Thursday, June 1, 2017

ಹೃದಯ ಹಿಮಘನ ಖಂಡವಂ ಕಾವ್ಯರವಿ ಸೋಕೆ (797)

ಹೃದಯ ಹಿಮಘನ ಖಂಡವಂ ಕಾವ್ಯರವಿ ಸೋಕೆ |
ಮಧುರಾನುಭವ ಸಲಿಲ ಪರಿದು ಚಿಂತೋರ್ಮಿ- ||
ಯುದಿಸಿ ಜೀವನ ತೊಳೆದು ಧರ್ಮದೀವಿಯೊಳಿರಿಸಿ |
ಸೊದೆಯಪ್ಪುದಾತುಮಕೆ - ಮರುಳ ಮುನಿಯ || (೭೯೭)

(ಮಧುರ+ಆನುಭವ)(ಚಿಂತೆ+ಊರ್ಮಿ+ಉದಿಸಿ)(ಧರ್ಮ+ದೀವಿಯ+ಒಳು+ಇರಿಸಿ)(ಸೊದೆ+ಅಪ್ಪುದು+ಆತುಮಕೆ)

ಹೃದಯದ ಘನರೂಪದಲ್ಲಿರುವ ಮಂಜುಗಡ್ಡೆಯ ತುಂಡನ್ನು (ಖಂಡ) ಕಾವ್ಯವೆಂಬ ಸೂರ್ಯ(ರವಿ)ನು ಸ್ಪರ್ಷಿಸಲು, ಸಿಹಿಯಾದ (ಮಧು) ಅನುಭವಗಳ ನೀರು (ಸಲಿಲ) ಹರಿದು, ಯೊಚನೆಗಳ ಅಲೆ(ಊರ್ಮಿ)ಗಳು ಹುಟ್ಟಿ(ಉದಿಸಿ)ಕೊಂಡು, ಬಾಳನ್ನು ಚೊಕ್ಕಟಮಾಡಿ, ಧರ್ಮವೆಂಬ ನಡುಗಡ್ಡೆ(ದೀವಿ)ಯೊಳಗಿಟ್ಟು, ಆತ್ಮಕ್ಕೆ ಅಮೃತ(ಸೊದೆ)ವಾಗುತ್ತದೆ.

 When the sun of poetry touches the ice-berg of heart
The water of sweet emotions flows and the noble thought waves rise
They wash the heart well and light the lamp of dharma there
This is an ambrosial experience to the self – Marula Muniya (797)
(Translation from "Thus Sang Marula Muniya" by Sri. Narasimha Bhat)

Monday, July 18, 2016

ಕೃಷ್ಣಶಿಲೆಯೊಂದು ಕಡೆ ಜಕ್ಕಕಲೆಯೊಂದು ಕಡೆ (796)

ಕೃಷ್ಣಶಿಲೆಯೊಂದು ಕಡೆ ಜಕ್ಕಕಲೆಯೊಂದು ಕಡೆ -|
ಯನ್ಯೋನ್ಯವರಸುತ್ತೆ ಕರೆಯುತ್ತೆ ಜಗದಾ ||
ಪುಣ್ಯದಿಂದೊಡಗೂಡಲಾಗಳುಭಯ ಉಭಯರ ಮುಕ್ತಿ |
ಚೆನ್ನಕೇಶವಮೂರ್ತಿ - ಮರುಳ ಮುನಿಯ || (೭೯೬)

(ಕಡೆ+ಅನ್ಯೋನ್ಯ+ಅರಸುತ್ತೆ)(ಪುಣ್ಯದಿಂದ+ಒಡಗೂಡಲ್+ಆಗಳ್+ಉಭಯ)

