Wednesday, December 31, 2014

ಗಿಡದೊಳಿಹ ಹೂವ ಸತಿಮುಡಿಯಲೆಳಸುವನೊರ‍್ವ (713)

ಗಿಡದೊಳಿಹ ಹೂವ ಸತಿಮುಡಿಯಲೆಳಸುವನೊರ‍್ವ |
ಗುಡಿಗದನು ಕೊಯ್ದೊಯ್ಯಲೆಳಸುವವನೊರ‍್ವ ||
ಬಿಡುವನಿನ್ನೊರ‍್ವನದನಿರುವೆಡೆಯೆ ಕಂಡೊಲಿದು |
ಬಿಡಿಸಿ ನೀಂ ಮೂಸುವೆಯ? - ಮರುಳ ಮುನಿಯ || (೭೧೩)

(ಗಿಡದೊಳ್+ಇಹ)(ಸತಿಮುಡಿಯಲ್+ಎಳಸುವನ್+ಒರ‍್ವ)(ಕೊಯ್ದು+ಒಯ್ಯಲ್+ಎಳಸುವವನ್+ಒರ‍್ವ)(ಬಿಡುವನ್+ಇನ್ನೊರ‍್ವನ್+ಅದನ್+ಇರುವ+ಎಡೆಯೆ)(ಕಂಡು+ಒಲಿದು)

ಗಿಡದಲ್ಲಿ ಬಿಟ್ಟಿರುವ ಹೂವನ್ನು ನೋಡಿ, ಅದು ತನ್ನ ಮಡದಿಯ ತುರುಬಿನಲ್ಲಿ ಸೊಗಸಾಗಿ ಕಾಣುತ್ತದೆಂದು ಅಪೇಕ್ಷಿಸುವವನೊಬ್ಬ. ಇನ್ನೊಬ್ಬನಾದರೋ ಆ ಹೂವನ್ನು ಕೊಯ್ದು ದೇವಸ್ಥಾನದಲ್ಲಿರುವ ದೇವರಿಗೆ ಅರ್ಪಿಸಬೇಕೆಂದು ಬಯಸುತ್ತಾನೆ. ಮತ್ತೊಬ್ಬನು ಆ ಹೂವು ಅದೇ ಗಿಡದಲ್ಲಿ ನಗುತ್ತಿದ್ದರೆ ಚೆನ್ನೆಂದು ಯೋಚಿಸುತ್ತಾನೆ. ಅವರೆಲ್ಲರಿಗೆಂತ ಬೇರೆಯಾಗಿ ನೀನು ಆ ಹೂವನ್ನು ಗಿಡದಿಂದ ಬಿಡಿಸಿ ಮೂಸಿ ನೋಡುವೆಯೇನು?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

One wishes to decorate his wife’s braid with the flower in the plant
Another person desires to take and offer it to the deity in the temple
Someone else loves to see the flower smiling in the plant itself.
Would you pull out the petals and smell it? – Marula Muniya (713)
(Translation from "Thus Sang Marula Muniya" by Sri. Narasimha Bhat)

Tuesday, December 30, 2014

ಜಲಧಿಯಲೆವೊಲು ಬಾಳ್ವೆ ನಭದವೊಲು ಪರತತ್ತ್ವ (712)

ಜಲಧಿಯಲೆವೊಲು ಬಾಳ್ವೆ ನಭದವೊಲು ಪರತತ್ತ್ವ |
ಹಲವು ಹರಿಯದವು ನೀಂ ಕೇಳ್ವ ಕೇಳ್ಕೆಗಳು ||
ಸುಲಭದಿಂ ನಿನಗುತ್ತರವನೊಂದು ಸಂಗ್ರಹದ |
ಗುಳಿಗೆಯಲಿ ಕೊಡಲಹುದೆ? - ಮರುಳ ಮುನಿಯ || (೭೧೨)

(ಜಲಧಿ+ಅಲೆವೊಲು)(ನಿನಗೆ+ಉತ್ತರವನ್+ಒಂದು)(ಕೊಡಲ್+ಅಹುದೆ)

ಸಮುದ್ರ(ಜಲಧಿ)ದ ಅಲೆಯಂತೆ ನಮ್ಮ ಜೀವನವಾದರೆ, ಆಕಾಶ(ನಭ)ದಂತೆ ಎಟುಕದ ಎತ್ತರದಲ್ಲಿ ಪರಮಾತ್ಮನ ತತ್ತ್ವವು ಅಡಗಿಕೊಂಡಿದೆ. ನೀನು ಕೇಳುವ ಎಲ್ಲಾ ಪ್ರಶ್ನೆಗಳಿಗೂ ಪರಿಹಾರ ದೊರೆಯಲು ಸಾಧ್ಯವಿಲ್ಲ. ಹೀಗಿರುವಾಗ ನಿನ್ನ ಸಮಸ್ಯೆಗಳಿಗೆ ಸಂಕ್ಷಿಪ್ತವಾಗಿ ಪರಿಹಾರವನ್ನು ಒಂದು ಗುಳಿಗೆಯ ರೂಪದಲ್ಲಿ ಕೊಡಲಾಗುತ್ತದೇನು?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Our life is a sea wave and the supreme truth is like the endless sky
Many of your questions can never be answered.
Is it easily possible to give you a brief answer
In the form of a capsule? – Marula Muniya (712)
(Translation from "Thus Sang Marula Muniya" by Sri. Narasimha Bhat)

Wednesday, December 24, 2014

ಅತಿಶಯದ ಮನ್ನಣೆಯ ಜಗದಿ ನೀಂ ಪಡೆಯುವಡೆ (711)

ಅತಿಶಯದ ಮನ್ನಣೆಯ ಜಗದಿ ನೀಂ ಪಡೆಯುವಡೆ |
ಮೃತನಾಗು! ನಿನಗಂದು ಮಿತ್ರಬಂಧುಗಳು ||
ಇತರರ‍್ಗೆ ತೋರದಾದರವನೆರೆವರು ಹೆಣಕೆ |
ಕೃತಕೃತ್ಯವಲ್ತೆ ಶವ? - ಮರುಳ ಮುನಿಯ || (೭೧೧)

(ತೋರದ+ಆದರವನ್+ಎರೆವರು)

ಈ ಜಗತ್ತಿನಲ್ಲಿ ಹೆಚ್ಚಾದ ಗೌರವವನು ನೀನು ಪಡೆಯಬೇಕೆಂದಿದ್ದರೆ, ಸಾವನಪ್ಪಿಬಿಡು. ಆವಾಗ ನಿನ್ನ ಸ್ನೇಹಿತರು ಮತ್ತು ನೆಂಟರಿಷ್ಟರು ಬೇರೆ ಯಾರಿಗೂ ತೋರಿಸದಂತಹ ಗೌರವ(ಅದರ)ವನ್ನು ನಿನ್ನ ಹೆಣಕ್ಕೆ ತೋರಿಸುತ್ತಾರೆ. ಹೆಣವೇ ಮಾಡಬೇಕಾದುದನ್ನು ಮಾಡಿ ಮುಗಿಸಿ ಕೃತಾರ್ಥವಾಯಿತಲ್ಲವೆ?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

You had better die if you clamour for honour in this world,
Your friends and relatives then will shower ample honour on you corpse
Which they don’t show to those who are alive.
Is not the dead body blessed? – Marula Muniya (711)
(Translation from "Thus Sang Marula Muniya" by Sri. Narasimha Bhat)

Tuesday, December 23, 2014

ಲೀನಮಾಗಿಹುದಂತು ವಿಶದಮೀ ಕನ್ನಡಂ (710)

ಲೀನಮಾಗಿಹುದಂತು ವಿಶದಮೀ ಕನ್ನಡಂ |
ಕ್ಷೋಣಿಯೊಳಗೆಂದನಾ ಸುಕವಿ ನೃಪತುಂಗಂ ||
ನೀನುಮಂತು ವಿಲೀನ ವಿಶ್ವಜನಜೀವನದಿ |
ದಾನದಿಂದಲೆ ವಿಶದ - ಮರುಳ ಮುನಿಯ || (೭೧೦)

(ಲೀನಂ+ಆಗಿ+ಇಹುದು+ಅಂತು)(ವಿಶದಂ+ಈ)(ಕ್ಷೋಣಿ+ಒಳಗೆ+ಎಂದನ್+ಆ)(ನೀನುಂ+ಅಂತು)

ಈ ಜಗತ್ತಿನ ಕೋಟಿ ಕೋಟಿ ಕನ್ನಡಿಗರಲ್ಲಿ ಕನ್ನಡವು ಮ್ರೆಯುತ್ತಿದೆ. ಈ ರೀತಿ ಕನ್ನಡ ಭಾಷೆಯು ಪ್ರಪಂಚ(ಕ್ಷೋಣಿ)ದಲ್ಲಿ ಸೇರಿಕೊಂಡು ಹೋಗಿದ್ದರೂ, ಸ್ಪಷ್ಟ(ವಿಶದ)ವಾಗಿ ಗೋಚರಿಸುತ್ತದೆ ಎಂದು ಶ್ರೇಷ್ಠ ಕವಿ ನೃಪತುಂಗನು ಹೇಳಿರುವನು. ಹಾಗೆಯೇ ಜಗತ್ತಿನ ಕೋಟ್ಯಾಂತರ ಜನರಲ್ಲಿ ನೀನು ಲೀನನಾಗಿದ್ದು ದಾನದಿಂದ ಮತ್ತು ಕೊಡುಗೆಗಳಿಂದ ಅವ್ಯಕ್ತನಾಗಿ ಕಾಣಿಸಿಕೊ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Poet Nrumatunga sang that Kannada is very well-known
And it lives merged all over the world.
You too should likewise be one with the life of the whole humanity
And become noteworthy by charity – Marula Muniya (710)
(Translation from "Thus Sang Marula Muniya" by Sri. Narasimha Bhat)

Monday, December 22, 2014

ಕುಸುಮ ಕಣ್‍ಮೂಗಿಂಗೆ ವಿಶದ ಕಸದೊಳು ಲೀನ (709)

ಕುಸುಮ ಕಣ್‍ಮೂಗಿಂಗೆ ವಿಶದ ಕಸದೊಳು ಲೀನ |
ವಿಶದ ರಸನೆಗೆ ಬೆಲ್ಲ ಕಬ್ಬಿನಲಿ ಲೀನ ||
ಕುಶಲಗುಣದಿಂ ವಿಶದ ಜಗದ ಜೀವದಿ ಲೀನ |
ಹೆಸರು ಬೇಡೊಳಿತಿರಲಿ - ಮರುಳ ಮುನಿಯ || (೭೦೯)

(ಬೇಡ+ಒಳಿತು+ಇರಲಿ)

ಹೂವು(ಕುಸುಮ) ನಮ್ಮ ಕಣ್ಣು ಮತ್ತು ಮೂಗುಗಳಿಗೆ ಚೆಲುವಾಗಿ ಕಾಣುತ್ತದೆ ಮತ್ತು ಸುಗಂಧ ಬೀರುತ್ತದೆ. ಆದರೆ ಅದು ಬಾಡಿಹೋದ ನಂತರ ಕಸದೊಳಗೆ ಸೇರಿ ಅದರ ಇರುವಿಕೆಯೇ ಇಲ್ಲದಂತಾಗುತ್ತದೆ. ಅದೇ ರೀತಿ ಬೆಲ್ಲದ ಸವಿಯು ನಮ್ಮ ನಾಲಿಗೆ(ರಸನೆ)ಗೆ ವ್ಯಕ್ತವಾದರೂ, ಅದು ಕಬ್ಬಿನಲ್ಲಿದ್ದಾಗ ನಮಗೆ ಕಾಣಿಸದಂತಿರುತ್ತದೆ. ಆದ್ದರಿಂದ ಜಾಣ್ಮೆಯಿಂದ ಸಫಲ ರೀತಿಯಲ್ಲಿ ಜಗತ್ತಿಗೆ ಕಾಣಿಸಿಕೊಂಡು ಜಗತ್ತಿನ ಜೀವನದಲ್ಲಿ ಸೇರಿಕೊಂಡು ಹೋಗು. ಹೆಸರಿನ ಪ್ರಸಿದ್ಧಿಗಾಗಿ ಶ್ರಮಿಸದೆ ಸದಾ ತೆರೆಮರೆಯಲ್ಲಿದ್ದು ಲೋಕಕ್ಕೆ ಒಳಿತನ್ನು ಮಾಡುತ್ತಿರು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

A flower is conspicuous for eyes and nose but it becomes unseen in rubbish
Jaggery can be tasted by tongue but in sugarcane it remains unseen
One becomes well-known with his excellent virtues
And becomes one in the life of the world,
Shun name and fame but cling to goodness – Marula Muniya (709)
(Translation from "Thus Sang Marula Muniya" by Sri. Narasimha Bhat)

Thursday, December 18, 2014

ವಿಶದನುಂ ಲೀನನುಂ ನೀನಾಗು ಲೋಕದಲಿ (708)

ವಿಶದನುಂ ಲೀನನುಂ ನೀನಾಗು ಲೋಕದಲಿ |
ಕುಶಲಗುಣದಿಂ ವಿಶದಮೌನದಿಂ ಲೀನ ||
ಹೆಸರಿಗೈಸಿರಿಗಾದ ಘಾಸಿಬೆಮರಿಂ ಲೋಕ- |
ದುಸಿರ ನೀಂ ಕೆಡಿಸದಿರು - ಮರುಳ ಮುನಿಯ || (೭೦೮)

(ಹೆಸರಿಗೆ+ಐಸಿರಿಗೆ+ಆದ)(ಲೋಕದ+ಉಸಿರ)(ಕೆಡಿಸದೆ+ಇರು)

ಈ ಜಗತ್ತಿನಲ್ಲಿ ಸ್ಪಷ್ಟ(ವಿಶದ)ವಾಗಿ ಕಾಣಿಸಿಕೊಳ್ಳುವವನೂ ಮತ್ತು ಕಣ್ಣುಗಳಿಗೆ ಕಾಣಿಸಿಕೊಳ್ಳದೆ ಅಡಗಿಕೊಂಡಿರುವವನೂ (ಲೀನ) ಆಗು. ಚತುರತೆಯಿಂದ ಕೂಡಿದ ಸ್ವಭಾವಗಳಿಂದ ನೀನು ಸ್ಪಷ್ಟವಾಗಿ ಕಾಣಿಸಿಕೊಳ್ಳಬಲ್ಲೆ. ಮಾತನಾಡದೆ ಮೌನದಿಂದದಿರುವುದರಿಂದ ಇತರರ ಕಣ್ಣುಗಳಿಗೆ ನೀನು ಕಾಣಿಸಿಕೊಳ್ಳದೆ ಅಡಗಿರಬಲ್ಲೆ. ಬಿರುದು ಮತ್ತು ಹೆಸರುಗಳನ್ನೂ ಮತ್ತು ಸಿರಿ, ಸಂಪತ್ತು(ಐಸಿರಿ)ಗಳನ್ನೂ ಗಳಿಸಲು ಆಯಾಸದಿಂದ ಸುರಿಸಿದ (ಘಾಸಿ)ಬೆವರಿನಿಂದ ಜಗತ್ತಿನ ವಾತಾವರಣವನ್ನು ನೀನು ಹಾಳುಮಾಡಬೇಡ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Be conspicuous in the world with your excellent virtues
And be inconspicuous by merging silently in the world.
Pollute not the breath of humanity with your stinking sweat
Caused in your struggle for fame and wealth – Marula Muniya (708)
(Translation from "Thus Sang Marula Muniya" by Sri. Narasimha Bhat) 

Monday, December 15, 2014

ತತ್ತ್ವ ಭಾಸ್ಕರ ದೀಪ್ತಿಯೆರಡೆಡೆಗೆ ಜೀವಕ್ಕೆ (707)

ತತ್ತ್ವ ಭಾಸ್ಕರ ದೀಪ್ತಿಯೆರಡೆಡೆಗೆ ಜೀವಕ್ಕೆ |
ಮಸ್ತಕದ ಗಿರಿಶಿಖರದಲಿ ಶಾಸ್ತ್ರವೊಂದು ||
ಹೃತ್ಸಾನುವೊಳ್ ಕಾವ್ಯ ನಿಂತು ಹಿತಮಿರೆ ತಂಗಿ |
ಮೃಚ್ಛಿಲೆಗೆ ಸಂಸ್ಕಾರ - ಮರುಳ ಮುನಿಯ || (೭೦೭)

(ದೀಪ್ತಿ+ಎರಡು+ಎಡೆಗೆ)(ಹೃತ್+ಸಾನು+ಒಳ್)(ಹಿತಂ+ಇರೆ)(ಮೃತ್+ಶಿಲೆ)

ತತ್ತ್ವ ಮತ್ತು ಸೂರ್ಯನ ಕಿರಣಗಳು ಜೀವದ ಎರಡು ಬದಿಗಳು ಇದ್ದಂತೆ ಶಿರಸ್ಸೆಂಬ(ಮಸ್ತಕ) ಬೆಟ್ಟದ ತುದಿಯಲ್ಲಿ ಶಾಸ್ತ್ರ ಮತ್ತು ಹೃದಯವೆಂಬ ಬೆಟ್ಟದ ತಪ್ಪಲಿ(ಸಾನು)ನಲ್ಲಿ ಕಾವ್ಯವು ಹಿತವಾಗಿ ನೆಲೆಯೂರಿದರೆ ಮಣ್ಣು (ಮೃತ್) ಮತ್ತು ಕಲ್ಲು(ಶಿಲೆ)ಗಳಿಂದ ಕೂಡಿದ ಈ ದೇಹದ ಶುದ್ಧ ಮಾಡುವಿಕೆಯಾಗುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The sum of divine truth shines at two places in man,
The sunbeams settle as shastras on the hill top of humanhead
The rays as poetry fall into hillside valley giving comfort
Both refine the soil and stone in the human being – Marula Muniya (707)
(Translation from "Thus Sang Marula Muniya" by Sri. Narasimha Bhat)

Thursday, December 11, 2014

ಪ್ರಗತಿ ಸಂಸ್ಥಿತಿಗಳನ್ಯೋನ್ಯ ಮಿತಿಯಿಂ ಧರ್ಮ (706)

ಪ್ರಗತಿ ಸಂಸ್ಥಿತಿಗಳನ್ಯೋನ್ಯ ಮಿತಿಯಿಂ ಧರ್ಮ |
ಜಗದ ರಥಸೌತ್ಯದಲಿ ಧರ್ಮ ಚತುರನಿರೆ ||
ಲಗಿತವಾಗೆಯಿನಶ್ವವೇಗವಂ ನಿಯಮಿಸನೆ |
ಸುಗಮಪಥ ಸಮಗತಿಗೆ - ಮರುಳ ಮುನಿಯ || (೭೦೬)

(ಸಂಸ್ಥಿತಿಗಳ್+ಅನ್ಯೋನ್ಯ)(ಚತುರನ್+ಇರೆ)(ಲಗಿತವಾಗೆಯಿನ್+ಅಶ್ವವೇಗವಂ)

ಈ ಜಗತ್ತೆಂಬ ರಥದ ಸಾರಥ್ಯ(ಸೌತ್ಯ)ದಲ್ಲಿ ಧರ್ಮಕುಶಲನಿದ್ದಲ್ಲಿ, ಏಳಿಗೆ ಮತ್ತು ಒಳ್ಳೆಯ ಸ್ಥಿತಿಗಳ ಪರಸ್ಪರ ಮಿತವರ್ತನೆಯಿಂದ ಧರ್ಮದ ಆಚರಣೆಯಾಗುತ್ತದೆ. ಇಂಥ ಧರ್ಮಚತುರನು ತೆಳುವಾದ ಲಗಾಮಿನಿಂದ ಅಶ್ವದ ರಭಸದ ವೇಗವನ್ನು ನಿಯಂತ್ರಿಸಿದರೆ, ರಥವು ಸುಲಭವಾದ ದಾರಿಯಲ್ಲಿ ಕ್ಷೇಮಕರವಾದ ರೀತಿಯಲ್ಲಿ ಸಾಗುತ್ತಿರುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Dharma prospers when progress and established
condition keep each other proper limits
When and expert in dharma drives the chariot of worldly affairs
Wouldn't he control the speeding horses with bridle?
For uniform speed and comfortable journey? – Marula Muniya (706)
(Translation from "Thus Sang Marula Muniya" by Sri. Narasimha Bhat)

Wednesday, December 10, 2014

ಅಂಗಾಂಗದೊಂದು ಪರಿಮಾಣ ನಿಯತಿ ರೂಪ (705)

ಅಂಗಾಂಗದೊಂದು ಪರಿಮಾಣ ನಿಯತಿ ರೂಪ |
ಸಂಗೀತ ನಾದಲಯಗಳದೊಂದು ನಿಯತಿ ||
ಸಂಘ ಜೀವಿತದಿ ಜನದೊಂದು ನಿಯತಿಯೆ ಧರ್ಮ |
ಮಂಗಲವೊ ನಿಯತಿಯಿಂ - ಮರುಳ ಮುನಿಯ || (೭೦೫)

ದೇಹದ ಒಂದೊಂದು ಭಾಗಗಳೂ ಒಂದೊಂದು ನಿಶ್ಚಿತ(ನಿಯತ)ವಾದ ಅಳತೆಯಲ್ಲಿ(ಪರಿಮಾಣ)ರುವುದರಿಂದ ಅದು ಒಂದು ಸುಂದರವಾದ ಆಕಾರವನ್ನು ಹೊಂದುತ್ತದೆ. ಹಾಡುಗಾರಿಕೆ ಮತ್ತು ಮಧುರವಾದ ಧ್ವನಿಗಳ ಲಯಗಳು ನಿಯಮಗಳಿಗೆ ಒಳಪಟ್ಟಿವೆ. ಅದೇ ರೀತಿ ಒಂದು ಸಮಾಜದಲ್ಲಿ ಜೀವನವನ್ನು ನಡೆಸುತ್ತಿರುವಾಗ ಅಲ್ಲಿಯ ಜನಗಳು ಪಾಲಿಸಬೇಕಾದ ನಿಯಮಗಳೇ ಧರ್ಮ. ಈ ರೀತಿಯ ನಿಯಮಪಾಲನೆಯಿಂದ ಶುಭವಾಗುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Arrangement of body parts proportionately is handsomeness,
Orderly arrangement of notes and rhythm is music,
Orderly arrangement and rules regarding life in community is dharma,
Prosperity and happiness from proper regulations – Marula Muniya (705)
(Translation from "Thus Sang Marula Muniya" by Sri. Narasimha Bhat)

Thursday, December 4, 2014

ಎಡದಡಿಯನಿಡುವಂದು ಬಲದೆಡೆಯ ಮರೆಯದಿರು (704)

ಎಡದಡಿಯನಿಡುವಂದು ಬಲದೆಡೆಯ ಮರೆಯದಿರು |
ಅಡಿಯ ಬಲಕಿಡುವಂದು ಮರೆಯಬೇಡೆಡವ ||
ನಡುದಾರಿ ನಡೆಯುತಂತೆರಡು ಕಡೆ ನೆನಪಿರಲಿ |
ದೃಢ ಸಮನ್ವಯ ಯೋಗ - ಮರುಳ ಮುನಿಯ || (೭೦೪)

(ಎಡದ+ಅಡಿಯನ್+ಇಡುವಂದು)(ಬಲದ+ಎಡೆಯ)(ಮರೆಯದೆ+ಇರು)(ಬಲಕೆ+ಇಡುವಂದು)(ನಡೆಯುತ+ಅಂತೆ+ಎರಡು)

ಎಡಗಡೆ ಹೆಜ್ಜೆ ಇಡುವಾಗ ಬಲಭಾಗವನ್ನು ಮರೆಯಬೇಡ, ಹಾಗೂ ಬಲಗಡೆ ಹೆಜ್ಜೆ ಇಡುವಾಗ ಎಡಬಾಗವನ್ನು ಮರೆಯಬೇಡ. ರಸ್ತೆಯ ಮಧ್ಯೆಯಲ್ಲಿ ನಡೆಯುತ್ತಿರುವಾಗ ಎಡ ಮತ್ತು ಬಲ, ಎರಡೂ ಕಡೆಗಳನ್ನೂ ಗಮನಿಸುತ್ತಿರು. ಈ ರೀತಿ ಸ್ಥಿರಚಿತ್ತದಿಂದ ಸಮನ್ವಯ ದೃಷ್ಟಿಯಲ್ಲಿ ಮುಂದೆ ಸಾಗುವುದೇ ಯೋಗ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

When you keep the left foot forward forget not the right side,
When you put the right foot forget not the left,
Walk along the middle path, remembering both the sides
Firm coordination is yoga – Marula Muniya (704)
(Translation from "Thus Sang Marula Muniya" by Sri. Narasimha Bhat)

Wednesday, December 3, 2014

ಏಕತೆಗಮೆಡೆಯುಂಟನೇಕತೆಗಮೆಡೆಯುಂಟು (703)

ಏಕತೆಗಮೆಡೆಯುಂಟನೇಕತೆಗಮೆಡೆಯುಂಟು |
ಲೋಕ ಜೀವನದ ಸುಖ ಶಾಂತಿ ಸಾಧನೆಯೊಳ್ ||
ಕೈಕಾಲು ಬೇರ‍್ಬೇರೆ ಸೇವಿಪ್ಪ ಬಾಳೊಂದು |
ಸಾಕಲ್ಯ ದೃಷ್ಟಿ ಸರಿ - ಮರುಳ ಮುನಿಯ || (೭೦೩)

(ಏಕತೆಗಂ+ಎಡೆಯುಂಟು+ಅನೇಕತೆಗಂ+ಎಡೆಯುಂಟು)

ಈ ಪ್ರಪಂಚದ ಜೀವನದ ಸುಖ ಸಂತೋಷ ಮತ್ತು ನೆಮ್ಮದಿಗಳ ಗಳಿಸುವಿಕೆಯಲ್ಲಿ ಏಕರೂಪಕ್ಕೂ ವೈವಿಧ್ಯಕ್ಕೂ ಅವಕಾಶಗಳುಂಟು. ಕೈ ಮತ್ತು ಕಾಲುಗಳು ಬೇರೆ ಬೇರೆಯವಾದರೂ ಸಹ, ಅವುಗಳಿಂದ ದೊರೆಯುವ ಪ್ರಯೋಜನ ಪರಸ್ಪರ ಪೂರಕವಾದುದು. ಈ ರೀತಿ ಸಮನ್ವಯ ದೃಷ್ಟಿಯನ್ನು ಬಾಳಲ್ಲಿ ಹೊಂದಿರುವುದೇ ಸರಿಯಾದ ದಾರಿ ಆಗಿದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

In our endeavour to bring peace and happiness to world life,
There is as much room for unity as there is for diversity,
Hands and legs are separate but the life they serve is the same,
All-encompassing vision is most appropriate – Marula Muniya (703)
(Translation from "Thus Sang Marula Muniya" by Sri. Narasimha Bhat)

Monday, December 1, 2014

ಸವಿ ಬಾಯಿಗೊಪ್ಪುವುದು ಮತ ಮನಸಿಗೊಪ್ಪುವುದು (702)

ಸವಿ ಬಾಯಿಗೊಪ್ಪುವುದು ಮತ ಮನಸಿಗೊಪ್ಪುವುದು |
ಅವರವರ ಶುಚಿ ರುಚಿಗಳವರವರ ದಾರಿ ||
ಬವರವೇತಕ್ಕಿಲ್ಲಿ ಶಿವಗುಡಿಯ ಮಾರ್ಗದಲಿ |
ವಿವಿಧ ಮನ ವಿವಿಧ ಮತ - ಮರುಳ ಮುನಿಯ || (೭೦೨)

