Friday, June 6, 2014

ಒರ‍್ವನೇ ಧರ್ಮಯಾತ್ರೆಯ ಚರಿಸೆ ಸಿದ್ಧನಿರು (626)

ಒರ‍್ವನೇ ಧರ್ಮಯಾತ್ರೆಯ ಚರಿಸೆ ಸಿದ್ಧನಿರು |
ಖರ್ವಪಾದಗಳಿರಲಿ ಗುರಿ ದೂರವಿರಲಿ ||
ಸರ್ವರುಂ ತೊರೆದಿರಲಿ ಶರ್ವರಿಯ ಕಾಳಿರಲಿ |
ನಿರ್ವಂಚನೆಯೊ ಮುಖ್ಯ - ಮರುಳ ಮುನಿಯ || (೬೨೬)

ಧರ್ಮಯಾತ್ರೆಯನ್ನು ಮಾಡಲು ನೀನು ಒಬ್ಬನೇ ತಯಾರಾಗಿರು. ನಿನಗೆ ಗಿಡ್ಡ(ಖರ್ವ)ವಾದ ಕಾಲುಗಳಿರಬಹುದು. ನೀನು ತಲುಪಬೇಕಾಗಿರುವ ಗುರಿಯು ಬಹಳ ದೂರದಲ್ಲಿರಬಹುದು. ನಿನ್ನನ್ನು ಎಲ್ಲರೂ ಬಿಟ್ಟುಹೋಗಿರಬಹುದು. ಅದು ಕರಾಳ (ಕಾಳ್) ರಾತ್ರಿ(ಶರ್ವರಿ)ಯಾಗಿರಬಹುದು. ಧರ್ಮಯಾತ್ರೆಯನ್ನು ಮಾಡುವಾಗ ಮತ್ತು ನಿನ್ನ ಗುರಿಯನ್ನು ತಲುಪುವಾಗ ನಿಷ್ಕಪಟಿಯಾಗಿ ಇರುವುದು ಮುಖ್ಯ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Be ready for pilgrimage all alone
Your strides may be short and your goal may be far off
All may desert you and the night may be dark
Sincerity is of supreme importance – Marula Muniya
(Translation from "Thus Sang Marula Muniya" by Sri. Narasimha Bhat)

No comments:

Post a Comment