ಕಪ್ಪು ಕಲ್ಲು (ಕೃಷ್ಣಶಿಲೆ) ಒಂದುಕಡೆ ಮತ್ತು ಅದನ್ನು ಕಡೆದು ಮೂರ್ತಿಯನ್ನು ಮಾಡುವ ಜಕ್ಕಣಾಚಾರಿಯ ಶಿಲ್ಪಕಲೆ ಮತ್ತೊಂದು ಕಡೆ. ಇವು ಒಂದು ಮತ್ತೊಂದನ್ನು ಹುಡುಕಿಕೊಂಡು ಕರೆಯುತ್ತಾ ಜಗತ್ತಿನ ಪುಣ್ಯದಿಂದ ಸೇರಿಕೊಂಡರೆ, ಆವಾಗ ಅವೆರಡಕ್ಕೂ ಚೆನ್ನಕೇಶವನ ವಿಗ್ರಹದಿಂದ ಮೋಕ್ಷವು ಸಿಗುತ್ತದೆ.

(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Dark granite and Jakkana’s sculpture from two different places
Search, call each other and at last due to the
Good fortune of the world they both come together and gain liberation
As the idol of Lord Channakeshava – Marula Muniya (796)
(Translation from "Thus Sang Marula Muniya" by Sri. Narasimha Bhat)

Friday, July 15, 2016

ಬೇಕು ಬೇಕೆನೆ ಕಲಹ ಸಾಕು ಸಾಕೆನೆ ಶಾಂತಿ (795)

ಬೇಕು ಬೇಕೆನೆ ಕಲಹ ಸಾಕು ಸಾಕೆನೆ ಶಾಂತಿ |
ಲೋಕವೃತ್ತಿಯನಯವದಾತ್ಮ ನೀತಿಯದು ||
ಬೇಕೆನ್ನುವುದ ಕಲಿತು ಸಾಕೆನ್ನುವುದ ಮರೆಯೆ |
ವ್ಯಾಕುಲತೆ ತಪ್ಪೀತೆ? - ಮರುಳ ಮುನಿಯ || (೭೯೫)
(ಲೋಕವೃತ್ತಿಯನಯವು+ಅದು+ಆತ್ಮ)
ಸದಾಕಾಲವೂ ನಮಗೆ ಬೇಕಾಗಿರುವದಕ್ಕೋಸ್ಕರ ತಪಿಸುತ್ತಿದ್ದರೆ, ಜಗಳಕ್ಕೆ ಅವಕಾಶ ಉಂಟಾಗುತ್ತದೆ. ಅದೇ ತೃಪ್ತಿಯಿಂದ ಸಾಕು ಎಂದರೆ, ಅದು ನೆಮ್ಮದಿಗೆ ದಾರಿಯಾಗುತ್ತದೆ. ಈ ರೀತಿಯ ಸೂಕ್ಷ್ಮತೆಯಿಂದ ಪ್ರಪಂಚದ ವ್ಯವಹಾರಗಳಲ್ಲಿ ನಡೆದುಕೊಳ್ಳುವ ಒಳ್ಳೆಯ ನಿಯಮಗಳನ್ನೇ ನಮ್ಮ ಆತ್ಮದ ಉದ್ಧಾರಕ್ಕೂ ಬಳಸಿಕೊಳ್ಳಬೇಕು. ಬೇಕೆನ್ನುವುದನ್ನು ಕಲಿತುಕೊಂಡು, ಸಾಕೆನ್ನುವುದನ್ನು ಮರೆತರೆ ದುಃಖ(ವ್ಯಾಕುಲತೆ)ಕ್ಕೆ ಈಡಾಗದೇ ಇರುತ್ತೇವೆಯೇ?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Conflict when man says "I want, I want" and peace when he feels "enough, enough"
This is the smooth style of social conduct and the proper policy for self
But how can man avoid distress when he learns only to demand
And forgets to feel enough? - Marula Muniya (795)
(Translation from "Thus Sang Marula Muniya" by Sri. Narasimha Bhat)

Wednesday, June 1, 2016

ಪಾಶ ಪಾಶಗಳಾಗಿ ತಲೆಯೊಳಿರಲದು ತುಂಬ (794)