(ಬಾಯಿಗೆ+ಒಪ್ಪುವುದು)(ಮನಸಿಗೆ+ಒಪ್ಪುವುದು)(ಬವರವು+ಏತಕ್ಕೆ+ಇಲ್ಲಿ)

ರುಚಿಯಾಗಿರುವ ಪದಾರ್ಥವು ನಾಲಗೆಗೆ ಸರಿಯಾಗಿರುತ್ತದೆ. ಒಳ್ಳೆಯ ವಿಚಾರ ಮತ್ತು ಅಭಿಪ್ರಾಯಗಳು ಮನಸ್ಸಿಗೆ ಒಪ್ಪಿಗೆಯಾಗುತ್ತದೆ. ಲೋಕದಲ್ಲಿ ಅವರವರ ನೈರ್ಮಲ್ಯ, ಪಾವಿತ್ರ್ಯ ಮತ್ತು ಸವಿಗಳು ಅವರವರಿಗೇ ಬಿಟ್ಟಿದ್ದು. ಎಲ್ಲರೂ ಪರಮಾತ್ಮನ ಸಾನ್ನಿಧ್ಯಕ್ಕಾಗಿಯೇ ದೇವಸ್ಥಾನಕ್ಕೆ ಹೋಗುತ್ತಿರುವ ದಾರಿಯಲ್ಲಿ ಕಾದಾಟ-ತಿಕ್ಕಾಟಗಳು ಏಕೆ? ನಾನಾ ಬಗೆಯ ಮನಸ್ಸುಗಳಿದ್ದಂತೆ ನಾನಾ ಬಗೆಯ ಅಭಿಪ್ರಾಯಗಳಿರುತ್ತದೆ. ಅದಕ್ಕಾಗಿ ಕಾದಾಡಬೇಕಾಗಿಲ್ಲ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

That which is agreeable to your tongue is delicious,
That which is agreeable to your mind is your conviction,
Every one chooses his path depending on his taste and purity
Why should we fight on the way to God’s temple?
As many minds so many faiths – Marula Muniya (702)
(Translation from "Thus Sang Marula Muniya" by Sri. Narasimha Bhat)

Tuesday, November 25, 2014

ಬಿಸಿ ಬಿಸಿಯ ನೀರಿಂಗೆ ಹಿಮಗಿರಿಯ ತಣ್ಣೀರ (701)

ಬಿಸಿ ಬಿಸಿಯ ನೀರಿಂಗೆ ಹಿಮಗಿರಿಯ ತಣ್ಣೀರ |
ಹಸಿರು ತಣ್ಣೀರಿಂಗೆ ಬಿಸಿಯ ಸೇರಿಸುತೆ ||
ಹಸನು ಶೀತೋಷ್ಣದಿಂದೊಡಲ ಮಜ್ಜನಗೈವ |
ಕುಶಲತೆ ಸಮನ್ವಯವೊ - ಮರುಳ ಮುನಿಯ || (೭೦೧)

(ಶೀತ+ಉಷ್ಣದಿಂದ+ಒಡಲ)

ಬಿಸಿ ಬಿಸಿಯಾಗಿರುವ ನೀರಿಗೆ ಹಿಮದ ಪರ್ವತದಿಂದ ಇಳಿದುಬಂದ ನದಿಯ ತಣ್ಣೀರನ್ನು ಮತ್ತು ಬಹು ತಣ್ಣಗಿರುವ ನೀರಿಗೆ ಬಿಸಿ ನೀರನ್ನು ಸೇರಿಸುತ್ತಾ, ದೇಹಕ್ಕೆ ಹದವಾಗಿ ಹಿತಕಾರಿಯಾಗಿರುವ ತಂಪು ಮತ್ತು ಬಿಸಿನೀರಿನಿಂದ ದೇಹವನ್ನು ಸ್ನಾನ (ಮಜ್ಜನ) ಮಾಡಿಸುವ ಚತುರತೆಯನ್ನು, ಸಮನ್ವಯ ಜೀವನ ವಿಧಾನ ಎನ್ನುವರು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Adding ice-cold water to very hot water,
Mixing very hot water with very cold water,
Bathing the body with comfortable lukewarm water
Is the skillfulness called coordination – Marula Muniya (701)
(Translation from "Thus Sang Marula Muniya" by Sri. Narasimha Bhat)

Monday, November 24, 2014

ಶ್ರುತಿಮತಿಗಳೆರಡುಮಂ (ದೃಢ) ಸಮನ್ವಯಗೊಳಿಸಿ (700)

ಶ್ರುತಿಮತಿಗಳೆರಡುಮಂ (ದೃಢ) ಸಮನ್ವಯಗೊಳಿಸಿ |
ರತಿವಿರತಿಗಳುಭಯ ಸಮನ್ವಯವನರಿತು ||
ಸ್ವತೆಪರತೆಗಳನೆರಡನುಂ ಸಮನ್ವಯಗೊಳಿಸಿ |
ಮಿತಗತಿಯೆ ಹಿತಯೋಗ - ಮರುಳ ಮುನಿಯ || (೭೦೦)

(ಶ್ರುತಿಮತಿಗಳು+ಎರಡುಮಂ)(ರತಿವಿರತಿಗಳು+ಉಭಯ)(ಸಮನ್ವಯವನ್+ಅರಿತು)(ಸ್ವತೆಪರತೆಗಳನ್+ಎರಡನುಂ)

ವೇದ(ಶ್ರುತಿ) ಮತ್ತು ಬುದ್ಧಿಶಕ್ತಿಗಳೆರಡನ್ನೂ ನಿಶ್ಚಿತವಾಗಿ ಹೊಂದಾಣಿಕೆಗೊಳಿಸಿ, ಭೋಗ(ರತಿ) ಮತ್ತು ವೈರಾಗ್ಯ(ವಿರತಿ)ಗಳೆರಡೂ ತಮ್ಮ ಸಮನ್ವಯವನ್ನು ತಿಳಿದುಕೊಂಡು ತಾನು (ಸ್ವತೆ) ಮತ್ತು ಪರ(ಪರತೆ)ರು ಎಂಬ ಅಭಿಪ್ರಾಯಗಳನ್ನು ಹೊಂದಿಸಿಕೊಂಡು, ಪರಿಮಿತಿಯಲ್ಲಿ ನಡೆಯುವುದೇ ಎಲ್ಲರಿಗೂ ಒಳಿತನ್ನುಂಟುಮಾಡುವ ಯೋಗಮಾರ್ಗವಾಗಿದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Coordinating the Vedic wisdom and your own wisdom,
Coordinating your love and dispassion,
Coordinating self interest with the good of other things,
Living a life of well-controlled conduct is the yoga of all welfare – Marula Muniya
(Translation from "Thus Sang Marula Muniya" by Sri. Narasimha Bhat)

Friday, November 21, 2014

ಆವುದೆಲ್ಲರೊಳಮಾನ್ ನಾನು ನಾನೆನುತಿಹುದೊ (699)

ಆವುದೆಲ್ಲರೊಳಮಾನ್ ನಾನು ನಾನೆನುತಿಹುದೊ |
ಆವುದಾದಿಯೊ ಜಗದ್ವಸ್ತುಗಣನೆಯಲಿ ||
ಆವುದಿರದೊಡೆ ದೆವರೆನುವ ಪೆಸರಿರದೊ ಆ |
ಜೀವಕ್ಕೆ ನಮೋ ಎನ್ನು - ಮರುಳ ಮುನಿಯ || (೬೯೯)

(ಆವುದು+ಎಲ್ಲರೊಳಂ+ಆನ್)(ಆವುದು+ಆದಿಯೊ)(ಆವುದು+ಇರದೊಡೆ)(ದೆವರೆ+ಎನುವ)(ಪೆಸರ್+ಇರದೊ)

ಯಾವುದು ಪ್ರಪಂಚದಲ್ಲಿ ಜೀವಿಸುತ್ತಿರುವ ಪ್ರತಿಯೊಬ್ಬರಲ್ಲೂ ನಾನು, ನಾನು ಎಂದೆನ್ನುತ್ತಿರುವುದೋ, ಯಾವುದು ಈ ಲೋಕದ ವಸ್ತುಗಳ ಲೆಕ್ಕಾಚಾರಗಳಲ್ಲಿ ಮೂಲವಾಗಿದೆಯೋ, ಯಾವುದು ಇಲ್ಲದಿದ್ದರೆ, ದೇವರೆನ್ನುವ ಹೆಸರು ಇರುವುದಿಲ್ಲವೋ, ಆ ಜೀವಕ್ಕೆ ನಮಸ್ಕರಿಸು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

That which exists in every one declares I, I and I
That which always occupies the first place among the things of the world,
That, without which the name of God won’t be heard in the world,
Offer obeisance to that Soul – Marula Muniya (699)
(Translation from "Thus Sang Marula Muniya" by Sri. Narasimha Bhat)

Thursday, November 20, 2014

ಆವುದರೊಳಿರ‍್ಪೊಳಿತ ಬೆಳಸೆ ದೇವತ್ವವೊ ಅ (698)

ಆವುದರೊಳಿರ‍್ಪೊಳಿತ ಬೆಳಸೆ ದೇವತ್ವವೊ ಅ- |
ದಾವುದನು ಕುರುಡು ಕೈ ಕೆಡಪೆ ಕೃಪಣತೆಯೋ ||
ಆವುದೀ ಸೃಷ್ಟಿವೃಕ್ಷದ ಫುಲ್ಲಸುಮವೊ ಆ |
ಜೀವನಕೆ ನಮೊ ಎನ್ನೊ - ಮರುಳ ಮುನಿಯ || (೬೯೮)

(ಆವುದರ+ಒಳಿರ‍್ಪ+ಒಳಿತ)(ಅದು+ಆವುದನು)(ಆವುದು+ಈ)

ಯಾವುದರ ಒಳಗಿರುವ ಒಳ್ಳೆಯತನವನ್ನು ಬೆಳೆಸಲು ಅದು ದೇವತ್ವವೆಂದೆನ್ನಿಸಿಕೊಳ್ಳುವುದೋ, ಯಾವುದನ್ನು ಅರಿವಿಲ್ಲದ ಅಜ್ಞಾನದ ಕೈಗಳು ಕೆಡವಿದಾಗ ಅದು ಕೆಟ್ಟತನ(ಕೃಪಣತೆ)ವಾಗುವುದೊ, ಯಾವುದು ಈ ಸೃಷ್ಟಿಯೆಂಬ ತರುವಿನ ಅರಳಿದ ಹೂವೋ, ಆ ಜೀವನಕ್ಕೆ ನಮಸ್ಕರಿಸು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

That good thing which can rise to Godhood when you develop it,
The striking down of which by the blind hand is utter heartlessness,
That which is the fragrant flower blossoming in the tree of creation,
Offer obeisance to that life – Marula Muniya (698)
(Translation from "Thus Sang Marula Muniya" by Sri. Narasimha Bhat)

Wednesday, November 19, 2014

ಹಳೆಯ ರೋಗದಿ ಹೊಸ ಚಿಕಿತ್ಸೆಯಿಂ ರುಜೆ ಹೊಸತು (697)

ಹಳೆಯ ರೋಗದಿ ಹೊಸ ಚಿಕಿತ್ಸೆಯಿಂ ರುಜೆ ಹೊಸತು |
ಒಳಗೆ ಮಾರ‍್ಪಡಿಸದಿರ‍್ಪುದೆ ಮದ್ದು ಮೈಯ ||
ನೆಲನ ನೀಂ ಸೋಂಕಿದುಡೆ ಮಣ್ ಪೊಸತು ಪೊಸತು ಕೈ |
ಮಿಲನವೇ ನವಸೃಷ್ಟಿ - ಮರುಳ ಮುನಿಯ || (೬೯೭)

(ಮಾರ‍್ಪಡಿಸದೆ+ಇರ‍್ಪುದೆ)

ಹಳೆಯ ಕಾಯಿಲೆಗೆ ಒಂದು ಹೊಸ ಔಷದಿಯನ್ನು ಉಪಯೋಗಪಡಿಸಿದರೆ, ಇನ್ನೊಂದು ಹೊಸ ಕಾಯಿಲೆ(ರುಜೆ)ಯು ಹುಟ್ಟಿಕೊಳ್ಳುತ್ತದೆ. ಏಕೆಂದರೆ ಹೊಸ ಔಷಧಿಯು ದೇಹವನ್ನು ಒಳಗಡೆ ಬದಲಾಯಿಸದೆ ಇರುವುದೇನು? ನೀನು ನಿನ್ನ ಕೈಗಳನ್ನು ನೆಲಕ್ಕೆ ಸೋಕಿಸಿ ಕೃಷಿ ಮಾಡಿದ್ದಲ್ಲಿ, ನಿನ್ನ ಕೈಗಳು ಹೊಸ ಮಣ್ಣನ್ನು ಸೋಕಿ, ಅವೂ ಸಹ ಹೊಸದಾಗುತ್ತವೆ. ಈ ಬಗೆಯಲ್ಲಿ ಕೂಡಿಕೊಳ್ಳುವುದೇ ಹೊಸ ರಚನೆಯಾಗಲು ಕಾರಣವಾಗುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

An old disease changes into a new one with new treatment
Doesn’t the medicine effect change in the inner parts of body?
When you touch the earth the soil and hands are new
And joining of the two leads to new creation - Marula Muniya (697)
(Translation from "Thus Sang Marula Muniya" by Sri. Narasimha Bhat)

Tuesday, November 18, 2014

ದೈವಪ್ರಮಾದಿಗಳ ಸಂಸ್ಕರಣಚೋದಕರ (696)

ದೈವಪ್ರಮಾದಿಗಳ ಸಂಸ್ಕರಣಚೋದಕರ |
ಗೋವಿಂದ ಜಿನ ಬುದ್ಧ ಕ್ರಿಸ್ತ ಮಹಮದರ ||
ಗೋವುರಂಗಳೊಳಿರಿಸಿ ನಮಿಪೆವೆಂಬರು ಜನರು |
ಜೀವನಕೆ ಸೋಕಿಸರು - ಮರುಳ ಮುನಿಯ || (೬೯೬)

(ಗೋವುರಂಗಳ+ಒಳ+ಇರಿಸಿ)(ನಮಿಪೆ+ಎಂಬರು)

ದೇವಸಂದೇಶವನ್ನು ಸಾರುವ ದೇವದೂತರುಗಳನ್ನು ಮತ್ತು ಬಾಳನ್ನು ಹಸನುಗೊಳಿಸಿ, ಉದ್ಧಾರಗೊಳಿಸಿದ ಗೋವಿಂದ, ಮಹಾವೀರ, ಗೌತಮಬುದ್ಧ, ಏಸು ಕ್ರಿಸ್ತ ಮತ್ತು ಪ್ರವಾದಿ ಪೈಗಂಬರುಗಳನ್ನು, ಜನರು ಗೋಪುರ(ಗೋವುರ)ಗಳೊಳಗಡೆ ಇಟ್ಟು ಪೂಜಿಸುತ್ತಾರೆಯೇ ಹೊರತು ಅವರ ಹಿತೋಪದೇಶಗಳನ್ನು ತಮ್ಮ ಜೀವನಕ್ಕೆ ಅಳವಡಿಸಿಕೊಳ್ಳುವುದಿಲ್ಲ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The messengers of God and great reformers like
Govinda, Jina, Buddha, Christ and Mohammed,
People who wish to install them on high towers and worship
Keep them away from their lives – Marula Muniya (696)
(Translation from "Thus Sang Marula Muniya" by Sri. Narasimha Bhat)

Monday, November 17, 2014

ಕಾದ ಪಾತ್ರೆಯ ಸೋಕದಿಹ ಕಾಳು ಬಾಯ್ಗೆ ಕಸ (695)

ಕಾದ ಪಾತ್ರೆಯ ಸೋಕದಿಹ ಕಾಳು ಬಾಯ್ಗೆ ಕಸ |
ಸೀದು ಬಿದ್ದಿಹ ಕಾಳು ಬೀದಿಗೆಲ್ಲ ಕಸ ||
ಬೂದಿಯಾಗದೆ ಭವದೆ ಪಕ್ವವಾಗಿಹ ಜೀವ |
ಸ್ವಾದು ರುಚಿಯೋ ಜಗಕೆ - ಮರುಳ ಮುನಿಯ || (೬೯೫)

ಕಾಳನ್ನು ಬಿಸಿಪಾತ್ರೆಯಲ್ಲಿ ಹಾಕಿ ಸರಿಯಾಗಿ ಹುರಿಯದಿದ್ದಲ್ಲಿ, ಅದು ಬಾಯಿಗೆ ರುಚಿಯಾಗುವುದಿಲ್ಲ. ಆದರೆ ಅದೇ ಕಾಳು ಬಿಸಿ ಪಾತ್ರೆಯಲ್ಲಿ ಸುಟ್ಟು ಕರಕಲಾಗಿ ಹೋದರೆ ಅದನ್ನು ಬೀದಿಗೆ ಎಸೆಯಬೇಕಾಗುತ್ತದೆ. ಅದೇ ರೀತಿ ಸಂಸಾರ(ಭವ)ವನ್ನು ನಿರ್ವಹಿಸುವುದರಲ್ಲಿ ಸುಟ್ಟು ಬೂದಿಯಾಗದೆ ಚೆನ್ನಾಗಿ ಪಕ್ವವಾಗಿರುವ ಜೀವವು, ಜಗತ್ತಿಗೆ ಎಲ್ಲರೂ ಬಯಸುವ ರೀತಿಯಲ್ಲಿ ಸವಿಯಾಗಿ ಹದವಾದ ಜೀವವಾಗಿರುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The grain that isn’t heated in a hot vessel is a tasteless waste,
The grain that is scorched becomes a waste even to the public,
The soul that ripens in the world without being burnt
Is delicious to the world – Marula Muniya (695)
(Translation from "Thus Sang Marula Muniya" by Sri. Narasimha Bhat)

Wednesday, November 12, 2014

ಗಾಳಿಗೋಪುರ ಸೊಗಸು ಗಾರ್ ಗೋಪುರಕಿಂತ (694)

ಗಾಳಿಗೋಪುರ ಸೊಗಸು ಗಾರ್ ಗೋಪುರಕಿಂತ |
ತಾಳದೆ ಮನಃಶಿಲ್ಪ ಕಾಮರೂಪಗಳ ||
ಏಳುವುದದೆಂತೊ ಬೀಳ್ವುದುಮಂತು ಆ ಚಿತ್ರ |
ಬಾಳ್ವನಿತ ಕಟ್ಟಿಕೊಳೊ - ಮರುಳ ಮುನಿಯ || (೬೯೪)

(ಏಳುವುದು+ಅದು+ಎಂತೊ)(ಬೀಳ್ವುದುಂ+ಅಂತು)(ಬಾಳ್ವ+ಅನಿತ)

ಗಾಳಿಯಲ್ಲಿ ಗೋಪುರವನ್ನು ಕಟ್ಟುವುದು, ಎಂದರೆ ಮನಸ್ಸಿನಲ್ಲೇ ಮಂಡಿಗೆಯನ್ನು ತಿನ್ನುವುದು, ನಿಜವಾಗಿ ಗೋಪುರವನ್ನು ಕಟ್ಟುವುದಕ್ಕಿಂತಾ ಸೊಗಸಾಗಿ ಕಾಣುತ್ತದೆ. ಏಕೆಂದರೆ ಮನಸ್ಸಿನಲ್ಲಿ ತಾನು ಬಯಸಿದಂತಹ ಆಕಾರಗಳನ್ನು ಊಹಿಸಿಕೊಳ್ಳಬಹುದು. ಆದರೆ ಈ ಚಿತ್ರವು ಹೇಗೆ ರೂಪುಗೊಳ್ಳುವುದೋ ಹಾಗೆಯೇ ಧಿಡೀರ್ ಎಂದು ಬಿದ್ದುಹೋಗುತ್ತದೆ. ಆದಕಾರಣ ಕಲ್ಪನೆಗಳು ಬಾಳಿಗೆ ನೆರವಾಗುವಷ್ಟರಮಟ್ಟಿಗೆ ಮಾತ್ರ ಇರಬೇಕು ಅಷ್ಟೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

A castle in the air is more attractive than a mansion of brick and mortar,
Mental sculpture can take any desired form,
Such pictures rise rapidly and disappear in moments
Build something that lasts life-time – Marula Muniya (694)
(Translation from "Thus Sang Marula Muniya" by Sri. Narasimha Bhat)

Tuesday, November 11, 2014

ಜೀವನವಿವರ್ಧನೆಯೆ ನಿತ್ಯದೆನ್ನುದ್ಯೋಗ (693)

ಜೀವನವಿವರ್ಧನೆಯೆ ನಿತ್ಯದೆನ್ನುದ್ಯೋಗ |
ಆವ ಕಾಣಿಕೆಯನೀನದಕೀವೆಯೆನುತೆ ||
ಆವಗಂ ಕೇಳುತಿರುವಳ್ ಪ್ರಕೃತಿ ಶಿಶುಗಳನು |
ಜೀವನೋದ್ಧೃತಿಗೊದಗೊ - ಮರುಳ ಮುನಿಯ || (೬೯೩)

(ನಿತ್ಯದ+ಎನ್ನ+ಉದ್ಯೋಗ)(ಕಾಣಿಕೆಯ+ನೀನ್+ಅದಕೆ+ಈವೆ+ಎನುತೆ)(ಜೀವನ+ಉದ್ಧೃತಿಗೆ+ಒದಗೊ)

ನನ್ನ ಪ್ರತಿನಿತ್ಯದ ಕೆಲಸವೂ ನಿನ್ನ ಜೀವನದ ಸೊಗಸನ್ನು ಹೆಚ್ಚಿಸುವುದಕ್ಕಾಗಿಯೇ ಇದೆ, ಇದಕ್ಕಾಗಿ ನೀನು ಯಾವ ಉಡುಗರೆಯನ್ನು ಕೊಡುವೆಯೆಂದು ತನ್ನ ಮಕ್ಕಳನ್ನು ಯಾವಾಗಲೂ ಕೇಳುತ್ತಿರುತ್ತಾಳೆ. ಜೀವನವನ್ನು ಸುಖಮಯಗೊಳಿಸಲು ನೆರವಾಗುವುದೇ ಪ್ರಕೃತಿಗೆ ನಾವು ಕೊಡುವ ಕಾಣಿಕೆ ಆಗಿದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

“Working for the prosperity of world life is my daily occupation”
What’s your contribution for this prosperity of life?
Mother Nature thus asks her children time and again.
Join the venture for elevating life to excellence – Marula Muniya (693)
(Translation from "Thus Sang Marula Muniya" by Sri. Narasimha Bhat)

Monday, November 10, 2014

ಬದುಕೆಲ್ಲಮುಂ ಜನಕೆ ವರ್ತಕ ವ್ಯಾಪಾರ (692)

ಬದುಕೆಲ್ಲಮುಂ ಜನಕೆ ವರ್ತಕ ವ್ಯಾಪಾರ |
ತ್ರಿದಿವದೊಡನೆಯುಮಿನಿತು ಮುಯ್ ಮುಯ್ವುದೇಕೆ? ||
ಮದುವೆಯೌತಣದೊಳು ಮಳಿಗೆ ಲೆಕ್ಕಾಚಾರ |
ಹೃದಯಜೀವನ ಶೂನ್ಯ - ಮರುಳ ಮುನಿಯ || (೬೯೨)

(ತ್ರಿದಿವದ+ಒಡನೆಯುಂ+ಇನಿತು)(ಮುಯ್ವುದು+ಏಕೆ)(ಮದುವೆಯ+ಔತಣದ+ಒಳು)

ಪ್ರಪಂಚದಲ್ಲಿ ನಡೆಸುವ ಜೀವನವನ್ನು ಜನಗಳು ಒಂದು ವ್ಯಾಪಾರದ ಸಾಧನವನ್ನಾಗಿ ಮಾಡಿಕೊಂಡಿದ್ದಾರೆ. ಆದರೆ ಸ್ವರ್ಗ(ತ್ರಿದಿವ)ಸುಖ ಅನುಭವಿಸುವಾಗಲೂ ದೇವತೆಗಳೊಡನೆ ಲೆಕ್ಕಾಚಾರ ಮಾಡುವುದೇಕೆ? ಮದುವೆಯ ಊಟವನ್ನು ಮಾಡುತ್ತಿರುವಾಗ ಅಂಗಡಿಯ ಸರಕುಗಳ ಯೋಚನೆ ಮಾಡಬಹುದೇ? ಹೀಗೆ ಎಲ್ಲಾ ಕಡೆ ವ್ಯಾಪಾರೀ ಮನೋಧರ್ಮದಿಂದಲೇ ಬಾಳುವುದಾದರೆ ಹೃದಯವಂತಿಕೆಯ ಬದುಕು ಎಂಬುದಕ್ಕೆ ಅರ್ಥವೇ ಇಲ್ಲದಂತಾಗುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

All life has become the merchant’s trade to men!
Why do you complete and struggle against Heaven like this?
Business calculations even at the time of wedding feast!!
All life activity is devoid of heart-felt emotions – Marula Muniya (692)
(Translation from "Thus Sang Marula Muniya" by Sri. Narasimha Bhat)

Friday, November 7, 2014

ಜೀವ ತಾಂ ಪ್ರತ್ಯಕ್ಷ ದೈವಾಂಶವಾಗಿರಲು (691)

ಜೀವ ತಾಂ ಪ್ರತ್ಯಕ್ಷ ದೈವಾಂಶವಾಗಿರಲು |
ಆವುದೋ ಶಾಸ್ತ್ರವಾಕ್ಯವನರಸಲೇಕೆ? ||
ಜೀವಪೋಷಣೆಗಲ್ತೆ ಮಿಕ್ಕೆಲ್ಲ ದೇವರುಂ |
ಜೀವಿತವೆ ಪರತತ್ತ್ವ - ಮರುಳ ಮುನಿಯ || (೬೯೧)

(ದೈವಾಂಶ+ಆಗಿರಲು)(ಶಾಸ್ತ್ರವಾಕ್ಯವಂ+ಅರಸಲ್+ಏಕೆ)

ಜೀವವು ಕಣ್ಣಿಗೆ ಕಾಣಿಸುತ್ತಿರುವ ದೈವದ ಭಾಗವಾಗಿರಲು, ಯಾವುದೋ ಬೇರೆ ಶಾಸ್ತ್ರಗಳ ವಾಕ್ಯಗಳನ್ನು ಹುಡುಕಿಕೊಂಡು ಏಕೆ ಹೋಗುತ್ತೀಯೆ? ಮಿಕ್ಕೆಲ್ಲಾ ದೇವರುಗಳಿರುವುದು ಜೀವಿಯನ್ನು ಕಾಪಾಡುವುದಕ್ಕೆ ತಾನೆ? ಈ ಜಗತ್ತಿನಲ್ಲಿ ಬದುಕಿ ಬಾಳುವುದೇ ಶ್ರೇಷ್ಠವಾದ ತತ್ತ್ವ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

When the Soul itself if God’s own visible part personified
Why should you seek the support of shastras?
Are not all Gods worshipped for the sustenance of the soul?
Life itself is Divinity personified – Marula Muniya (691)
(Translation from "Thus Sang Marula Muniya" by Sri. Narasimha Bhat)

Tuesday, November 4, 2014

ಜೀವನವ ಶುಚಿಯೆನಿಸು ಜೀವನವ ರುಚಿಯೆನಿಸು (690)

ಜೀವನವ ಶುಚಿಯೆನಿಸು ಜೀವನವ ರುಚಿಯೆನಿಸು |
ದೈವದೊಂದಂಶ ಸಂಪುಟವೊಂದು ಜೀವ ||
ದೈವಪದಯೋಗ್ಯತೆಯ ಜೀವಿತಕೆಗಳಿಸಲದೆ |
ಜೀವಜಯಸಂಪ್ರಾಪ್ತಿ - ಮರುಳ ಮುನಿಯ || (೬೯೦)

