Tuesday, November 25, 2014

ಬಿಸಿ ಬಿಸಿಯ ನೀರಿಂಗೆ ಹಿಮಗಿರಿಯ ತಣ್ಣೀರ (701)

ಬಿಸಿ ಬಿಸಿಯ ನೀರಿಂಗೆ ಹಿಮಗಿರಿಯ ತಣ್ಣೀರ |
ಹಸಿರು ತಣ್ಣೀರಿಂಗೆ ಬಿಸಿಯ ಸೇರಿಸುತೆ ||
ಹಸನು ಶೀತೋಷ್ಣದಿಂದೊಡಲ ಮಜ್ಜನಗೈವ |
ಕುಶಲತೆ ಸಮನ್ವಯವೊ - ಮರುಳ ಮುನಿಯ || (೭೦೧)

(ಶೀತ+ಉಷ್ಣದಿಂದ+ಒಡಲ)

ಬಿಸಿ ಬಿಸಿಯಾಗಿರುವ ನೀರಿಗೆ ಹಿಮದ ಪರ್ವತದಿಂದ ಇಳಿದುಬಂದ ನದಿಯ ತಣ್ಣೀರನ್ನು ಮತ್ತು ಬಹು ತಣ್ಣಗಿರುವ ನೀರಿಗೆ ಬಿಸಿ ನೀರನ್ನು ಸೇರಿಸುತ್ತಾ, ದೇಹಕ್ಕೆ ಹದವಾಗಿ ಹಿತಕಾರಿಯಾಗಿರುವ ತಂಪು ಮತ್ತು ಬಿಸಿನೀರಿನಿಂದ ದೇಹವನ್ನು ಸ್ನಾನ (ಮಜ್ಜನ) ಮಾಡಿಸುವ ಚತುರತೆಯನ್ನು, ಸಮನ್ವಯ ಜೀವನ ವಿಧಾನ ಎನ್ನುವರು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Adding ice-cold water to very hot water,
Mixing very hot water with very cold water,
Bathing the body with comfortable lukewarm water
Is the skillfulness called coordination – Marula Muniya (701)
(Translation from "Thus Sang Marula Muniya" by Sri. Narasimha Bhat)

Monday, November 24, 2014

ಶ್ರುತಿಮತಿಗಳೆರಡುಮಂ (ದೃಢ) ಸಮನ್ವಯಗೊಳಿಸಿ (700)

ಶ್ರುತಿಮತಿಗಳೆರಡುಮಂ (ದೃಢ) ಸಮನ್ವಯಗೊಳಿಸಿ |
ರತಿವಿರತಿಗಳುಭಯ ಸಮನ್ವಯವನರಿತು ||
ಸ್ವತೆಪರತೆಗಳನೆರಡನುಂ ಸಮನ್ವಯಗೊಳಿಸಿ |
ಮಿತಗತಿಯೆ ಹಿತಯೋಗ - ಮರುಳ ಮುನಿಯ || (೭೦೦)

(ಶ್ರುತಿಮತಿಗಳು+ಎರಡುಮಂ)(ರತಿವಿರತಿಗಳು+ಉಭಯ)(ಸಮನ್ವಯವನ್+ಅರಿತು)(ಸ್ವತೆಪರತೆಗಳನ್+ಎರಡನುಂ)

ವೇದ(ಶ್ರುತಿ) ಮತ್ತು ಬುದ್ಧಿಶಕ್ತಿಗಳೆರಡನ್ನೂ ನಿಶ್ಚಿತವಾಗಿ ಹೊಂದಾಣಿಕೆಗೊಳಿಸಿ, ಭೋಗ(ರತಿ) ಮತ್ತು ವೈರಾಗ್ಯ(ವಿರತಿ)ಗಳೆರಡೂ ತಮ್ಮ ಸಮನ್ವಯವನ್ನು ತಿಳಿದುಕೊಂಡು ತಾನು (ಸ್ವತೆ) ಮತ್ತು ಪರ(ಪರತೆ)ರು ಎಂಬ ಅಭಿಪ್ರಾಯಗಳನ್ನು ಹೊಂದಿಸಿಕೊಂಡು, ಪರಿಮಿತಿಯಲ್ಲಿ ನಡೆಯುವುದೇ ಎಲ್ಲರಿಗೂ ಒಳಿತನ್ನುಂಟುಮಾಡುವ ಯೋಗಮಾರ್ಗವಾಗಿದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Coordinating the Vedic wisdom and your own wisdom,
Coordinating your love and dispassion,
Coordinating self interest with the good of other things,
Living a life of well-controlled conduct is the yoga of all welfare – Marula Muniya
(Translation from "Thus Sang Marula Muniya" by Sri. Narasimha Bhat)