ಪಾಶ ಪಾಶಗಳಾಗಿ ತಲೆಯೊಳಿರಲದು ತುಂಬ ।
ಲೇಸೆಂಬೆ ತರುಬೆಂದು ಪೆಣಲೆಂದು ಹೂವ ॥
ಪಾಶವದು ಬೇರೆ ಅಂಗಗಳೊಳಲ್ಲವೇನದಕೆ ।
ಹೇಸುವುದದೇನೆಲವೊ - ಮರುಳ ಮುನಿಯ ॥ (794)

(ತಲೆಯ+ಒಳು+ಇರಲು+ಅದು)(ಅಂಗಗಳ+ಒಳ್+ಅಲ್ಲ+ಏನ್+ಅದಕೆ)(ಹೇಸುವುದು+ಅದು+ಏನ್+ಎಲವೊ)

ಹಗ್ಗ, ಹಗ್ಗಗಳಂತೆ ತಲೆಯ ತುಂಬ ಕೂದಲುಗಳಿದ್ದರೆ, ಅದು ಅಂದ(ಲೇಸು)ವಾಗಿ ಕಾಣುತ್ತದೆಂದು ಮುಡಿಯನ್ನು(ತುರುಬು) ಹೆಣೆದು, ಅದಕ್ಕೆ ಹೂವನ್ನು ಮುಡಿಸುತ್ತಾರೆ. ಅದೇ ಕೂದಲು ದೇಹದ ಬೇರೆ ಅಂಗಗಳಲ್ಲಿ ಇದ್ದರೆ, ಅದು ನೇಣುಹಗ್ಗದಂತಾಗಿ, ನೋಡುವವರಿಗೆ ಅಸಹ್ಯಕರವಾಗಿ(ಹೇಸುವುದು) ಕಾಣುತ್ತದೆ ಅಲ್ಲವೆ?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

When the hair grows thick and long on head,
People admire it as braid or plait and decorate it with flowers,
But when the rope like hair grows in other parts of the body
Why should they detest it ? - Marula Muniya (794)
(Translation from "Thus Sang Marula Muniya" by Sri. Narasimha Bhat)

Thursday, May 5, 2016

ಕುಚ್ಚು ಕುಚ್ಚಾಗಿ ತಲೆಗೂದಲನು ಹೆಣೆಯುವರು (793)

ಕುಚ್ಚು ಕುಚ್ಚಾಗಿ ತಲೆಗೂದಲನು ಹೆಣೆಯುವರು ।
ಮೆಚ್ಚಿಕೊಳ್ಳುವರದನು ನೋಳ್ಪ ಜನರೆಲ್ಲ ॥
ಬಚ್ಚೆಂಬರದು ಬೇರೆ ತಾವಿನೊಳು ಬೆಳೆದಿರಲು ।
ಹುಚ್ಚಲ್ಲವೇನೊ ಇದು? - ಮರುಳ ಮುನಿಯ ॥ (೭೯೩)

(ಮೆಚ್ಚಿಕೊಳ್ಳುವರ್+ಅದನು)(ಬಚ್ಚು+ಎಂಬರ್+ಅದು)(ತಾವಿನ+ಒಳು)

ತಲೆಯ ಕೂದಲನ್ನು ಕುಚ್ಚು ಕುಚ್ಚುಗಳನ್ನಾಗಿ ವಿಂಗಡಿಸಿ ಜಡೆಯನ್ನು ಹೆಣೆಯುತ್ತಾರೆ. ಆವಾಗ ಆ ಜಡೆಯು ನೋಡುವವರ ಕಣ್ಣುಗಳಿಗೆ ಅಂದವಾಗಿ ಕಂಡು, ಅದು ಅವರ ಮೆಚ್ಚಿಗೆಗೆ ಪಾತ್ರವಾಗುತ್ತದೆ. ಆದರೆ ಅದೇ ಕೂದಲು ದೇಹದ ಬೇರೆಯ ಜಾಗ(ತಾವು)ದಲ್ಲಿ ಬೆಳೆದಿದ್ದರೆ, ಅದನ್ನು ಮುಚ್ಚಿಟ್ಟಿಕೋ(ಬಚ್ಚು) ಎಂದೆನ್ನುತ್ತಾರೆ. ಇದು ಒಂದು ಹುಚ್ಚು ಕೆಲಸವಲ್ಲವೇನು?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

