಕುತ್ಸ್ಥ)ನು ಸನ್ಯಾಸಿಯಾಗಿದ್ದನೇನು? ಶ್ರೀ ಕೃಷ್ಣ (ಗೋಕುಲೇಶ) ಪರಮಾತ್ಮ ವ್ರತನಿರತನಾಗಿದ್ದನೇನು? ನೀನು ನಿನ್ನ ಅಹಂಕಾರವನ್ನು ಹತ್ತಿಕ್ಕಿಕೊಂಡಿದ್ದರೆ ಸಾಕು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Necessary is guanine interest in life as in solitude and in house as in monastery
So that one can see and personally experience the divine truth.
Was Sri Rama a mendicant? Was Sri Krishna an ascetic?
It is quite enough if one tramples down one’s ego – Marula Muniya (744)
(Translation from "Thus Sang Marula Muniya" by Sri. Narasimha Bhat) #dvg,#kagga

Thursday, March 19, 2015

ಬದುಕು ಬದುಕೊಳ್ಬದುಕೆ ಬದುಕಸೆರೆಯಿಂ ನಿನಗೆ (743)

ಬದುಕು ಬದುಕೊಳ್ಬದುಕೆ ಬದುಕಸೆರೆಯಿಂ ನಿನಗೆ |
ಬಿಡುಗಡೆಯೊ ಮದುವೆಯಾಗದು ಬೇವುಬೆಲ್ಲ ||
ಎದುರಿಸೆಲ್ಲ ಪರೀಕ್ಷೆಗಳ ವಿಧಿಕೊಟ್ಟಂತೆ |
ಸುಧೆಯಿರ‍್ಪುದಾಳದಲಿ - ಮರುಳ ಮುನಿಯ || (೭೪೩)

(ಬದುಕೊಳ್+ಬದುಕೆ)(ಎದುರಿಸು+ಎಲ್ಲ)(ಸುಧೆ+ಇರ‍್ಪುದು+ಆಳದಲಿ)

ಜೀವನವನ್ನು ಜೀವಿಸಿಯೇ ನಡೆಸು. ಅದರಿಂದಲೇ ಅದರ ಬಂಧನದಿಂಡ ನಿನಗೆ ಬಿಡುಗಡೆಯಾಗುತ್ತದೆ. ಬೇವು-ಬೆಲ್ಲ ಮತ್ತು ಸಿಗಿ-ಕಹಿಗಳು ಎಂದಿಗೂ ಒಂದಾಗಲಾರವು. ಆದುದ್ದರಿಂದ ವಿಧಿಯು ನಿನಗೆ ಕೊಟ್ಟಿರುವ ಶಿಕ್ಷೆ ಮತ್ತು ಪರೀಕ್ಷೆಗಳನ್ನು ಅದು ಹೇಗೆ ಕೊಡುತ್ತದೋ ಹಾಗೆಯೇ ಧೈರ್ಯದಿಂದ ಎದುರಿಸು. ಆಗ ತಳದಲ್ಲಿರುವ ಅಮೃತವು ನಿನಗೆ ದೊರೆಯುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Live your life, living the life well itself releases from the prison of life,
There can be no marriage between neem and sweet jam,
Face all tests as arranged by Fate,
Ambrosia lies deep within – Marula Muniya (743)
(Translation from "Thus Sang Marula Muniya" by Sri. Narasimha Bhat)

Wednesday, March 18, 2015

ಬದುಕು ಬದುಕಿಂದಲೊಳ್ ಬದುಕೆ ಬಿಡುಗಡೆ ನಿನಗೆ (742)

ಬದುಕು ಬದುಕಿಂದಲೊಳ್ ಬದುಕೆ ಬಿಡುಗಡೆ ನಿನಗೆ |
ಎದುರಿಸುತೆ ಬಿದಿಯ ಶಿಕ್ಷೆ ಪರೀಕ್ಷೆಗಳನೆಲ್ಲ ||
ಸೊದೆ ತಳದೊಳಿಹುದು ನೀಂ ಬದುಕೆಲ್ಲರಂತೆ |
ಅದಿರದಿರು ಬಿದಿಯೆದುರು - ಮರುಳ ಮುನಿಯ || (೭೪೨)

(ಪರೀಕ್ಷೆಗಳನ್+ಎಲ್ಲ)(ತಳದ+ಒಳು+ಇಹುದು)(ಬದುಕು+ಎಲ್ಲರಂತೆ)(ಅದಿರದೆ+ಇರು)(ಬಿದಿ+ಯೆದುರು)

ವಿಧಿಯು ನಿನಗೆ ವಿಧಿಸಿರುವ ಶಿಕ್ಷೆ ಮತ್ತು ಪರೀಕ್ಷೆಗಳೆಲ್ಲವನ್ನೂ ಧೈರ್ಯದಿಂದ ಎದುರಿಸುತ್ತಾ, ಬದುಕಿನೊಳಗಡೆಯೇ ಬದುಕು. ಇದರಿಂದಲೇ ನಿನಗೆ ಬಿಡುಗಡೆ. ಅಮೃತವು ತಳಗಡೆ ಇದೆ. ಅದು ದೊರಕಲು ವಿಧಿಯ ಎದುರು ಹೆದರದೆ ಬೆದರದೆ ಎಲ್ಲರಂತೆ ಬದುಕು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Live your life well, living a noble life itself is liberation to you,
Live your life like all others, ambrosia is at the bottom
Live braving all punishment and tests of Fate
Fear not and tremble not before Fate – Marula Muniya (742)
(Translation from "Thus Sang Marula Muniya" by Sri. Narasimha Bhat)

Tuesday, March 17, 2015

ವೇಶ್ಯೆಯಾದೊಡವೆ ತಾನೊರ‍್ವಳಾಂತರ್ಯದಲಿ (741)

ವೇಶ್ಯೆಯಾದೊಡವೆ ತಾನೊರ‍್ವಳಾಂತರ್ಯದಲಿ |
ಬಾಹ್ಯದಲಿ ಬಯಸಿ ಬೆಲೆಯಿತ್ತವನಿಗೊಡವೆ ||
ಆತ್ಮೀಯ ನೀನಂತರಂಗದಲಿ ಬಾಹ್ಯ ಪರ- |
ವಶ್ಯನಾಗಿಹೆಯಯ್ಯ - ಮರುಳ ಮುನಿಯ || (೭೪೧)

(ವೇಶ್ಯೆ+ಆದ+ಒಡವೆ)(ತಾನ್+ಒರ‍್ವಳ್+ಆಂತರ್ಯದಲಿ)(ಬೆಲೆಯಿತ್ತವನಿಗೆ+ಒಡವೆ)
(ನೀನ್+ಅಂತರಂಗದಲಿ)(ಪರವಶ್ಯನ್+ಆಗಿ+ಇಹೆ+ಅಯ್ಯ)

ಹೊರಗಿನ ಬದುಕಿನಲ್ಲಿ ಅವಳು ವೇಶ್ಯೆಯಾದರೂ ಸಹ ಅಂತರಂಗದಲ್ಲಿ ತಾನೇ ತಾನಾಗಿರುತ್ತಾಳೆ. ಸೌಂದರ್ಯವನ್ನು ಅಪೇಕ್ಷಿಸಿ ಬಂದವನಿಗೆ ಅವಳು ತನ್ನನ್ನು ಒಪ್ಪಿಸಿಕೊಳ್ಳುತ್ತಾಳೆ. ನೀನೂ ಸಹ ನಿನ್ನಂತರಂಗದಲ್ಲಿ ನಿನಗೆ ನೀನೇ ಆಗಿ ಆತ್ಮೀಯನಾದರೂ, ಬಾಹ್ಯ ಜಗತ್ತಿನಲ್ಲಿ ಬೇರೆಯವರ ಅಧೀನನಾಗಿರುವೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

A call girl is inwardly a line ornament,
But outwardly she is an ornament of all those who pay the price,
You also are alone in self but outwardly,
You belong to many – Marula Muniya (741)
(Translation from "Thus Sang Marula Muniya" by Sri. Narasimha Bhat)

Friday, March 13, 2015

ಪಟ್ಟುತೀರಲೆ ಬೇಕು ಪಟ್ಟುತೀರಲೆ ಬೇಕು (740)