(ದೈವದ+ಒಂದು+ಅಂಶ)(ಜೀವಿತಕೆ+ಗಳಿಸಲ್+ಅದೆ)

ಜೀವನವನ್ನು ನಿರ್ಮಲ ಮತ್ತು ಪವಿತ್ರವನ್ನಾಗಿ ಮಾಡಿಕೊ. ಅದನ್ನು ಸವಿಯೆನ್ನಿಸುವಂತೆ ಮಾಡಿಕೊ. ಜೀವವು ದೈವದ ಪುಸ್ತಕದ ಒಂದು ಭಾಗವಷ್ಟೆ. ಜೀವನವನ್ನು ನಡೆಸಿ ಪರಮಾತ್ಮನ ಪಾದಾರವಿಂದವನ್ನು ಸೇರುವ ಅರ್ಹತೆಯನ್ನು ಸಂಪಾದಿಸಿಸಲ್ಲಿ ಅದೇ ಜೀವಕ್ಕೆ ಗೆಲುವಿನ ದಾರಿಯಾಗುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Keep your life pure and make your life and abode of happiness,
You soul is a casket for God’s own portion,
Success in life you will attain when you acquire godliness
For your own life – Marula Muniya (690)
(Translation from "Thus Sang Marula Muniya" by Sri. Narasimha Bhat)

Monday, November 3, 2014

ಯುಗದಿಂದ ಯುಗಕೆ ಸಾಗಿದರು ಮುಗಿಯದು ಬಾಳು (689)

ಯುಗದಿಂದ ಯುಗಕೆ ಸಾಗಿದರು ಮುಗಿಯದು ಬಾಳು |
ಜಗದ ಕುಣಿವೊಂದು ಚಣ ಮನುಜ ಜೀವನದಿ ||
ನೆಗೆ ಸೂರ್ಯಮಂಡಲಕ್ಕೆರಗು ಭೂಮಂಡಲಕೆ |
ಬಗೆ ನಿನಗೆ ನೀನೆ ದೊರೆ - ಮರುಳ ಮುನಿಯ || (೬೮೯)

(ಸೂರ್ಯಮಂಡಲಕ್ಕೆ+ಎರಗು)

ಒಂದು ಯುಗದಿಂದ ಮತ್ತೊಂದು ಯುಗಕ್ಕೆ ಮುಂದುವರಿದರೂ ಸಹ, ಬದುಕು ಕೊನೆಗಾಣುವುದಿಲ್ಲ. ಮನುಷ್ಯನ ಬಾಳಿನಲ್ಲಿ ಜಗತ್ತಿನ ಕುಣಿತ ಒಂದೇ ಒಂದು ಕ್ಷಣ(ಚಣ)ವಿರುತ್ತದೆ. ನೀನು ಸೂರ್ಯಮಂಡಲಕ್ಕೆ ಹಾರು ಅಥವಾ ಭೂಮಂಡಲಕ್ಕೆ ಬೀಳು(ಎರಗು). ನಿನಗೆ ನೀನೇ ರಾಜನೆಂದು ತಿಳಿ (ಬಗೆ).
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Life would not end even though it flows from age to age,
Life in this world is just a moment in the eternal life of the soul of man,
Leap up to the sun or jump upon the earth
But know that you are your own monarch – Marula Muniya (689)
(Translation from "Thus Sang Marula Muniya" by Sri. Narasimha Bhat)

Friday, October 31, 2014

ಆರು ತಾನರಿತನಿನ್ನೊರ‍್ವನೇಳ್ಗೆಯ ಬಗೆಯ? (688)

ಆರು ತಾನರಿತನಿನ್ನೊರ‍್ವನೇಳ್ಗೆಯ ಬಗೆಯ? |
ಆರು ತನ್ನೇಳ್ಗೆಯನು ತಾನರಿತ ಕುಶಲಂ? ||
ಹೇರದಿರು ನಿನ್ನ ಕಣ್ಗಾಜನಿನ್ನೊರ‍್ವಂಗೆ |
ದಾರಿಯವನದವಂಗೆ - ಮರುಳ ಮುನಿಯ || (೬೮೮)

(ತಾನ್+ಅರಿತನ್+ಇನ್ನೊರ‍್ವನ+ಏಳ್ಗೆಯ)(ತನ್+ಏಳ್ಗೆಯನು)(ಕಣ್+ಗಾಜನು+ಇನ್ನೊರ‍್ವಂಗೆ)(ದಾರಿ+ಅವನದು+ಅವಂಗೆ)

ಇನ್ನೊಬ್ಬನ ಏಳಿಗೆಯ ಬಗೆಯನ್ನು ಯಾವನು ತಿಳಿದುಕೊಂಡಿದ್ದಾನೆ? ಅಥವಾ ತನ್ನ ಉನ್ನತಿಯ ಮಾರ್ಗವನ್ನೇ ತಿಳಿದುಕೊಂಡಿರುವ ಚತುರನು ಯಾರು? ನಿನ್ನ ಉದ್ಧಾರದ ಮಾರ್ಗಗಳೇ ನಿನಗೆ ತಿಳಿಯದಿರುವಾಗ ನಿನ್ನ ಅಭಿಪ್ರಾಯವನ್ನು ಇನ್ನೊಬ್ಬರ ಮೇಲೆ ಹೇರಬೇಡ. ಅವರವರ ದಾರಿ ಅವರವರಿಗೆ ಬಿಟ್ಟಿದ್ದು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Who knows how to achieve the good of others?
Who knows how to accomplish one’s own good?
Thrust not your eyeglasses on the eyes of others.
Each has his own path marked out for him – Marula Muniya (688)
(Translation from "Thus Sang Marula Muniya" by Sri. Narasimha Bhat)

Thursday, October 30, 2014

ಹೆರರ ಬದುಕಿಗೆ ತನ್ನ ನೆರಳ ಬೀಳಲ್ಬಿಡದೆ (687)

ಹೆರರ ಬದುಕಿಗೆ ತನ್ನ ನೆರಳ ಬೀಳಲ್ಬಿಡದೆ |
ಹೊರಿಸದಿನ್ನೊರ‍್ವಂಗೆ ತನಗಿರುವ ಹೊರೆಯ ||
ಅರಿತು ತನ್ನೊಳಗದರೊಳಿತ ಹೊರಕನುಗೊಳಿಪ |
ಪರಿಯೆ ಸ್ವತಂತ್ರತೆಯೊ - ಮರುಳ ಮುನಿಯ || (೬೮೭)

(ಬೀಳಲ್+ಬಿಡದೆ)(ಹೊರಿಸದೆ+ಇನ್ನೊರ‍್ವಂಗೆ)(ತನಗೆ+ಇರುವ)(ತನ್ನ+ಒಳಗೆ+ಅದರ+ಒಳಿತ)(ಹೊರಕೆ+ಅನುಗೊಳಿಪ)

ಬೇರೆಯವರು ತಮ್ಮದೇ ಆದ ಬೆಳಕಿನಲ್ಲಿ ಜೀವನವನ್ನು ನಡೆಸುತ್ತಿರುವಾಗ, ತನ್ನ ನೆರಳನ್ನು ಅವರ ಮೇಲೆ ಬೀಳದಂತೆ ನಡೆಯುವ, ತನಗೆ ಬಂದಿರುವ ಭಾರವನ್ನು ಇತರರ ಹೆಗಲಿಗೇರಿಸದಂತೆ ಬಾಳ್ವೆಯನ್ನು ನಡೆಸುವ, ತನ್ನ ಅಂತರಂಗವನ್ನು ಅರ್ಥಮಾಡಿಕೊಂಡು, ತನ್ನಲ್ಲಿರುವ ಒಳ್ಳೆಯ ಶಕ್ತಿ ಸಾಮರ್ಥ್ಯಗಳನ್ನು ಬಾಹ್ಯ ಜಗತ್ತಿಗೆ ಉಪಯೋಗವಾಗುವ ಹಾಗೆ ಬಳಸುವ ವಿಧಾನಗಳೇ ಸ್ವಾತಂತ್ರ್ಯ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Without allowing one’s own shadow to mar the light of others,
Without shifting one’s own burden on to the shoulders of others,
Understanding one’s own self and coordinating its good with that of others
This life process is true freedom – Marula Muniya (687)
(Translation from "Thus Sang Marula Muniya" by Sri. Narasimha Bhat)

Wednesday, October 29, 2014

ಗೀತರಾಗಂ ನಾದಮಾನದಿಂ ರುಚಿಪಂತೆ (686)

ಗೀತರಾಗಂ ನಾದಮಾನದಿಂ ರುಚಿಪಂತೆ |
ಮಾತು ಛಂದಸು ಕೂಡಿ ಪದ್ಯವಪ್ಪಂತೆ ||
ಸ್ರೋತಂ ತಟಾನುಗತಿಯಿಂ ಯೋಗ್ಯವೆನಿಪಂತೆ |
ಸ್ವಾತಂತ್ರ್ಯ ಶಾಸ್ತಿಯಿಂ - ಮರುಳ ಮುನಿಯ || (೬೮೬)

(ಪದ್ಯವು+ಅಪ್ಪಂತೆ)(ತಟ+ಅನುಗತಿಯಿಂ)(ಯೋಗ್ಯ+ಎನಿಪಂತೆ)

ಹಾಡು ಮತ್ತು ರಾಗಗಳು ಮಧುರವಾದ ಧ್ವನಿಯಿಂದಲೊಡಗೂಡಿ ನಮಗೆ ಸವಿಯನ್ನು ಉಂಟುಮಾಡುವಂತೆ, ಮಾತು ಮತ್ತು ಛಂದಸ್ಸು ಕೂಡಿ ಒಂದು ಪದ್ಯವಾಗುವಂತೆ, ನದಿಯ ಪ್ರವಾಹ(ಸ್ರೋತ)ವು ಅದರ ದಡ(ತಟ)ಗಳ ನಿಯಂತ್ರಣದಿಂದ ಅನುಕೂಲವೆನ್ನಿಸುವಂತೆ, ಸ್ವಾತಂತ್ರ್ಯದ ಪ್ರಯೋಜನವು ನಿಯಮಪಾಲನೆಯಿಂದ ಸಾರ್ಥಕವಾಗುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Songs and tunes in measured tones become melodious,
Words arranged in suitable meter becomes song
River flowing between its banks becomes useful,
Likewise freedom flowers with discipline – Marula Muniya
(Translation from "Thus Sang Marula Muniya" by Sri. Narasimha Bhat)

Tuesday, October 28, 2014

ಪ್ರಾತರನಿಲಂ ಸುಳಿಯೆ ನೂತನಾರುಣನೊಲಿಯೆ (685)

ಪ್ರಾತರನಿಲಂ ಸುಳಿಯೆ ನೂತನಾರುಣನೊಲಿಯೆ |
ಪ್ರೀತಿಮೆರೆದರಳುತಿಹ ನನಗೆ ಮರದೆಲೆಯಿಂ ||
ಆತಂಕ ತಾಕದಿರಲಾ ಆತ್ಮವಿಕಸನಮೆ |
ಸ್ವಾತಂತ್ರ್ಯದುಪಯೋಗ - ಮರುಳ ಮುನಿಯ || (೬೮೫)

(ಪ್ರಾತರ್+ಅನಿಲಂ)(ನೂತನ+ಅರುಣನ್+ಒಲಿಯೆ)(ಪ್ರೀತಿಮೆರೆದು+ಅರಳುತ+ಇಹ)(ಮರದ+ಎಲೆಯಿಂ)(ತಾಕದೆ+ಇರಲು+ಆ)(ಸ್ವಾತಂತ್ರ್ಯದ+ಉಪಯೋಗ)

ಬೆಳಗಿನ ಗಾಳಿಯು (ಪ್ರಾತರನಿಲಂ) ಬೀಸುತ್ತಿರಲು, ಬಾಲಸೂರ್ಯನು ಆಗ ತಾನೇ ನಲುಮೆಯಿಂದ ಕಾಣಿಸಿಕೊಳ್ಳಲು, ಪ್ರೀತಿಯಿಂದ ಶೋಭಿಸಿ ಅರಳುತ್ತಿರುವ ಮೊಗ್ಗಿಗೆ (ನನೆಗೆ) ಮರದಲ್ಲಿರುವ ಎಲೆಗಳಿಂದ ಅಡ್ಡಿ ಮತ್ತು ಹೆದರಿಕೆಗಳು ಇರದಿರುವಂತೆ ಆತ್ಮವಿಸ್ತಾರವನ್ನು ಹೊಂದುವುದೇ ಸ್ವಾತಂತ್ರ್ಯದ ಸಾರ್ಥಕ ಬಳಕೆಗೆ ನಿದರ್ಶನವಾಗಿದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

When the morning breeze gently blows and the new dawn blesses the world,
The love-showering bud behind the leaves of tree
Blossoms without the least obstruction from the leaves,
Blossoming of the self likewise is the best use of freedom – Marula Muniya
(Translation from "Thus Sang Marula Muniya" by Sri. Narasimha Bhat)

Monday, October 27, 2014

ವರ್ತಮಾನದಿ ತೃಪ್ತಿಯೊಡನುತ್ತಮತೆಯಾಶೆ (684)

ವರ್ತಮಾನದಿ ತೃಪ್ತಿಯೊಡನುತ್ತಮತೆಯಾಶೆ |
ಚಿತ್ತದ ಸಮಾಧಾನ ಹಸ್ತದುದ್ಯೋಗ ||
ಕರ್ತವ್ಯಕಿಂತು ಕಾವಡಿಯ ತೆರದಿಬ್ಭಾರ |
ಯಾತ್ರೆಯದರಿಂ ಪೂರ್ಣ - ಮರುಳ ಮುನಿಯ || (೬೮೪)

(ತೃಪ್ತಿ+ಒಡನೆ+ಉತ್ತಮತೆ+ಆಶೆ)(ಹಸ್ತದ+ಉದ್ಯೋಗ)(ಕರ್ತವ್ಯಕೆ+ಇಂತು)(ತೆರದಿ+ಇಬ್ಭಾರ)(ಯಾತ್ರೆ+ಅದರಿಂ)

ಸದ್ಯದ ಸಂದರ್ಭದಲ್ಲಿ ಸಮಾಧಾನದ ಜೊತೆ ಶ್ರೇಷ್ಠವಾದದು(ಉತ್ತಮತೆ)ದನ್ನು ಹೊಂದುವ ಬಯಕೆ. ಮನಸ್ಸಿನ ನೆಮ್ಮದಿಗೋಸ್ಕರ ಕೈಗೆ ದೊರೆತಿರುವ ಒಂದು ಕೆಲಸ. ತನ್ನ ಪಾಲಿಗೆ ಬಂದಿರುವ ಕೆಲಸಗಳನ್ನು ಮಾಡಲು ಈ ರೀತಿ ಕಾವಡಿ(ಹೆಗಲ ಮೇಲೆ ಹೊರುವ ಎರಡೂ ಕಡೆ ಭಾರವಾಗಿರುವ ಒಂದು ಅಡ್ಡೆ)ಯಂತೆ ಎರಡೂ ಕಡೆ ಭಾರಗಳಿರಲು, ಮನುಷ್ಯನ ಭೂಲೋಕದ ಯಾತ್ರೆ ಪರಿಪೂರ್ಣವಾಗುತ್ತದೆ.

(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Contentment in your present condition with a desire for betterment
Peace of mind and proper work for hands to do
Duties of human life like kavadi have two side-weights
The life pilgrimage becomes complete with these – Marula Muniya
(Translation from "Thus Sang Marula Muniya" by Sri. Narasimha Bhat)

Tuesday, October 21, 2014

ಮಡುವೀಜುವಾಟದಲಿ ಶ್ರೀಕೃಷ್ಣಗೋಪಿಯರು (683)

ಮಡುವೀಜುವಾಟದಲಿ ಶ್ರೀಕೃಷ್ಣಗೋಪಿಯರು |
ದಡದಿಂದ ಧುಮ್ಮಿಕ್ಕಿ ತಡಕಾಡಿ ದಣಿದು ||
ಕಡೆಗೆ ದಡವೇರುತ್ತ ಕಿಲಕಿಲನೆ ನಗುವಂತೆ |
ಪೊಡವಿಯೊಳು ನರನೀಜು - ಮರುಳ ಮುನಿಯ || (೬೮೩)

(ಮಡುವ+ಈಜುವಾಟದಲಿ)(ಪೊಡವಿಯ+ಒಳು)(ನರನ+ಈಜು)

ಹೊಳೆಯ ಮಡುವಿನಲ್ಲಿ, ಈಜಾಡುವಾಗ ಶ್ರೀಕೃಷ್ಣಪರಮಾತ್ಮ ಮತ್ತು ಗೋಪಿಕಾಸ್ತ್ರೀಯರು, ದಡದಿಂದ ನೀರಿನೊಳಕ್ಕೆ ಧುಮುಕಿ, ಹುಡುಕಿ, ತಡಕಾಡಿ ಆಯಾಸಗೊಂಡು ಕೊನೆಯಲ್ಲಿ ಕಿಲಕಿಲನೆ ನಗುತ್ತಾ ದಡವನ್ನು ಏರುವಂತೆ, ಮನುಷ್ಯನೂ ಈ ಬಾಳಿನ ಹೊಳೆಯಲ್ಲಿ ಈಜುತ್ತಾನೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

With the sole intention of swimming and enjoying
Shri Krishna and the Gopis jump into the lake, struggle and tire themselves,
At last they stop their play, come up and laugh joyfully,
Similar is man’s swim in the world - Marula Muniya (683)
(Translation from "Thus Sang Marula Muniya" by Sri. Narasimha Bhat)

Monday, October 20, 2014

ಹೊಟ್ಟೆಪಾಡಿಗೆ ಸತ್ಯವನು ಬಿಡದೊಂದು ದುಡಿಮೆ (682)

ಹೊಟ್ಟೆಪಾಡಿಗೆ ಸತ್ಯವನು ಬಿಡದೊಂದು ದುಡಿಮೆ |
ನಿಷ್ಠೆಯಿಂದಿಹ ಗೆಳತಿ ಕಷ್ಟ (ದಿನಗಳಿಗೆ) ||
ಸೃಷ್ಟೀಶಭಕ್ತಿ - ಈ ಮೂವರಿರಲ್ ಜೀವನದಿ |
ಕಷ್ಟವೇನಿಹುದಯ್ಯ - ಮರುಳ ಮುನಿಯ || (೬೮೨)

(ನಿಷ್ಠೆ+ಇಂದ+ಇಹ)(ಸೃಷ್ಟಿ+ಈಶಭಕ್ತಿ)(ಮೂವರ್+ಇರಲ್)(ಕಷ್ಟ+ಏನ್+ಇಹುದು+ಅಯ್ಯ)

ದಿನನಿತ್ಯದ ಉದರಂಭರಣೆಗಾಗಿ ಪ್ರಾಮಾಣಿಕತೆಯಿಂದ ದುಡಿಯಲು ಒಂದು ಉದ್ಯೋಗ. ಕಷ್ಟದ ದಿನಗಳಿಗೆ ಆಸರೆಯಾಗಿ, ತೀವ್ರವಾದ ಆಸಕ್ತಿ ಮತ್ತು ಶ್ರದ್ಧೆಯಿಂದಿರುವ ಜೀವನದ ಸಂಗಾತಿ. ಸೃಷ್ಟಿಕರ್ತನಾದ ಪರಮಾತ್ಮನಲ್ಲಿ ಭಕ್ತಿ. ಈ ಮೂರನ್ನೂ ಒಳಗೊಂಡ ಜೀವನವನ್ನು ನಡೆಸುವುದರಲ್ಲಿ ಕಷ್ಟವೇನಿದೆ?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Can there be difficulty in life when you have the following three?
An honest occupation to earn your livelihood,
A life partner who is friendly and faithful even in difficult times
And implicit devotion in God – Marula Muniya (682)
(Translation from "Thus Sang Marula Muniya" by Sri. Narasimha Bhat)

Friday, October 17, 2014

ಆವುದಾನುಂ ನಿನ್ನ ಬಾಳಬಲಿಗೊಳಲಿಹುದೆ (681)

ಆವುದಾನುಂ ನಿನ್ನ ಬಾಳಬಲಿಗೊಳಲಿಹುದೆ |
ದೈವವೋ ಧರ್ಮವೋ ಸಖ್ಯವೋ ಸುಖವೋ ||
ಜೀವವೆಲ್ಲವ ತನ್ನೊಳಕೆ ಕೊಳುವ ಲಕ್ಷ್ಯವೊಂ - |
ದಾವರಿಸೆ ನೀಂ ಧನ್ಯ - ಮರುಳ ಮುನಿಯ || (೬೮೧)

(ಬಾಳಬಲಿಗೊಳಲ್+ಇಹುದೆ)(ಜೀವವು+ಎಲ್ಲವ)(ಲಕ್ಷ್ಯ+ಒಂದು+ಆವರಿಸೆ)

ದೈವವೋ, ಧರ್ಮವೋ, ಸ್ನೇಹವೋ ಅಥವಾ ಸಖ್ಯವೋ ಇದು ಯಾವುದಾದರೂ ಒಂದು ನಿನ್ನ ಜೀವನವನ್ನು ಬಲಪಡಿಸದಿರುವುದೇನು? ಜೀವವೆಲ್ಲವನ್ನೂ ತನ್ನೊಳಗೆಡೆಗೆ ತೆಗೆದುಕೊಳ್ಳುವ ಒಂದು ಧ್ಯೇಯವು ನಿನ್ನನ್ನು ಆವರಿಸಿದರೆ ನೀನು ಅದೃಷ್ಟಶಾಲಿ ಹಾಗೂ ಸಾರ್ಥಕಜೀವಿಯೆನ್ನಿಸುವೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

God or religion or friendship or happiness,
Each one of these demands the sacrifice of your life
Fulfillment you attain when the goal to include all life
In your embrace fills you through and through – Marula Muniya
(Translation from "Thus Sang Marula Muniya" by Sri. Narasimha Bhat)

Thursday, October 16, 2014

ಕೃಪಣಿಯೋ ಸೃಷ್ಟಿಯವಳೊಂದನುಂ ವ್ಯರ್ಥಿಸಳು (680)

ಕೃಪಣಿಯೋ ಸೃಷ್ಟಿಯವಳೊಂದನುಂ ವ್ಯರ್ಥಿಸಳು |
ಉಪಯೋಗಗೈವಳೆಲ್ಲರನುಮೆಲ್ಲವನುಂ ||
ಅಪರಿಮಿತ ಜೀವನಸಮೃದ್ಧಿಯವಳಾಕಾಂಕ್ಷೆ |
ಸಫಲವದಕಾದ ಬಾಳ್ - ಮರುಳ ಮುನಿಯ || (೬೮೦)

(ಸೃಷ್ಟಿ+ಅವಳು+ಒಂದನುಂ)(ಉಪಯೋಗಗೈವಳ್+ಎಲ್ಲರನುಂ+ಎಲ್ಲವನುಂ)(ಜೀವನ+ಸಮೃದ್ಧಿ+ಅವಳ+ಆಕಾಂಕ್ಷೆ)(ಸಫಲವು+ಅದಕೆ+ಆದ)

ಸೃಷ್ಟಿದೇವತೆ ಬಹಳ ಜಿಪುಣಿ(ಕೃಪಣಿ). ಅವಳು ಯಾವುದೊಂದನ್ನೂ ಪೋಲು(ವ್ಯರ್ಥ) ಮಾಡುವುದಿಲ್ಲ. ಅವಳು ಲೋಕದಲ್ಲಿರುವ ಎಲ್ಲಾ ಜನರನ್ನು ಮತ್ತು ಸಮಸ್ತ ವಸ್ತುಗಳನ್ನೂ ಉಪಯೋಗಿಸಿತ್ತಾಳೆ. ಜೀವನವನ್ನು ಅಪಾರವಾಗಿ ಸಂಪದ್ಭರಿತಗೊಳಿಸಬೇಕೆಂಬುದು ಅವಳ ಆಸೆ (ಆಕಾಕ್ಷೆ). ಸೃಷ್ಟಿದೇವಿಯ ಉದ್ದೇಶಕ್ಕೆ ಯಾರ ಜೀವನವು ನೆರವಾಗುವುದೋ ಅಂಥವರ ಜೀವನವು ಸಾರ್ಥಕವಾಗುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Nature is a miser and She wastes nothing,
She uses everyone and everything available in the universe.
Immense prosperity in life is Her desire,
Fruitful is the life that fulfils it – Marula Muniya (680)
(Translation from "Thus Sang Marula Muniya" by Sri. Narasimha Bhat)

Wednesday, October 15, 2014

ಮಡುವು ಮಾನವ ಲೋಕ ಮಾಯೆಯಾ ಜಲರಾಶಿ (679)

ಮಡುವು ಮಾನವ ಲೋಕ ಮಾಯೆಯಾ ಜಲರಾಶಿ |
ತಡೆ ಕಣ್ಗೆ ಮೋಹ ಭಯ ರೋಷಗಳ ಹೊಡೆತ ||
ದುಡುಕುತಾಯಸಬಟ್ಟು ಮಡುವೊಳೀಜುವನವನು |
ದಡವೇರೆ ಪರಮಸುಖಿ - ಮರುಳ ಮುನಿಯ || (೬೭೯)

(ದುಡುಕುತ+ಆಯಸಬಟ್ಟು)(ಮಡುವೊಳ್+ಈಜುವನ್+ಅವನು)(ದಡ+ಏರೆ)

ಮನುಷ್ಯನ ಬಾಳೆಂಬುದು ನದಿಯ ಆಳವಾದ ಒಂದು ಜಾಗ(ಮಡುವು). ಆ ಜಲರಾಶಿಯೇ ಮಾಯೆ. ಅವನ ಕಣ್ಣುಗಳಿಗೆ ಪ್ರೀತಿ, ಹೆದರಿಕೆ, ಕೋಪಗಳು ಅಡ್ಡಬರಲು, ಅವುಗಳಿಂದ ಅವನಿಗೆ ಹೊಡೆತ. ಆವಾಗ ಅವನು ಮುಂದಾಲೋಚನೆಯಿಲ್ಲದೆ ಮುನ್ನುಗ್ಗಿ, ಶ್ರಮ ಮತ್ತು ಬಳಲಿಕೆಯಿಂದ, ಆ ಮಡುವಿನಲ್ಲಿ ಈಜುತ್ತಾನೆ. ಅವನು ದಡವನ್ನು ಮುಟ್ಟಿದಾಗ ಸುಖವನ್ನು ಹೊಂದುತ್ತಾನೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

This human world is a vast lake filled with the water of illusion
Attachment obstructs his vision, fear and anger smite him
He swims hastily, moves forward and tires himself
But he becomes overjoyed on reaching the bank – Marula Muniya (679)
(Translation from "Thus Sang Marula Muniya" by Sri. Narasimha Bhat)

Tuesday, October 14, 2014

ಹೊಟ್ಟೆಪಾಡಿನ ದುಡಿಮೆ ಸೃಷ್ಟೀಶಪದದೊಲುಮೆ (678)

ಹೊಟ್ಟೆಪಾಡಿನ ದುಡಿಮೆ ಸೃಷ್ಟೀಶಪದದೊಲುಮೆ |
ಇಷ್ಟ ಬಾಂಧವ ಮಿತ್ರ ಲೋಕಗಳ ಗೆಯ್ಮೆ ||
ಇಷ್ಟ ಸಂಗಾತಿ ಜನ ಕಾವ್ಯ ಗೀತಗಳಿರಲು |
ಕಷ್ಟವೇಂ ಬಾಳಲಿಕೆ - ಮರುಳ ಮುನಿಯ || (೬೭೮)

(ಸೃಷ್ಟಿ+ಈಶ+ಪದದ+ಒಲುಮೆ)(ಗೀತಗಳ್+ಇರಲು)