When the hair grows thick and long on head,
The people who see, appreciate and admire such hair
Want to hide the hair grown in some other body parts,
Is this not sheer madness? - Marula Muniya || (793)
(Translation from "Thus Sang Marula Muniya" by Sri. Narasimha Bhat)

Wednesday, October 14, 2015

ಅರಸು ನಿನ್ನೊಳಹಂತೆ ಎಲ್ಲಿಹುದೊ ಎಂತಿಹುದೊ (792)

ಅರಸು ನಿನ್ನೊಳಹಂತೆ ಎಲ್ಲಿಹುದೊ ಎಂತಿಹುದೊ |
ಸಿರಿಯಾಶೆ ಸುಖದಾಶೆ ಬಂಧುಜನದಾಶೆ ||
ಬಿರುದು ಯಶದಾಶೆಗಳು ಬೇರೆ ರೂಪದಲಿಪ್ಪ |
ಗರುವವೆಲ್ಲವದಹುದು - ಮರುಳ ಮುನಿಯ || (೭೯೨)

(ನಿನ್ನ+ಒಳು+ಅಹಂತೆ)(ಎಲ್ಲಿ+ಇಹುದೊ)(ಎಂತು+ಇಹುದೊ)(ಗರುವ+ಎಲ್ಲ+ಅದು+ಅಹುದು)

ನಿನ್ನೊಳಗಡೆ ಅಹಂಭಾವವು ಎಲ್ಲಿ ಮತ್ತು ಯಾವ ರೂಪದಲ್ಲಿದೆಯೆಂದು ಹುಡುಕು. ಐಶ್ವರ್ಯವನ್ನು ಸಂಪಾದಿಸುವ ಆಶೆ, ಸುಖವನ್ನನುಭವಿಸುವ ಆಶೆ, ಬಂಧುಜನಗಳ ಜೊತೆ ಸಂಭ್ರಮದಿಂದಿರುವ ಬಯಕೆ, ಹೆಸರು, ಕೀರ್ತಿ ಮತ್ತು ಗೆಲುವುಗಳನ್ನು ಗಳಿಸುವ ಅಪೇಕ್ಷೆಗಳು, ಇವುಗಳೆಲ್ಲವೂ ಬೇರೆ ಬೇರೆ ರೂಪದಲ್ಲಿರುವ ಅಹಂಕಾರಗಳೇ ಹೌದು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Search out the ego in you and find out where and how it is,
The craving for wealth, sensual pleasures and loving relations
The craving for fame and titles are all egoism
Masquerading in various guises – Marula Muniya (792)
(Translation from "Thus Sang Marula Muniya" by Sri. Narasimha Bhat)

Friday, September 4, 2015

ಕಡಲೆರಡು ಸೃಷ್ಟಿಯಲಿ ನೀರರಾಶಿಯದೊಂದು (791)

ಕಡಲೆರಡು ಸೃಷ್ಟಿಯಲಿ ನೀರರಾಶಿಯದೊಂದು |
ಬಿಡುಗೊಳದ ಮನುಜಮಾನಸರಾಶಿಯೊಂದು ||
ಅಡಿಗಡುಗಳುಂಟು ನೀರ‍್ಗದನೆಳೆವ ಭಟರುಂಟು |
ತಡೆಯುಂಟೆ ನರಮನಕೆ? - ಮರುಳ ಮುನಿಯ || (೭೯೧)

(ಕಡಲ್+ಎರಡು)(ನೀರ+ರಾಶಿ+ಅದು+ಒಂದು)(ಮನುಜ+ಮಾನಸರಾಶಿ+ಒಂದು)(ಅಡಿಗಡುಗಳು+ಉಂಟು)(ನೀರ‍್ಗೆ+ಅದನ್+ಎಳೆವ)(ಭಟರು+ಉಂಟು)(ತಡೆ+ಉಂಟೆ)