ಪಟ್ಟುತೀರಲೆ ಬೇಕು ಪಟ್ಟುತೀರಲೆ ಬೇಕು |
ಕಟ್ಟಾಜ್ಞೆ ವಿಧಿಯದಿದು ಪಟ್ಟು ನೀಂ ತೀರು ||
ಕಷ್ಟವೋ ನಿಷ್ಠುರವೊ ದುಷ್ಟಸಹವಾಸವೋ |
ಗಟ್ಟಿಮನದಿಂದೆ ಪಡು - ಮರುಳ ಮುನಿಯ || (೭೪೦)

(ವಿಧಿಯದು+ಇದು)

ನೀನು ಅನುಭವಿಸಲೇ ಬೇಕಾದ ಕಷ್ಟಕೋಟಲೆಗಳನ್ನು, ನೀನು ಅನುಭವಿಸಿ ತೀರಿಸಲೇಬೇಕು. ಇದು ವಿಧಿಯು ನಿನಗೆ ವಿಧಿಸಿರುವ ಕಠಿಣವಾದ ಶಾಸನ (ಕಟ್ಟಾಜ್ಞೆ). ಅವು ತೊಂದರೆ ಮತ್ತು ಸಂಕಟಗಳಾಗಿರಬಹುದು ಅಥವಾ ಕೆಟ್ಟವರ ಸಂಗಗಳಾಗಿರಬಹುದು. ನಿನ್ನ ಮನಸ್ಸನ್ನು ಗಟ್ಟಿ ಮಾಡಿಕೊಂಡು, ಆ ಸ್ಥಿತಿಗಳನ್ನನುಭವಿಸು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

We must bear and pay the debt in full, bear and pay the debt,
This is the ordinance of Fate, we must bear and pay the debt,
It may be unbearable suffering, or unkindness or wicked company
Put up with it with a firm mind – Marula Muniya (740)
(Translation from "Thus Sang Marula Muniya" by Sri. Narasimha Bhat)

Thursday, March 12, 2015

ಬಡವರೊಳು ಬಡವನಹ ಧನಿಕರೊಳು ಧನಿಕನಹ (739)

ಬಡವರೊಳು ಬಡವನಹ ಧನಿಕರೊಳು ಧನಿಕನಹ |
ಹುಡುಗರೊಳು ಹುಡುಗನಹ ಮುದುಕರೊಳು ಮುದುಕಂ ||
ಪಡುವನವನೆಲ್ಲರೊಡನವರವರ ಪಾಡುಗಳ |
ಕೆಡದೆ ತನ್ನೊಳು ಯೋಗಿ - ಮರುಳ ಮುನಿಯ || (೭೩೯)

(ಬಡವನ್+ಅಹ)(ಧನಿಕನ್+ಅಹ)(ಪಡುವನು+ಅವನು+ಎಲ್ಲರೊಡನೆ+ಅವರವರ)(ತನ್ನ+ಒಳು)

ಯೋಗಿಯಾಗಿರುವವನು, ಬಡವನ ಜೊತೆ ಬಡವನಾಗಿಯೂ, ಶ್ರೀಮಂತರ ಜೊತೆ ಶ್ರೀಮಂತನಾಗಿಯೂ, ಹುಡುಗರ ಜೊತೆ ಹುಡುಗನಾಗಿಯೂ, ಮುದುಕರ ಜೊತೆ ಮುದುಕನಾಗಿಯೂ ಅವರುಗಳು ಅನುಭವಿಸುತ್ತಿರುವ ಅವಸ್ಥೆ ಮತ್ತು ಸ್ಥಿತಿಗಳನ್ನು ತಾನ್ನು ಅವುಗಳಿಂದ ಕೆಡದೆ ಅನುಭವಿಸುತ್ತಾನೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The yogi lives as a poor man when among the poor,
As a rich man when among the wealthy, he joins the children
As a child and behaves like an old man among the old,
He plays all different roles suitable to the company he keeps,
But never parts with his purity and identity – Marula Muniya (739)

Wednesday, March 11, 2015

ಅಗ್ನಿವೊಲ್ ವ್ಯಕ್ತಿತೇಜಂ ಸಮಿಧೆಯದಕೆ ಸಂ (738)

ಅಗ್ನಿವೊಲ್ ವ್ಯಕ್ತಿತೇಜಂ ಸಮಿಧೆಯದಕೆ ಸಂ- |
ಲಗ್ನಮಾಗದೊಡನಾಗ ಬೂದಿಯಪ್ಪುದದು ||
ಭಗ್ನವಾಗವೆ ರಾಷ್ಟ್ರ ಜನ ಧರ್ಮಸಂಸ್ಥೆಗಳ್ |
ವಿಘ್ನಿತನಿರಲ್ ವ್ಯಕ್ತಿ - ಮರುಳ ಮುನಿಯ || (೭೩೭)

(ಸಮಿಧೆ+ಅದಕೆ)(ಸಂಲಗ್ನಂ+ಆಗದೊಡನ್+ಆಗ)(ಬೂದಿ+ಅಪ್ಪುದು+ಅದು)(ಭಗ್ನವು+ಆಗವೆ)(ವಿಘ್ನಿತನ್+ಇರಲ್)

ಮನುಷ್ಯನು ಬೆಂಕಿಯಂತೆ, ಅವನ ತೇಜಸ್ಸು (ತೇಜ) ಅದಕ್ಕೆ ಕಟ್ಟಿಗೆ (ಸಮಿಧೆ). ಸರಿಯಾಗಿ ಸಂಬಂಧ ಉಂಟಾಗದಿದ್ದಲ್ಲಿ ಅದು ಬೂದಿಯಾಗಿ ಹೋಗುತ್ತದೆ. ಇದೇ ರೀತಿ ದೇಶ, ಜನ ಮತ್ತು ಧರ್ಮಸಂಸ್ಥೆಗಳೂ ಸಹ ವ್ಯಕ್ತಿಯು ಸಮರಸನಾಗಿ ಬೆರೆಯದೆ ವಿಘ್ನಕಾರಿ ಆದರೆ (ವಿಘ್ನಿತನ್) ಮುರಿದುಬೀಳುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Personal radiance is like a blazing fire,
When firewood touches fire, it burns and turns into ash,
When individuals live like separate islands, won’t
Community, nation and religious institutions disintegrate? – Marula Muniya (738)
(Translation from "Thus Sang Marula Muniya" by Sri. Narasimha Bhat)

Tuesday, March 10, 2015

ಊರ ಕೈ ಹಸುಳೆ ನೀಂ ನೂರಡಿಗೆ ಮೆಟ್ಟುಶಿಲೆ (737)

ಊರ ಕೈ ಹಸುಳೆ ನೀಂ ನೂರಡಿಗೆ ಮೆಟ್ಟುಶಿಲೆ |
ಪೂರಕವೊ ನಿನ್ನ ಬಾಳ್ಗುಳಿದ ಲೋಕದ ಬಾಳ್ ||
ಓರೊಂಟಿಯಿರುವೆವೆನ್ನುವೆಯ ಅದು ಬಾಳ್ವೆಯೇಂ? |
ಮಾರಕವೊ ಬೇರೆತನ - ಮರುಳ ಮುನಿಯ || (೭೩೭)

(ನೂರ್+ಅಡಿಗೆ)(ಬಾಳ್ಗೆ+ಉಳಿದ)(ಓರ್+ಒಂಟಿ+ಇರುವೆ+ಎನ್ನುವೆಯ)

ನೀನು ಊರಿನ ಕೈ ಮಗು. ನೂರಾರು ಜನರ ಅಡಿಗಳಿಗೆ ತುಳಿಯುವ ಕಲ್ಲಾಗುತ್ತೀಯೆ (ಮೆಟ್ಟುಶಿಲೆ). ಆದುದ್ದರಿಂದ ನಿನ್ನ ಜೀವನಕ್ಕೆ ಉಳಿದವರ ಜೀವನವು ಆಸರೆಯಾಗುತ್ತದೆ. ನನಗೆ ಇನ್ಯಾರೂ ಬೇಕಾಗಿಲ್ಲ, ನಾನು ಒಬ್ಬಂಟಿಯಾಗೇ ಇರುವೆನೆಂದು ಹೇಳುವುಯೇನು? ಒಂಟಿ ಬಾಳು ಒಂದು ಬಾಳೇನು? ಈ ರೀತಿಯಾಗಿ ಪ್ರತ್ಯೇಕವಾಗಿರುವುದು ನಿನ್ನ ನಾಶನ(ಮಾರಕ)ಕ್ಕೆ ಕಾರಣವಾಗುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