ಜೀವನವನ್ನು ನಿರ್ವಹಿಸುವುದಕ್ಕೋಸ್ಕರ ಆರ್ಥಿಕ ನೆರವನ್ನು ನೀಡುವ ಒಂದು ಉದ್ಯೋಗ, ಜಗತ್ತನ್ನು ಸೃಷ್ಟಿಸಿದ ಪರಮಾತ್ಮನ ಪದಕಮಲಗಳಲ್ಲಿ ಅಚಲ ನಂಬಿಕೆ, ವಿಶ್ವಾಸ ಮತ್ತು ಪ್ರೀತಿ. ಪ್ರೀತಿಪಾತ್ರರಾದ ಬಂಧುಗಳು, ಸ್ನೇಹಿತರುಗಳು, ಇವರುಗಳ ಜೊತೆ ಬಾಳಿನ ಸುಖಕ್ಕಾಗಿ ದುಡಿಯುವುದು. ಪ್ರೀತಿಸುವ ಸಂಗಾತಿ, ಸತ್ಕಾವ್ಯ ಮತ್ತು ಸಂಗೀತಗಳೆಲ್ಲವೂ ಇರಲಾಗಿ ಬದುಕಿ ಬಾಳಲು ಕಷ್ಟವೆಲ್ಲಿದೆ?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

An occupation to earn the daily bread and God’s grace to reassure you,
The gains of your loving relations, and dear friends,
The loving company of your life partner, poetry and music
Is life difficult when you have all these? – Marula Muniya (678)
(Translation from "Thus Sang Marula Muniya" by Sri. Narasimha Bhat)

Monday, October 13, 2014

ಯಾತನೆಯ ರಂಗ ನರಜನ್ಮವೆನ್ನಿಪುದು ದಿಟ (677)

ಯಾತನೆಯ ರಂಗ ನರಜನ್ಮವೆನ್ನಿಪುದು ದಿಟ |
ನೀತಿಯಿನದುದ್ಧಾರ್ಯಮೆಂಬುದುಂ ದಿಟವೇ ||
ಭೀತಿಯಿನಭೀತತಗೆ ಮೃತ್ಯುವಿನಮರ್ತ್ಯತೆಗೆ |
ಸೇತು ಪೂರುಷಜನ್ಮ - ಮರುಳ ಮುನಿಯ || (೬೭೭)

(ನರಜನ್ಮ+ಎನ್ನಿಪುದು)(ನೀತಿಯಿಂ+ಅದು+ಉದ್ಧಾರ್ಯ+ಎಂಬುದುಂ)(ಭೀತಿಯಿಂ+ಅಭೀತತಗೆ)(ಮೃತ್ಯುವಿಂ+ಅಮರ್ತ್ಯತೆಗೆ)

ಕಷ್ಟ, ದುಃಖ ಮತ್ತು ನೋವುಗಳನ್ನನುಭವಿಸುವ ಬದುಕು ಈ ನರಜನ್ಮವೆಂದು ಎನ್ನಿಸುವುದು ನಿಜ. ಆದರೆ ನೀತಿ, ನಿಯಮಗಳನ್ನು ಪಾಲಿಸುವುದರಿಂದ ಅದನ್ನು ಮೇಲಕ್ಕೆತ್ತಲು ಸಾಧ್ಯವೆನ್ನುವುದು ಸಹ ನಿಜವೇ ಹೌದು. ಹೆದರಿಕೆಯಿಂದ ನಿರ್ಭೀತಿಯ ಸ್ಥಿತಿಗೆ ಮತ್ತು ಸಾವಿನಿಂದ ಆಮೃತತ್ವಕ್ಕೆ ಸಾಗಲು ಇರುವ ಸೇತುವೆಯೆಂದರೆ ನರಜನ್ಮವೇ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

It is true that human life appears to be a play field of agonies
It is also true that it can be elevated to excellence through noble conduct
Human life is a bridge for us to cross from fear to fearlessness
And from death to immortality – Marula Muniya
(Translation from "Thus Sang Marula Muniya" by Sri. Narasimha Bhat)

Friday, October 10, 2014

ಕ್ಷರ ಜಗತ್ತಿನೊಳಕ್ಷಯದ ವಾಸನೆಯ ಕಾಣ್ಬ (676)

ಕ್ಷರ ಜಗತ್ತಿನೊಳಕ್ಷಯದ ವಾಸನೆಯ ಕಾಣ್ಬ |
ವಿರಸ ಮಧ್ಯದಿ ಸರಸ ಸಿರಿಯನಾಶಿಸುವಾ ||
ವರವದಾರ‍್ಗುಂಟು ಸೃಷ್ಟಿಯ ಜಂತು ವರ್ಗದಲಿ |
ನರಜಾತಿಯೊಂದುಳಿದು - ಮರುಳ ಮುನಿಯ || (೬೭೬)

(ಜಗತ್ತಿನೊಳು+ಅಕ್ಷಯದ)(ಸಿರಿಯನ್+ಆಶಿಸುವ+ಆ)(ವರವು+ಅದು+ಆರ‍್ಗೆ+ಉಂಟು)(ನರಜಾತಿ+ಒಂದು+ಉಳಿದು)

ನಾಶವಾಗುವಂತಹ (ಕ್ಷರ) ಪ್ರಪಂಚದೊಳಗೆ, ಶಾಶ್ವತದ ಜಾಡನ್ನು ಕಾಣುವ (ಕಾಣ್ಬ), ವೈಮನಸ್ಯ(ವಿರಸ)ದ ನಡುವೆ ವಿನೋದವಾಗಿರುವಂತಹ ಸಂಪತ್ತನ್ನು ಅಪೇಕ್ಷಿಸುವ ವಿಶೇಷ ಶಕ್ತಿ, ಸೃಷ್ಟಿಯ ಜೀವಕೋಟಿಗಳಲ್ಲಿ ಮನುಷ್ಯಜಾತಿಗೆ ಬಿಟ್ಟು ಇನ್ಯಾರಿಗಿದೆ?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The gift of feeling the fragrance of the immortal in the moral world,
The gift of seeking the treasure of harmony in the midst of discord,
Who possesses this gift among the creatures of the world
Except the human kind? – Marula Muniya
(Translation from "Thus Sang Marula Muniya" by Sri. Narasimha Bhat)

Wednesday, October 8, 2014

ಬಾಲದೊಳೊ ಬೆನ್ನಿನೊಳೊ ಕಣ್ಗೆದ್ದು ಕಾಣದೆಡೆ (675)

ಬಾಲದೊಳೊ ಬೆನ್ನಿನೊಳೊ ಕಣ್ಗೆದ್ದು ಕಾಣದೆಡೆ |
ತೋಳಿನೊಳೊ ತೊಂಡಿಲೊಳೊ ಮೆಯ್ಯಮುದುರಿನೊಳೊ ||
ಜಾಲಾಗಿ ಜುಂಗಾಗಿ ಸಿಗುರಾಗಿ ಸುಳಿಯಾಗಿ |
ಬಾಳ ತೆನೆಯೆದ್ದೀತೊ - ಮರುಳ ಮುನಿಯ || (೬೭೫)

(ಮೆಯ್ಯಮುದುರಿನ+ಒಳೊ)

ಬಾಲದೊಳಗೆ, ಬೆನ್ನಿನಲ್ಲಿ, ನಮ್ಮ ಕಣ್ಣುಗಳಿಗೆ ಕಾಣಿಸದಂತಿರುವ ಸ್ಥಳದಲ್ಲಿ, ತೋಳಶಕ್ತಿಯಲ್ಲಿ, ಶಿರೋಭೂಷಣ(ತೊಂಡಿಲು)ದಲ್ಲಿ, ಅಥವಾ ದೇಹದ ಮುದುರುಗಳಲ್ಲಿ ಬಲೆಯಂತೆ, ನಾರುಗಳಂತೆ, ಸಿಬುರು ಚಕ್ಕೆಗಳಂತೆ, ಸುತ್ತು ಸುತ್ತುಗಳಂತೆ ಜೀವನದ ಸಾರ (ಬಾಳ ತೆನೆ) ಬಾಳತೆನೆ ಇರಬಹುದು. ಸರಿಯಾಗಿ ಪರೀಕ್ಷಿಸಿ ನೋಡು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The corn-ear bunch of human life may be in a place
That doesn’t strike the eyes; it may be in the tail or on the back,
It may be in the arm or in the crest, or in any body fold
It may be like webs, fibres, splinters or spirals – Marula Muniya
(Translation from "Thus Sang Marula Muniya" by Sri. Narasimha Bhat)

Tuesday, October 7, 2014

ವಸ್ತು ಸತ್ತ್ವದ ಕಾವು ಗಟ್ಟಿಯೊಡಲೊಳಗೆನುತೆ (674)

ವಸ್ತು ಸತ್ತ್ವದ ಕಾವು ಗಟ್ಟಿಯೊಡಲೊಳಗೆನುತೆ |
ಹಸ್ತಿಯನು ತುಂಡಾಗ್ರವಿರದೆ ಮೆಚ್ಚುವರೆ? ||
ಕಸ್ತೂರಿಕಾಮೃಗದೊಳಗ್ಗಳದ ಪುರುಳೆಲ್ಲಿ? |
ವ್ಯಕ್ತಿತೆಯ ನೆಲೆ ಸೂಕ್ಷ್ಮ - ಮರುಳ ಮುನಿಯ || (೬೭೪)

(ಗಟ್ಟಿ+ಒಡಲು+ಒಳಗೆ+ಎನುತೆ)(ತುಂಡ+ಅಗ್ರ+ಇರದೆ)(ಕಸ್ತೂರಿಕಾಮೃಗದ+ಒಳ್+ಅಗ್ಗಳದ)

ಒಂದು ವಸ್ತುವಿನ ಶಕ್ತಿ ಗಟ್ಟಿಯಾಗಿರುವ ದೇಹದೊಳಗೆ ಮಾತ್ರ ಇರುವುದೆಂದ ಮಾತ್ರಕ್ಕೆ, ಆನೆ(ಹಸ್ತಿ)ಯನ್ನು ಅದರ ಮುಖದಲ್ಲಿ ಸೊಂಡಿಲು (ತುಂಡು) ಇರದೆ ಯಾರಾದರೂ ಇಷ್ಟಪಡುತ್ತಾರೇನು? ಕಸ್ತೂರಿ ಮೃಗದೊಳಗೆ ಶ್ರೇಷ್ಠ(ಅಗ್ಗಳ)ವಾದ ಸುಗಂಧ ದ್ರವ್ಯ ಮತ್ತು ಸುವಾಸನೆಯ ಸಾರ ಎಲ್ಲಿ ಅಡಗಿರುತ್ತದೆ? ತಿಳಿಯಲಾಗದು. ಹಾಗೆಯೇ ವ್ಯಕ್ತಿತ್ವದ ಮೂಲವೂ ಸಹ ಬಹು ಗೂಢವಾಗಿರುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

“The substance of an object lies within a strong body” they say
But would anyone admire an elephant without trunk?
Where’s the precious musk in the body of the musk deer preserved?
Intricate is the basis of one’s personality – Marula Muniya (674)
(Translation from "Thus Sang Marula Muniya" by Sri. Narasimha Bhat)

Monday, October 6, 2014

ನಾರಸತ್ತ್ವಾಯನಂ ನಾರಾಯಣಂ ಬಗೆಯೆ (673)

ನಾರಸತ್ತ್ವಾಯನಂ ನಾರಾಯಣಂ ಬಗೆಯೆ |
ಪೌರುಷಪರಾಕಾಷ್ಠಪದವೆ- ಆ ದೈವಂ ||
ದಾರುತೆಯ ಕಳೆವ ಮಂದಾರಸುಮಸುರಭಿಯದು |
ಪಾರಮಾರ್ಥಿಕ ಜೀವ - ಮರುಳ ಮುನಿಯ || (೬೭೩)

ಮಾನವಶಕ್ತಿಯ ಆಶ್ರಯ(ನಾರಸತ್ತ್ವಾಯನಂ) ಆ ಪರಮಾತ್ಮನೇ ಎಂದು ತಿಳಿದರೆ, ಪೌರುಷತ್ವದ ತುತ್ತತುದಿ (ಪರಾಕಾಷ್ಠ)ಯನ್ನು ಹೊಂದುವುದನ್ನೇ ಆ ಪರಮಾತ್ಮನೆನ್ನುವನು. ಪಾರಮಾರ್ಥಿಕತೆಯನ್ನು ಹೊಂದಿದ ಜೀವವು ಮರ(ದಾರು)ದ ಅಂಶವನ್ನು ನಾಶಮಾಡಿಕೊಂಡ ಸ್ವರ್ಗಲೋಕದ ಪಾರಿಜಾತ(ಮಂದಾರ)ದ ಹೂವಿ(ಸುಮ)ನ ಪರಿಮಳ(ಸುರಭಿ)ದಂತಿರುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

God Narayana Himself is the abode of all the best human virtues,
God is the Supreme state of the best human nature,
The soul divine in the Godly state is the fragrant mandara flower
That has shed all its wooden nature – Marula Muniya (673)
(Translation from "Thus Sang Marula Muniya" by Sri. Narasimha Bhat)

Wednesday, September 24, 2014

ಸುರತೆ ಮೃಗತೆಗಳ ಮಿಶ್ರಣದಿಂದೆ ನರಜಂತು (672)

ಸುರತೆ ಮೃಗತೆಗಳ ಮಿಶ್ರಣದಿಂದೆ ನರಜಂತು |
ಪುರುಷತ್ವ ಪೆರ‍್ಚುವುದು ಮೃಗತೆಯಳಿದಂತೆ ||
ಪರಿಪೂರ್ಣದೈವ ಹರಿ ಪುರುಷೋತ್ತಮನಂತೆ |
ಪರಿಶುದ್ಧಸತ್ತ್ವವದು - ಮರುಳ ಮುನಿಯ || (೬೭೨)

(ಮಿಶ್ರಣದ+ಇಂದೆ)(ಮೃಗತೆ+ಅಳಿದಂತೆ)(ಪರಿಶುದ್ಧಸತ್ತ್ವ+ಅದು)

ಮನುಷ್ಯನೆಂಬ ಪ್ರಾಣಿಯು ದೈವತ್ವ ಮತ್ತು ಮೃಗತ್ವಗಳ ಮಿಶ್ರಣ. ಮೃಗತ್ವವು ಕಡಿಮೆಯಾಗುತ್ತಾ ಬಂದಂತೆ ಮನುಷ್ಯತ್ಯವು ಹೆಚ್ಚುತ್ತದೆ. ದೈವತ್ವ ಹೆಚ್ಚುತ್ತಾ ಹೋಗಿ ಪರಿಶುದ್ಧ ಸತ್ತ್ವವಾದಾಗ ಮನುಷ್ಯನು ಪರಿಪೂರ್ಣ ದೇವರಾದ ಶ್ರೀ ಹರಿಪುರುಷೋತ್ತಮನಂತೆ ಆಗುತ್ತಾನೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Human being is a compound of beasty and divine traits
As the beasty nature decreases human nature increases,
It is the pure essence of Hari Purushothama
The God Infinite – Marula Muniya (672)
(Translation from "Thus Sang Marula Muniya" by Sri. Narasimha Bhat)

Tuesday, September 23, 2014

ಜ್ಞಾನವಿಜ್ಞಾನದಲಿ ಗೃಹರಾಷ್ಟ್ರಸಂಸ್ಥೆಯಲಿ (671)

ಜ್ಞಾನವಿಜ್ಞಾನದಲಿ ಗೃಹರಾಷ್ಟ್ರಸಂಸ್ಥೆಯಲಿ |
ಗಾನ ನರ್ತನ ಕಾವ್ಯಚಿತ್ರಕಲೆಗಳಲಿ ||
ಯಾನಯಂತ್ರಂಗಳಲಿ ವೈದ್ಯತಂತ್ರಂಗಳಲಿ |
ಮಾನವ ಪ್ರಗತಿಯೆಲೊ - ಮರುಳ ಮುನಿಯ || (೬೭೧)

ಮನುಷ್ಯನ ಏಳಿಗೆ ಮತ್ತು ಮುನ್ನಡೆಯು ಅವನು ಗಳಿಸಿದ ತಿಳುವಳಿಕೆಗಳಲ್ಲಿ, ವಿಜ್ಞಾನದಲ್ಲಿ, ರಚಿಸಿದ ಮನೆ, ರಾಷ್ಟ್ರ ಮತ್ತು ಸಂಘಗಳಲ್ಲಿ, ಸಂಗೀತ, ನಾಟ್ಯ, ಕವಿತೆ ಮತ್ತು ಚಿತ್ರಕಲೆಗಳಲ್ಲಿ, ಪಯಣಿಸುವ ಸಾಧನಗಳಲ್ಲಿ, ಯಂತ್ರಗಳನ್ನು ನಿರ್ಮಾಣ ಮಾಡುವುದರಲ್ಲಿ ಮತ್ತು ಔಷಧಿಗಳನ್ನು ಬಳಸುವ ಉಪಾಯಗಳಲ್ಲಿ ಕಂಡು ಬರುತ್ತವೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

In the various branches of knowledge and science, in family, associations and nations
In music, drama, poetry, painting and other arts,
In the means of conveyance and other machines, medicine and technology
Human progress is commemorable – Marula Muniya (671)
(Translation from "Thus Sang Marula Muniya" by Sri. Narasimha Bhat)

Monday, September 22, 2014

ಪುರುಷಸತ್ತ್ವದ ವಿಜಯರಥ ಸಾಗಿಬರುತಿಹುದು (670)

ಪುರುಷಸತ್ತ್ವದ ವಿಜಯರಥ ಸಾಗಿಬರುತಿಹುದು |
ಭರದಿನೊಮ್ಮೊಮ್ಮೆ ಮಂಥರದಿನೊಮ್ಮೊಮ್ಮೆ ||
ಸರಲ ಮಾರ್ಗದೊಳೊಮ್ಮೆ ದುರ್ಗವಕ್ರದೊಳೊಮ್ಮೆ |
ಪರಿಪರಿಯ ಯಾತ್ರೆಯದು - ಮರುಳ ಮುನಿಯ || (೬೭೦)

(ಭರದಿನ್+ಒಮ್ಮೊಮ್ಮೆ)(ಮಂಥರದಿನ್+ಒಮ್ಮೊಮ್ಮೆ)(ಮಾರ್ಗದೊಳ್+ಒಮ್ಮೆ)(ದುರ್ಗ+ವಕ್ರದೊಳ್+ಒಮ್ಮೆ)

ಮನುಷ್ಯನ ಪೌರುಷ ಶಕ್ತಿಯ ಗೆಲುವಿನ ರಥಯಾತ್ರೆಯು, ಕೆಲವು ಸಲ ಬಹಳ ವೇಗದಿಂದ ಮತ್ತು ಕೆಲವು ಸಲ ನಿಧಾನ(ಮಂಥರ)ವಾಗಿ, ಕೆಲವೊಮ್ಮೆ ನೇರವಾದ ದಾರಿಯಲ್ಲಿ ಮತ್ತು ಕೆಲವು ಸಲ ಕಠಿಣವಾದ ದಾರಿಯಲ್ಲಿ ಮುಂದುವರಿದು ಬರುತ್ತಾ ಇದೆ. ಇದು ಅನೇಕ ತರಹವಾಗಿರುವ ಪಯಣ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The victorious chariot of human heroism is advancing,
Sometimes it is fast and sometimes it is slow,
Now on straight easy road and then on difficult serpentine road,
Thus it moves on and on, on different roads – Marula Muniya (670)
(Translation from "Thus Sang Marula Muniya" by Sri. Narasimha Bhat)

Friday, September 19, 2014

ನರಚರಿತೆಯೆಡೆಬಿಡದೆ ವಿಜಯ ಸಾಹಸದ ಕಥೆ (669)

ನರಚರಿತೆಯೆಡೆಬಿಡದೆ ವಿಜಯ ಸಾಹಸದ ಕಥೆ |
ವರದಶೆಯ ತಾನೊಂದನೆಳಸಿ ಬಿಡದರಸಿ ||
ಪರಿಯುವುದು ತಲೆಯಿಂದ ತಲೆಗೆ ಯುಗದಿಂ ಯುಗಕೆ |
ಪುರುಷಸತ್ತ್ವದ ಲಹರಿ - ಮರುಳ ಮುನಿಯ || (೬೬೯)

(ತಾನ್+ಒಂದನ್+ಎಳಸಿ)(ಬಿಡದೆ+ಅರಸಿ)

ಮನುಷ್ಯನ ಚರಿತ್ರೆ ನಿರಂತರವಾದ ಗೆಲುವು ಮತ್ತು ಪೌರುಷಗಳ ಕಥೆ. ಒಂದು ಶ್ರೇಷ್ಠವಾದ ಸ್ಥಿತಿಯನ್ನು ಬಯಸಿ (ಎಳಸಿ) ಸದಾ ಕಾಲವೂ ಹುಡುಕಿಕೊಂಡು ಹೋಗಿ, ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಮತ್ತು ಒಂದು ಯುಗದಿಂದ ಇನ್ನೊಂದು ಯುಗಕ್ಕೆ ಪುರುಷತ್ವದ ಲಹರಿಯು ಹರಿಯುತ್ತಿರುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Human history is along continuous saga of valour and victory
Intensely aspiring after and ceaselessly seeking a state of excellence
Flows the current of human prowess from generation to generation
And from age to age – Marula Muniya (669)
(Translation from "Thus Sang Marula Muniya" by Sri. Narasimha Bhat)

Thursday, September 18, 2014

ಪ್ರಾಣಿಪ್ರಪಂಚಕ್ಕೆ ಮಾನವಂ ಮುಕುಟಮಣಿ (668)

ಪ್ರಾಣಿಪ್ರಪಂಚಕ್ಕೆ ಮಾನವಂ ಮುಕುಟಮಣಿ |
ಜ್ಞಾನದಿಂ ಮಾನ ತರತಮ ನಯವಿನಯದಿಂ ||
ಮಾನವತ್ವದ ಬೆಲೆಯೆ ಲೋಕಕೆಲ್ಲಾ ಬೆಲೆಯು |
ಮಾನವತೆಯನು ಗಣಿಸು - ಮರುಳ ಮುನಿಯ || (೬೬೮)

ಮನುಷ್ಯನು ಪ್ರಾಣಿಪ್ರಪಂಚಕ್ಕೇ ಕಿರೀಟ(ಮುಕುಟ)ಪ್ರಾಯನಾಗಿರುವನು. ತನ್ನ ವಿಶೇಷವಾದ ತಿಳುವಳಿಕೆಯಿಂದ, ಹೆಚ್ಚು ಕಡಿಮೆಗಳನ್ನು ಅಳೆಯುವ ಉಪಾಯ, ನಾಜೂಕು ಮತ್ತು ನಮ್ರತೆಗಳಿಂದ, ಮನುಷ್ಯನು ಗೊತ್ತುಮಾಡಿರುವ ಮೌಲ್ಯಗಳೇ ಜಗತ್ತಿಗೆಲ್ಲಾ ಮೌಲ್ಯಗಳಾಗುತ್ತವೆ. ಆದುದ್ದರಿಂದ ಮನುಷ್ಯತ್ವ ಎಂಬುದು ನಾವು ಗಣನೆಗೆ ತೆಗೆದುಕೊಳ್ಳಬೇಕಾದದ್ದು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

With wisdom, honour, discriminative faculty and cultured virtues,
Man is the crown jewel of the living beings in the world
The value and worth of its human beings is the value and worth of the world,
Hold high therefore the valuable human values - Marula Muniya (668)
(Translation from "Thus Sang Marula Muniya" by Sri. Narasimha Bhat)

Wednesday, September 17, 2014

ಕೈಯ ದುಡುಕಿಸಬೇಡ ಜೀವಪರಿಸರಗಳಲಿ (667)

ಕೈಯ ದುಡುಕಿಸಬೇಡ ಜೀವಪರಿಸರಗಳಲಿ |
ಗಾಯ ಮಾಯದು ಬೆರಲು ತಗಲುತಿರಲದಕೆ ||
ಕಾಯಿ ಮಾಗದು ಹುಲ್ಲೊಳದನು ಬಿಡದವುಕುತಿರೆ |
ಸ್ವಾಯತ್ತೆಯಿಂದಾತ್ಮ - ಮರುಳ ಮುನಿಯ || (೬೬೭)

(ತಗಲುತ+ಇರಲ್+ಅದಕೆ)(ಹುಲ್ಲೊಳ್+ಅದನು)(ಬಿಡದೆ+ಅವುಕುತ+ಇರೆ)(ಸ್ವಾಯತ್ತೆಯಿಂದ+ಆತ್ಮ)

ನಿನ್ನ ಕೈಗಳನ್ನು ಮುಂದಾಲೋಚನೆಯಿಲ್ಲದೆ, ಪ್ರಕೃತಿಯ ಜೀವ ಮತ್ತು ಪರಿಸರಗಳಲ್ಲಿ ಆಡಿಸಬೇಡ. ಸದಾ ಕಾಲವೂ ನಿನ್ನ ಬೆರಳುಗಳು ಅದಕ್ಕೆ ತಗಲುತ್ತಿದ್ದರೆ, ಅದು ಗಾಯವನ್ನು ವಾಸಿಯಾಗಲು ಬಿಡುವುದಿಲ್ಲ. ಕಾಯನ್ನು ಹುಲ್ಲಿನೊಳಗಡೆ ಬಿಗಿಯಾಗಿ ಅದುಮಿಟ್ಟರೆ ಅದು ಹಣ್ಣಾಗಲಾರದು. ಸ್ವಾಧೀನತೆಯಿಂದ(ಸ್ವಯತ್ತೆ) ಆತ್ಮಶಕ್ತಿಯು ವೃದ್ಧಿಯಾಗುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Rush not your hands on life and environment,
The wound doesn’t heal when your finger frequently touches it,
The unique fruit in hay doesn’t ripen, if you keep on pressing it now and then,
Autonomy is essential for the excellence of Atman – Marula Muniya
(Translation from "Thus Sang Marula Muniya" by Sri. Narasimha Bhat)

Tuesday, September 16, 2014

ಅಡವಿಯನು ಕಡಿಯುವನು ಬೆಟ್ಟಗಳನಿಡಿಯುವನು (666)

ಅಡವಿಯನು ಕಡಿಯುವನು ಬೆಟ್ಟಗಳನಿಡಿಯುವನು |
ಪೊಡವಿಯನು ಪಾತಾಳ ಮುಟ್ಟಿ ಕೊರೆಯುವನು ||
ಕಡಲುಗಳ ಹಾಯುವನು ಉಡುಪಥವ ಸೀಳುವನು |
ದುಡುಕನೇ ಸೃಷ್ಟಿಯೆಡೆ - ಮರುಳ ಮುನಿಯ || (೬೬೬)

(ಬೆಟ್ಟಗಳನ್+ಇಡಿಯುವನು)

ಕಾಡುಗಳನ್ನು ಕಡಿದು ಭೂಮಿಯನ್ನು ಮಟ್ಟಸ ಮಾಡುವವನು, ಬೆಟ್ಟಗಳನ್ನು ಒಡೆದು ಅದರ ಕಲ್ಲುಬಂಡೆಗಳನ್ನು ಉಪಯೋಗಿಸುವವನು, ಭೂಮಿಯನ್ನು ಪೂರ್ತಿಯಾಗಿ ಕೊರೆದು ಪಾತಾಳದವರೆಗೂ ಹೋಗುವವನು, ಸಮುದ್ರಗಳನ್ನು ದಾಟುವವನು ಮತ್ತು ಆಕಾಶವನ್ನು ಸೀಳಿ ಪಯಣಿಸುವವನು, ಸೃಷ್ಟಿಯ ಸ್ಥಾನದಲ್ಲಿ ಮುಂದಾಲೋಚನೆ ಇಲ್ಲದೆಯೇ, ಒಂದು ಕ್ರಿಯೆಯನ್ನು ಮಾಡದಿರುತ್ತಾನೆಯೇ?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