Friday, November 21, 2014

ಆವುದೆಲ್ಲರೊಳಮಾನ್ ನಾನು ನಾನೆನುತಿಹುದೊ (699)

ಆವುದೆಲ್ಲರೊಳಮಾನ್ ನಾನು ನಾನೆನುತಿಹುದೊ |
ಆವುದಾದಿಯೊ ಜಗದ್ವಸ್ತುಗಣನೆಯಲಿ ||
ಆವುದಿರದೊಡೆ ದೆವರೆನುವ ಪೆಸರಿರದೊ ಆ |
ಜೀವಕ್ಕೆ ನಮೋ ಎನ್ನು - ಮರುಳ ಮುನಿಯ || (೬೯೯)

(ಆವುದು+ಎಲ್ಲರೊಳಂ+ಆನ್)(ಆವುದು+ಆದಿಯೊ)(ಆವುದು+ಇರದೊಡೆ)(ದೆವರೆ+ಎನುವ)(ಪೆಸರ್+ಇರದೊ)

ಯಾವುದು ಪ್ರಪಂಚದಲ್ಲಿ ಜೀವಿಸುತ್ತಿರುವ ಪ್ರತಿಯೊಬ್ಬರಲ್ಲೂ ನಾನು, ನಾನು ಎಂದೆನ್ನುತ್ತಿರುವುದೋ, ಯಾವುದು ಈ ಲೋಕದ ವಸ್ತುಗಳ ಲೆಕ್ಕಾಚಾರಗಳಲ್ಲಿ ಮೂಲವಾಗಿದೆಯೋ, ಯಾವುದು ಇಲ್ಲದಿದ್ದರೆ, ದೇವರೆನ್ನುವ ಹೆಸರು ಇರುವುದಿಲ್ಲವೋ, ಆ ಜೀವಕ್ಕೆ ನಮಸ್ಕರಿಸು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

That which exists in every one declares I, I and I
That which always occupies the first place among the things of the world,
That, without which the name of God won’t be heard in the world,
Offer obeisance to that Soul – Marula Muniya (699)
(Translation from "Thus Sang Marula Muniya" by Sri. Narasimha Bhat)

Thursday, November 20, 2014

ಆವುದರೊಳಿರ‍್ಪೊಳಿತ ಬೆಳಸೆ ದೇವತ್ವವೊ ಅ (698)

ಆವುದರೊಳಿರ‍್ಪೊಳಿತ ಬೆಳಸೆ ದೇವತ್ವವೊ ಅ- |
ದಾವುದನು ಕುರುಡು ಕೈ ಕೆಡಪೆ ಕೃಪಣತೆಯೋ ||
ಆವುದೀ ಸೃಷ್ಟಿವೃಕ್ಷದ ಫುಲ್ಲಸುಮವೊ ಆ |
ಜೀವನಕೆ ನಮೊ ಎನ್ನೊ - ಮರುಳ ಮುನಿಯ || (೬೯೮)

(ಆವುದರ+ಒಳಿರ‍್ಪ+ಒಳಿತ)(ಅದು+ಆವುದನು)(ಆವುದು+ಈ)

ಯಾವುದರ ಒಳಗಿರುವ ಒಳ್ಳೆಯತನವನ್ನು ಬೆಳೆಸಲು ಅದು ದೇವತ್ವವೆಂದೆನ್ನಿಸಿಕೊಳ್ಳುವುದೋ, ಯಾವುದನ್ನು ಅರಿವಿಲ್ಲದ ಅಜ್ಞಾನದ ಕೈಗಳು ಕೆಡವಿದಾಗ ಅದು ಕೆಟ್ಟತನ(ಕೃಪಣತೆ)ವಾಗುವುದೊ, ಯಾವುದು ಈ ಸೃಷ್ಟಿಯೆಂಬ ತರುವಿನ ಅರಳಿದ ಹೂವೋ, ಆ ಜೀವನಕ್ಕೆ ನಮಸ್ಕರಿಸು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