You are a foster child of the community and a stepping stone for hundreds of feet.
The life of the world supports and complements your life,
Do you wish to live all alone and aloof? Is such life worthwhile?
Separateness is ruinous – Marula Muniya (737)
(Translation from "Thus Sang Marula Muniya" by Sri. Narasimha Bhat)

Monday, March 9, 2015

ಅಗಣಿತದ ವಿವಿಧಪರಿಮಾಣದ ಗುಣಗ್ರಂಥಿ (736)

ಅಗಣಿತದ ವಿವಿಧಪರಿಮಾಣದ ಗುಣಗ್ರಂಥಿ |
ಬಗೆಗೊಳ್ವುದೊಂದು ಜೀವ ವ್ಯಕ್ತಿಯಾಗಿ ||
ಮಗುಳೆ ತಾನೀವುದದು ಸಹಜೀವಿಗಳ್ಗೆನಿತೊ |
ಸ್ವಗುಣಾಂಶ ಲೇಶಗಳ - ಮರುಳ ಮುನಿಯ || (೭೩೬)

(ಬಗೆಗೊಳ್ವುದು+ಒಂದು)(ತಾನ್+ಈವುದು+ಅದು)(ಸಹಜೀವಿಗಳ್ಗೆ+ಎನಿತೊ)(ಸ್ವಗುಣ+ಅಂಶ)

ಈ ರೀತಿಯಾಗಿ ನಮ್ಮ ಗಣನೆಗೆ ಸಿಗದಂತಹ ಬಗೆಬಗೆಯ ಅಳತೆ(ಪರಿಮಾಣ)ಗಳಿಂದ ಕೂಡಿಕೊಂಡಿರುವ ಸ್ವಭಾವಗಳ ಗಂಟು(ಗ್ರಂಥಿ)ಗಳು ಒಂದು ಸಲ ಜೀವಿ ಮತ್ತು ವ್ಯಕ್ತಿಯಾಗಿ ಮಾರ್ಪಡುತ್ತದೆ. ತನ್ನಲ್ಲಿರುವ ಸ್ವಭಾವದ ಭಾಗಗಳ ತುಣುಕು(ಲೇಶ)ಗಳನ್ನು ಅದು ಪುನಃ (ಮಗುಳೆ) ತನ್ನ ಜೊತೆಯಲ್ಲಿರುವ ಜೀವಿಗಳಿಗೂ ಕೊಡುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Innumerable glands of different qualities and volumes
Come together and take shape as an embodied soul.
Portions of many of its qualities it then lends again
To its fellow beings – Marula Muniya (736)
(Translation from "Thus Sang Marula Muniya" by Sri. Narasimha Bhat)

Friday, March 6, 2015

ಎಲೆಹಸಿರತೊಡುವುದೆಲೆಯೊಳಿಹ ಹುಳುವಿನ ತೊಗಲು (735)

ಎಲೆಹಸಿರತೊಡುವುದೆಲೆಯೊಳಿಹ ಹುಳುವಿನ ತೊಗಲು |
ಕೊಳುವುದದು ತೊಗಟೆಯಿಂ ತೊಗಟೆ ಬಣ್ಣವನು ||
ಇಳಿವುವಂತೆಯೆ ಜೀವದೊಳಕೆ ಪರಿಸರದ ಗುಣ |
ಒಳಗಹುದು ಹೊರಗಣದು - ಮರುಳ ಮುನಿಯ || (೭೩೫)

(ಎಲೆ+ಹಸಿರ+ತೊಡುವುದು+ಎಲೆಯ+ಒಳ್+ಇಹ)(ಕೊಳುವುದು+ಅದು)(ಇಳಿವುವು+ಅಂತೆಯೆ)(ಜೀವದ+ಒಳಕೆ)(ಒಳಗೆ+ಅಹುದು)

ಗಿಡದ ಎಲೆಯ ಮೇಲಿರುವ ಒಂದು ಹುಳದ ಚರ್ಮ(ತೊಗಲು)ದ ಬಣ್ಣವು ಆ ಎಲೆಯ ಹಸಿರಿನ ಬಣ್ಣವನ್ನು ಧರಿಸುತ್ತದೆ. ಅದು ಗಿಡದ ತೊಗಟೆಯ ಮೇಲಿದ್ದರೆ, ಅದು ಆ ತೊಗಟೆಯ ಬಣ್ಣವನ್ನು ಪಡೆದುಕೊಳ್ಳುತ್ತದೆ. ಜೀವಿಗಳೊಳಗೆ ಇದೇ ರೀತಿ ಅವುಗಳ ಸುತ್ತಮುತ್ತಲಿನ ಸನ್ನಿವೇಶದ ಸ್ವಭಾವಗಳು ಇಳಿದುಬರುತ್ತದೆ. ಬಾಹ್ಯದಲ್ಲಿರುವ ಲಕ್ಷಣಗಳು ಈ ರೀತಿ ಒಳಗಡೆ ಇರುತ್ತವೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

A worm living in leaves puts on the garment of green
When it lives on the bark of tree it wears the bark-coloured coat
Likewise the quality of environment sinks into the soul,
What exists outside enters inside – Marula Muniya (735)
(Translation from "Thus Sang Marula Muniya" by Sri. Narasimha Bhat)

Thursday, March 5, 2015

ಸೃಷ್ಟಿಯುಚ್ಛ್ವಾಸನಿಶ್ವಾಸಗಳೆ ನಿನ್ನುಸಿರು (734)

ಸೃಷ್ಟಿಯುಚ್ಛ್ವಾಸನಿಶ್ವಾಸಗಳೆ ನಿನ್ನುಸಿರು |
ಬಟ್ಟಬಯಲೆಲೆ ನೀನವಳವೇಗದುಸಿರೊಳ್ ||
ಇಷ್ಟ ನಿನಗೊಲಿದುಸಿರೆ ಕಷ್ಟ ಮುನಿದುಸಿರಲವಳ್ |
ಅಷ್ಟೆ ನಿನ್ನಸ್ತಿತ್ವ - ಮರುಳ ಮುನಿಯ || (೭೩೪)

(ಸೃಷ್ಟಿಯ+ಉಚ್ಛ್ವಾಸ+ನಿಶ್ವಾಸಗಳೆ)(ನೀನ್+ಅವಳ+ವೇಗದ+ಉಸಿರೊಳ್)(ನಿನಗೆ+ಒಲಿದು+ಉಸಿರೆ)(ಮುನಿದು+ಉಸಿರಲ್+ಅವಳ್)(ನಿನ್ನ+ಅಸ್ತಿತ್ವ)

ಸೃಷ್ಟಿಯು ಗಾಳಿಯನ್ನು ತನ್ನೊಳಗಡೆಗೆ ತೆಗೆದುಕೊಂಡು ಮತ್ತು ಬಿಡುವುದೇ ನಿನ್ನ ಉಸಿರಾಟ. ಸೃಷ್ಟಿಯ ಉಸಿರಾಟದ ವೇಗಕ್ಕೆ ತಕ್ಕಂತೆ ನೀನು ಕಾಣಿಸಿಕೊಳ್ಳುತ್ತೀಯೆ. ಅವಳು ಕೋಪಿಸಿಕೊಂಡು ಉಸಿರು ಬಿಟ್ಟಲ್ಲಿ ನಿನಗೆ ಕಷ್ಟ ಉಂಟಾಗುತ್ತದೆ. ನಿನ್ನ ಇರುವಿಕೆ (ಅಸ್ತಿತ್ವ) ಇಷ್ಟು ಮಾತ್ರ ಎಂಬುದನ್ನು ತಿಳಿದುಕೊ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Inhalation and exhalation of Nature is your life breath
You are just a leaf in the open plain to Her surging breath
Blessing to you if She breathes in love and curse if She breathes in anger.
Your existence is just this much – Marula Muniya (734)
(Translation from "Thus Sang Marula Muniya" by Sri. Narasimha Bhat)

