Friday, July 15, 2016

ಬೇಕು ಬೇಕೆನೆ ಕಲಹ ಸಾಕು ಸಾಕೆನೆ ಶಾಂತಿ (795)

ಬೇಕು ಬೇಕೆನೆ ಕಲಹ ಸಾಕು ಸಾಕೆನೆ ಶಾಂತಿ |
ಲೋಕವೃತ್ತಿಯನಯವದಾತ್ಮ ನೀತಿಯದು ||
ಬೇಕೆನ್ನುವುದ ಕಲಿತು ಸಾಕೆನ್ನುವುದ ಮರೆಯೆ |
ವ್ಯಾಕುಲತೆ ತಪ್ಪೀತೆ? - ಮರುಳ ಮುನಿಯ || (೭೯೫)
(ಲೋಕವೃತ್ತಿಯನಯವು+ಅದು+ಆತ್ಮ)
ಸದಾಕಾಲವೂ ನಮಗೆ ಬೇಕಾಗಿರುವದಕ್ಕೋಸ್ಕರ ತಪಿಸುತ್ತಿದ್ದರೆ, ಜಗಳಕ್ಕೆ ಅವಕಾಶ ಉಂಟಾಗುತ್ತದೆ. ಅದೇ ತೃಪ್ತಿಯಿಂದ ಸಾಕು ಎಂದರೆ, ಅದು ನೆಮ್ಮದಿಗೆ ದಾರಿಯಾಗುತ್ತದೆ. ಈ ರೀತಿಯ ಸೂಕ್ಷ್ಮತೆಯಿಂದ ಪ್ರಪಂಚದ ವ್ಯವಹಾರಗಳಲ್ಲಿ ನಡೆದುಕೊಳ್ಳುವ ಒಳ್ಳೆಯ ನಿಯಮಗಳನ್ನೇ ನಮ್ಮ ಆತ್ಮದ ಉದ್ಧಾರಕ್ಕೂ ಬಳಸಿಕೊಳ್ಳಬೇಕು. ಬೇಕೆನ್ನುವುದನ್ನು ಕಲಿತುಕೊಂಡು, ಸಾಕೆನ್ನುವುದನ್ನು ಮರೆತರೆ ದುಃಖ(ವ್ಯಾಕುಲತೆ)ಕ್ಕೆ ಈಡಾಗದೇ ಇರುತ್ತೇವೆಯೇ?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Conflict when man says "I want, I want" and peace when he feels "enough, enough"
This is the smooth style of social conduct and the proper policy for self
But how can man avoid distress when he learns only to demand
And forgets to feel enough? - Marula Muniya (795)
(Translation from "Thus Sang Marula Muniya" by Sri. Narasimha Bhat)

No comments:

Post a Comment