That good thing which can rise to Godhood when you develop it,
The striking down of which by the blind hand is utter heartlessness,
That which is the fragrant flower blossoming in the tree of creation,
Offer obeisance to that life – Marula Muniya (698)
(Translation from "Thus Sang Marula Muniya" by Sri. Narasimha Bhat)

Wednesday, November 19, 2014

ಹಳೆಯ ರೋಗದಿ ಹೊಸ ಚಿಕಿತ್ಸೆಯಿಂ ರುಜೆ ಹೊಸತು (697)

ಹಳೆಯ ರೋಗದಿ ಹೊಸ ಚಿಕಿತ್ಸೆಯಿಂ ರುಜೆ ಹೊಸತು |
ಒಳಗೆ ಮಾರ‍್ಪಡಿಸದಿರ‍್ಪುದೆ ಮದ್ದು ಮೈಯ ||
ನೆಲನ ನೀಂ ಸೋಂಕಿದುಡೆ ಮಣ್ ಪೊಸತು ಪೊಸತು ಕೈ |
ಮಿಲನವೇ ನವಸೃಷ್ಟಿ - ಮರುಳ ಮುನಿಯ || (೬೯೭)

(ಮಾರ‍್ಪಡಿಸದೆ+ಇರ‍್ಪುದೆ)

ಹಳೆಯ ಕಾಯಿಲೆಗೆ ಒಂದು ಹೊಸ ಔಷದಿಯನ್ನು ಉಪಯೋಗಪಡಿಸಿದರೆ, ಇನ್ನೊಂದು ಹೊಸ ಕಾಯಿಲೆ(ರುಜೆ)ಯು ಹುಟ್ಟಿಕೊಳ್ಳುತ್ತದೆ. ಏಕೆಂದರೆ ಹೊಸ ಔಷಧಿಯು ದೇಹವನ್ನು ಒಳಗಡೆ ಬದಲಾಯಿಸದೆ ಇರುವುದೇನು? ನೀನು ನಿನ್ನ ಕೈಗಳನ್ನು ನೆಲಕ್ಕೆ ಸೋಕಿಸಿ ಕೃಷಿ ಮಾಡಿದ್ದಲ್ಲಿ, ನಿನ್ನ ಕೈಗಳು ಹೊಸ ಮಣ್ಣನ್ನು ಸೋಕಿ, ಅವೂ ಸಹ ಹೊಸದಾಗುತ್ತವೆ. ಈ ಬಗೆಯಲ್ಲಿ ಕೂಡಿಕೊಳ್ಳುವುದೇ ಹೊಸ ರಚನೆಯಾಗಲು ಕಾರಣವಾಗುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

An old disease changes into a new one with new treatment
Doesn’t the medicine effect change in the inner parts of body?
When you touch the earth the soil and hands are new
And joining of the two leads to new creation - Marula Muniya (697)
(Translation from "Thus Sang Marula Muniya" by Sri. Narasimha Bhat)

Tuesday, November 18, 2014

ದೈವಪ್ರಮಾದಿಗಳ ಸಂಸ್ಕರಣಚೋದಕರ (696)

ದೈವಪ್ರಮಾದಿಗಳ ಸಂಸ್ಕರಣಚೋದಕರ |
ಗೋವಿಂದ ಜಿನ ಬುದ್ಧ ಕ್ರಿಸ್ತ ಮಹಮದರ ||
ಗೋವುರಂಗಳೊಳಿರಿಸಿ ನಮಿಪೆವೆಂಬರು ಜನರು |
ಜೀವನಕೆ ಸೋಕಿಸರು - ಮರುಳ ಮುನಿಯ || (೬೯೬)

(ಗೋವುರಂಗಳ+ಒಳ+ಇರಿಸಿ)(ನಮಿಪೆ+ಎಂಬರು)