Tuesday, March 3, 2015

ಮಮತೆಯಾ ಬಿಂದುವಲೆಯಲೆಯಾಗಿ ಹರಡುತ್ತೆ (732)

ಮಮತೆಯಾ ಬಿಂದುವಲೆಯಲೆಯಾಗಿ ಹರಡುತ್ತೆ |
ರಮಣಿ ಗೃಹ ಕುಲ ದೇಶ ಭೂವಲಯಗಳಲಿ ||
ಶ್ರಮದೆ ಪರಿಯುತೆ ಕಡೆಗೆ ವಿಶ್ವಪ್ರಪಂಚದಲಿ |
ವಿಮಲ ಸುಖರಸವಕ್ಕೆ - ಮರುಳ ಮುನಿಯ || (೭೩೨)

(ಬಿಂದು+ಅಲೆ+ಅಲೆಯಾಗಿ)(ಸುಖರಸ+ಅವಕ್ಕೆ)

ಯಾವ ಜೀವಿಗಳ ಪ್ರೀತಿಯ ಹನಿಯು ಅಲೆ ಅಲೆಯಾಗಿ ವಿಸ್ತರಿಸುತ್ತಾ, ಪತ್ನಿ, ಮನೆ, ವಂಶ ಮತ್ತು ಭೂಮಿಯ ವಿಧವಿಧವಾದ ಪ್ರದೇಶ ಮತ್ತು ಭಾಗಗಳಲ್ಲಿ ಪ್ರಯಾಸದಿಂದ ಹರಿಯುತ್ತಾ ಕೊನೆಗೆ ಈ ವಿಶ್ವವೆಂಬ ಜಗತ್ತಿನಲ್ಲಿ ಸೇರಿಹೋಗುತ್ತದೋ ಅಂತಹ ಜೀವಿಗಳಿಗೆ ಪವಿತ್ರ ಮತ್ತು ಸ್ವಚ್ಛವಾದ ಸುಖದ ಸವಿ ಉಂಟಾಗುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Drops of love spread around in rings of ripples
They flow embracing wife, family, community, countries and continents
They flow and flow and fill the whole universe
With the nectar of pure happiness – Marula Muniya (732)
(Translation from "Thus Sang Marula Muniya" by Sri. Narasimha Bhat) #dvg,#kagga

Monday, March 2, 2015

ತಂದೆ ತಾಯ್ ಬಾಂಧವರನಾದಿಯಿಂ ಬಂದವರು (731)

ತಂದೆ ತಾಯ್ ಬಾಂಧವರನಾದಿಯಿಂ ಬಂದವರು |
ಇಂದು ನಿನ್ನೆಡಬಲಂಗಳಲಿ ನಡೆವವರುಂ ||
ಸಂಧಿಯೊಂದಿಹರು ನಿನ್ನೊಳು ಗೂಢ ನೀಂ (ದಿಟದಿ) |
ಹಿಂದಿಂದುಗಳ ಕೂಸು - ಮರುಳ ಮುನಿಯ || (೭೩೧)

(ಬಾಂಧವರ್+ಅನಾದಿಯಿಂ)(ನಿನ್ನ+ಎಡಬಲಂಗಳಲಿ)(ನಡೆವ+ಅವರುಂ)(ಸಂಧಿ+ಹೊಂದು+ಇಹರು)(ಹಿಂದು+ಇಂದುಗಳ)

ನಿನ್ನ ತಂದೆ, ತಾಯಿ ಮತ್ತು ಇತರ ಬಂಧುಗಳು ಪುರಾತನ ಕಾಲದಿಂದ ಬಂದವರು ಮತ್ತು ಇಂದಿಗೂ ಅವರುಗಳು ನಿನ್ನ ಜೊತೆಯಲ್ಲಿ ನಡೆಯುತ್ತಿದ್ದಾರೆ. ನಿನ್ನೊಳಗಡೆ ಅವರು ಗೂಢವಾಗಿ ಸೇರಿಕೊಂಡಿದ್ದಾರೆ. ನಿಜವಾಗಿ ನೋಡಿದರೆ, ನೀನು ಪುರಾತನ ಮತ್ತು ವರ್ತಮಾನದ ಶಿಶು(ಕೂಸು).
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

You father, mother and relations have come to you from the primordial past,
Everyone who walks with you on your left and right
Have joined you in yourself and you are really mysterious
You are child of past and present – Marula Muniya (731)
(Translation from "Thus Sang Marula Muniya" by Sri. Narasimha Bhat)

Friday, February 27, 2015

ನಾನು ನಾನೆನ್ನುತಿಹನಾರು? ನೀನೊರ‍್ವನೇಂ? (730)

ನಾನು ನಾನೆನ್ನುತಿಹನಾರು? ನೀನೊರ‍್ವನೇಂ? |
ಲೀನರಲ್ಲವೆ ನಿನ್ನೊಳೆಲ್ಲ ಪೂರ್ವಿಕರು? ||
ಅನ್ನವಿಡುವರಿವೀವ ಬಾಳಿಸುವರೆಲ್ಲರುಂ |
ಪ್ರಾಣದೊಳವೊಗದಿಹರೆ - ಮರುಳ ಮುನಿಯ || (೭೩೦)

(ನಾನ್+ಎನ್ನುತ+ಇಹನ್+ಆರು)(ನೀನ್+ಒರ‍್ವನೇಂ)(ಅನ್ನ+ಇಡುವ+ಅರಿವು+ಈವ)(ಬಾಳಿಸುವರ್+ಎಲ್ಲರುಂ)(ಪ್ರಾಣದ+ಒಳು+ವೊಗದೆ+ಇಹರೆ)

"ನಾನು ನಾನು" ಎನ್ನುತ್ತಿರುವವರು ಯಾರು? ನೀನು ಒಬ್ಬನೇ ಏನು? ನಿನ್ನ ಒಳಗಡೆ ನಿನ್ನ ಪೂರ್ವಿಕರೆಲ್ಲರೂ ಸೇರಿಕೊಂಡಿಲ್ಲವೇನು? ಅನ್ನವನ್ನು ಇಟ್ಟು, ತಿಳುವಳಿಕೆಯನ್ನು ನೀಡಿ, ನೀನು ಜೀವನವನ್ನು ನಡೆಸುವಂತೆ ಮಾಡುವವರೆಲ್ಲರೂ ನಿನ್ನ ಪ್ರಾಣದೊಳಗೆ ಸೇರಿ ಕೊಂಡಿರದಿರುವರೇನು?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Who is it who says I, I and I? Is it you alone?
Don’t all your ancestors remain merged in you?
Won’t all those who feed and bless you with knowledge
And help you to live, enter into your soul? – Marula Muniya (730)
(Translation from "Thus Sang Marula Muniya" by Sri. Narasimha Bhat)

Thursday, February 26, 2015

ನಿನ್ನೊಳಗು ನಿನ್ನ ಹೊರಗೆರಡನುಮನರಿತು ನೀಂ (729)

ನಿನ್ನೊಳಗು ನಿನ್ನ ಹೊರಗೆರಡನುಮನರಿತು ನೀಂ |
ಚೆನ್ನಾಗಿ ಹೊಂದಿಸಿಕೊ ಹೊಂದಿಕೆಯ ಚೆನ್ನ ||
ಭಿನ್ನತ್ವ ತೋರದವೊಲಳವಡಿಸಿ ಬಾಳ್ದವನೆ |
ಧನ್ಯನೀ ಸೃಷ್ಟಿಯಲಿ - ಮರುಳ ಮುನಿಯ || (೭೨೯)

(ನಿನ್+ಒಳಗು)(ಹೊರಗೆ+ಎರಡನುಮನ್+ಅರಿತು)(ತೋರದವೊಲ್+ಅಳವಡಿಸಿ)(ಧನ್ಯನ್+ಈ)