He cuts and clears forests, he pounds mountains into dust
He drills into the earth to the depth of nether world,
He crosses all oceans and tears off the starry sky,
Wouldn’t he rush at Nature at haste? – Marula Muniya
(Translation from "Thus Sang Marula Muniya" by Sri. Narasimha Bhat)

Monday, September 15, 2014

ಕರ್ಮಗಳನನುಕ್ಷಣಮುಮೆಸಗದಿಹನಾರಯ್ಯ (665)

ಕರ್ಮಗಳನನುಕ್ಷಣಮುಮೆಸಗದಿಹನಾರಯ್ಯ |
ಕರ್ಮಗಳ್ ತನಗಾಗಿ ನೈಜದಿಂ ತಾನೆ ||
ಉಣ್ಣಿಪ್ಪವದು ಫಲವ ಶೇಷಮಂ ಭುಕಿಸಲ್ಕೆ |
ಜನ್ಮಾಂತರದ ವಿಧಿಯೊ - ಮರುಳ ಮುನಿಯ || (೬೬೫)

(ಕರ್ಮಗಳನ್+ಅನುಕ್ಷಣಮುಂ+ಎಸಗದೆ+ಇಹನ್+ಆರಯ್ಯ)(ಉಣ್ಣಿಪ್ಪ+ಅದು)

ನಾವು ಪ್ರತಿಯೊಂದು ಕ್ಷಣವೂ ಏನಾದರೂ ಕರ್ಮಗಳನ್ನು ಮಾಡುತ್ತಲೇ ಇರುತ್ತೇವೆ. ಈ ರೀತಿಯಾಗಿ ಕರ್ಮಗಳನ್ನು ಮಾಡದಿರುವ ಮನುಷ್ಯರು ಯಾರೂ ಇಲ್ಲ. ಕರ್ಮಗಳು ಸಹಜವಾಗಿ ಅವುಗಳ ಫಲವನ್ನು ಮನುಷ್ಯನು ತಾನೇ ಉಣ್ಣುವಂತೆ ಮಾಡಿ, ಮಿಕ್ಕಿರುವುದನ್ನು ಅನುಭವಿಸಲು ಪುನಃ ಜನ್ಮಗಳನ್ನೆತ್ತುವಂತೆ ಮಾಡುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Is there anyone who is not engaged in activity every moment?
The action done for one’s own sake would make him
Eat their fruits and the soul passes through rebirths,
To experience the balance of his Karma – Marula Muniya (665)
(Translation from "Thus Sang Marula Muniya" by Sri. Narasimha Bhat)

Friday, September 12, 2014

ಜನನಿ ತನಯನನೆತ್ತಿಕೊಂಡಿರಲ್ ಬಿಸಿಯೊತ್ತು (664)

ಜನನಿ ತನಯನನೆತ್ತಿಕೊಂಡಿರಲ್ ಬಿಸಿಯೊತ್ತು |
ತನುವೊಂದಕಿನ್ನೊಂದರಿಂ ಪರಿವ ತೆರದಿ ||
ಮನುಜನೊಳು ಹಸಿವನಾಗಿಸೆ ಸೃಷ್ಟಿಯವನವಳ |
ಋಣವುಂಡು ಬೆಳೆಯುವನೊ - ಮರುಳ ಮುನಿಯ || (೬೬೪)

(ತನಯನಂ+ಎತ್ತಿಕೊಂಡು+ಇರಲ್)(ತನು+ಒಂದಕೆ+ಇನ್ನೊಂದರಿಂ)(ಮನುಜನ+ಒಳು)(ಹಸಿವನ್+ಆಗಿಸೆ)(ಸೃಷ್ಟಿ+ಅವನ್+ಅವಳ)

ತಾಯಿಯು ತನ್ನ ಮಗನನ್ನ ಎತ್ತಿಕೊಂಡಿರುವಾಗ ಅವರಿಬ್ಬರ ದೇಹಗಳ ಶಾಖವು ಒಬ್ಬರಿಂದ ಇನ್ನೊಬ್ಬರಿಗೆ ಹರಿಯುವಂತೆ, ಸೃಷ್ಟಿಯು ಮನುಷ್ಯನಲ್ಲಿ ಹಸಿವನ್ನುಂಟುಮಾಡಲು ಅವನು ಆಕೆಯ ಋಣವನ್ನು ಸೇವಿಸಿ ಬೆಳೆಯುತ್ತಾನೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

When mother lift up and embraces her child,
The warmth of the one’s body flows into the other
Likewise when Nature kindles hunger in man and feeds him
He grows up feeding on indebtedness – Marula Muniya (664)
(Translation from "Thus Sang Marula Muniya" by Sri. Narasimha Bhat)

Wednesday, September 10, 2014

ಋಣವ ತೀರಿಸಬೇಕು ಋಣವ ತೀರಿಸಬೇಕು (663)

ಋಣವ ತೀರಿಸಬೇಕು ಋಣವ ತೀರಿಸಬೇಕು |
ಋಣವ ತೀರಿಸಿ ಜಗತ್ಪ್ರಕೃತಿ ಲೇಖ್ಯದಲಿ ||
ಋಣ ಮತ್ತೆ ಬೆಳೆಯದವೊಲಿರುತ್ತಲಿ ಪುರಾಕೃತದ |
ಹೆಣವ ಸಾಗಿಸಬೇಕೋ - ಮರುಳ ಮುನಿಯ || (೬೬೩)

(ಜಗತ್+ಪ್ರಕೃತಿ)(ಬೆಳೆಯದವೊಲ್+ಇರುತ್ತಲಿ)

ನಮ್ಮ ಪೂರ್ವಾಜಿತದ ಸಾಲಗಳನ್ನು ತೀರಿಸುವುದಕ್ಕೋಸ್ಕರ ನಾವು ಈ ಜಗತ್ತಿಗೆ ಬಂದಿದ್ದೇವೆ. ಆದುದ್ದರಿಂದ ಈ ಸಾಲಗಳನ್ನು ತೀರಿಸುವುದು ನಮ್ಮ ಆದ್ಯ ಕರ್ತವ್ಯ. ಈ ಜಗತ್ತಿನ ಲೇಖನ(ಲೇಖ್ಯ)ದಲ್ಲಿರುವ ಸಾಲಗಳನ್ನು ನಾವು ಈ ಸಾಲಗಳು ಪುನಃ ಬೆಳೆಯದಂತೆ ನಮ್ಮ ಪೂರ್ವಾಜಿತದ ಹೆಣವನ್ನು ಸಾಗಿಸಬೇಕು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Debts must be settled, debts must be settled and settling all debts,
We must see to it that debts don’t grow any longer
In the records of the world and nature and at the same time
We must carry the corpse of past Karma to its cremation ground – Marula Muniya (663)
(Translation from "Thus Sang Marula Muniya" by Sri. Narasimha Bhat)

Tuesday, September 9, 2014

ಪ್ರಾರಭ್ದವಾಸನಾ ಋಣ ಗುಣೋತ್ಕರಮೊಂದು (662)

ಪ್ರಾರಭ್ದವಾಸನಾ ಋಣ ಗುಣೋತ್ಕರಮೊಂದು |
ಪೌರುಷದ ಸಾಂಪ್ರತ ವಿವೇಕಮೊಂದಿಂತು ||
ಹೋರುತಿರೆ ನರನೆರಡು ಪಕ್ಷಗಳ್ ನ್ಯಾಯಮಂ |
ತೀರುಗೊಳಿಪಂ ಸ್ವಾಮಿ - ಮರುಳ ಮುನಿಯ || (೬೬೨)

(ಗುಣ+ಉತ್ಕರಂ+ಒಂದು)(ವಿವೇಕಂ+ಒಂದು+ಇಂತು)(ಹೋರುತ+ಇರೆ)(ನರನ್+ಎರಡು)

ಹಿಂದಿನ ಜನ್ಮಗಳ ಕರ್ಮಗಳಿಂದ(ಪ್ರಾರಬ್ಧ) ಹುಟ್ಟಿದ ಬಯಕೆಗಳ(ವಾಸನೆ) ಋಣಗಳನ್ನು ತೀರಿಸುವ ಸ್ವಭಾವಗಳ ರಾಶಿ(ಉತ್ಕರ) ಒಂದು ಕಡೆ. ಸದ್ಯ ಇರುವ ಪ್ರಪಂಚಕ್ಕೆ ಸಂಬಂಧಪಟ್ಟ ಉಚಿತವಾದ (ಸಾಂಪ್ರತ) ಪೌರುಷದ ವಿವೇಚನಾಶಕ್ತಿ ಇನ್ನೊಂದು ಕಡೆ. ಇವೆರಡು ಪಕ್ಷಗಳ ನಡುವೆ ಮನುಷ್ಯನು ಹೋರಾಡುತ್ತಿರಲಾಗಿ, ಪರಮಾತ್ಮನು ನ್ಯಾಯವನ್ನು ತೀರ್ಪುಗೊಳಿಸುತ್ತಾನೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The debts of past Karma and instincts are on one side,
Your wisdom and manliness are on another side,
These two sides in man fight for justice,
The Lord would deliver His verdict in time – Marula Muniya
(Translation from "Thus Sang Marula Muniya" by Sri. Narasimha Bhat)

Monday, September 8, 2014

ಮುಗಿಲಿಂದಿಳಿದು ನೆಲವನಿನ್ನುಮಾನದಿಹ ಪನಿ (661)

ಮುಗಿಲಿಂದಿಳಿದು ನೆಲವನಿನ್ನುಮಾನದಿಹ ಪನಿ |
ಸೊಗ ಕುಡಿಯಲಿಕೆ ಕೆರೆಗಳೇತಕೆನ್ನುವನಾರ್? ||
ಅಗುಣ ಅಶರೀರ ಸತ್ತ್ವವ ನಿನಗೆ ಪಿಡಿದೀಯೆ |
ಸಗುಣಾಕೃತಿಯೆ ಘಟವೊ - ಮರುಳ ಮುನಿಯ || (೬೬೧)

(ಮುಗಿಲಿಂದ+ಇಳಿದು)(ನೆಲವಂ+ಇನ್ನುಂ+ಆನದೆ+ಇಹ)(ಕೆರೆಗಳ್+ಏತಕೆ+ಎನ್ನುವನ್+ಆರ್)(ಸಗುಣ+ಆಕೃತಿಯೆ)

ಮೋಡಲಿಂದಿದಿಳಿದು ಇನ್ನೂ ನೆಲವನ್ನು ಸೇರದಿರುವ ಮಳೆಯ ನೀರು ಅನುಭವಿಲಿಸಲಿಕ್ಕೆ ಸುಖವನ್ನುಂಟುಮಾಡುತ್ತದೆ. ಆ ನೀರನ್ನು ಕುಡಿಯಲು ಕೆರೆಗಳು ಏಕೆ ಬೇಕೆಂದು ಯಾರಾದರೂ ಹೇಳಿಯಾರೇನು? ಸ್ವಾಭಾವತೀತ ಮತ್ತು ಶರೀರವಿಲ್ಲದ ಪರಮಾತ್ಮನೆಂಬ ಸತ್ತ್ವವನ್ನು ನಿನಗೆ ಹಿಡಿದುಕೊಟ್ಟಿರಲು, ಸ್ವಭಾವಗಳಿಂದ ಕೂಡಿದ ಆಕೃತಿಯೇ ಈ ಮನುಷ್ಯ ಎಂಬ ಗಡಿಗೆ (ಘಟ).
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Who would say the lakes aren’t necessary for one to drink
The drops from clouds that have not yet reached the earth?
The image with form is the most suitable pot
For you to hold the formless and attribute less
Divine Substance – Marula Muniya (661)
(Translation from "Thus Sang Marula Muniya" by Sri. Narasimha Bhat)

Friday, September 5, 2014

ಗಿಡದಿ ಹೂ ನಗುತಲಿರೆ ನೋಡಿ ನಲಿವನು ಜಾಣ (660)

ಗಿಡದಿ ಹೂ ನಗುತಲಿರೆ ನೋಡಿ ನಲಿವನು ಜಾಣ |
ಗುಡಿಗದನು ಕೊಂಡೊಯ್ವೆನೆನ್ನುವನು ಭಕುತ ||
ಮಡದಿ ಮಕ್ಕಳ ಮುಡಿಗದೆನ್ನುವನು ಸಂಸಾರಿ |
ಸಡಲದೆದೆಯವನಾರು? - ಮರುಳ ಮುನಿಯ || (೬೬೦)

(ನಗುತಲ್+ಇರೆ)(ಗುಡಿಗೆ+ಅದನು)(ಕೊಂಡು+ಒಯ್ವೆನು+ಎನ್ನುವನು)(ಮುಡಿಗೆ+ಅದು+ಎನ್ನುವನು)(ಸಡಲದ+ಎದೆಯವನು+ಆರು)

ಪ್ರಕೃತಿಯ ಸೊಬಗನ್ನು ಕಂಡು ಸಂತೋಷಪಡುವವನು ಒಂದು ಗಿಡದಲ್ಲಿ ಹುಟ್ಟಿರುವ ಹೂವನ್ನು ಕೀಳದೆಯೇ ನೋಡಿ ನಲಿಯುತ್ತಾನೆ. ಈ ಹೂವನ್ನು ತೆಗೆದುಕೊಂಡು ಹೋಗಿ ದೇವಸ್ಥಾನದಲ್ಲಿರುವ ದೇವರಿಗೆ ಸಮರ್ಪಿಸುತ್ತೇನೆಂದು ಒಬ್ಬ ಭಕ್ತನು ಹೇಳುತ್ತಾನೆ. ಇದು ನನ್ನ ಹೆಂಡತಿ, ಮಕ್ಕಳ ಮುಡಿಗಾಗುತ್ತದೆನ್ನುವವನು ಸಂಸಾರಿ. ಈ ಮೂರೂ ವಿಧವಾದ ಅನುಭವವನ್ನು ಕಂಡು ತನ್ನ ಹೃದಯವನ್ನು ಸಡಿಲಿಸದಿರುವವನು ಯಾರಿದ್ದಾನೆ?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

One who can enjoy flowers smiling on a plant is really wise,
One who chooses to offer them to the temple deity is a devotee,
One who plucks them for his wife and children is a householder
Is there any one unmoved in such situation? – Marula Muniya (660)
(Translation from "Thus Sang Marula Muniya" by Sri. Narasimha Bhat)

Thursday, September 4, 2014

ಪಾಳು ಬಾವಿಗೆ ಬಿದ್ದು ಪುಲಿಯಂಜಿಕೆಯಿನೆಗರಿ (659)

ಪಾಳು ಬಾವಿಗೆ ಬಿದ್ದು ಪುಲಿಯಂಜಿಕೆಯಿನೆಗರಿ |
ವ್ಯಾಳಕೆಳಗಿರೆ ಬದಿಯತಬ್ಬಿ ನಡುಗುವವಂ ||
ಮೇಲಣಿಂದುದುರಿದರಲಿನ ರಸಕೆ ಬಾಯೊಡ್ಡೆ |
ಬಾಳರಿತ ಯೋಗಮದು - ಮರುಳ ಮುನಿಯ || (೬೫೯)

(ಪುಲಿ+ಅಂಜಿಕೆಯಿನ್+ಎಗರಿ)(ಮೇಲಣಿಂದ+ಉದುರಿದ+ಅರಲಿನ)(ಬಾಯ್+ಒಡ್ಡೆ)(ಯೋಗಂ+ಅದು)

ಒಬ್ಬ ಮನುಷ್ಯನನ್ನು ಒಂದು ಹುಲಿಯು ಅಟ್ಟಿಸಿಕೊಂಡು ಬಂದು, ಅವನು ಹೆದರಿಕೆಯಿಂದ ಓಡಿ ಹೋಗಿ ಹಾಳುಬಾವಿಯಲ್ಲಿ ಬಿದ್ದು, ಕೆಳಗೆ ನೋಡಿದರೆ ಒಂದು ಹಾವ(ವ್ಯಾಳ)ನ್ನು ಕಂಡು, ಅವನು ಪಕ್ಕದಲ್ಲಿರುವ ಬಾವಿಯ ಕಟ್ಟೆಯನ್ನು ತಬ್ಬಿಕೊಂಡಿರುವಾಗ, ಬಾವಿಯ ಮೇಲೆ ಇರುವ ಜೇನುಗೂಡಿನಿಂದ ಜೇನುತುಪ್ಪವು (ಅರಲ ರಸ) ಹನಿಹನಿಯಾಗಿ ಬೀಳುವುದನ್ನು ಕಂಡು, ಆ ಸಂಕಷ್ಟ ಸಮಯದಲ್ಲೂ, ಅವನ ಆಸೆಯು ಇಂಗದೆ, ಅವನು ತನ್ನ ಬಾಯನ್ನು ಆ ಜೇನುತುಪ್ಪದ ಹನಿಯನ್ನು ಕುಡಿಯಲು ತೆರೆಯುತ್ತಾನೆ. ಇದನ್ನು ಕಂಡು ಜೀವನವನ್ನು ಅರಿಯುವುದೇ ಒಂದು ಯೋಗ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Terrified by a chasing tiger one runs and falls into a dry well,
Down below he sees a cobra crawling and clings to the wall trembling,
From there itself he stretches his tongue to the dripping drops of honey,
That is the yoga practised by men well versed in life – Marula Muniya (659)
(Translation from "Thus Sang Marula Muniya" by Sri. Narasimha Bhat)

Wednesday, September 3, 2014

ಧಾನ್ಯವುಂಡಿಹ ಹೊಟ್ಟೆ ತುಂಬಿ ತೇಗುವುದೊಡನೆ (658)

ಧಾನ್ಯವುಂಡಿಹ ಹೊಟ್ಟೆ ತುಂಬಿ ತೇಗುವುದೊಡನೆ |
ನಾಣ್ಯಸಂಚಿಕೆಗಂತು ತಣಿವಪ್ಪುದುಂಟೆ? ||
ಪಣ್ಯವಾಗಿಸಿತೆಲ್ಲ ಮನುಜ ಬಂಧುತೆಯ ಹಣ |
ಸನ್ನೆಯದು ಕಲಿದೊರೆಗೆ - ಮರುಳ ಮುನಿಯ || (೬೫೮)

(ತೇಗುವುದು+ಒಡನೆ)(ನಾಣ್ಯಸಂಚಿಕೆಗೆ+ಅಂತು)(ತಣಿವು+ಅಪ್ಪುದು+ಉಂಟೆ)(ಪಣ್ಯ+ಆಗಿಸಿತು+ಎಲ್ಲ)(ಸನ್ನೆ+ಅದು)

ಊಟ ಮಾಡಿದ ನಂತರ ಹೊಟ್ಟೆ ತುಂಬಿ ತೃಪ್ತಿಯಿಂದ ತೇಗುತ್ತೇವೆ. ಆದರೆ ಎಷ್ಟು ಹಣವನ್ನು ಕೂಡಿಟ್ಟರೂ ತೃಪ್ತಿ ಏನಾದರೂ ಸಿಗುವುದೇ? ಹಣವೆನ್ನುವುದು ಮನುಷ್ಯ ಮನುಷ್ಯರ ಬಂಧುತ್ವವನ್ನು ಒಂದು ವ್ಯಾಪಾರ(ಪಣ್ಯ)ದ ವಸ್ತುವನ್ನಾಗಿ ಮಾಡಿದೆ. ಇದು ಕಲಿಯೆಂಬ ದೊರೆಯು ಜೀವನದಲ್ಲಿ ಕಾಲಿಡಲು ಚಿಹ್ನೆ (ಸನ್ನೆ).
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

When the stomach is full it sends out belches of satisfaction,
But would the money bag ever express such satisfaction?
Money has made all human relations quite commercial,
It is the symbol of Kali, the monarch of this age – Marula Muniya
(Translation from "Thus Sang Marula Muniya" by Sri. Narasimha Bhat)

Tuesday, September 2, 2014

ತಿನ್ನಲೊಳಿತೆನೆ ರಸನೆಯದು ಕುಕ್ಷಿಗೊಳಿತಹುದೆ? (657)

ತಿನ್ನಲೊಳಿತೆನೆ ರಸನೆಯದು ಕುಕ್ಷಿಗೊಳಿತಹುದೆ? |
ಕಣ್ಣೊಳಿತೆನುವುದೆಲ್ಲ ಹೃದಯಕೊಳಿತಹುದೇಂ? ||
ಅನ್ನಭೋಗಗಳಳಿಸದಾಶೆಯುಮದೊಂದಿಹುದು |
ನಿನ್ನೊಳರಹಸ್ಯವದು - ಮರುಳ ಮುನಿಯ || (೬೫೭)

(ತಿನ್ನಲ್+ಒಳಿತು+ಎನೆ)(ಕುಕ್ಷಿಗೆ+ಒಳಿತು+ಅಹುದೆ)(ಕಣ್ಣ್+ಒಳಿತು+ಎನುವುದೆಲ್ಲ)(ಹೃದಯಕೆ+ಒಳಿತು+ಅಹುದೇಂ)(ಅನ್ನಭೋಗಗಳ್+ಅಳಿಸದ+ಆಶೆಯುಂ+ಅದೊಂದು+ಇಹುದು)(ನಿನ್ನ+ಒಳರಹಸ್ಯ+ಅದು)

ನಾಲಿಗೆ(ರಸನೆಗೆ) ರುಚಿಕರವಾಗಿ ಕಂಡ ಪದಾರ್ಥಗಳೆಲ್ಲವೂ ಹೊಟ್ಟೆ(ಕುಕ್ಷಿ)ಗೆ ಸಹ ಒಳ್ಳೆಯದನ್ನು ಮಾಡುತ್ತದೋ? ಕಣ್ಣಿಗೆ ಸುಂದರವಾಗಿ ಕಂಡ ವಸ್ತುಗಳೆಲ್ಲವೂ ಹೃದಯಕ್ಕೆ ಹಿತಕಾರಿಯೇ? ತಿನಿಸುಗಳ ಸುಖಾನುಭವಗಳು ತೃಪ್ತಿಪಡಿಸದಂತಹ ಒಂದು ಬಯಕೆ ಇದೆ. ಅದು ನಿನ್ನೊಳಗಿರುವ ಗುಟ್ಟು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

“Delicious to eat’ the tongue may say, but is it good for stomach?
‘Beautiful it is’, the eyes may say, but is it good for heart?
There’s a desire which food and other enjoyments cannot satisfy
That is your inner secret – Marula Muniya (657)
(Translation from "Thus Sang Marula Muniya" by Sri. Narasimha Bhat)

Thursday, August 28, 2014

ಎನ್ನ ಹಣವೆನ್ನ ಹೆಸರೆನ್ನ ಮನೆಯೆನ್ನ ಜನ (656)

ಎನ್ನ ಹಣವೆನ್ನ ಹೆಸರೆನ್ನ ಮನೆಯೆನ್ನ ಜನ - |
ವೆನ್ನುತ್ತಲನ್ಯರದು ಬೇರಿಹುದೆನುತ್ತೆ ||
ಭಿನ್ನಗೊಳಿಸಿಬ್ಭಾಗ ಲೋಕವನು ಮಾಡುವುದು |
ಪುಣ್ಯಪದವಲ್ಲವದು - ಮರುಳ ಮುನಿಯ || (೬೫೬)

(ಜನ+ಎನ್ನುತ್ತಲ್+ಅನ್ಯರ್+ಅದು)(ಬೇರೆ+ಇಹುದು+ಎನುತ್ತೆ)(ಭಿನ್ನಗೊಳಿಸಿ+ಇಬ್ಭಾಗ)(ಪುಣ್ಯಪದ+ಅಲ್ಲ+ಅದು)

ಇದು ನನ್ನ ಸಂಪತ್ತು, ನಾನು ಗಳಿಸಿದ ಹೆಸರು, ನನ್ನ ಮನೆ ಮತ್ತು ಇವರೆಲ್ಲರೂ ನನ್ನ ಜನಗಳು ಮತ್ತು ಮಿಕ್ಕಿದುದೆಲ್ಲಾ ಬೇರೆಯವರೆಂದು, ಭೇದ ಭಾವ ಮಾಡಿ ಜಗತ್ತನ್ನು ಭಿನ್ನಗೊಳಿಸುವುದು ಪುಣ್ಯಮಾರ್ಗವಲ್ಲ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Saying ‘My money, my name, my house and my people’
You exclude others and distance them away,
Thus you divide the whole world into two,
This is not righteous – Marula Muniya (656)
(Translation from "Thus Sang Marula Muniya" by Sri. Narasimha Bhat)

Wednesday, August 27, 2014

ದ್ರುತತೆಯುಂ ದೃಢತೆಯುಂ ಕೂಡೆ ರಥಪಯಣ ಸುಖ (655)

ದ್ರುತತೆಯುಂ ದೃಢತೆಯುಂ ಕೂಡೆ ರಥಪಯಣ ಸುಖ |
ಹಿತವಂತು ಜನಕೆ ಲೋಕವ್ಯವಸ್ಥೆಯಲಿ ||
ಜೊತೆಗೂಡೆ ಸಹಜ ವಿಕಸನೆ ಶಾಸನದ ನಿಯತಿ |
ಮಿತಮುಭಯಮಿರೆ ಧರ್ಮ - ಮರುಳ ಮುನಿಯ || (೬೫೫)

(ಹಿತ+ಅಂತು)(ಮಿತಂ+ಉಭಯಂ+ಇರೆ)

ವೇಗ (ದ್ರುತತೆ)ವಾಗಿರುವುದು ಮತ್ತು ನಿಶ್ಚಲತೆಯಿಂದಿರುವುದೆರಡೂ ಸೇರಿದರೆ ರಥದ ಪ್ರಯಾಣವು ಸುಖಕರವಾಗಿರುತ್ತದೆ. ಲೋಕದ ಆಡಳಿತ ನಡೆಸುವ ಏರ್ಪಾಟಿನಲ್ಲೂ ಸಹಜ ಪ್ರಗತಿಯ ಜತೆಗೆ, ಶಾಸನದ ಕಟ್ಟುಪಾಡುಗಳು ಸೇರಿಕೊಂಡರೆ ಜನಗಳಿಗೆ ಒಳ್ಳೆಯದಾಗುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Car ride becomes comfortable when speed and stability complement each other
This is good to all beings even in the management of worldly affairs.
Dharma it is when natural development and rule of law
Are balanced in moderate measures – Marula Muniya
(Translation from "Thus Sang Marula Muniya" by Sri. Narasimha Bhat)

Tuesday, August 26, 2014

ಅಮನಸ್ಕನಾಗು ನೀಂ ಮಮತೆಯೆಲ್ಲವ ನೀಗು (654)

ಅಮನಸ್ಕನಾಗು ನೀಂ ಮಮತೆಯೆಲ್ಲವ ನೀಗು |
ಭ್ರಮಣೆಯ ಪುರದ್ವಂದ್ವವೀಥಿಯಲಿ ಸಾಗು ||
ಅಮಲ ಸತ್ತ್ವಾಂಬುಧಿಯ ವಿಮಲ ವೀಚೀತಲ- |
ಸ್ತಿಮಿತ ಜಲದೊಡಲಲಿರು - ಮರುಳ ಮುನಿಯ || (೬೫೪)

(ಅಮನಸ್ಕನ್+ಆಗು)(ಸತ್ತ್ವಾ+ಅಂಬುಧಿಯ)(ಜಲದ+ಒಡಲಲಿ+ಇರು)