ದೇವಸಂದೇಶವನ್ನು ಸಾರುವ ದೇವದೂತರುಗಳನ್ನು ಮತ್ತು ಬಾಳನ್ನು ಹಸನುಗೊಳಿಸಿ, ಉದ್ಧಾರಗೊಳಿಸಿದ ಗೋವಿಂದ, ಮಹಾವೀರ, ಗೌತಮಬುದ್ಧ, ಏಸು ಕ್ರಿಸ್ತ ಮತ್ತು ಪ್ರವಾದಿ ಪೈಗಂಬರುಗಳನ್ನು, ಜನರು ಗೋಪುರ(ಗೋವುರ)ಗಳೊಳಗಡೆ ಇಟ್ಟು ಪೂಜಿಸುತ್ತಾರೆಯೇ ಹೊರತು ಅವರ ಹಿತೋಪದೇಶಗಳನ್ನು ತಮ್ಮ ಜೀವನಕ್ಕೆ ಅಳವಡಿಸಿಕೊಳ್ಳುವುದಿಲ್ಲ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The messengers of God and great reformers like
Govinda, Jina, Buddha, Christ and Mohammed,
People who wish to install them on high towers and worship
Keep them away from their lives – Marula Muniya (696)
(Translation from "Thus Sang Marula Muniya" by Sri. Narasimha Bhat)

Monday, November 17, 2014

ಕಾದ ಪಾತ್ರೆಯ ಸೋಕದಿಹ ಕಾಳು ಬಾಯ್ಗೆ ಕಸ (695)

ಕಾದ ಪಾತ್ರೆಯ ಸೋಕದಿಹ ಕಾಳು ಬಾಯ್ಗೆ ಕಸ |
ಸೀದು ಬಿದ್ದಿಹ ಕಾಳು ಬೀದಿಗೆಲ್ಲ ಕಸ ||
ಬೂದಿಯಾಗದೆ ಭವದೆ ಪಕ್ವವಾಗಿಹ ಜೀವ |
ಸ್ವಾದು ರುಚಿಯೋ ಜಗಕೆ - ಮರುಳ ಮುನಿಯ || (೬೯೫)

ಕಾಳನ್ನು ಬಿಸಿಪಾತ್ರೆಯಲ್ಲಿ ಹಾಕಿ ಸರಿಯಾಗಿ ಹುರಿಯದಿದ್ದಲ್ಲಿ, ಅದು ಬಾಯಿಗೆ ರುಚಿಯಾಗುವುದಿಲ್ಲ. ಆದರೆ ಅದೇ ಕಾಳು ಬಿಸಿ ಪಾತ್ರೆಯಲ್ಲಿ ಸುಟ್ಟು ಕರಕಲಾಗಿ ಹೋದರೆ ಅದನ್ನು ಬೀದಿಗೆ ಎಸೆಯಬೇಕಾಗುತ್ತದೆ. ಅದೇ ರೀತಿ ಸಂಸಾರ(ಭವ)ವನ್ನು ನಿರ್ವಹಿಸುವುದರಲ್ಲಿ ಸುಟ್ಟು ಬೂದಿಯಾಗದೆ ಚೆನ್ನಾಗಿ ಪಕ್ವವಾಗಿರುವ ಜೀವವು, ಜಗತ್ತಿಗೆ ಎಲ್ಲರೂ ಬಯಸುವ ರೀತಿಯಲ್ಲಿ ಸವಿಯಾಗಿ ಹದವಾದ ಜೀವವಾಗಿರುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The grain that isn’t heated in a hot vessel is a tasteless waste,
The grain that is scorched becomes a waste even to the public,
The soul that ripens in the world without being burnt
Is delicious to the world – Marula Muniya (695)
(Translation from "Thus Sang Marula Muniya" by Sri. Narasimha Bhat)

Wednesday, November 12, 2014

ಗಾಳಿಗೋಪುರ ಸೊಗಸು ಗಾರ್ ಗೋಪುರಕಿಂತ (694)

ಗಾಳಿಗೋಪುರ ಸೊಗಸು ಗಾರ್ ಗೋಪುರಕಿಂತ |
ತಾಳದೆ ಮನಃಶಿಲ್ಪ ಕಾಮರೂಪಗಳ ||
ಏಳುವುದದೆಂತೊ ಬೀಳ್ವುದುಮಂತು ಆ ಚಿತ್ರ |
ಬಾಳ್ವನಿತ ಕಟ್ಟಿಕೊಳೊ - ಮರುಳ ಮುನಿಯ || (೬೯೪)

(ಏಳುವುದು+ಅದು+ಎಂತೊ)(ಬೀಳ್ವುದುಂ+ಅಂತು)(ಬಾಳ್ವ+ಅನಿತ)