ನಿನ್ನಂತರಂಗ ಮತ್ತು ಬಹಿರಂಗ ಪ್ರಪಂಚಗಳನ್ನು ಅರ್ಥ ಮಾಡಿಕೊಂಡು, ನೀನು ಅವೆರಡನ್ನೂ ಚೆನ್ನಾಗಿ ಹೊಂದಿಸಿಕೊ. ಈ ರೀತಿಯ ಹೊಂದಾಣಿಕೆಯೇ ಒಳ್ಳೆಯದು. ಭೇದಭಾವಗಳನ್ನು ತೋರದಂತೆ ಹೊಂದಿಸಿಕೊಂಡು ಜೀವನವನ್ನು ನಡೆಸುವವನೇ ಸೃಷ್ಟಿಯಲ್ಲಿ ಪುಣ್ಯವಂತ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Know yourself inside and the world outside and coordinate them both.
Harmonizing the inside and the outside is the most appropriate thing to be done
One who lives in harmony with no discord
Is the most blessed being in this situation – Marula Muniya (729)
(Translation from "Thus Sang Marula Muniya" by Sri. Narasimha Bhat)

Wednesday, February 25, 2015

ಬಹುಜೀವದೊಳಗೇಕೆ ಜೀವದ ವಿಲೀಕರಣ (728)

ಬಹುಜೀವದೊಳಗೇಕೆ ಜೀವದ ವಿಲೀಕರಣ |
ಬಹುತೆಯಿಂದೇಕತ್ವ ಏಕದಿಂ ಬಹುತೆ ||
ಇಹದೊಳಿದು ಪರಮಾರ್ಥವಿದರಿಂದಲಾನಂದ |
ವಿಹಿತಮಿದು ಮುಕ್ತಂಗೆ - ಮರುಳ ಮುನಿಯ || (೭೨೮)

(ಬಹುಜೀವದ+ಒಳಗೆ+ಏಕೆ)(ಬಹುತೆಯಿಂದ+ಏಕತ್ವ)(ಇಹದೊಳು+ಇದು)
(ಪರಮಾರ್ಥ+ಇದರಿಂದಲ್+ಆನಂದ)(ವಿಹಿತಮ್+ಇದು)

ಅನೇಕಾನೇಕ ಜೀವಗಳ ಒಳಗೆ ಒಂದು ಜೀವ ಏಕೆ ಸೇರಿಕೊಂಡು ಹೋಗಿದೆ? ಏಕೆಂದರೆ ಈ ಅನೇಕದಿಂದ ಒಂದಾಗುವುದು ಮತ್ತೂ ಒಂದರಿಂದ ಅನೇಕವಾಗುವುದು ಪ್ರಪಂಚದಲ್ಲಿ ಪುನರಾವರ್ತಿತವಾಗುತ್ತಿರುತ್ತದೆ. ಅದು ಈ ಪ್ರಪಂಚದಲ್ಲಿ ಪರಮಾತ್ಮನ ಇರುವಿಕೆಯನ್ನೂ ನಮಗೆ ತಿಳಿಸಿಕೊಡುತ್ತದೆ ಮತ್ತು ಅದರಿಂದ ನಮಗೆ ಸಂತೋಷವುಂಟಾಗುತ್ತದೆ. ಪ್ರಪಂಚದಿಂದ ಬಿಡುಗಡೆಯಾಗ ಬಯಸುವವನಿಗೆ, ಈ ಭಾವನೆ ಅಗತ್ಯವಾದುದ್ದಾಗಿದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Merging of one soul with many other souls in the world,
One from many and many from one,
This is the Divine Truth and happiness from this in the world.
This principle is the best to the liberated one – Marula Muniya (728)
(Translation from "Thus Sang Marula Muniya" by Sri. Narasimha Bhat)

Tuesday, February 24, 2015

ನೀನೊಬ್ಬ ಜಗದೊಳಗೆ, ನಿನ್ನೊಳಗದೊಂದು ಜಗ (727)

ನೀನೊಬ್ಬ ಜಗದೊಳಗೆ, ನಿನ್ನೊಳಗದೊಂದು ಜಗ |
ನೀನೆ ಜಗ, ನೀನಿರದೆ ಜಗವುಂಟೆ ನಿನಗೆ? ||
ತಾನೆ ಜಗವೆಲ್ಲವೆಂದರಿತಂಗೆ ಹಗೆಯಲ್ಲಿ? |
ಏನಿಹುದವಂಗನ್ಯ - ಮರುಳ ಮುನಿಯ || (೭೨೭)

(ನಿನ್ನ+ಒಳಗೆ+ಅದು+ಒಂದು)(ಜಗ+ಎಲ್ಲ+ಎಂದು+ಅರಿತಂಗೆ)(ಏನ್+ಇಹುದು+ಅವಂಗೆ+ಅನ್ಯ)

ಪ್ರಪಂಚದ ಬಾಳುವೆಯಲ್ಲಿ ನೀನು ಒಬ್ಬನಾಗಿ ಬಾಳುತ್ತಿರುವೆ. ಆದರೆ ನಿನ್ನೊಳಗಡೆಯೇ ನೀನು ಒಂದು ಪ್ರತ್ಯೇಕ ಜಗತ್ತನ್ನು ನಿರ್ಮಿಸಿಕೊಂಡಿರುವೆ. ನೀನೇ ಜಗತ್ತು. ನೀನು ಇಲ್ಲದಿದ್ದರೆ ಬೇರೆ ಯಾವ ಜಗತ್ತೂ ನಿನಗಿಲ್ಲ. ತಾನೇ ಈ ಜಗತ್ತು ಎಂದು ಅರ್ಥ ಮಾಡಿಕೊಂಡವನಿಗೆ ದ್ವೇಷ(ಹಗೆ)ದ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಅವನಿಗೆ ಬೇರೆ ಎನ್ನುವುದು ಯಾವುದೂ ಇರುವುದಿಲ್ಲ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

You are one individual in the vast world but you contain a world in yourself,
You yourself are a world; does the world exist for you, when you don’t exist?
Is there an enemy to him who thinks that the world is not different from him?
What is alien to him? – Marula Muniya (727)
(Translation from "Thus Sang Marula Muniya" by Sri. Narasimha Bhat)

Monday, February 23, 2015

ಕಾಲನದಿ ಪರಿಯುತಿರೆ ನಡುವೆ ಶೀಲದ ಶೈಲ (726)

ಕಾಲನದಿ ಪರಿಯುತಿರೆ ನಡುವೆ ಶೀಲದ ಶೈಲ |
ಗಾಳಿ ಬಿರುಬೀಸುತಿರಲಾತ್ಮಗಿರಿಯಚಲ ||
ಹೋಳು ಹೋಳಾಗಿ ಜನ ಹಾಳಾಗುತಿರೆ ನೀನು |
ಬಾಳು ತಾಳುಮೆ ಕಲಿತು - ಮರುಳ ಮುನಿಯ || (೭೨೬)

(ಪರಿಯುತ+ಇರೆ)(ಬಿರುಬೀಸುತಿರಲ್+ಆತ್ಮಗಿರಿ+ಅಚಲ)(ಹಾಳ್+ಆಗುತ+ಇರೆ)

ಕಾಲವೆಂಬ ನದಿಯು ಹರಿಯುತ್ತಿರಲು ಮಧ್ಯದಲ್ಲಿ ಸದಾಚಾರವೆಂಬ ಪರ್ವತ(ಶೈಲ)ವು ಸ್ಥಿರವಾಗಿ ನಿಂತಿರುವುದು ಕಂಡುಬರುತ್ತದೆ. ವೇಗವಾಗಿ ಗಾಳಿಯು ಬೀಸುತ್ತಿರುವಾಗ ಆತ್ಮವೆಂಬ ಬೆಟ್ಟ(ಗಿರಿ)ವು ಸ್ಥಿರವಾಗಿ ಅಲುಗಾಡದೆ ನಿಂತಿರುತ್ತದೆ. ಜನಗಳು ಹೋಳು ಹೋಳಾಗಿ ಹಾಳಾಗಿ ಹೋಗುತ್ತಿರುವಾಗ ಅವರ ನಡುವೆ ನೀನು ಸಹನಾಶಕ್ತಿಯನ್ನು ಗಳಿಸಿ ಜೀವನವನ್ನು ನಡೆಸು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The mountain of character stands firm in the rushing river of time,
The mountain of self remains immovable against all violent storms
Learn to endure with patience while people split into splinters
And ruin themselves – Marula Muniya (726)
(Translation from "Thus Sang Marula Muniya" by Sri. Narasimha Bhat)