ನೀನು ಮನೋವ್ಯಾಪಾರವಿಲ್ಲದವನ(ಅಮನಸ್ಕ)ಂತಾಗು. ಸ್ವಾರ್ಥ, ಮೋಹ ಮತ್ತು ಅಹಂಕಾರಗಳನ್ನು ಕಳೆದುಕೊ. ಮಂಕುಗೊಳಿಸುವ ಜಟಿಲತೆಯಿಂದ ಕೂಡಿರುವ ಪೇಟೆ ಹಾದಿಯಲ್ಲಿ ನಡೆ. ಸ್ವಚ್ಛ(ಅಮಲ)ವಾಗಿರುವ ಸಾರದ ಸಮುದ್ರ(ಅಂಬುಧಿ)ದ ಪವಿತ್ರವಾದ (ವಿಮಲ) ಅಲೆ(ವೀಚಿ)ಗಳ ತಳಭಾಗದ ನಿಶ್ಚಲ(ಸ್ತಿಮಿತ)ವಾಗಿರುವ ನೀರಿನ ಒಡಲಿನಲ್ಲಿರು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Be waveless in mind and renounce all attachments,
Walk on the city streets of duality and complete your tour,
Rest in the calm bosom of the pure ocean of all virtuous qualities
Deep under the blemishlesss waves – Marula Muniya
(Translation from "Thus Sang Marula Muniya" by Sri. Narasimha Bhat)

Monday, August 25, 2014

ಆವೊಂದು ವಸ್ತುವಂ ಪೂರ್ಣದಿಂ ತಿಳಿದಿರಲು (653)

ಆವೊಂದು ವಸ್ತುವಂ ಪೂರ್ಣದಿಂ ತಿಳಿದಿರಲು |
ಜೀವಿತದ ಮಿಕ್ಕೆಲ್ಲಮಂ ತಿಳಿಯಲಹುದೋ ||
ಆ ವಿದ್ಯೆಯಂ ಗಳಿಸು ಮೊದಲೆಲ್ಲಕಿಂತಲದು |
ದೀವಿಗೆಯೊ ಬಾಳಿರುಳ್ಗೆ - ಮರುಳ ಮುನಿಯ || (೬೫೩)

(ತಿಳಿಯಲ್+ಅಹುದೋ)(ಮೊದಲ್+ಎಲ್ಲಕಿಂತಲ್+ಅದು)(ಬಾಳ್+ಇರುಳ್ಗೆ)

ನೀನು ಯಾವ ಒಂದು ವಸ್ತುವನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡಿರುವೆಯಾದರೆ, ಜೀವನದಲ್ಲಿರುವ ಮಿಕ್ಕೆಲ್ಲ ವಸ್ತುಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆಯೋ, ಬೇರೆ ಏನನ್ನಾದರೂ ಕಲಿಯುವುದಕ್ಕಿಂತ ಮೊದಲು, ಆ ವಿದ್ಯೆಯನ್ನು ಸಂಪಾದಿಸು. ಅದು ನಿನ್ನ ಜೀವನದ ರಾತ್ರಿಗೆ(ಇರುಳ್) ದೀಪ(ದೀವಿಗೆ)ವಾಗಿರುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

There is one thing by knowing which in full,
One can know all other things of life.
Acquire that knowledge as it is more important than all else,
It is light for the night of life - Marula Muniya (653)
(Translation from "Thus Sang Marula Muniya" by Sri. Narasimha Bhat)

Friday, August 22, 2014

ನೆಲವರ್ಧ ಜಲವರ್ಧ ಸೇರಲೀ ಭೂಗೋಳ (652)

ನೆಲವರ್ಧ ಜಲವರ್ಧ ಸೇರಲೀ ಭೂಗೋಳ |
ತಲೆಯರ್ಧವೆದೆಯರ್ಧ ಮನುಜ ಸಂಸಾರ ||
ನಲಿವರ್ಧವಳಲರ್ಧ ಮನುಜ ಜೀವಿತಸಾರ |
ಕಲಿತಿದನು ಬಾಳೆಲವೊ - ಮರುಳ ಮುನಿಯ || (೬೫೨)

(ತಲೆ+ಅರ್ಧ+ಎದೆ+ಅರ್ಧ)(ನಲಿವು+ಅರ್ಧ+ಅಳಲು+ಅರ್ಧ)

ನಾವು ವಾಸಿಸುತ್ತಿರುವ ಪ್ರಪಂಚವು ಅರ್ಧ ನೆಲ ಮತ್ತು ಅರ್ಧ ನೀರಿನಿಂದ ಕೂಡಿಕೊಂಡಿದೆ. ಮನುಷ್ಯನ ಸಂಸಾರವಾದರೋ ಅರ್ಧ ಬುದ್ಧಿಶಕ್ತಿ ಮತ್ತು ಅರ್ಧ ಹೃದಯವನ್ನವಲಂಬಿಸಿ ಸಾಗುತ್ತದೆ. ಮನುಷ್ಯನ ಬಾಳುವೆಯ ತಿರುಳು ಅರ್ಧ ಸಂತೋಷ ಮತ್ತು ಅರ್ಧ ದುಃಖಗಳನ್ನೊಳಗೊಂಡಿದೆ. ನೀನು ಇದನ್ನು ಅರಿತುಕೊಂಡು ನಿನ್ನ ಜೀವನವನ್ನು ಸಾಗಿಸು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Half of this world is earth and the other half is water,
Half of humanity is strong in head and the other half is strong in heart,
Half of human life-substance is happiness and the other half is sorrow,
Learn this and live well – Marula Muniya (652)
(Translation from "Thus Sang Marula Muniya" by Sri. Narasimha Bhat)

Thursday, August 21, 2014

ಪೌರುಷಪರೀಕ್ಷೆ ನಿತ್ಯದ ಕೃತ್ಯ ದೈವಕ್ಕೆ (651)

ಪೌರುಷಪರೀಕ್ಷೆ ನಿತ್ಯದ ಕೃತ್ಯ ದೈವಕ್ಕೆ- |
ದಾರನುಮದೆಂದುಮದು ಶೋಧಿಸದೆ ಬಿಡದು ||
ದಾರುಣದಿನೋ ವಾರುಣಿಯಿನೋ ಎಂತೊ ಅದು |
ಧೀರತೆಯ ಪರಿಕಿಪುದು - ಮರುಳ ಮುನಿಯ || (೬೫೧)

(ದೈವಕ್ಕೆ+ಅದು+ಆರನುಂ+ಅದು+ಎಂದುಂ+ಅದು)

ಮನುಷ್ಯನ ಪೌರುಷವನ್ನು ಪರೀಕ್ಷೆಗಳಿಗೊಳಪಡಿಸುವುದು ದೈವದ ಪ್ರತಿನಿತ್ಯದ ಕೆಲಸ. ಅದು ಎಂದೆಂದಿಗೂ ಮತ್ತು ಯಾರನ್ನೂ ಪರೀಕ್ಷೆಗೆ ಒಳಗಾಗಿಸದೆ ಬಿಡದು. ಕ್ರೌರ್ಯ(ದಾರುಣ)ದಿಂದಲೋ ಅಥವಾ ಮತ್ತೇರಿಸುವ ಪದಾರ್ಥಗಳಿಂದಲೋ(ವಾರುಣಿ) ಹೇಗಾದರೂ ಸರಿ ಅದು ಅವನ ಧೈರ್ಯ ಮತ್ತು ದಿಟ್ಟತವವನ್ನು ಪರೀಕ್ಷಿಸುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Testing human valour is a daily routine to Fate
He would never exempt anyone but would always test every one,
Torturing or intoxicating or somehow,
He would never rest till He tests human valour – Marula Muniya (651)
(Translation from "Thus Sang Marula Muniya" by Sri. Narasimha Bhat)

Wednesday, August 20, 2014

ನರಕೃತ್ಯವೇಂ ನಶ್ಯ ಕಾಲವಶ್ಯವದೆಂಬ (650)

ನರಕೃತ್ಯವೇಂ ನಶ್ಯ ಕಾಲವಶ್ಯವದೆಂಬ |
ಕೊರಗಿಂದಲೆದೆ ಕುಗ್ಗಿ ಜೀವ ಕುಸಿವಂದು ||
ಸ್ಮರಿಸಾದಿಯಿಂ ಜಗದೊಳೆಡೆಬಿಡದೆ ಪರಿಯುತಿಹ |
ಪುರುಷತಾವಾಹಿನಿಯ - ಮರುಳ ಮುನಿಯ || (೬೫೦)

(ಕಾಲವಶ್ಯ+ಅದು+ಎಂಬ)(ಕೊರಗಿಂದಲ್+ಎದೆ)(ಸ್ಮರಿಸು+ಆದಿಯಿಂ)(ಜಗದ+ಒಳು+ಎಡೆಬಿಡದೆ)()

ಮನುಷ್ಯನ ಕೃತಿಗಳೆಲ್ಲವೂ ನಾಶವಾಗಿ ಹೋಗುವಂತಹುವು ಮತ್ತು ಅದು ಕಾಲನ ಅಧೀನದಲ್ಲಿರುವುದೆಂಬ ದುಃಖದಿಂದ ಹೃದಯ ಅಲುಗಾಡಿ ಕುಗ್ಗಿಹೋಗಿ ಜೀವವು ಕುಸಿದು ಬೀಳುವಂತಾದಾಗ, ಜಗತ್ತಿನಲ್ಲಿ ಮೊದಲಿನಿಂದಲೂ ನಿರಂತರವಾಗಿ ಹರಿಯುತ್ತಿರುವ ಪುರುಷತ್ವದ ಪ್ರವಾಹ(ವಾಹಿನಿ)ದ ಬಗ್ಗೆ ಚಿಂತಿಸು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

When you become disheartened and when your soul sinks down
Bemoaning that human achievements are short-lived and subject to Time’s onslaught
Invoke the ceaseless torrent of heroism flowing in the world,
From time immemorial – Marula Muniya (650)
(Translation from "Thus Sang Marula Muniya" by Sri. Narasimha Bhat)

Tuesday, August 19, 2014

ಜಗದ ಕಡಲಿನ ನಡುವೆ ನಗವಾಗಿ ನೀಂ ನಿಲ್ಲು (649)

ಜಗದ ಕಡಲಿನ ನಡುವೆ ನಗವಾಗಿ ನೀಂ ನಿಲ್ಲು |
ನಗುವಹುದು ಸುತ್ತಲಿನ ತೆರೆಮೊರೆತವಂದು ||
ಭಗವಂತನದು ಲೋಕ ನಮದಲ್ಲವೆನೆ ಜನತೆ |
ಹಗೆವರೆಂತವರಿವರು? - ಮರುಳ ಮುನಿಯ || (೬೪೯)

(ನಗು+ಅಹುದು)(ತೆರೆಮೊರೆತವು+ಅಂದು)(ನಮದು+ಅಲ್ಲ+ಎನೆ)(ಹಗೆವರು+ಎಂತು+ಅವರ್+ಇವರು)

ಜಗತ್ತೆಂಬ ಸಮುದ್ರದ ಮಧ್ಯದಲ್ಲಿ ನೀನು ಒಂದು ಬೆಟ್ಟ(ನಗ)ದಂತೆ ನಿಂತುಕೊ. ಸುತ್ತಲೂ ಇರುವ ಅಲೆಗಳ ಭೋರ್ಗರೆಯುವ ಧ್ವನಿಗಳು ಆವಾಗ ನಿನಗೆ ನಗುವಾಗಿ ಕೇಳಿಸುತ್ತದೆ. ಇದು ಪರಮಾತ್ಮನ ಲೋಕ, ನಮ್ಮದಲ್ಲವೆಂದು ಜನಗಳು ಹೇಳಿದರೆ, ಅವರು ಒಬ್ಬೊರನ್ನೊಬ್ಬರು ಹೇಗೆ ತಾನೇ ದ್ವೇಷಿಸುತ್ತಾರೆ?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Stand firm like the mountain in the midst of this ocean, the world
Then the roaring waves will be transformed into pearls of laughter,
“This World is not ours but it is God’s”, when people think so
How can they hate one another? – Marula Muniya
(Translation from "Thus Sang Marula Muniya" by Sri. Narasimha Bhat)

Monday, August 18, 2014

ನಿರವಧಿಯ ಕಾಲದಂಶವೆ ನಮ್ಮ ಘಟಿ ವಿಘಟಿ (648)

ನಿರವಧಿಯ ಕಾಲದಂಶವೆ ನಮ್ಮ ಘಟಿ ವಿಘಟಿ |
ಪರಬೊಮ್ಮನೊಂದಂಶ ಜೀವವಾದಂತೆ ||
ಧರೆಯರೆಕ್ಷಣದ ಬಾಳೆಲೆ ಬರಿದದೆನ್ನದಿರು |
ಕ್ಷರವೆ ಮುಖವಕ್ಷರಕೆ - ಮರುಳ ಮುನಿಯ || (೬೪೮)

(ಕಾಲದ+ಅಂಶವೆ)(ಪರಬೊಮ್ಮನ+ಒಂದು+ಅಂಶ)(ಜೀವವ+ಆದಂತೆ)(ಧರೆಯ+ಅರೆಕ್ಷಣದ)(ಮುಖ+ಅಕ್ಷರಕೆ)

ಅಳೆಯಲಿಕ್ಕೆ ಸಾಧ್ಯವಾಗದ ಕಾಲದ ಭಾಗವೇ ನಮ್ಮ ಕಾಲದ ಮಾಪನಗಳಾದ ೨೪ ನಿಮಿಷಗಳ ಘಟಕ (ಘಟಿ) ಮತ್ತು ೨೪ ಕ್ಷಣಗಳ ಘಟಕ (ವಿಘಟಿ). ಇದು ಪರಮಾತ್ಮನ ಒಂದು ಭಾಗವು ಜೀವವಾಗುವುದಕ್ಕೆ ಹೋಲಿಸಬಹುದು. ಭೂಮಿಯ (ಧರೆಯ) ಮೇಲಿನ ನಮ್ಮ ಒಂದು ಅರ್ಧಕ್ಷಣದ ಬಾಳು ಕೇವಲ ಶೂನ್ಯವೆನ್ನಬೇಡ. ಅಮರತ್ವದ (ಅಕ್ಷರ) ಮುಖವೇ ನಶ್ವರತೆ (ಕ್ಷರ).
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Our hours and minutes are parts of eternal time,
Just as our soul is a part of the Infinite God,
Say not that life in this world is momentary and hollow,
Ephemeral is the face of the Eternal – Marula Muniya
(Ephemeral: lasting for a very short time)
(Translation from "Thus Sang Marula Muniya" by Sri. Narasimha Bhat)

Friday, August 8, 2014

ಅಕ್ಷಯ್ಯವದು ನೋಡು ಲೋಕದಿತಿಹಾಸದಲಿ (647)

ಅಕ್ಷಯ್ಯವದು ನೋಡು ಲೋಕದಿತಿಹಾಸದಲಿ |
ಸಾಕ್ಷಿಗಳದೆಷ್ಟು ಜನರದರ ನಿತ್ಯತೆಗೆ |
ರಕ್ಷೆ-ಶಿಕ್ಷೆಗಳಿಂದ ಜೀವನವನುದ್ಧರಿಸೆ |
ದೀಕ್ಷೆ ತೊಟ್ಟವರ ನೆನೆ - ಮರುಳ ಮುನಿಯ || (೬೪೭)

(ಅಕ್ಷಯ್ಯ+ಅದು)(ಲೋಕದ+ಇತಿಹಾಸದಲಿ)(ಸಾಕ್ಷಿಗಳ್+ಅದು+ಎಷ್ಟು)(ಜನರ್+ಅದರ)(ಜೀವನವನು+ಉದ್ಧರಿಸೆ)

ಪ್ರಪಂಚದ ಚರಿತ್ರೆಯಲ್ಲಿ ಪೌರುಷವು ಅಕ್ಷಯ(ಅಕ್ಷಯ್ಯ)ವಾಗಿರುವುದನ್ನು ನೋಡು. ಅದು ಸದಾಕಾಲವೂ ಇರುವುದೆನ್ನುವದರ ಪುರಾವೆಗೆ ಎಷ್ಟು ಜನರಿದ್ದಾರೆ ನೋಡು. ಕಾಪಾಡುವುದು ಮತ್ತು ದಂಡಿಸುವುದರಿಂದ ಜೀವನವನ್ನು ಮೇಲಕ್ಕೆತ್ತಲು, ಶಪಥ ತೊಟ್ಟವರನ್ನು ಜ್ಞಾಪಿಸಿಕೊ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

See the history of the world and know that it is deathless
Innumerable are the witnesses who advocated its eternity
Remember those noble souls who pledged to save and redeem other lives
Protecting and punishing – Marula Muniya
(Translation from "Thus Sang Marula Muniya" by Sri. Narasimha Bhat)

Thursday, August 7, 2014

ಪ್ರಾರಭ್ದಕರ್ಮವೆಂದಾತ್ಮಘಾತನೆ ಬೇಡ (646)

ಪ್ರಾರಭ್ದಕರ್ಮವೆಂದಾತ್ಮಘಾತನೆ ಬೇಡ |
ಪ್ರಾರಭ್ದ ಕಥೆಯಿರ್ಕೆ ಸುತ್ತ ಗತಿನೋಡು ||
ಪೌರುಷಂ ನಿತ್ಯನವ ಸತ್ಯನವ ಚೈತನ್ಯ |
ಮೀರು ಪ್ರಾರಭ್ದವನು - ಮರುಳ ಮುನಿಯ || (೬೪೬)

(ಪ್ರಾರಭ್ದಕರ್ಮ+ಎಂದು+ಆತ್ಮಘಾತನೆ)

ಹಿಂದಿನ ಜನ್ಮದ ಕರ್ಮದ ಫಲಗಳೆಂದು ನಿನ್ನ ಆತ್ಮಹಾನಿ ಮಾಡಿಕೊಳ್ಳಬೇಡ. ಅವುಗಳ ಕಥೆಯು ಇದ್ದರೂ ಸಹ ನಿನ್ನ ಸುತ್ತಮುತ್ತಲಿನ ಅವಸ್ಥೆಗಳನ್ನು ನೋಡು. ಪ್ರತಿನಿತ್ಯವೂ ಹೊಸ, ಹೊಸ ಪರಾಕ್ರಮಗಳನ್ನು ಕಾಣುತ್ತೀಯೆ. ಹೊಸ ಶಕ್ತಿಗಳೂ ಸಹ ಹುಟ್ಟುತ್ತಿರುತ್ತವೆ. ನೀನು ನಿನ್ನ ಪ್ರಾಚೀನ ಕರ್ಮಗಳ ಫಲಗಳನ್ನು ದಾಟಿ ಮುಂದೆ ಹೋಗು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Inflict on injury on self, blaming the effect of past karma,
Leave the past karma to its lot and see the conditions around.
Human endeavour is an energy that is ever new and ever true
Flaunt it and rise above the past karma – Marula Muniya (646)
(Translation from "Thus Sang Marula Muniya" by Sri. Narasimha Bhat)

Wednesday, August 6, 2014

ಹಾಸ್ಯ ರಸಿಕನೊ ದೇವನದರಿಂದಲಿಂತವನ (645)

ಹಾಸ್ಯ ರಸಿಕನೊ ದೇವನದರಿಂದಲಿಂತವನ |
ವಿಶ್ವಮಾಗಿಹುದವನ ಕೃತಿಯಕಟವಿಕಟಂ ||
ಶಾಶ್ವತವದೇಕಿಂತಶಾಶ್ವತದ ರೂಪಿಂ ರ- |
ಹಸ್ಯದೊಳ್ ಮರೆಯದಿರು - ಮರುಳ ಮುನಿಯ ||

(ದೇವನ್+ಅದರಿಂದಲಿ+ಇಂತು+ಅವನ)(ವಿಶ್ವಂ+ಆಗಿ+ಇಹುದು+ಅವನ)(ಕೃತಿ+ಅಕಟ+ವಿಕಟಂ)(ಶಾಶ್ವತವು+ಅದು+ಏಕೆ+ಇಂತು+ಅಶಾಶ್ವತದ)

ಪರಮಾತ್ಮನು ಹಾಸ್ಯ ಮತ್ತು ಅಣಕ ಮಾಡುವುದರಲ್ಲಿ ರಸಾಸ್ವಾದವನ್ನು ಬಲ್ಲವನು. ಆದುದರಿಂದ ಅವನು ಸೃಷ್ಟಿಸಿದ ವಿಶ್ವವು ಈ ರೀತಿ ಅಸಂಬದ್ಧತೆ (ಅಕಟವಿಕಟ)ಯಿಂದ ಕೂಡಿದೆ. ಆದರೆ ಸ್ಥಿರವಾಗಿರದಿರುವ ಆಕಾರಗಳಲ್ಲಿ ಸ್ಥಿರರೂಪ ಹೇಗೆ ಕಾಣಿಸಿಕೊಳ್ಳುತ್ತದೆ. ರಹಸ್ಯವು ಅವ್ಯಕ್ತವಾಗಿರದು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

God delights in fun and frolie and therefore,
His world is so grotesque and bizarre
But why is the Eternal this secretly playing
Assuming evanescent forms? – Marula Muniya (645)
(Translation from "Thus Sang Marula Muniya" by Sri. Narasimha Bhat)

Tuesday, August 5, 2014

ಜೀವನದ ವಿಸ್ತರಕೆ ಹೆಣ್ಣುಗಂಡಾವಶ್ಯ (644)

ಜೀವನದ ವಿಸ್ತರಕೆ ಹೆಣ್ಣುಗಂಡಾವಶ್ಯ |
ಭೂವಿಲಾಸದೊಳಿರ‍್ವರಾತ್ಮ ತಾಂ ಬೆಳೆಗುಂ ||
ಭಾವದನ್ಯೋನ್ಯದಿಂ ಬೇಳುವುದಾತ್ಮದ ರಾಜ್ಯ |
ಪಾವನವೊ ಜೀವಕ್ಕೆ - ಮರುಳ ಮುನಿಯ || (೬೪೪)

(ಹೆಣ್ಣು+ಗಂಡು+ಅವಶ್ಯ)(ಭೂವಿಲಾಸದೊಳ್+ಇರ‍್ವರ್+ಆತ್ಮ)(ಭಾವದ+ಅನ್ಯೋನ್ಯದಿಂ)(ಬೇಳುವುದು+ಆತ್ಮದ)

ಬಾಳು ವಿಸ್ತಾರವಾಗಿ ಹರಡಿಕೊಳ್ಳುವುದಕ್ಕೆ ಹೆಣ್ಣು ಮತ್ತು ಗಂಡುಗಳ ಭೇದವು ಅಗತ್ಯವಾಗಿ ಇರಬೇಕು. ಭೂಮಿಯು ವಿಹಾರದಲ್ಲಿ ಇವರಿಬ್ಬರ ಆತ್ಮಗಳು ತಾವಾಗಿ ತಾವೇ ವೃದ್ಧಿಯಾಗುತ್ತವೆ. ಪರಸ್ಪರ ಪ್ರೀತಿಯ ಸಂವೇದನೆಗಳಿಂದ ಅವುಗಳ ಆತ್ಮದ ರಾಜ್ಯವು ಬೆಳೆಯುತ್ತದೆ. ಇದು ಜೀವವನ್ನು ಪವಿತ್ರ(ಪಾವನ)ಗೊಳಿಸುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Essential are man and woman for the growth of life,
The souls of both would ripen in the worldly play,
The kingdom of self would expand in their emotional cordiality
This is a process of purification for the soul – Marula Muniya
(Translation from "Thus Sang Marula Muniya" by Sri. Narasimha Bhat)

Friday, July 11, 2014

ಜೀವ ಜೀವಮುವೊಂದು ಕೃಕಲಾಸ ಚಲವರ್ಣಿ (643)

ಜೀವ ಜೀವಮುವೊಂದು ಕೃಕಲಾಸ ಚಲವರ್ಣಿ |
ಭೂವಿಯದ್ವ್ಯಾಮರ್ದ ವಿಕೃತ ಮಧ್ಯಚರಿ ||
ಜೀವ ಜೀವಕೆ ಭೇದವಂತು ಭೋಜನ ಭೇದ |
ವ್ಯಾವರ್ತಿಸಖಿಲದಿಂ - ಮರುಳ ಮುನಿಯ || (೬೪೩)

(ಭೂ+ವಿಯತ್+ವ್ಯಾಮ+ಅರ್ದ)(ಭೇದ+ಅಂತು)(ವ್ಯಾವರ್ತಿಸು+ಅಖಿಲದಿಂ)

ಜೀವ ಮತ್ತು ಜೀವಿಯು ಕ್ಷಣಕ್ಷಣಕ್ಕೂ ಬಣ್ಣವನ್ನು ಬದಲಾಯಿಸುತ್ತಿರುವ ಒಂದು ಊಸರವಳ್ಳಿ(ಕೃಕಲಾಸ)ಯಂತೆ ಇರುತ್ತವೆ. ಭೂಮಿ ಮತ್ತು ಆಕಾಶ(ವಿಯತ್)ಗಳ ನಡುವಿನ ಒಂದು ಮಾರಿನಷ್ಟು(ವ್ಯಾಮ) ಜಾಗದಲ್ಲಿ ಬದಲಾವಣೆ ಹೊಂದಿದ ರೂಪದಲ್ಲಿ ಅವು ಚಲಿಸುತ್ತವೆ. ಒಂದು ಜೀವಕ್ಕೂ ಮತ್ತೊಂದು ಜೀವಿಗೂ ಈ ರೀತಿ ಅವು ಭುಜಿಸುವ ಬಗೆಯಲ್ಲಿಯೂ ವ್ಯತ್ಯಾಸಗಳಿರುತ್ತವೆ. ಇವು ಎಲ್ಲವೂ ಸಂಪೂರ್ಣವಾಗಿ ಪುನರಾವರ್ತಿತವಾಗುತ್ತಿರುತ್ತವೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Every being is a chameleon that frequently changes its colours
This being moves in all the space between the earth and the sky
The difference between soul and soul is like the difference form meal to meal
Surround the soul with the all pervading One – Marula Muniya
(Translation from "Thus Sang Marula Muniya" by Sri. Narasimha Bhat)

Wednesday, July 9, 2014

ಶ್ರಾವಿಯುಂ ಗಾಯಕನುಮೊಡವೆರೆತು ಸಂಗೀತ (642)

ಶ್ರಾವಿಯುಂ ಗಾಯಕನುಮೊಡವೆರೆತು ಸಂಗೀತ |
ಭಾವದ ಸಮಾಧಿಯೊಳಗೈಕ್ಯವಡೆವಂತೆ ||
ಜೀವವಿಶ್ವಗಳು ತತ್ತ್ವದ ನೆಲೆಯೊಳೊಂದಹುದು |
ದೈವಪ್ರಸಾದವೆಲೊ - ಮರುಳ ಮುನಿಯ || (೬೪೨)

(ಗಾಯಕನುಂ+ಒಡವೆರೆತು)(ಸಮಾಧಿ+ಒಳಗೆ+ಐಕ್ಯವಡೆವಂತೆ)(ನೆಲೆಯ+ಒಳು+ಒಂದು+ಅಹುದು)

ಹಾಡುವವನು ಮತ್ತು ಹಾಡನ್ನು ಆಲಿಸುವವರಿಬ್ಬರ ಸೇರುವಿಕೆಯಿಂದ ಸಂಗೀತವು ಜನಿಸಿ ಭಾವನೆಗಳ ಏಕಾಗ್ರತೆಯಲ್ಲಿ ಒಂದಾಗಿ ಸೇರುವಂತೆ, ಜೀವ ಮತ್ತು ಪ್ರಪಂಚಗಳು ತತ್ತ್ವದ ಆಶ್ರಯದಲ್ಲಿ ಒಂದುಗೂಡುತ್ತವೆ. ಇದು ಪರಮಾತ್ಮನ ಅನುಗ್ರಹ ಕಣಯ್ಯ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The musician and the audience come together and become one
In the unifying emotional absorption of music.
Likewise the soul and the universe become one in the Absolute
When rains the grace of God – Marula Muniya
(Translation from "Thus Sang Marula Muniya" by Sri. Narasimha Bhat)