ಸೃಷ್ಟಿಯಲ್ಲಿ ಎರಡು ಸಮುದ್ರಗಳಿವೆ. ಒಂದು ನೀರಿನರಾಶಿ. ಮತ್ತೊಂದು ನಿರಂತರವಾಗಿ ಹರಿಯುತ್ತಿರುವ ಮನುಷ್ಯನ ಮನಸ್ಸಿನ ವಿಚಾರಧಾರೆ. ಆ ನೀರಿನ ಕೆಳಗಡೆ ಗಡಿಗಳಿವೆ(ಅಡಿಗಡುಗಳು). ಅದನ್ನು ನೀರಿಗೆ ಎಳೆಯುವ ಸೇವಕರೂ ಇದ್ದಾರೆ. ಮನುಷ್ಯನ ಮನಸ್ಸಿಗೆ ತಡೆಗಳಿಲ್ಲ. ಅದು ಎಲ್ಲಿ ಬೇಕಾದರೂ ಹಾರುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Two oceans in creation, one is the vast mass of water
The other is the restless mass of human mind,
Bottom and borders there are to the ocean and brave men there are to measure them,
But who is there to check human mind? - Marula Muniya (791)
(Translation from "Thus Sang Marula Muniya" by Sri. Narasimha Bhat)

Thursday, September 3, 2015

ಸೈಸುವನೆ ಜೈಸುವನು ತಾಳ್ಮೆಯೇ ಮೇಲ್ಮೆಯೈ (790)

ಸೈಸುವನೆ ಜೈಸುವನು ತಾಳ್ಮೆಯೇ ಮೇಲ್ಮೆಯೈ |
ಸಾಸರೋಷಗಳಹುದು ದೋಷ ಭೀಷಣವು ||
ಸೈಸೇನು ಸೋಲಲ್ಲ ಅನ್ಯಾಯದೊಪ್ಪಲ್ಲ |
ಸೈಸುತೆದುರಿಸು ವಿಧಿಯ - ಮರುಳ ಮುನಿಯ || (೭೯೦)

(ಸಾಸ+ರೋಷಗಳ್+ಅಹುದು)(ಸೈಸುತ+ಎದುರಿಸು)

ಸಹಿಸು(ಸೈಸು)ವವನೇ ಜಯಿಸುತ್ತಾನೆ. ತಾಳುಮೆಯೇ ಮೇಲೇಳುವುದು. ತಾಳಿದವನು ಬಾಳಿಯಾನು. ವಿಚಾರಶೂನ್ಯ ಅಪೇಕ್ಷೆ (ಸಾಸ) ಮತ್ತು ಕೋಪ(ರೋಷ)ಗಳಿಂದ, ತಪ್ಪು ಮತ್ತು ಭಯಂಕರ(ಭೀಷಣ) ಅನಾಹುತಗಳಾಗಬಹುದು. ಸಹಿಸಿಕೊಂಡಿರುವುದು ಸೋತುಹೋದಂತೇನಲ್ಲ. ಅದು ಅನ್ಯಾಯವನ್ನು ಒಪ್ಪಿಕೊಂಡಂತೆಯೂ ಅಲ್ಲ. ಆದುದ್ದರಿಂದ ಸಹಿಸಿಕೊಂಡೇ ವಿಧಿಯನ್ನು ಎದುರಿಸು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

He who endures wins, patience itself is excellence,
Mad adventure and anger may end is dangerous blunder
Endurance isn’t defeat and acquiescence isn’t injustice
Endure and bravely face the Fate – Marula Muniya (790)
(Translation from "Thus Sang Marula Muniya" by Sri. Narasimha Bhat) #dvg,#kagga

Wednesday, September 2, 2015

ಸಹನೆ ಜೀವಕೆ ವಿಜಯ ಸಹಿಸು ಬಂದುದನೆಲ್ಲ (789)