Friday, February 20, 2015

ಮಾತು ಮನಗಳ ಸೇತು, ಜ್ಯೋತಿ ಕಣ್ಗಳ ಸೇತು (725)

ಮಾತು ಮನಗಳ ಸೇತು, ಜ್ಯೋತಿ ಕಣ್ಗಳ ಸೇತು |
ಪ್ರೀತಿ ಸೇತು ಪ್ರಿಯರ ಸವಿನೆನಸುಗಳಿಗೆ ||
ಸೇತುವಾತ್ಮಕೆ ದೇವಮೂರ್ತಿ ಕೀರ್ತನೆ ಪೂಜೆ |
ನೀತಿಗಾತ್ಮವೆ ಸೇತು - ಮರುಳ ಮುನಿಯ (೭೨೫)

(ಸೇತು+ಆತ್ಮಕೆ)(ನೀತಿಗೆ+ಆತ್ಮವೆ)

ಒಬ್ಬರು ಇನ್ನೊಬ್ಬರೊಡನಾಡುವ ನುಡಿಗಳು ಮನಸ್ಸುಗಳು ಸೇರಲು ಸೇತುವೆಯಾಗುತ್ತವೆ. ಕಣ್ಣುಗಳು ನೋಡಲು ಬೆಳಕು ಒಂದು ಮಾಧ್ಯಮವಾಗುತ್ತದೆ. ನಮ್ಮ ಇಷ್ಟಜನರ ಸಿಹಿನೆನಪುಗಳಿಗೆ ಪ್ರೀತಿಯು ಬಂಧನವಾಗುತ್ತದೆ. ಮೂರ್ತಿಪೂಜೆ, ಭಜನೆ, ಕೀರ್ತನೆಗಳು ಆತ್ಮವು ಪರಮಾತ್ಮನನ್ನು ಸೇರಲು ಕಾರಣಕರ್ತವಾಗುತ್ತವೆ. ಸನ್ನಡತೆಗೆ ಆತ್ಮಭಾವನೆಯೇ ಒಂದು ಸೇತುವೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Speech is the bridge between minds while light is the bridge between eyes
Love is the bridge between the sweet thoughts of the loved ones,
Image of God, prayers and worship form the bridge between self and God
And self itself is the bridge to righteousness – Marula Muniya (724)
(Translation from "Thus Sang Marula Muniya" by Sri. Narasimha Bhat)

Wednesday, February 18, 2015

ಶಿರದ ಮೇಲಣ ಬುತ್ತಿ ಹೊರೆ ದಾರಿ ನಡೆವಂಗೆ (724)

ಶಿರದ ಮೇಲಣ ಬುತ್ತಿ ಹೊರೆ ದಾರಿ ನಡೆವಂಗೆ |
ಅರಗಿದ ಬಳಿಕ್ಕದುವೆ ನವ ಪುಷ್ಟಿ ಶಕ್ತಿ ||
ಹೊರಗೆ ಬೇರೆಯದೆನಿಪ ಜಗ ನಿನ್ನೊಳಗೆ ಕೂಡೆ |
ಅರಿ ಯಾರು ನಿನಗಿನ್ನು? - ಮರುಳ ಮುನಿಯ || (೭೨೪)

(ಬಳಿಕ್ಕ+ಅದುವೆ)(ಬೇರೆ+ಅದು+ಎನಿಪ)(ನಿನ್ನ+ಒಳಗೆ)(ನಿನಗೆ+ಇನ್ನು)

ದಾರಿಯಲ್ಲಿ ಪ್ರಯಾಣಿಸುತ್ತಿರುವ ದಾರಿಹೋಕನಿಗೆ, ಅವನು ಅವನ ತಲೆಯ ಮೇಲೆ ಹೊತ್ತುಕೊಂಡು ಹೋಗುತ್ತಿರುವ ಬುತ್ತಿಯು ಭಾರವೆನ್ನಿಸುತ್ತದೆ. ಆದರೆ ಕಟ್ಟಿಕೊಂಡು ಹೋಗಿರುವ ಅ ಊಟವನ್ನು ಅವನು ಮಾಡಿದಾಗ, ಅದು ಜೀರ್ಣವಾಗಿ ಅವನಿಗೆ ಬೆಳವಣಿಗೆ ಮತ್ತು ಬಲಗಳನ್ನು ಒದಗಿಸುತ್ತದೆ. ಅದೇ ರೀತಿ ಹೊರಜಗತ್ತು ಬೇರೆ ಎಂದೆನ್ನಿಸಿದರೂ, ಅದು ನಿನ್ನೊಳಗಡೆ ಸೇರಿಕೊಂಡರೆ ನಿನಗೆ ಯಾವ ಶತ್ರು(ಅರಿ)ಗಳೂ ಇರುವುದಿಲ್ಲ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The packet of food on the head is a burden to one who walks,
But on digestion it becomes fresh energy and strength to him.
When once the outer world merges in your inner self,
Who is a foe to you in the world – Marula Muniya (724)
(Translation from "Thus Sang Marula Muniya" by Sri. Narasimha Bhat)

Tuesday, February 17, 2015

ಇಂದೆಂಬುದೀಚಣವೊ ನಾವುಸಿರ‍್ವಷ್ಟು ದಿನ (723)

ಇಂದೆಂಬುದೀಚಣವೊ ನಾವುಸಿರ‍್ವಷ್ಟು ದಿನ |
ತಂದೆ ನಿನ್ನೆಯೊ (ಇಂದೊ) ನಾಳೆಯೇ ಮಗನೊ ||
ಹಿಂದು-ಮುಂದುಗಳ ಮರೆತಿಂದು ಬಾಳ್ವುದು ಸರಿಯೆ |
ಇಂದನಂತದ ಭಾಗ - ಮರುಳ ಮುನಿಯ || (೭೨೩)

(ಇಂದ್+ಎಂಬುದು+ಈಚಣವೊ)(ನಾವ್+ಉಸಿರ‍್ವಷ್ಟು)(ಮರೆತು+ಇಂದು)(ಇಂದು+ಅನಂತತ)

ಈವತ್ತು ಎನ್ನುವುದು ಈ ಕ್ಷಣ (ಚಣ) ಮತ್ತು ಅದು ನಮ್ಮಲ್ಲಿ ಉಸಿರು ಇರುವಷ್ಟು ಹೊತ್ತಿಗೆ ಮಾತ್ರ ಸೀಮಿತವಾಗಿರುತ್ತದೆ. ಈವತ್ತು ತಂದೆಯಾಗಿರುವವನು, ನಾಳೆ ಮಗನಾಗಿ ಹುಟ್ಟುತ್ತಾನೋ? ನಾವು ಈ ಹಿಂದು ಮತ್ತು ಮುಂದುಗಳನ್ನು ಮರೆತು ಜೀವನವನ್ನು ನಡೆಸುವುದು ಸರಿಯೇನು? ಈವತ್ತೆನ್ನುವುದು ಅನಂತಕಾಲದ ಒಂದು ಅಂಶವಷ್ಟೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

What is today? Is it just this moment or our entire life till our last breath?
The father of yesterday or today, may be the son tomorrow,
Is it then proper to live in the present forgetting the past and the future?
Today is just a minute fraction of eternity – Marula Muniya (723)
(Translation from "Thus Sang Marula Muniya" by Sri. Narasimha Bhat)

Monday, February 16, 2015

ಜಾತಿ ಮತ ಕುಲ ಭೇದ ಲೋಕ ಕಾರ್ಯದಿ ಗಣ್ಯ (722)

ಜಾತಿ ಮತ ಕುಲ ಭೇದ ಲೋಕ ಕಾರ್ಯದಿ ಗಣ್ಯ |
ಪ್ರೀತಿನೀತಿಗಳಲಿ ಸುಖದುಃಖಭಯಗಳಲಿ ||
ಜಾತರೆಲ್ಲರುಮೊಂದೆ ಭೇದಂಗಳೇನುಂಟು |
ಆತುಮದ ಅನುಭವದಿ - ಮರುಳ ಮುನಿಯ || (೭೨೨)

