Tuesday, November 18, 2014

ದೈವಪ್ರಮಾದಿಗಳ ಸಂಸ್ಕರಣಚೋದಕರ (696)

ದೈವಪ್ರಮಾದಿಗಳ ಸಂಸ್ಕರಣಚೋದಕರ |
ಗೋವಿಂದ ಜಿನ ಬುದ್ಧ ಕ್ರಿಸ್ತ ಮಹಮದರ ||
ಗೋವುರಂಗಳೊಳಿರಿಸಿ ನಮಿಪೆವೆಂಬರು ಜನರು |
ಜೀವನಕೆ ಸೋಕಿಸರು - ಮರುಳ ಮುನಿಯ || (೬೯೬)

(ಗೋವುರಂಗಳ+ಒಳ+ಇರಿಸಿ)(ನಮಿಪೆ+ಎಂಬರು)

ದೇವಸಂದೇಶವನ್ನು ಸಾರುವ ದೇವದೂತರುಗಳನ್ನು ಮತ್ತು ಬಾಳನ್ನು ಹಸನುಗೊಳಿಸಿ, ಉದ್ಧಾರಗೊಳಿಸಿದ ಗೋವಿಂದ, ಮಹಾವೀರ, ಗೌತಮಬುದ್ಧ, ಏಸು ಕ್ರಿಸ್ತ ಮತ್ತು ಪ್ರವಾದಿ ಪೈಗಂಬರುಗಳನ್ನು, ಜನರು ಗೋಪುರ(ಗೋವುರ)ಗಳೊಳಗಡೆ ಇಟ್ಟು ಪೂಜಿಸುತ್ತಾರೆಯೇ ಹೊರತು ಅವರ ಹಿತೋಪದೇಶಗಳನ್ನು ತಮ್ಮ ಜೀವನಕ್ಕೆ ಅಳವಡಿಸಿಕೊಳ್ಳುವುದಿಲ್ಲ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The messengers of God and great reformers like
Govinda, Jina, Buddha, Christ and Mohammed,
People who wish to install them on high towers and worship
Keep them away from their lives – Marula Muniya (696)
(Translation from "Thus Sang Marula Muniya" by Sri. Narasimha Bhat)

No comments:

Post a Comment