ಗಾಳಿಯಲ್ಲಿ ಗೋಪುರವನ್ನು ಕಟ್ಟುವುದು, ಎಂದರೆ ಮನಸ್ಸಿನಲ್ಲೇ ಮಂಡಿಗೆಯನ್ನು ತಿನ್ನುವುದು, ನಿಜವಾಗಿ ಗೋಪುರವನ್ನು ಕಟ್ಟುವುದಕ್ಕಿಂತಾ ಸೊಗಸಾಗಿ ಕಾಣುತ್ತದೆ. ಏಕೆಂದರೆ ಮನಸ್ಸಿನಲ್ಲಿ ತಾನು ಬಯಸಿದಂತಹ ಆಕಾರಗಳನ್ನು ಊಹಿಸಿಕೊಳ್ಳಬಹುದು. ಆದರೆ ಈ ಚಿತ್ರವು ಹೇಗೆ ರೂಪುಗೊಳ್ಳುವುದೋ ಹಾಗೆಯೇ ಧಿಡೀರ್ ಎಂದು ಬಿದ್ದುಹೋಗುತ್ತದೆ. ಆದಕಾರಣ ಕಲ್ಪನೆಗಳು ಬಾಳಿಗೆ ನೆರವಾಗುವಷ್ಟರಮಟ್ಟಿಗೆ ಮಾತ್ರ ಇರಬೇಕು ಅಷ್ಟೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

A castle in the air is more attractive than a mansion of brick and mortar,
Mental sculpture can take any desired form,
Such pictures rise rapidly and disappear in moments
Build something that lasts life-time – Marula Muniya (694)
(Translation from "Thus Sang Marula Muniya" by Sri. Narasimha Bhat)

Tuesday, November 11, 2014

ಜೀವನವಿವರ್ಧನೆಯೆ ನಿತ್ಯದೆನ್ನುದ್ಯೋಗ (693)

ಜೀವನವಿವರ್ಧನೆಯೆ ನಿತ್ಯದೆನ್ನುದ್ಯೋಗ |
ಆವ ಕಾಣಿಕೆಯನೀನದಕೀವೆಯೆನುತೆ ||
ಆವಗಂ ಕೇಳುತಿರುವಳ್ ಪ್ರಕೃತಿ ಶಿಶುಗಳನು |
ಜೀವನೋದ್ಧೃತಿಗೊದಗೊ - ಮರುಳ ಮುನಿಯ || (೬೯೩)

(ನಿತ್ಯದ+ಎನ್ನ+ಉದ್ಯೋಗ)(ಕಾಣಿಕೆಯ+ನೀನ್+ಅದಕೆ+ಈವೆ+ಎನುತೆ)(ಜೀವನ+ಉದ್ಧೃತಿಗೆ+ಒದಗೊ)

ನನ್ನ ಪ್ರತಿನಿತ್ಯದ ಕೆಲಸವೂ ನಿನ್ನ ಜೀವನದ ಸೊಗಸನ್ನು ಹೆಚ್ಚಿಸುವುದಕ್ಕಾಗಿಯೇ ಇದೆ, ಇದಕ್ಕಾಗಿ ನೀನು ಯಾವ ಉಡುಗರೆಯನ್ನು ಕೊಡುವೆಯೆಂದು ತನ್ನ ಮಕ್ಕಳನ್ನು ಯಾವಾಗಲೂ ಕೇಳುತ್ತಿರುತ್ತಾಳೆ. ಜೀವನವನ್ನು ಸುಖಮಯಗೊಳಿಸಲು ನೆರವಾಗುವುದೇ ಪ್ರಕೃತಿಗೆ ನಾವು ಕೊಡುವ ಕಾಣಿಕೆ ಆಗಿದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

“Working for the prosperity of world life is my daily occupation”
What’s your contribution for this prosperity of life?
Mother Nature thus asks her children time and again.
Join the venture for elevating life to excellence – Marula Muniya (693)
(Translation from "Thus Sang Marula Muniya" by Sri. Narasimha Bhat)

Monday, November 10, 2014

ಬದುಕೆಲ್ಲಮುಂ ಜನಕೆ ವರ್ತಕ ವ್ಯಾಪಾರ (692)