ಸಹನೆ ಜೀವಕೆ ವಿಜಯ ಸಹಿಸು ಬಂದುದನೆಲ್ಲ |
ಸಹಿಸು ಬೇಡದ ಬಂದ ಪಾಡನೆಲ್ಲ |
ಸಹನೆ ನಿನ್ನಾತ್ಮವನು ಗಟ್ಟಿಪಡಿಪಭ್ಯಾಸ |
ವಿಹಿತವದು ಮನುಜಂಗೆ - ಮರುಳ ಮುನಿಯ || (೭೮೯)

(ಗಟ್ಟಿಪಡಿಪ+ಅಭ್ಯಾಸ)

ಒಂದು ಜೀವಕ್ಕೆ ಗೆಲುವು ಸಹನೆಯಿಂದ ಬರುತ್ತದೆ. ಆದುದ್ದರಿಂದ ನೀನು ಕೇಳಿಕೊಳ್ಳದಿದ್ದರೂ ಸಹ ನಿನ್ನ ಪಾಲಿಗೆ ಬಂದುದ್ದನೆಲ್ಲಾವನ್ನೂ ನೀನು ಸಹನೆಯಿಂದ ತಾಳಿಕೊ. ಅದು ನಿನ್ನ ಆತ್ಮವನ್ನು ಗಟ್ಟಿಗೊಳಿಸುವ ಸಾಧನವಾಗಿದೆ. ಮನುಷ್ಯನಿಗೆ ಬಾಳಲು ಯೋಗ್ಯವಾದ ಮಾರ್ಗ ಅದು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Endurance itself is success in life and therefore endure all that comes to you
Endure all joys and sorrows that come to you unmasked
Endurance is an exercise that strengthens your self
It is quite essential to man – Marula Muniya (789)
(Translation from "Thus Sang Marula Muniya" by Sri. Narasimha Bhat)

Tuesday, September 1, 2015

ಸತ್ತ್ವರಜತಮಗಳ ಸ್ಪರ್ಧೆಯೆ ಜಗಲ್ಲೀಲೆ (788)

ಸತ್ತ್ವರಜತಮಗಳ ಸ್ಪರ್ಧೆಯೆ ಜಗಲ್ಲೀಲೆ |
ಎತ್ತರದಲೆಯ ತೆರೆಯ ಬೀಳೇಳು ಕಡಲು ||
ಉತ್ತಮನು ಲೀಲೆಯಂ ಲೀಲೆಯೆಂದಾಡುವನು |
ಅತ್ತು ನಿಂತರು (ಕೆಲರು)-ಮರುಳ ಮುನಿಯ || (೭೮೮)

(ಎತ್ತರದ+ಅಲೆಯ)(ಬೀಳ್+ಏಳು)

ಸತ್ತ್ವ, ರಜಸ್ಸು ಮತ್ತು ತಮೋಗುಣಗಳು ಒಂದರ ಜೊತೆ ಇನ್ನೊಂದು ಸ್ಪರ್ಧಿಸುತ್ತಿರುವುದೇ ಈ ಜಗತ್ತಿನ ಆಟ. ಸಮುದ್ರದಲ್ಲಿ ಒಂದು ತೆರೆಯು ಮೇಲಕ್ಕೆ ಎದ್ದು ಪುನಃ ಕೆಳಕ್ಕೆ ಬೀಳುತ್ತದೆ. ಶ್ರೇಷ್ಠವಾಗಿ ಜೀವನವನ್ನು ನಡೆಸುವವನು, ಇದು ಒಂದು ಆಟವೆಂದು ತಿಳಿದುಕೊಂಡು ಆ ಆಟವನ್ನು ನಿಯಮಗಳಿಗನುಸಾರವಾಗಿ ಚೆನ್ನಾಗಿ ಆಡುತ್ತಾನೆ. ಮಿಕ್ಕವರು ದುಃಖಿಸುತ್ತಾ ಇರುತ್ತಾರೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The world play is a competition among satva, rajas and tamas
The sea is just the rise and fall of high waves
The wise considers this play as play
But others waste their lives in grieving – Marula Muniya (788)
(Translation from "Thus Sang Marula Muniya" by Sri. Narasimha Bhat)