(ಜಾತರ್+ಎಲ್ಲರುಂ+ಒಂದೆ)(ಭೇದಂಗಳ್+ಏನ್+ಉಂಟು)

ಜಾತಿ, ಕುಲ, ಪಂಗಡ, ಈ ವ್ಯತ್ಯಾಸಗಳು ಜಗತ್ತಿನ ಕೆಲಸಕಾರ್ಯಗಳಲ್ಲಿ ಲೆಕ್ಕಕ್ಕೆ ಬರುತ್ತವೆ. ಅನುರಾಗ, ಸಂತೋಷ, ನಿಯಮಪಾಲನೆ, ಸುಖ, ದುಃಖ ಮತ್ತು ಭಯಗಳನ್ನನುಭವಿಸುವುದರಲ್ಲಿ. ಪ್ರತಿಯೊಬ್ಬರ ಅನುಭವ ಒಂದೇ ತೆರನಾಗಿ ಇರುತ್ತದೆ. ಭೇದ ಭಾವಗಳು ಆತ್ಮದ ಅನುಭವಿಕೆಯಲ್ಲಿ ಇರುವುದಿಲ್ಲ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Differences of caste, creed and religion, count in worldly matters
But moral conduct, love, happiness, sorrow and fear
All human beings are equal. What difference is there
In Self-experience? – Marula Muniya (722)
(Translation from "Thus Sang Marula Muniya" by Sri. Narasimha Bhat)

Friday, February 13, 2015

ಕೊಳದಿ ನಡುವೆಯದೆಂತೊ ಸುಳಿಯೆದ್ದು ಬಳೆಯಾಗಿ (721)

ಕೊಳದಿ ನಡುವೆಯದೆಂತೊ ಸುಳಿಯೆದ್ದು ಬಳೆಯಾಗಿ |
ವಲಯವಲಯಗಳಾಗುತಂಚು ಸೋಕುವವೋಲ್ ||
ಕಳೆ ನಿನ್ನೆದೆಯೊಳೆದ್ದು ವಲಯವಲಯಗಳಾಗಿ |
ಇಳೆಯೆಲ್ಲ ಸೋಕುವುದು - ಮರುಳ ಮುನಿಯ || (೭೨೧)

(ನಡುವೆ+ಅದು+ಎಂತೊ)(ವಲಯಗಳ್+ಆಗುತ+ಅಂಚು)(ನಿನ್ನ+ಎದೆಯ+ಒಳ್+ಎದ್ದು)()

ಒಂದು ಕೆರೆಯ ಮಧ್ಯೆ ಸುಳಿಯು ಹುಟ್ಟಿಕೊಂಡು, ಬಳೆಯಾಕಾರದಲ್ಲಿ, ವರ್ತುಲಾಕಾರವಾಗಿ ದಡವನ್ನು ಮುಟ್ಟುವಂತೆ, ಒಂದು ಕಾಂತಿ(ಕಳೆ)ಯು ನಿನ್ನ ಹೃದಯದ ಮಧ್ಯದಲ್ಲಿ ಎದ್ದು ವರ್ತುಲಾಕಾರವಾಗಿ ಜನರನ್ನೆಲ್ಲ ತಾಗಲಿ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Somehow circular wave arises in the middle of a lake
And then expands around in circles and touches the sides,
Radiance in your heart likewise spreads out in circles
And reaches the entire world – Marula Muniya (721)
(Translation from "Thus Sang Marula Muniya" by Sri. Narasimha Bhat)

Friday, January 16, 2015

ಜಗಳವೇತಕೋ ತಮ್ಮ ನಿನಗೆನಗೆ ಸರ್ವರಿಗೆ (720)

ಜಗಳವೇತಕೋ ತಮ್ಮ ನಿನಗೆನಗೆ ಸರ್ವರಿಗೆ |
ಜಗದೊಳೆಡೆಯಿರಲಾಗಿ ಸೊಗದಿ ಬದುಕಲಿಕೆ ||
ಅಗಲವಿದೆ ನೆಲ ನಾವು ಮನವನಿಕ್ಕಟಮಾಡಿ |
ದುಗುಡ ಪಡುವುದು ಸರಿಯೆ? - ಮರುಳ ಮುನಿಯ || (೭೨೦)

(ಜಗಳ+ಏತಕೋ)(ನಿನಗೆ+ಎನಗೆ)(ಜಗದೊಳು+ಎಡೆ+ಇರಲಾಗಿ)(ಮನವ+ಇಕ್ಕಟಮಾಡಿ)

ಜಗತ್ತಿನಲ್ಲಿರುವ ಪ್ರತಿಯೊಬ್ಬರಿಗೂ ಸುಖವಾಗಿ ಜೀವನವನ್ನು ನಡೆಸಲು ಸ್ಥಳಾವಕಾಶವಿರುವಾಗ, ಸೋದರರಾದ ನಾನು, ನೀನು ಮತ್ತು ಇತರರೆಲ್ಲರೂ ಜಗಳವೇತಕ್ಕಾಡಬೇಕು? ಸಾಕಷ್ಟು ವಿಶಾಲವಾಗಿರುವ ಭೂಮಿಯು ಇರಲಾಗಿ, ನಾವು ನಮ್ಮ ಮನಸ್ಸುಗಳನ್ನು ಸಂಕುಚಿತಗೊಳಿಸಿಕೊಂಡು ದುಃಖ ಮತ್ತು ದುಮ್ಮಾನಗಳನ್ನು ಅನುಭವಿಸುವುದು ಸರಿಯೇ?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Oh Brother! Why do we quarrel, you, I and all
When there is enough room for all of us in the world to love happily?
When the earth is vast, is it proper for us to narrow down our minds
And become unhappy – Marula Muniya (720)
(Translation from "Thus Sang Marula Muniya" by Sri. Narasimha Bhat) 

Tuesday, January 13, 2015

ಸೃಷ್ಟಿಯೊಳು ದಂಡಾರ್ಹರಾರೆಂದು ಕೇಳಿದೊಡೆ (719)

ಸೃಷ್ಟಿಯೊಳು ದಂಡಾರ್ಹರಾರೆಂದು ಕೇಳಿದೊಡೆ |
ಸೃಷ್ಟಿಕರ್ತನೆ ಮೊದಲು ದಂಡ್ಯನೆಂಬೆನು ನಾಂ ||
ಸೊಟ್ಟನವನಿರಿಸಿಟ್ಟು ನೆಟ್ಟಗಿಸು ನೀನೆಂಬ |
ಕಟ್ಟಲೆಯದೇಂ ನ್ಯಾಯ? - ಮರುಳ ಮುನಿಯ || (೭೧೯)

(ದಂಡ+ಅರ್ಹರ್+ಆರ್+ಎಂದು)(ದಂಡ್ಯನ್+ಎಂಬೆನು)(ಸೊಟ್ಟನ್+ಅವನ್+ಇರಿಸಿ+ಇಟ್ಟು)(ನೆಟ್ಟಗೆ+ಇಸು)(ನೀನ್+ಎಂಬ)(ಕಟ್ಟಲೆ+ಅದು+ಏಂ)

ಸೃಷ್ಟಿಯಲ್ಲಿ ಯಾರನ್ನು ಶಿಕ್ಷೆಗೆ ಗುರಿಪಡಿಸಬೇಕೆಂದು ನನ್ನನ್ನು ಕೇಳಿದರೆ, ಮೊಟ್ಟ ಮೊದಲಿಗೆ ಸೃಷ್ಟಿಕರ್ತನಾದ ಪರಮಾತ್ಮನನ್ನೇ ಶಿಕ್ಷೆಗೆ ಗುರಿಪಡಿಸಬೇಕೆಂದು ನಾನು ಹೇಳುತ್ತೇನೆ. ಪ್ರಪಂಚದ ಸೃಷ್ಟಿಯಲ್ಲಿ ಅನೇಕಾನೇಕ ಡೊಂಕುಗಳನ್ನಿರಿಸಿ ಇದನ್ನು ನೀನು ಸರಿಪಡಿಸು ಎನ್ನುವ ನಿಯಮದಲ್ಲಿ ನ್ಯಾಯವೆಲ್ಲಿದೆ?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Who is the culprit to be punished first in this creation?
I would say that the Creator Himself is to be punished first.
Is it just on His part to create a world teeming with distortions
And then ordering us to set them right? – Marula Muniya (719)
(Translation from "Thus Sang Marula Muniya" by Sri. Narasimha Bhat)