ಬದುಕೆಲ್ಲಮುಂ ಜನಕೆ ವರ್ತಕ ವ್ಯಾಪಾರ |
ತ್ರಿದಿವದೊಡನೆಯುಮಿನಿತು ಮುಯ್ ಮುಯ್ವುದೇಕೆ? ||
ಮದುವೆಯೌತಣದೊಳು ಮಳಿಗೆ ಲೆಕ್ಕಾಚಾರ |
ಹೃದಯಜೀವನ ಶೂನ್ಯ - ಮರುಳ ಮುನಿಯ || (೬೯೨)

(ತ್ರಿದಿವದ+ಒಡನೆಯುಂ+ಇನಿತು)(ಮುಯ್ವುದು+ಏಕೆ)(ಮದುವೆಯ+ಔತಣದ+ಒಳು)

ಪ್ರಪಂಚದಲ್ಲಿ ನಡೆಸುವ ಜೀವನವನ್ನು ಜನಗಳು ಒಂದು ವ್ಯಾಪಾರದ ಸಾಧನವನ್ನಾಗಿ ಮಾಡಿಕೊಂಡಿದ್ದಾರೆ. ಆದರೆ ಸ್ವರ್ಗ(ತ್ರಿದಿವ)ಸುಖ ಅನುಭವಿಸುವಾಗಲೂ ದೇವತೆಗಳೊಡನೆ ಲೆಕ್ಕಾಚಾರ ಮಾಡುವುದೇಕೆ? ಮದುವೆಯ ಊಟವನ್ನು ಮಾಡುತ್ತಿರುವಾಗ ಅಂಗಡಿಯ ಸರಕುಗಳ ಯೋಚನೆ ಮಾಡಬಹುದೇ? ಹೀಗೆ ಎಲ್ಲಾ ಕಡೆ ವ್ಯಾಪಾರೀ ಮನೋಧರ್ಮದಿಂದಲೇ ಬಾಳುವುದಾದರೆ ಹೃದಯವಂತಿಕೆಯ ಬದುಕು ಎಂಬುದಕ್ಕೆ ಅರ್ಥವೇ ಇಲ್ಲದಂತಾಗುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

All life has become the merchant’s trade to men!
Why do you complete and struggle against Heaven like this?
Business calculations even at the time of wedding feast!!
All life activity is devoid of heart-felt emotions – Marula Muniya (692)
(Translation from "Thus Sang Marula Muniya" by Sri. Narasimha Bhat)

Friday, November 7, 2014

ಜೀವ ತಾಂ ಪ್ರತ್ಯಕ್ಷ ದೈವಾಂಶವಾಗಿರಲು (691)

ಜೀವ ತಾಂ ಪ್ರತ್ಯಕ್ಷ ದೈವಾಂಶವಾಗಿರಲು |
ಆವುದೋ ಶಾಸ್ತ್ರವಾಕ್ಯವನರಸಲೇಕೆ? ||
ಜೀವಪೋಷಣೆಗಲ್ತೆ ಮಿಕ್ಕೆಲ್ಲ ದೇವರುಂ |
ಜೀವಿತವೆ ಪರತತ್ತ್ವ - ಮರುಳ ಮುನಿಯ || (೬೯೧)

(ದೈವಾಂಶ+ಆಗಿರಲು)(ಶಾಸ್ತ್ರವಾಕ್ಯವಂ+ಅರಸಲ್+ಏಕೆ)

ಜೀವವು ಕಣ್ಣಿಗೆ ಕಾಣಿಸುತ್ತಿರುವ ದೈವದ ಭಾಗವಾಗಿರಲು, ಯಾವುದೋ ಬೇರೆ ಶಾಸ್ತ್ರಗಳ ವಾಕ್ಯಗಳನ್ನು ಹುಡುಕಿಕೊಂಡು ಏಕೆ ಹೋಗುತ್ತೀಯೆ? ಮಿಕ್ಕೆಲ್ಲಾ ದೇವರುಗಳಿರುವುದು ಜೀವಿಯನ್ನು ಕಾಪಾಡುವುದಕ್ಕೆ ತಾನೆ? ಈ ಜಗತ್ತಿನಲ್ಲಿ ಬದುಕಿ ಬಾಳುವುದೇ ಶ್ರೇಷ್ಠವಾದ ತತ್ತ್ವ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