Tuesday, July 8, 2014

ಸ್ತ್ರೀ ಪುರುಷ ಭೇದ ನೋಡು ಪರಸ್ಪರೋದ್ರೋಕಿ (641)

ಸ್ತ್ರೀ ಪುರುಷ ಭೇದ ನೋಡು ಪರಸ್ಪರೋದ್ರೋಕಿ |
ರೂಪಗುಣ ವಿವಿಧತೆಯಿನನ್ಯೋನ್ಯ ವಾಂಛೆ ||
ಸಂಪೂರ್ಣವಹುದೊಂದು ಜೀವವಿನ್ನೊಂದೊದವೆ |
ತಾಪವಂತೊದವದಿರೆ - ಮರುಳ ಮುನಿಯ || (೬೪೧)

(ಪರಸ್ಪರ+ಉದ್ರೋಕಿ)(ವಿವಿಧತೆಯಿನ್+ಅನ್ಯೋನ್ಯ)(ಸಂಪೂರ್ಣ+ಅಹುದು+ಒಂದು)(ಜೀವ+ಇನ್ನೊಂದು+ಒದವೆ)(ತಾಪ+ಅಂತುಉ+ಒದವದೆ+ಇರೆ)

ಗಂಡು ಮತ್ತು ಹೆಣ್ಣುಗಳ ವ್ಯತ್ಯಾಸಗಳನ್ನು ಗಮನಿಸು. ಆ ವ್ಯತ್ಯಾಸಗಳು ಒಬ್ಬರಿಂದೊಬ್ಬರು ಉದ್ರೇಕಗೊಳ್ಳುವಂತೆ ಮಾಡುತ್ತವೆ. ಅಂಗಾಂಗ ರೂಪ ಮತ್ತು ಮನೋಭಾವಗಳ ವಿವಿಧತೆಯಿಂದ ಪರಸ್ಪರ ಬಯಕೆ, ಪ್ರೀತಿಗಳುಂಟಾಗುತ್ತವೆ. ಒಂದು ಜೀವವು ಇನ್ನೊಂದು ಜೀವವನ್ನು ಕೂಡಿಕೊಂಡು ಸಮೃದ್ಧಿ(ಒದವು) ಹೊಂದಿದರೆ ಅದು ಸಂಪೂರ್ಣತೆಯನ್ನು ಹೊಂದುತ್ತದೆ. ಈ ರೀತಿಯಾಗದಿದ್ದರೆ ಅವುಗಳಿಗೆ ಸಂಕಟ(ತಾಪ)ವುಂಟಾಗುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The dissimilarities between man and woman ignite mutual fascination,
Desire for each other due to differences in physical features and natures,
Man or woman each becomes complete only when aided by the other
But anguish burns in each other when unaided by the other – Marula Muniya
(Translation from "Thus Sang Marula Muniya" by Sri. Narasimha Bhat)

Monday, July 7, 2014

ದಿನದಂತೆ ದಿನವಿಲ್ಲ ಮನದಂತೆ ಮನವಿಲ್ಲ (640)

ದಿನದಂತೆ ದಿನವಿಲ್ಲ ಮನದಂತೆ ಮನವಿಲ್ಲ |
ಜನಜನವು ಚಣಚಣವು ನವನವ್ಯಸೃಷ್ಟಿ ||
ಗುಣರುಚಿಗೆ ಮುಪ್ಪಿಲ್ಲವನುಭವಕೆ ಮಿತಿಯಿಲ್ಲ |
ಅನವರತ ಚಲಿತ ಜಗ - ಮರುಳ ಮುನಿಯ || (೬೪೦)

ಜಗತ್ತಿನಲ್ಲಿ ಒಂದು ದಿನದಂತೆ ಮತ್ತೊಂದು ದಿನ ಇರುವುದಿಲ್ಲ. ಹಾಗೆಯೇ ಒಂದು ಮನಸ್ಸಿನಂತೆ ಇನ್ನೊಂದು ಮನಸ್ಸಿರುವುದಿಲ್ಲ. ಪ್ರತಿಯೊಂದು ಕ್ಷಣವೂ ಜನಗಳು ಹೊಸ ಹೊಸದಾಗಿ ಸೃಷ್ಟಿಯಾಗುತ್ತಿರುತ್ತಾರೆ. ಸ್ವಭಾವ ಮತ್ತು ರುಚಿಗಳಿಗೆ ಮುಪ್ಪಿಲ್ಲ. ಅವು ಹೊಸ ಹೊಸದಾಗಿ ಬರುತ್ತಲೇ ಇರುತ್ತವೆ. ಅನುಭವಗಳಿಗೆ ಯಾವ ಮಿತಿಯೂ ಇಲ್ಲ. ಯಾವಾಗಲೂ ಹೊಸ, ಹೊಸ, ಅನುಭಗಳಾಗುತ್ತಿರುತ್ತವೆ. ಜಗತ್ತು ಈ ತರಹ ನಿರಂತರವಾಗಿ (ಅನವರತ) ಚಲಿಸುತ್ತಲೇ ಇರುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

No two days are alike and no two minds are similar,
Every man and every minute is a new novel creation,
Quality and taste never age and experience has no limits
The world is always vibrantly dynamic – Marula Muniya
(Translation from "Thus Sang Marula Muniya" by Sri. Narasimha Bhat)

Thursday, July 3, 2014

ಒಂದರಿಂದೆರಡಹುದು ಲೋಕ ಲೀಲೆಗವಶ್ಯ (639)

ಒಂದರಿಂದೆರಡಹುದು ಲೋಕ ಲೀಲೆಗವಶ್ಯ |
ಹೊಂದಿಕೆಯಿನಿರದೆರಡರಿಂದಹುದನರ್ಥ ||
ಅಂದವದು ಕಣ್ಗೆ ಕೈಗಂದದೆಯೆ ಹಾರುವುದು |
ಸುಂದರದ ಮಾಯೆಯದು - ಮರುಳ ಮುನಿಯ || (೬೩೯)

(ಒಂದರಿಂದ+ಎರಡು+ಅಹುದು)(ಲೀಲೆಗೆ+ಅವಶ್ಯ)(ಹೊಂದಿಕೆಯಿನ್+ಇರದೆ+ಎರಡರಿಂದ+ಅಹುದು+ಅನರ್ಥ)(ಕೈಗೆ+ಅಂದದೆಯೆ)

ಒಂದಾಗಿರುವುದರಿಂದ ಎರಡು ಆಗುವುದು ಲೋಕ ನಾಟಕಕ್ಕೆ ಅಗತ್ಯವಾಗಿದೆ. ಹೊಂದಿಕೆಯಿಂದಿರದಿದ್ದಲ್ಲಿ ಈ ಎರಡರಿಂದ ಕೇಡಾಗುವ ಸಂಭವವುಂಟು. ಅದು ನಮ್ಮ ಕಣ್ಣುಗಳಿಗೆ ಅಂದವಾಗಿ ಕಾಣುತ್ತದೆ. ಆದರೆ ನಮ್ಮ ಕೈಗಳಿಗೆ ನಿಲುಕದೆಯೇ ಹಾರಿಹೋಗುತ್ತದೆ. ಮಾಯೆಯ ಆಕರ್ಷಣೆಯಿದು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

One becoming two is unavoidable for the world-play to continue,
But discord between the two causes all confusions
It is fascinating to the eyes but it eludes the grasp
It is Maya the elegant – Marula Muniya (639)
(Translation from "Thus Sang Marula Muniya" by Sri. Narasimha Bhat)

Wednesday, July 2, 2014

ನೆಚ್ಚದಿರು ದೈವವನು ಬೆಚ್ಚದಿರದಾರಿಗಂ (638)

ನೆಚ್ಚದಿರು ದೈವವನು ಬೆಚ್ಚದಿರದಾರಿಗಂ |
ಎಚ್ಚರಿರು ನಿನ್ನ ಸತ್ತ್ವದಲಿ ನೀಂ ನಿಂತು ||
ಅಚ್ಚುಮೆಚ್ಚೇನಾದರಿರಲಿ ಲೋಕಕ್ಕೆ ಬಿಡು |
ರಚ್ಚೆ ನೀನೇ ನಿನಗೆ - ಮರುಳ ಮುನಿಯ || (೬೩೮)

(ನೆಚ್ಚದೆ+ಇರು)(ಬೆಚ್ಚದೆ+ಇರು+ಅದು+ಆರಿಗಂ)(ಎಚ್ಚರ+ಇರು)(ಅಚ್ಚುಮೆಚ್ಚು+ಏನಾದರು+ಇರಲಿ)

ದೈವವನ್ನು(ಅದೃಷ್ಟ/ವಿಧಿ) ನಂಬಿ ನಿನ್ನ ಕೆಲಸಗಳನ್ನು ಮಾಡಬೇಡ. ಹಾಗೆಯೇ ಪ್ರಪಂಚದಲ್ಲಿ ನೀನು ಯಾರಿಗೂ ಹೆದರಲೂ ಬೇಡ. ನಿನ್ನ ಬಲದಲ್ಲಿ ನಂಬಿಕೆಯನ್ನಿಟ್ಟು ಜಾಗರೂಕನಾಗಿ ನಡೆದುಕೊ. ಅತಿಶಯವಾಗಿ ಇಷ್ಟಪಡುವುದೇನಾದರೂ ಇದ್ದಲ್ಲಿ ಅದನ್ನು ಜಗತ್ತಿಗೇ ಬಿಟ್ಟುಕೊಡು. ಒಟ್ಟಿನಲ್ಲಿ ನಿನಗೆ ನೀನೇ ರಕ್ಷೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Don’t rely on Fate and fear not anyone
Be ever vigilant and rely on your own strength
If any happiness comes to you, leave it to the world
You are your own protector – Marula Muniya
(Translation from "Thus Sang Marula Muniya" by Sri. Narasimha Bhat)

Tuesday, July 1, 2014

ಬೆತ್ತಲೆಯೆ ನೀಂ ಬಂದೆ ಬೆತ್ತಲೆಯೆ ನೀಂ ಪೋಪೆ (637)

ಬೆತ್ತಲೆಯೆ ನೀಂ ಬಂದೆ ಬೆತ್ತಲೆಯೆ ನೀಂ ಪೋಪೆ |
ವಸ್ತ್ರವೇಷಗಳೆಲ್ಲ ನಡುವೆ ನಾಲ್ಕು ದಿನ ||
ಚಟ್ಟಕ್ಕೆ ನಿನ್ನನೇರಿಪ ಮುನ್ನ ನೀನಾಗಿ |
ಕಿತ್ತೆಸೆಯೊ ಕಂತೆಗಳ - ಮರುಳ ಮುನಿಯ || (೬೩೭)

(ವಸ್ತ್ರವೇಷಗಳು+ಎಲ್ಲ)(ನಿನ್ನನು+ಏರಿಪ)(ಕಿತ್ತು+ಎಸೆಯೊ)

ಪ್ರಪಂಚಕ್ಕೆ ನೀನು ಬಂದದ್ದು ಬೆತ್ತಲೆಯಾಗಿಯೇ ಮತ್ತು ಪ್ರಪಂಚದಿಂದ ನೀನು ಹೋಗುವುದೂ ಬೆತ್ತಲೆಯಾಗಿಯೇ ಹೌದು. ಮಧ್ಯ ಇರುವಷ್ಟು ಸಮಯ ನಿನ್ನ ದೇಹಕ್ಕೆ ಬಟ್ಟೆ ಬರೆಗಳನ್ನು ತೊಡಿಸಿ ಸಂತೋಷಪಡುತ್ತಿದ್ದೀಯೆ. ನಿನ್ನನ್ನು ಚಟ್ಟಕ್ಕೆ ಹಾಕುವ ಮುಂಚೆ ನೀನಾಗಿ ನೀನೇ ನಿನ್ನೆಲ್ಲ ಕಂತೆಗಳನ್ನೂ ಕಿತ್ತೆಸೆದು ಮುಕ್ತನಾಗು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Naked you come to this world and naked you depart it
All clothes and guises are only for a few days in between
Throw off all your burdens yourself
Before you are lifted up to the bier – Marula Muniya
(Translation from "Thus Sang Marula Muniya" by Sri. Narasimha Bhat)

Monday, June 30, 2014

ಶಿವನೀವ ವರಗಳತಿ ವಿವಿಧ ನೀನೆಚ್ಚರಿರು (636)

ಶಿವನೀವ ವರಗಳತಿ ವಿವಿಧ ನೀನೆಚ್ಚರಿರು |
ನವಮಲ್ಲಿಗೆಯ ನಡೂವೆ ನಗರಿದ್ದೀತು ||
ಸವಿಯಿನಮಲಾಗಿಪನು ಕಹಿಯಿಟ್ಟು ಪರಿಕಿಪನು |
ಅವನ ನೆನೆದೂಟವುಣು - ಮರುಳ ಮುನಿಯ || (೬೩೬)

(ಶಿವನು+ಈವ)(ವರಗಳ್+ಅತಿ)(ನೀನ್+ಎಚ್ಚರ್+ಇರು)(ನಾಗರ+ಇದ್ದೀತು)(ನೆನೆದು+ಊಟ+ಉಣು)

ಶಿವನು ನಮಗೆ ಕೊಡುವ ವರಗಳು ಬಹು ವಿಧಗಳಲ್ಲಿರುತ್ತವೆ. ಆದುದರಿಂದ ಅವುಗಳನ್ನು ಸ್ವೀಕರಿಸುವುವಾಗ ನೀನು ಜಾಗರೂಕನಾಗಿರಬೇಕು. ಘಮಘಮಿಸುವ ಮಲ್ಲಿಗೆಯ ಹೂವಿನರಾಶಿಗಳ ಮಧ್ಯದಲ್ಲಿ ನಾಗರಹಾವು ಇರುವ ಸಾಧ್ಯತೆಗಳಿವೆ. ರುಚಿಯಾಗಿರುವುದನ್ನು ನೀಡಿ ಮತ್ತೇರುವಂತೆ ಮಾಡುತ್ತಾನೆ, ಕಹಿಯಾಗಿರುವುದನ್ನು ಕೊಟ್ಟು ನಿನ್ನನ್ನು ಪರೀಕ್ಷೆಗೊಳಪಡಿಸುತ್ತಾನೆ. ಅವನನ್ನು ಸದಾಕಾಲವೂ ಜ್ಞಾಪಿಸಿಕೊಂಡು ಅವನಿಗೆ ಕೃತಜ್ಞತೆಯನ್ನು ಅರ್ಪಿಸುತ್ತಿರು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The gifts of Shiva are of many varieties and therefore be careful
A serpent there may be under fresh jasmine flowers
He makes you heady with delicious dishes and tests with bitter doses
Remember Him and take your food – Marula Muniya
(Translation from "Thus Sang Marula Muniya" by Sri. Narasimha Bhat)

Friday, June 27, 2014

ನಡೆಗೆ ನಡೆವಂತೆ ಲೋಗರ್ ಪ್ರಕೃತಿ ಚೋತಿತದಿ (635)

ನಡೆಗೆ ನಡೆವಂತೆ ಲೋಗರ್ ಪ್ರಕೃತಿ ಚೋತಿತದಿ  |
ಹುಡುಗಾಟ ಕುಡಕಾಟ ಮುಡುಕಾಟಗಳಲಿ ||
ಸಿಡುಕೇಕೆ? ಬರಿಯಾಟವೆಂದು ನೀನದನರಿತು |
ಬಿಡಿನಿಲ್ಲು ನಿನ್ನೊಳಗೆ - ಮರುಳ ಮುನಿಯ || (೬೩೫)

ಪ್ರಕೃತಿಯು ಹೇಗೆ ನಡೆಸುತ್ತದೆಯೋ ಹಾಗೆ ಜನಗಳು ಪ್ರಪಂಚದ ಹುಡುಗಾಟ, ತಡಕಾಟದಲ್ಲಿ, ಕುಕ್ಕಾಟ ಮತ್ತು ಮುದರಾಟದಲ್ಲಿ ನಿರತರಾಗುತ್ತಾರೆ. ಇದನ್ನು ಕಂಡು ನೀನು ಕೋಪಗೊಳ್ಳುವುದೇಕೆ? ಇವೆಲ್ಲ ಕ್ರಿಯೆಗಳು ಒಂದು ವಿನೋದವೆಂದು ತಿಳಿದು ಅಂತರಂಗದಲ್ಲಿ ಅವುಗಳಿಂದ ದೂರ ಸರಿದು ಏಕಾಂತನಾಗಿರು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Just as an act of free walk, human beings sometimes engage themselves
In childhood acts and acts causing pain and distortions, instigated by Nature
Don’t be annoyed by this but understand that it is mere play
Remain uninvolved in self – Marula Muniya (635)
(Translation from "Thus Sang Marula Muniya" by Sri. Narasimha Bhat)

Thursday, June 26, 2014

ಕಚ್ಚವೇಂ ನಿನ್ನ ಪಲ್ಗಳೆ ನಿನ್ನ ನಾಲಗೆಯ? (634)

ಕಚ್ಚವೇಂ ನಿನ್ನ ಪಲ್ಗಳೆ ನಿನ್ನ ನಾಲಗೆಯ? |
ಚುಚ್ಚದೇಂ ನಿನ್ನ ಕಣ್ಣನೆ ನಿನ್ನ ಬೆರಳು? ||
ಕಿಚ್ಚಹುದು ನಿನ್ನ ಭಾವ್ಯಕ್ಕೆ ನಿನ್ನ ಪೂರ್ವಿಕವೆ |
ಎಚ್ಚರಿರೆ ನಿನಗುಳಿವು - ಮರುಳ ಮುನಿಯ || (೬೩೪)

ನಿನ್ನ ಹಲ್ಲುಗಳೇ ಕೆಲವು ಸಲ ನಿನ್ನ ನಾಲಿಗೆಯನ್ನು ಕಚ್ಚುವುದಿಲ್ಲವೇನು? ಇನ್ನೂ ಕೆಲವು ಸಲ ನಿನ್ನ ಬೆರಳುಗಳೇ ನಿನ್ನ ಕಣ್ಣುಗಳನ್ನು ಚುಚ್ಚುವುದಿಲ್ಲವೇನು? ಹಾಗೆಯೇ ನಿನ್ನ ಭವಿಷ್ಯತ್ತಿಗೆ(ಭಾವ್ಯಕ್ಕೆ) ನಿನ್ನ ಪೂರ್ವಜನ್ಮದ ಕೃತಿಗಳೇ ದಹಿಸುವ ಸಾಧನಗಳಾಗಬಹುದು. ಆದ ಕಾರಣ ನೀನು ಸದಾ ಜಾಗರೂಕನಾಗಿದ್ದರೆ ಮಾತ್ರ ಉಳಿದುಕೊಳ್ಳುತ್ತೀಯೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Don’t your teeth bite your own tongue at times?
Doesn’t your finger at times prick your own eyes?
Your won past may set fire to your future
Constant vigil alone can enable you to survive – Marula Muniya (634)
(Translation from "Thus Sang Marula Muniya" by Sri. Narasimha Bhat)

Wednesday, June 25, 2014

ಮನುಜನೆಲ್ಲ ಕಲಾಚಮತ್ಕೃತಿಗಳುಂ ಪ್ರಕೃತಿ- (633)

ಮನುಜನೆಲ್ಲ ಕಲಾಚಮತ್ಕೃತಿಗಳುಂ ಪ್ರಕೃತಿ- |
ಯನುಕರಣಮವನ ಸಾಮಾಗ್ರಿಯವಳಿತ್ತ ||
ಋಣಮಾತ್ರವಂತಿರೆಯುಮವಳವುತಣದ ಮತ್ತ- |
ನಣಗಿಪೌಷದ ನಿನದ - ಮರುಳ ಮುನಿಯ || (೬೩೩)

(ಮನುಜನ್+ಎಲ್ಲ)(ಪ್ರಕೃತಿಯ+ಅನುಕರಣಂ+ಅವನ)(ಸಾಮಾಗ್ರಿ+ಅವಳಿತ್ತ)(ಋಣಮಾತ್ರ+ಅಂತು+ಇರೆಯುಂ+ಅವಳ+ಅವುತಣದ)(ಮತ್ತನ್+ಅಣಗಿಪ+ಔಷದ)

ಮನುಷ್ಯನ ಎಲ್ಲಾ ಲಲಿತಕಲೆ ಮತ್ತು ವಿಸ್ಮಯಗೊಳಿಸುವ ಕೆಲಸಗಳೆಲ್ಲವೂ ಪ್ರಕೃತಿಯ ಅನುಕರಣ. ಅವಳು ಮಾಡಿದಂತೆ ಇವನೂ ಮಾಡಲು ಯತ್ನಿಸುತ್ತಾನೆ. ಅದಕ್ಕೆ ಬೇಕಾಗುವ ಸಲಕರಣೆಗಳೂ ಸಹ ಅವಳು ಕೊಟ್ಟಿದ್ದೇ ಹೌದು. ಈ ರೀತಿಯಾಗಿ ಅವನು ಅವಳಿಗೆ ಋಣಿಯಾಗಿದ್ದರೂ ಸಹ, ಅವಳ ಔತಣ(ಅವುತಣ)ದ ಅಮಲು ಮತ್ತು ಮದವನ್ನು ಕಡಿಮೆ ಮಾಡಿಸುವ ಔಷದಿ ನಿನ್ನದು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

All the marvels of man’s art are the imitation of Nature
All the materials he uses are the gifts of Nature
Even then her grand feast may sometimes cause intoxication
And you alone have the antidote to relieve you of it – Marula Muniya (633)
(Translation from "Thus Sang Marula Muniya" by Sri. Narasimha Bhat)

Wednesday, June 18, 2014

ಪ್ರಕೃತಿಯನ್ನು ತಿಳಿ; ತಿಳಿವಿನಿಂ ಪ್ರಕೃತಿಯನು ದಾಟು (631)

ಪ್ರಕೃತಿಯನ್ನು ತಿಳಿ; ತಿಳಿವಿನಿಂ ಪ್ರಕೃತಿಯನು ದಾಟು |
ವಿಕೃತಿಗೆಯ್ಸುವ ಜಗದಿ ಸಂಸ್ಕೃತಿಯ ಗಳಿಸು ||
ಸುಕೃತ ಧರ್ಮಂ ಪ್ರಾಕೃತ ದ್ವಂದ್ವಗಳ ಮೀರೆ |
ಸ್ವಕೃತವೋ ಸ್ವಾತ್ಮಗತಿ - ಮರುಳ ಮುನಿಯ || (೬೩೧)

(ಸ್ವ+ಆತ್ಮಗತಿ)

ಪ್ರಕೃತಿಯನ್ನು ಅರ್ಥ ಮಾಡಿಕೊ. ತಿಳಿವಳಿಕೆಯಿಂದ ಅದನ್ನು ದಾಟಿಹೋಗು. ಬದಲಾವಣೆ(ವಿಕೃತಿ)ಗಳನ್ನು ಮಾಡಿಸುವ ಜಗತ್ತಿನಲ್ಲಿ ಸಂಸ್ಕೃತಿಯನ್ನು ಸಂಪಾದಿಸು. ಒಳ್ಳೆಯ ಕೆಲಸಗಳನ್ನು ಮಾಡುವ ಧರ್ಮಾಚರಣೆಗಳು ಪ್ರಕೃತಿಯ ವಿರುದ್ಧ ಜೋಡಿಗಳನ್ನು ದಾಟಿ ಹೋದಾಗ, ನಿನ್ನ ಆತ್ಮದ ನಡಗೆಯು ನಿನ್ನ ಸ್ವಂತ ಕೃತಿಯಿಂದಾಗುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Know the nature of Nature and cross it with the knowledge
Develop noble culture in the world that eggs you do evil deeds
Virtuous acts of dharma enable you to rise above the dualities of Nature
You are the architect of your destiny – Marula Muniya (631)
(Translation from "Thus Sang Marula Muniya" by Sri. Narasimha Bhat)

Tuesday, June 17, 2014

ಆಶೆಗಳ ಕೆರಳಿಪುದು ತೋಷಗಳನುಣಿಸುವುದು (630)

ಆಶೆಗಳ ಕೆರಳಿಪುದು ತೋಷಗಳನುಣಿಸುವುದು |
ನಾಶ ಭಯಗಳಿನೆದೆಯ ಕಾಡಿ ಕುಗ್ಗಿಪುದು ||
ಈ ಸೇನೆ ನಿನ್ನ ಸ್ವತ್ತೆನುತಿಹುದು ದೈವಕೃತಿ |
ಲೇಸು ನಿನ್ನೊಳು ನೀನು - ಮರುಳ ಮುನಿಯ || (೬೩೦)

(ತೋಷಗಳನ್+ಉಣಿಸುವುದು)(ಭಯಗಳಿನ್+ಎದೆಯ)(ಸ್ವತ್ತು+ಎನುತ+ಇಹುದು)

ಬಯಕೆಗಳ ಕೆರಳಿಸುವುದು, ಸಂತೋಷ ಮತ್ತು ತೃಪ್ತಿ(ತೋಷ)ಗಳನ್ನನುಭವಿಸುವಂತೆ ಮಾಡುವುದು, ನಷ್ಟ, ಹಾನಿ ಮತ್ತು ಹೆದರಿಕೆಗಳಿಂದ ಎದೆಯನ್ನು ಕಾಡಿ ಕುಗ್ಗಿಸುವುದು, ಈ ದಂಡುಗಳು ನಿನ್ನ ಸ್ವತ್ತು ಎಂದು ದೈವವು ಹೇಳುತ್ತದೆ. ಆದ್ದರಿಂದ ನಿನ್ನೊಳಗೆ ನೀನೇ ಉತ್ತಮತೆ ಮತ್ತು ಒಳ್ಳೆಯದನ್ನು ಕಂಡುಹಿಡಿದುಕೊ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

It stirs up your desires and feeds you with merriments,
It worries and disheartens you with the fear of destruction
This army swears that God’s work is your own monopoly
The best solution is to dwell in your own self – Marula Muniya (630)
(Translation from "Thus Sang Marula Muniya" by Sri. Narasimha Bhat)

Monday, June 16, 2014

ಲೋಕಕ್ಕೆ ಬಿಡುವಿಲ್ಲ ನಿನ್ನ ಚಿಂತಿಸುತಿರಲು (629)

ಲೋಕಕ್ಕೆ ಬಿಡುವಿಲ್ಲ ನಿನ್ನ ಚಿಂತಿಸುತಿರಲು |
ಶೋಕಂಗಳದಕಮಿಹುವಂತು ನಿನಗೆಂತೋ ||
ವ್ಯಾಕುಲಿಸದಿರದಾರುಮಾದರಿಪರಿಲ್ಲೆಂದು |
ಏಕಾಂತ ಶವವಾಹಿ - ಮರುಳ ಮುನಿಯ || (೬೨೯)

(ಚಿಂತಿಸುತ+ಇರಲು)(ಶೋಕಂಗಳ್+ಅದಕಂ+ಇಹುವು+ಅಂತು)(ನಿನಗೆ+ಎಂತೋ)(ವ್ಯಾಕುಲಿಸದೆ+ಇರು+ಅದು+ಆರುಂ+ಆದರಿಪರು+ಇಲ್ಲ+ಎಂದು)