Monday, January 12, 2015

ಸತ್ಯವಾವುದು ಕಡಲ ನಡುವಣ ದ್ವೀಪದೊಂ (718)

ಸತ್ಯವಾವುದು ಕಡಲ ನಡುವಣ ದ್ವೀಪದೊಂ-|
ದೆತ್ತರದ ಗುಡಿಯ ಕಿಟಕಿಗಳಿಂದ ನೋಡೆ ||
ಉತ್ತರವೊ ದಕ್ಷಿಣವೊ ಪೂರ್ವವೊ ಪಶ್ಚಿಮವೊ |
ಎತ್ತ ಸತ್ಯದ ನೃತ್ಯ - ಮರುಳ ಮುನಿಯ || (೭೧೮)

(ಸತ್ಯವು+ಆವುದು)(ದ್ವೀಪದ+ಒಂದು+ಎತ್ತರದ)

ಸಮುದ್ರದ ಮಧ್ಯದಲ್ಲಿರುವ ದ್ವೀಪದ ಒಂದು ಎತ್ತರವಾಗಿರುವ ಪ್ರದೇಶದಲ್ಲಿರುವ ಮಂಟಪದ ಕಿಟಕಿಗಳಿಂದ ಆಚೆಯ ಪ್ರದೇಶವನ್ನು ವೀಕ್ಷಿಸುತ್ತಿರುವವನಿಗೆ ಸತ್ಯವೆನ್ನುವುದು ಯಾವ ದಿಕ್ಕಿನಲ್ಲಿರುತ್ತದೆ? ಅದು ಉತ್ತರ, ದಕ್ಷಿಣ, ಪೂರ್ವ ಅಥವಾ ಪಶ್ಚಿಮದಿಕ್ಕಿನಲ್ಲಿ ಕಾಣುತ್ತದೇನು? ಸತ್ಯದ ನರ್ತನವು ಅವನಿಗೆ ಯಾವ ದಿಕ್ಕಿನಲ್ಲಿ ತೋರುವುದೆಂದು ಯಾರೂ ಹೇಳಲಾರರು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

What is the Truth when seen through the windows of a shrine
Standing on the top of an island hill surrounded by the sea?
On all sides, in east, west, north and south
The truth only dances as sea waves – Marula Muniya (718)
(Translation from "Thus Sang Marula Muniya" by Sri. Narasimha Bhat)

Friday, January 9, 2015

ಪಾರವಿಲ್ಲದಿಹ ಚೈತನ್ಯರಾಶಿಯೊ ಜೀವ (717)

ಪಾರವಿಲ್ಲದಿಹ ಚೈತನ್ಯರಾಶಿಯೊ ಜೀವ |
ಬೇರಿನಾ ಬೇರೆ ನೀನೆಂತರಿವೆ? ಕರಿದೆ? ||
ತಾರೆಯಳೆವಣುವೊಡೆವ ಯಂತ್ರಗಳಿಗೆಟುಕದದು |
ಆರರಿವರದರಿರವ - ಮರುಳ ಮುನಿಯ || (೭೧೭)

(ಪಾರ+ಇಲ್ಲದೆ+ಇಹ)(ನೀನ್+ಎಂತು+ಅರಿವೆ)(ತಾರೆಯ+ಅಳೆವ+ಅಣುವ+ಒಡೆವ)(ಯಂತ್ರಗಳಿಗೆ+ಎಟುಕದು+ಅದು)

ಎಲ್ಲೆಯಿಲ್ಲದಿರುವ ಚೇತನ ತುಂಬಿಕೊಂಡಿರುವ ರಾಶಿ ಈ ಜೀವವೆನ್ನುವುದು. ಬೇರುಗಳ ಬೇರನ್ನು, ಎಂದರೆ, ಮೂಲದ ಮೂಲವನ್ನು ನೀನು ಹೇಗೆ ತಿಳಿಯಲು ಸಾಧ್ಯ? ಅದು ಕಪ್ಪಾಗಿರುವುದೇನು? ನಕ್ಷತ್ರಗಳನ್ನು ಅಳೆಯುವ ಮತ್ತು ಅಣುಗಳನ್ನು ಬೇರ್ಪಡಿಸುವ ಯಂತ್ರಗಳಿಗೆ ಈ ವಸ್ತುವನ್ನು ತಿಳಿದುಕೊಳ್ಳಲು ಸಾಧ್ಯವಾಗುವುದಿಲ್ಲ. ಅದರ ಸ್ಥಿತಿಯನ್ನು ತಿಳಿದವರು ಯಾರಿದ್ದಾರೆ?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The soul is an infinite sea of dynamic energy,
How can you know the mother root of all roots? Is it ever possible?
The machines measuring stars and splitting atoms cannot touch it,
Who can know its nature and existence? – Marula Muniya (717)
(Translation from "Thus Sang Marula Muniya" by Sri. Narasimha Bhat)

Wednesday, January 7, 2015

ತತ್ತ್ವವೇನಾತ್ಮವೋ ಬ್ರಹ್ಮವೋ ಜೀವವೋ? (716)

ತತ್ತ್ವವೇನಾತ್ಮವೋ ಬ್ರಹ್ಮವೋ ಜೀವವೋ? |
ಬಿತ್ತೊ ಸಿಹಿತಿರುಳೋ ಮೇಲ್ ಸಿಪ್ಪೆಯೋ ಮಾವೋ? ||
ಕತ್ತರಿಯೊ ಬರಿ ತರ್ಕ, (ವಿಕಲ) ಸಕಲದೊಳಿಹುದೆ? |
ವಸ್ತು ಬಗೆಯಲಖಂಡ - ಮರುಳ ಮುನಿಯ || (೭೧೬)

(ತತ್ತ್ವವು+ಏನ್+ಆತ್ಮವೋ)(ಸಕಲದ+ಒಳ್+ಇಹುದೆ)(ಬಗೆಯಲ್+ಅಖಂಡ)

ನಾವು ತತ್ತ್ವ, ತತ್ತ್ವವೆಂದು ಕರೆಯುವ ಅದು ಏನು? ಆತ್ಮವನ್ನೋ ಹಾಗೆ ನಾವು ಕರೆಯುವುದು? ಅಥವಾ ಅದು ಪರಬ್ರಹ್ಮ ವಸ್ತುವೋ, ಅಥವಾ ಜೀವವೋ? ಇಲ್ಲ ಬೀಜವೊ(ಬಿತ್ತೊ), ಸಿಹಿಯಾಗಿರುವ ತಿರುಳೋ, ಮೇಲಿನ ಸಿಪ್ಪಿಯೋ ಅಥವಾ ಮಾವಿನ ಹಣ್ಣೋ? ತರ್ಕವು ಒಂದು ಕೇವಲ ಕತ್ತರಿಯೋ? ನ್ಯೂನತೆ ಮತ್ತು ಅಪೂರ್ಣತೆಯು ಸಮಗ್ರ ಹಾಗೂ ಸಂಪೂರ್ಣತೆಯಲ್ಲಿರುವುದೋ? ನಾವು ಸರಿಯಾಗಿ ವಿಚಾರ ಮಾಡಿದರೆ ಪರವಸ್ತುವು ಇಡಿಯಾಗಿ ಅಖಂಡವಾಗಿರುವುದನ್ನು ಕಾಣುತ್ತೇವೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

What is Truth? Is it self or soul or Brahma?
Is mango the seed or the sweet pulp of the outer skin?
Dry argument is like scissors, Is not the truth in each and everything?
Realize that the Truth is an undivided whole – Marula Muniya (716)
(Translation from "Thus Sang Marula Muniya" by Sri. Narasimha Bhat)