When the Soul itself if God’s own visible part personified
Why should you seek the support of shastras?
Are not all Gods worshipped for the sustenance of the soul?
Life itself is Divinity personified – Marula Muniya (691)
(Translation from "Thus Sang Marula Muniya" by Sri. Narasimha Bhat)

Tuesday, November 4, 2014

ಜೀವನವ ಶುಚಿಯೆನಿಸು ಜೀವನವ ರುಚಿಯೆನಿಸು (690)

ಜೀವನವ ಶುಚಿಯೆನಿಸು ಜೀವನವ ರುಚಿಯೆನಿಸು |
ದೈವದೊಂದಂಶ ಸಂಪುಟವೊಂದು ಜೀವ ||
ದೈವಪದಯೋಗ್ಯತೆಯ ಜೀವಿತಕೆಗಳಿಸಲದೆ |
ಜೀವಜಯಸಂಪ್ರಾಪ್ತಿ - ಮರುಳ ಮುನಿಯ || (೬೯೦)

(ದೈವದ+ಒಂದು+ಅಂಶ)(ಜೀವಿತಕೆ+ಗಳಿಸಲ್+ಅದೆ)

ಜೀವನವನ್ನು ನಿರ್ಮಲ ಮತ್ತು ಪವಿತ್ರವನ್ನಾಗಿ ಮಾಡಿಕೊ. ಅದನ್ನು ಸವಿಯೆನ್ನಿಸುವಂತೆ ಮಾಡಿಕೊ. ಜೀವವು ದೈವದ ಪುಸ್ತಕದ ಒಂದು ಭಾಗವಷ್ಟೆ. ಜೀವನವನ್ನು ನಡೆಸಿ ಪರಮಾತ್ಮನ ಪಾದಾರವಿಂದವನ್ನು ಸೇರುವ ಅರ್ಹತೆಯನ್ನು ಸಂಪಾದಿಸಿಸಲ್ಲಿ ಅದೇ ಜೀವಕ್ಕೆ ಗೆಲುವಿನ ದಾರಿಯಾಗುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Keep your life pure and make your life and abode of happiness,
You soul is a casket for God’s own portion,
Success in life you will attain when you acquire godliness
For your own life – Marula Muniya (690)
(Translation from "Thus Sang Marula Muniya" by Sri. Narasimha Bhat)

Monday, November 3, 2014

ಯುಗದಿಂದ ಯುಗಕೆ ಸಾಗಿದರು ಮುಗಿಯದು ಬಾಳು (689)

ಯುಗದಿಂದ ಯುಗಕೆ ಸಾಗಿದರು ಮುಗಿಯದು ಬಾಳು |
ಜಗದ ಕುಣಿವೊಂದು ಚಣ ಮನುಜ ಜೀವನದಿ ||
ನೆಗೆ ಸೂರ್ಯಮಂಡಲಕ್ಕೆರಗು ಭೂಮಂಡಲಕೆ |
ಬಗೆ ನಿನಗೆ ನೀನೆ ದೊರೆ - ಮರುಳ ಮುನಿಯ || (೬೮೯)

(ಸೂರ್ಯಮಂಡಲಕ್ಕೆ+ಎರಗು)

ಒಂದು ಯುಗದಿಂದ ಮತ್ತೊಂದು ಯುಗಕ್ಕೆ ಮುಂದುವರಿದರೂ ಸಹ, ಬದುಕು ಕೊನೆಗಾಣುವುದಿಲ್ಲ. ಮನುಷ್ಯನ ಬಾಳಿನಲ್ಲಿ ಜಗತ್ತಿನ ಕುಣಿತ ಒಂದೇ ಒಂದು ಕ್ಷಣ(ಚಣ)ವಿರುತ್ತದೆ. ನೀನು ಸೂರ್ಯಮಂಡಲಕ್ಕೆ ಹಾರು ಅಥವಾ ಭೂಮಂಡಲಕ್ಕೆ ಬೀಳು(ಎರಗು). ನಿನಗೆ ನೀನೇ ರಾಜನೆಂದು ತಿಳಿ (ಬಗೆ).
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Life would not end even though it flows from age to age,
Life in this world is just a moment in the eternal life of the soul of man,
Leap up to the sun or jump upon the earth
But know that you are your own monarch – Marula Muniya (689)
(Translation from "Thus Sang Marula Muniya" by Sri. Narasimha Bhat)