ನಿನ್ನ ಬಗ್ಗೆ ತಲೆ ಕೆಡಿಸಿಕೊಳ್ಳಲು ಪ್ರಪಂಚದಲ್ಲಿ ಯಾರಿಗೂ ಸಮಯವಿಲ್ಲ. ದುಃಖ ಮತ್ತು ದುಮ್ಮಾನಗಳು ನಿನಗಿರುವಂತೆಯೇ ಅವರಿಗೂ ಇವೆ. ಯಾರೂ ನಿನಗೆ ಪ್ರೀತಿ, ಮರ್ಯಾದೆ ಮತ್ತು ಗೌರವವನ್ನು ತೋರಿಸುತ್ತಿಲ್ಲವೆಂದು ದುಃಖಿಸಬೇಡ. ಹೆಣವನ್ನು ಹೊರುವವನು ಒಂಟಿಯಾಗಿಯೇ ಇರಬೇಕು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The world has no time to think and worry about you,
It has its own sorrows just as you have your own,
Don’t feel bad thinking that no one treats you with the love and respect,
You have to carry your dead body all alone – Marula Muniya (629)
(Translation from "Thus Sang Marula Muniya" by Sri. Narasimha Bhat)

Friday, June 13, 2014

ಅಹಿತಹಿತಗಳ ಮೂಲವಿಹುದಹಂಭಾವದಲಿ (628)

ಅಹಿತಹಿತಗಳ ಮೂಲವಿಹುದಹಂಭಾವದಲಿ |
ಅಹಮೆಂಬುದೆಲ್ಲಕಂ ಬೆಲೆಯ ಕಟ್ಟುವುದು ||
ಬಹುವಿಧದ ರುಚಿಗಳನು ತೋರಿ ಕರೆಯಲ್ ಪ್ರಕೃತಿ |
ಸ್ವಹಿತ ನಿಶ್ಚಯ ನಿನದು - ಮರುಳ ಮುನಿಯ || (೬೨೮)

(ಮೂಲ+ಇಹುದು+ಅಹಂಭಾವದಲಿ)(ಅಹಮ್+ಎಂಬುದು+ಎಲ್ಲಕಂ)

ಯಾವುದು ಹಿತ ಮತ್ತು ಯಾವುದು ಅಹಿತ ಎನ್ನುವುದರ ಮೂಲವು ಅಹಂಭಾವದಲ್ಲಿರುತ್ತದೆ. ಅದೇ ಪ್ರಪಂಚದ ಎಲ್ಲ ಪದಾರ್ಥಗಳಿಗೂ ಬೆಲೆಯನ್ನು ಕಟ್ಟುತ್ತದೆ. ವಿಧವಿಧವಾದ ರುಚಿಗಳನ್ನು ತೋರಿಸಿ ಪ್ರಕೃತಿಯು ನಿನ್ನನ್ನು ಕರೆಯುತ್ತಿರಲು, ನಿನಗೆ ಯಾವುದು ಹಿತವೆನ್ನುವುದನ್ನು ನೀನೇ ನಿಶ್ಚಯಿಸಿಕೊಳ್ಳಬೇಕು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The roots of good and evil are in your egoism
It is your ego-sense that fixes the value of all objects
It is Nature’s nature to entice you with many tastes
You yourself should decide what is good for you – Marula Muniya (628)
(Translation from "Thus Sang Marula Muniya" by Sri. Narasimha Bhat)

Thursday, June 12, 2014

ನಿನಗೊದಗಿದ ಪ್ರಶ್ನೆಗಳ ನೀನೆ ಬಗೆಹರಿಸಿಕೊಳೊ (627)

ನಿನಗೊದಗಿದ ಪ್ರಶ್ನೆಗಳ ನೀನೆ ಬಗೆಹರಿಸಿಕೊಳೊ |
ಎನಿತುದಿನವವರಿವರನವಲಂಬಿಸುವೆ? ||
ಹೆಣ ಹೊರೆಯವರವರಿಗವರವರೆ ಹೊರುವನಿತು |
ನಿನಗೆ ನೀನೇ ಗತಿಯೋ - ಮರುಳ ಮುನಿಯ || (೬೨೭)

(ಎನಿತುದಿನ+ಅವರ್+ಇವರನ್+ಅವಲಂಬಿಸುವೆ)(ಹೊರೆ+ಅವರವರಿಗೆ+ಅವರವರೆ)

ನಿನಗೆ ಎದುರಾಗಿರುವ ಪ್ರಶ್ನೆಗಳನ್ನು ನೀನೇ ಪರಿಹರಿಸಿಕೊ. ಎನ್ನೆಷ್ಟು ದಿನ ಇದಕ್ಕಾಗಿ ನೀನು ಬೇರೆಯವರನ್ನು ಅವಲಂಬಿಸಿರುತ್ತೀಯೆ? ಪ್ರಪಂಚದಲ್ಲಿ ಜೀವಿಸುತ್ತಿರುವ ಪ್ರತಿಯೊಬ್ಬರಿಗೂ ಅವರವರು ಹೊರುವಷ್ಟು ಹೆಣಭಾರಗಳಿರುತ್ತದೆ. ಆದುದ್ದರಿಂದ ನಿನಗೆ ನೀನೇ ಗತಿ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

You yourself should solve your own problems
How long can you depend on others?
The dead weight for each to carry is only as much as one can
You yourself are your refuge – Marula Muniya (627)
(Translation from "Thus Sang Marula Muniya" by Sri. Narasimha Bhat)

Friday, June 6, 2014

ಒರ‍್ವನೇ ಧರ್ಮಯಾತ್ರೆಯ ಚರಿಸೆ ಸಿದ್ಧನಿರು (626)

ಒರ‍್ವನೇ ಧರ್ಮಯಾತ್ರೆಯ ಚರಿಸೆ ಸಿದ್ಧನಿರು |
ಖರ್ವಪಾದಗಳಿರಲಿ ಗುರಿ ದೂರವಿರಲಿ ||
ಸರ್ವರುಂ ತೊರೆದಿರಲಿ ಶರ್ವರಿಯ ಕಾಳಿರಲಿ |
ನಿರ್ವಂಚನೆಯೊ ಮುಖ್ಯ - ಮರುಳ ಮುನಿಯ || (೬೨೬)

ಧರ್ಮಯಾತ್ರೆಯನ್ನು ಮಾಡಲು ನೀನು ಒಬ್ಬನೇ ತಯಾರಾಗಿರು. ನಿನಗೆ ಗಿಡ್ಡ(ಖರ್ವ)ವಾದ ಕಾಲುಗಳಿರಬಹುದು. ನೀನು ತಲುಪಬೇಕಾಗಿರುವ ಗುರಿಯು ಬಹಳ ದೂರದಲ್ಲಿರಬಹುದು. ನಿನ್ನನ್ನು ಎಲ್ಲರೂ ಬಿಟ್ಟುಹೋಗಿರಬಹುದು. ಅದು ಕರಾಳ (ಕಾಳ್) ರಾತ್ರಿ(ಶರ್ವರಿ)ಯಾಗಿರಬಹುದು. ಧರ್ಮಯಾತ್ರೆಯನ್ನು ಮಾಡುವಾಗ ಮತ್ತು ನಿನ್ನ ಗುರಿಯನ್ನು ತಲುಪುವಾಗ ನಿಷ್ಕಪಟಿಯಾಗಿ ಇರುವುದು ಮುಖ್ಯ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Be ready for pilgrimage all alone
Your strides may be short and your goal may be far off
All may desert you and the night may be dark
Sincerity is of supreme importance – Marula Muniya
(Translation from "Thus Sang Marula Muniya" by Sri. Narasimha Bhat)

Thursday, June 5, 2014

ಎಡಕೆ ತಿರುಗಲೆ ಬೇಡ ಬಲಕೆ ತಿರುಗಲೆ ಬೇಡ |
ಒಡನಾಡಿಯೆತ್ತಲೆಂದುಸಿರೆತ್ತಬೇಡ ||
ನಡೆ ನಿನ್ನ ಪಾಡ ನೀನಡರಲೊಮ್ಮತಿಯಿಂದೆ |
ಬಿಡುಗಡೆಯೊ ಒರ‍್ತನದಿ - ಮರುಳ ಮುನಿಯ || (೬೨೫)

(ಒಡನಾಡಿ+ಎತ್ತಲ್+ಎಂದು+ಉಸಿರ್+ಎತ್ತ+ಬೇಡ)(ನೀನ್+ಅಡರಲ್+ಒಮ್ಮತಿಯಿಂದೆ)

ಜೀವನದ ಹಾದಿಯಲ್ಲಿ ನಡೆಯುವಾಗ ಎಡಗಡೆ ಅಥವಾ ಬಲಗಡೆ ತಿರುಗಿ ನೋಡಬೇಡ. ನಿನ್ನ ಜೊತೆಗಾರರು ಎಲ್ಲೆಂದು ಉಸಿರೆತ್ತಬೇಡ. ನಿನ್ನ ಪಾಲಿಗೆ ಬಂದ ಅವಸ್ಥೆಯನ್ನು ನೀನು ಸ್ಥಿರಮನದಿಂದ ಹತ್ತು. ನಿನ್ನ ಒಂಟಿ ಸಾಹಸದಿಂದಲೇ ನಿನಗೆ ಈ ಪ್ರಪಂಚದ ವ್ಯವಹಾರಗಳಿಂದ ಬಿಡುಗಡೆಯಾಗುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Turn not to the left, turn not to the right,
Don’t even ask where your companion is,
Walk your path with singleness of mind and reach the goal
Singleness is deliverance – Marula Muniya (625)
(Translation from "Thus Sang Marula Muniya" by Sri. Narasimha Bhat)

Friday, May 30, 2014

ಮೂಕಹೃಚ್ಛೂಲೆಗಳನರಿಯಲಾರದ ಸಖರು (624)

ಮೂಕಹೃಚ್ಛೂಲೆಗಳನರಿಯಲಾರದ ಸಖರು |
ಲೌಕಿಕದ ನಯಗಳಲಿ ಮನವ ಮರೆಯುವರು ||
ಸಾಕು ನಿನ್ನೊಳಗನರಸದ ಜನರ ಸಹವಾಸ |
ಏಕಾಕಿ ನೀನಿರೆಲೊ - ಮರುಳ ಮುನಿಯ || (೬೨೪)

(ಹೃತ್+ಶೂಲೆಗಳು+ಅನರಿಯಲಾರದ)(ನಿನ್ನೊಳಗನ್+ಅರಸದ)(ನೀನ್+ಇರು+ಎಲೊ)

ಬಾಯಿಬಿಟ್ಟು ಹೇಳಲಿಕ್ಕಾಗದಂತಹ ಹೃದಯ(ಹೃತ)ದ ತೀಕ್ಷ್ಣವಾದ ವೇದನೆ(ಶೂಲೆ)ಗಳನ್ನು ತಿಳಿಯಲಾರದ ಸ್ನೇಹಿತರು, ಲೋಕಕ್ಕೆ ಸಂಬಧಿಸಿದ ವ್ಯವಹಾರಗಳಲ್ಲಿ ನಿನ್ನ ಸೂಕ್ಷ್ಮ ಮನಸ್ಸನ್ನು ಅರಿಯಲಾರರು. ನಿನ್ನ ಅಂತರಂಗವನ್ನು ಹುಡುಕದಿರುವ ಜನಗಳ ಸಂಪರ್ಕ ಸಾಕು. ನೀನು ಒಬ್ಬಂಟಿಗ(ಏಕಾಕಿ)ನಾಗೇ ಇರು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Those friends who can’t understand your silent agonies and sorrows
Forget themselves in smooth polished worldly conduct
Avoid the company of those who never peep into your mind
Be alone in such situation – Marula Muniya (624)
(Translation from "Thus Sang Marula Muniya" by Sri. Narasimha Bhat)

Thursday, May 29, 2014

ಕೇತಕಿ ಗುಲಾಬಿ ಪೊದೆಗಳ ಮೇಲೆ ಬಿದ್ದರಿವೆ (623)

ಕೇತಕಿ ಗುಲಾಬಿ ಪೊದೆಗಳ ಮೇಲೆ ಬಿದ್ದರಿವೆ- |
ಯಾತುರದಿ ಕೀಳೆ ಹರಿಯುವುದು ಚೂರಾಗಿ ||
ಚೇತಸದ ಪಾಡಂತು ಜಗದ ಮುಳ್ಗಳಿನದನು |
ಸೈತರಿತು ಬಿಡಿಸಿಕೊಳೊ - ಮರುಳ ಮುನಿಯ || (೬೨೩)

(ಬಿದ್ದ+ಅರಿವೆ+ಆತುರದಿ)(ಪಾಡು+ಅಂತು)(ಮುಳ್ಗಳಿಂ+ಅದನು)

ತಾಳೆ ಹೂ ಮತ್ತು ಗುಲಾಬಿ ಹೂ ಗಿಡಗಳ ಪೊದೆಗಳ ಮೇಲೆ ಬಿದ್ದಿರುವ ಬಟ್ಟೆಯನ್ನು ಆತುರದಿಂದ ಬಿಡಿಸಿಕೊಳ್ಳಲು ಹೋದರೆ ಆ ಬಟ್ಟೆಯು ಹರಿದು ಛಿದ್ರವಾಗುವುದು ಖಂಡಿತ. ಅದೇ ರೀತಿ ಮನಸ್ಸಿನ ಅವಸ್ಥೆ. ಇಂತಹ ಮನಸ್ಸಿನ ಅವಸ್ಥೆಗಳನ್ನು ಜಗತ್ತಿನ ಕಷ್ಟಗಳೆಂಬ ಮುಳ್ಳುಗಳಿಂದ ಶಾಂತವಾಗಿ ಸದ್ದಿಲ್ಲದೆ ಬಿಡಿಸಿಕೊಂಡು ಪಾರಾಗು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The cloth fallen on fragrant screw-pine or rose
Will be torn into shreds if you pull it with force
Same is the fate of human mind entangled in worldly thorns
Disentangle it carefully – Marula Muniya (623)
(Translation from "Thus Sang Marula Muniya" by Sri. Narasimha Bhat)

Wednesday, May 28, 2014

ಅನ್ಯರನು ನೀನುದ್ಧರಿಪ ಮಾತಹಂಕಾರ (622)

ಅನ್ಯರನು ನೀನುದ್ಧರಿಪ ಮಾತಹಂಕಾರ |
ಮಣ್ಣು ಹುಳುವೇಂ ಗಜವ ಕುಳಿಯಿನೆತ್ತುವುದು? ||
ಪನ್ನಗಕೆ ಪೊರೆಕಳೆಯುವಿರಕುವೊಲು ಜಗ ನಿನಗೆ |
ನಿನ್ನ ನೀನೆತ್ತಿಕೊಳೊ - ಮರುಳ ಮುನಿಯ || (೬೨೨)

(ನೀನ್+ಉದ್ಧರಿಪ)(ಮಾತು+ಅಹಂಕಾರ)(ಕುಳಿಯಿನ್+ಎತ್ತುವುದು)(ಪೊರೆಕಳೆಯುವ+ಇರಕು+ವೊಲು)(ನೀನ್+ಎತ್ತಿಕೊಳೊ)

ಬೇರೆಯವರನ್ನು ನಾನು ಉದ್ಧರಿಸುತ್ತೇನೆನ್ನುವುದು ಅಹಂಕಾರದ ಮಾತಾಗುತ್ತದೆ. ಮಣ್ಣಿನ ಹುಳುವು ಆನೆಯನ್ನು ತಗ್ಗಿನಿಂದ ಮೇಲಕೆತ್ತಲು ಸಾಧ್ಯವೇ? ಹಾವು ತನ್ನ ಪೊರೆಯನ್ನು ಇಕ್ಕಟ್ಟಿನಲ್ಲಿ ಕಳಚಿಕೊಳ್ಳುವಂತೆ ನಿನಗೆ ಈ ಜಗತ್ತು. ನೀನು ಈ ಕರ್ಮದೇಹವನ್ನು ಇಲ್ಲಿ ತ್ಯಜಿಸುವೆ. ನಿನ್ನನ್ನು ನೀನು ಮೊದಲು ಮೇಲೆತ್ತಿಕೊ. ಆತ್ಮೋದ್ಧಾರ ಮೊದಲು, ಲೋಕೋದ್ಧಾರ ಆಮೇಲೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

All talk of redeeming others is sheer egoism
Can an earth-worm lift up and elephant from a deep pit?
The world to you is what a thicket is to a snake to shed its slough
Elevate yourself therefore with your own self-effort – Marula Muniya (622)
(Translation from "Thus Sang Marula Muniya" by Sri. Narasimha Bhat)

Tuesday, May 27, 2014

ಗೊತ್ತಾದ ಕುರುಹು ಹೆಸರುಗಳಿಲ್ಲದಾ ಅಮಿತ (621)

ಗೊತ್ತಾದ ಕುರುಹು ಹೆಸರುಗಳಿಲ್ಲದಾ ಅಮಿತ |
ವಸ್ತುವನು ನೀಂ ತಿಳಿಯುವೊಡೆ ದೃಢದಿ ನಿನ್ನ ||
ಸೊತ್ತೆಂದು (ಪರಿ)ಗಣಿಸು (ಸು)ಜ್ಞಾನದಿಂದಲದು |
ತತ್ತ್ವವಪ್ಪುದು ನಿನಗೆ - ಮರುಳ ಮುನಿಯ || (೬೨೧)

(ಹೆಸರುಗಳು+ಇಲ್ಲದ+ಆ)(ಸುಜ್ಞಾನದಿಂದಲ್+ಅದು)(ತತ್ತ್ವ+ಅಪ್ಪುದು)

ತಿಳಿಯುವಂತಹ ಚಿಹ್ನೆ ಮತ್ತು ಹೆಸರುಗಳಿಲ್ಲದಿರುವ, ಮಿತಿಯಿಲ್ಲದಿರುವ ನಿರಾಕಾರ ನಿರ್ಗುಣ ವಸ್ತುವಾದ ಪರಮಾತ್ಮನನ್ನು ನೀನು ತಿಳಿಯಬೇಕೆಂದರೆ, ಆ ಜ್ಞಾನವನ್ನು ನಿಶ್ಚಿತವಾಗಿ ನಿನ್ನ ಸ್ವತ್ತೆಂದು ಲೆಕ್ಕಕ್ಕೆ ತೆಗೆದುಕೊ. ಒಳ್ಳೆಯ ಜ್ಞಾನಮಾರ್ಗದಿಂದ ಅದು ನಿನಗೆ ತತ್ತ್ವ ಸಿದ್ಧಾಂತವಾಗಿ ಪರಿಣಮಿಸುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The Infinite Entity has no known names, forms or signs
If you wish to know It well, firmly believe It to be your own asset
With blessed wisdom It becomes your own forever
It becomes your life principle then – Marula Muniya (621)
(Translation from "Thus Sang Marula Muniya" by Sri. Narasimha Bhat)

Friday, May 23, 2014

ಮಚ್ಚರಿಸಬೇಡ ಮಚ್ಚರವನಾಗಿಸಬೇಡ (620)

ಮಚ್ಚರಿಸಬೇಡ ಮಚ್ಚರವನಾಗಿಸಬೇಡ |
ಕಿಚ್ಚದಂಟಲು ಸುಡುವುದೆಲ್ಲ ನಿನ್ನದನು |
ಹೆಚ್ಚು ಕೊರೆಯವರವರ ಪೂರ್ವಕೃತ ತಾತ್‍ಕ್ಷಣಿಕ |
ಉಚ್ಚವಿರಿಸಾತ್ಮವನು - ಮರುಳ ಮುನಿಯ || (೬೨೦)

(ಮಚ್ಚರವನ್+ಆಗಿಸಬೇಡ)(ಕಿಚ್ಚು+ಅದು+ಅಂಟಲು)(ಸುಡುವುದು+ಎಲ್ಲ)(ಕೊರೆ+ಅವರ+ಅವರ)(ಉಚ್ಚ+ಇರಿಸು+ಆತ್ಮವನು)

ಮತ್ಸರ(ಮಚ್ಚರ)ವನ್ನು ಪಡಬೇಡ. ಮತ್ಸರವಾಗುವಂತಹ ಕೃತಿಗಳನ್ನು ಮಾಡಬೇಡ. ಬೆಂಕಿ(ಕಿಚ್ಚು)ಯು ಹೊತ್ತಿಕೊಳ್ಳಲು ನಿನ್ನೆಲ್ಲವನ್ನೂ ಸುಟ್ಟುಹಾಕುತ್ತದೆ. ಒಂದು ಕಡಿಮೆ ಅಥವಾ ಒಂದು ಹೆಚ್ಚಾಗಿರುವುದು ಅವರವರು ಪಡೆದುಕೊಂಡು ಬಂದ ಪೂರ್ವಜನ್ಮಗಳ ಫಲ. ಅದು ಆ ಕ್ಷಣಕ್ಕೆ ಮಾತ್ರ ಅನ್ವಯಿಸುವಂತಾದ್ದು. ಈ ಎಲ್ಲ ಭಾವಗಳನ್ನು ಮೀರಿ ನೀನು ನಿನ್ನ ಆತ್ಮಸ್ಥಿತಿಯನ್ನು ಮೇಲ್ಮಟ್ಟದಲ್ಲಿಟ್ಟುಕೊಂಡಿರು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Envy not others and provoke not envy in others,
When the fire of jealousy is kindled, it burns your everything,
Opulence and poverty are temporary and are the fruits of your karma
But preserve yourself always in excellence – Marula Muniya
(Translation from "Thus Sang Marula Muniya" by Sri. Narasimha Bhat)

Thursday, May 22, 2014

ನೋವಿರದೆ ಸಾವು ದೈನ್ಯತೆಯುಳಿದ ಜೀವಿತವು (619)

ನೋವಿರದೆ ಸಾವು ದೈನ್ಯತೆಯುಳಿದ ಜೀವಿತವು |
ದೈವಪದಸಾಯುಜ್ಯ ದೇಹ ಬಿಟ್ಟಂದು ||
ಮೂವರಗಳಿವನು ವರಿಸಿದ ಪೂರ್ವಿಕರ್ ಸಾರ |
ಕೋವಿದರ್ ಬೇಡಂತು - ಮರುಳ ಮುನಿಯ || (೬೧೯)

(ನೋವು+ಇರದೆ)(ದೈನ್ಯತೆ+ಉಳಿದ)(ಮೂವರಗಳು+ಇವನು)(ಬೇಡ್+ಅಂತು)

ನಮ್ಮ ಪೂರ್ವಿಕರ ಜೀವನದ ತತ್ತ್ವವು ಈ ಮೂರು ಗುರಿಗಳಲ್ಲಿತ್ತು. ನೋವನ್ನು ಅನುಭವಿಸದೆಯೇ ಬರುವಂತಹ ಸಾವು. ಯಾಚನಾಸ್ಥಿತಿಗಳಿಲ್ಲದ ಜೀವನ. ಮರಣ ಬಂದಾಗ ಪರಮಾತ್ಮನ ಪಾದಾರವಿಂದವನ್ನು ಸೇರುವುದು (ಸಾಯುಜ್ಯ). ತಿಳಿದಂತಹ ಪಂಡಿತರು (ಕೋವಿದರ್) ಈ ವರಗಳನ್ನು ಬೇಡೆಂದು ಹೇಳುತ್ತಾರೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Death without pain and life sans humiliation
Salvation at the feet of the Lord on giving up the body
Our ancestors who opted for the above three boons were really wise
Pray to the Lord for the same – Marula Muniya (619)
(Translation from "Thus Sang Marula Muniya" by Sri. Narasimha Bhat)

Wednesday, May 21, 2014

ಬಹುತೆಯಿಂದೇಕತೆಗೆ ಗೃಹವಂಶರಾಷ್ಟ್ರಗಳು (618)

ಬಹುತೆಯಿಂದೇಕತೆಗೆ ಗೃಹವಂಶರಾಷ್ಟ್ರಗಳು |
ಬಹುತೆ ಪ್ರಕೃತಿಯ ಸಿದ್ಧಿ ಏಕತೆ ಮನುಜಸಿದ್ಧಿ ||
ಅಹಮಿನೊಳೆಲ್ಲವನೆಲ್ಲದರೊಳಹಮನು ಕಾಣೆ |
ಮಹನೀಯನಾತನೆಲೊ - ಮರುಳ ಮುನಿಯ || (೬೧೮)

(ಬಹುತೆಯಿಂದ+ಏಕತೆಗೆ)(ಅಹಮಿನೊಳು+ಎಲ್ಲವನು+ಎಲ್ಲದರೊಳ್+ಅಹಮನು)(ಮಹನೀಯನ್+ಆತನೆಲೊ)

ಬಹುತೆಯಿಂದ ಏಕತೆಗೆ ಹೋಗುವಂತೆ ಮನೆ, ಕುಲ ಮತ್ತು ದೇಶಗಳು ಮಾಡುತ್ತವೆ. ಬಹುತೆ ಪ್ರಕೃತಿಯ ಸಾಧನೆ. ಏಕತೆ ಮನುಷ್ಯನ ಸಾಧನೆ. ತನ್ನೊಳಗೆ ಬಹುತ್ವವನ್ನು ಮತ್ತು ಬಹುತ್ವದಲ್ಲಿ ತನ್ನನ್ನು ಯಾವನು ಕಾಣಬಲ್ಲನೋ ಅವನೇ ಶ್ರೇಷ್ಠನಾದವನು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Families, races and nations are moving from diversity to unity
Diversity is the gift of Nature and unity is the accomplishment of man
One should see all in his self and his self in all
Such person is really great – Marula Muniya (618)
(Translation from "Thus Sang Marula Muniya" by Sri. Narasimha Bhat)

Thursday, May 15, 2014

ಮುಳ್ತುಂಬಿಹವು ಜಗದ ದಾರಿಗಳದೆತ್ತಲುಂ (617)

ಮುಳ್ತುಂಬಿಹವು ಜಗದ ದಾರಿಗಳದೆತ್ತಲುಂ |
ಕಾಲ್ತಳಕೆ ನೀಂ ಜ್ಞಾನದೆಲೆ ಹಸುರ ಸವರು ||
ಮುಳ್ತಲೆಯ ಬಾಗಿಪುದು ನೆಲ ಹುಲ್ಲ ಹೊದೆಯುವುದು |
ಬಾಳ್ತನದ ತಂತ್ರವಿದು - ಮರುಳ ಮುನಿಯ || (೬೧೭)

(ಮುಳ್+ತುಂಬಿ+ಇಹವು)(ದಾರಿಗಳ್+ಅದು+ಎತ್ತಲುಂ)(ಕಾಲ್+ತಳಕೆ)(ಜ್ಞಾನದ+ಎಲೆ)(ಮುಳ್+ತಲೆಯ)(ತಂತ್ರ+ಇದು)

ಜಗತ್ತಿನ ಸಕಲ ಹಾದಿಗಳಲ್ಲೂ ಮುಳ್ಳುಗಳು ತುಂಬಿಕೊಂಡು ನಾವು ನಡೆದಾಡುವುದು ಕಷ್ಟಕರವಾಗುವಂತೆ ಮಾಡಿದೆ. ಆ ಮುಳ್ಳುಗಳು ನಿನ್ನ ಪಾದಗಳನ್ನು ಚುಚ್ಚಬಾರದೆಂದರೆ, ನೀನು ಈ ಉಪಾಯವನ್ನು ಮಾಡು. ನಿನ್ನ ಪಾದದಡಿಗೆ ಜ್ಞಾನವೆಂಬ ಎಲೆಯ ಹಸುರನ್ನು ಲೇಪಿಸು. ಆವಾಗ ಆ ಮುಳ್ಳು ತನ್ನ ತಲೆಯನ್ನು ಬಗ್ಗಿಸುತ್ತದೆ ಮತ್ತು ನೆಲವು ಹುಲ್ಲನ್ನು ಹೊದ್ದುಕೊಳ್ಳುತ್ತದೆ. ಜೀವನವನ್ನು ನಡೆಸುವ ಉಪಾಯವಿದು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The pathways in the world are everywhere strewn with thorns,
Spread therefore the soft green leaves of wisdom underneath your feat,
It bends the thorny ends and covers the ground with grass
This is the way of successful life – Marula Muniya (617)
(Translation from "Thus Sang Marula Muniya" by Sri. Narasimha Bhat)