Monday, September 30, 2013

ಆವುದೋ ಒಂದಿಹುದು ವಸ್ತುವೋ ಸತ್ತ್ವವೋ (506)

ಆವುದೋ ಒಂದಿಹುದು ವಸ್ತುವೋ ಸತ್ತ್ವವೋ |
ಭಾವ ಮಹಿಮೆಯೊ ಗುಣಮೊ ತೇಜವೋ ಏನೋ ||
ಕಾವುದೆಲ್ಲವನು ತಾಂ ತೀವಿ ಮರೆಯಾಗಿಹುದು |
ದೈವವೆಂದದನು ಕರೆ - ಮರುಳ ಮುನಿಯ || (೫೦೬)

(ಕಾವುದು+ಎಲ್ಲವನು)(ಮರೆ+ಆಗಿ+ಇಹುದು)(ದೈವ+ಎಂದು+ಅದನು)

ಯಾವುದೋ ಒಂದು ಇದೆ. ಅದು ಒಂದು ಪದಾರ್ಥವಾಗಿರಬಹುದು, ಶಕ್ತಿಯಾಗಿರಬಹುದು, ಭಾವನೆಯಾಗಿರಬಹುದು, ಮಹಿಮೆಯಾಗಿರಬಹುದು, ಸ್ವಭಾವಗಳಿರಬಹುದು, ಹೊಳೆಯುವ ಕಾಂತಿಯಿರಬಹುದು ಅಥವಾ ಇನ್ನೇನಾದರೂ ಆಗಿರಬಹುದು. ಅದು ಎಲ್ಲವನ್ನೂ ಕಾಪಾಡುತ್ತಿದೆ. ಆದರೆ ತಾನು ಮಾತ್ರ ಎಲ್ಲೆಲ್ಲಿಯೂ ತುಂಬಿ, ಹರಡಿಕೊಂಡು ಬಚ್ಚಿಟ್ಟುಕೊಂಡಿದೆ. ಅದನ್ನೇ ದೇವರೆಂದು ಸಂಬೋಧಿಸು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Something exists, some entity, some power
It may be a great emotion, a great source of virtues, a great radiance
It protects everything, It fills every place but It remains unseen
You may call It God – Marula Muniya
(Translation from "Thus Sang Marula Muniya" by Sri. Narasimha Bhat)

Friday, September 27, 2013

ಇಷ್ಟಗಳನೊಡೆಯುವುದು ಕಷ್ಟಗಳ ನೀಡುವುದು (505)

ಇಷ್ಟಗಳನೊಡೆಯುವುದು ಕಷ್ಟಗಳ ನೀಡುವುದು |
ದುಷ್ಟಸಾಸದೆ ಶಿಷ್ಟತನವ ಪರಿಕಿಪುದು ||
ಎಷ್ಟ ನೀಂ ಸೈಸಲಹುದೆನ್ನುವುದು ವಿಧಿರಾಯ |
ಶಿಷ್ಟ ಶೋಧಕನವನು - ಮರುಳ ಮುನಿಯ || (೫೦೫)

(ಇಷ್ಟಗಳನ್+ಒಡೆಯುವುದು)(ಸೈಸಲ್+ಅಹುದು+ಎನ್ನುವುದು)(ಶೋಧಕನು+ಅವನು)

ನಿನಿಗಿಷ್ಟವಾಗಿರುವ ವಸ್ತುಗಳನ್ನು ಪುಡಿಪುಡಿ ಮಾಡಿ ನಾಶ ಮಾಡುವುದು. ನಿನಗೆ ಸಾಕಷ್ಟು ಕಷ್ಟಗಳನ್ನು ಕೊಡುವುದು. ದುಷ್ಟ ಸಾಹಸ(ಸಾಸ)ಗಳಿಂದ ನಿನ್ನ ಒಳ್ಳೆಯತನವನ್ನು ಪರೀಕ್ಷೆಗೊಳಪಡಿಸುವುದು. ಇವುಗಳನ್ನೆಲ್ಲಾ ನೀನು ಎಷ್ಟರಮಟ್ಟಿಗೆ ಸಹಿಸುವೆಯೆಂದು ವಿಧಿರಾಯನು ಕೇಳುತ್ತಾನೆ. ಪ್ರಪಂಚದಲ್ಲಿರುವ ಸಜ್ಜನ(ಶಿಷ್ಟ)ರನ್ನು ಹುಡುಕುವುದಕ್ಕೆಂದು ಅವನು ಮಾಡುವ ಕಾರ್ಯಗಳಿವು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

He shatters your fond dreams and subjects you to many sufferings
With many wicked ventures He tests your goodness
“Let me see how much you can patiently endure”, remarks Lord Fate
He explores the intrinsic good in you – Marula Muniya (505)
(Translation from "Thus Sang Marula Muniya" by Sri. Narasimha Bhat)

Thursday, September 26, 2013

ಬದುಕೆಂಬ ಹೆಸರಿನಲಿ ನೀಂ ಜಗವ ಜಗ ನಿನ್ನ (504)

ಬದುಕೆಂಬ ಹೆಸರಿನಲಿ ನೀಂ ಜಗವ ಜಗ ನಿನ್ನ |
ಕುದಿಸುತ್ತ ಕೆದಕುತ್ತ ಕುಲುಕುತಿರುವಂದು ||
ಬದಲಾಗದೆಂತು ನೀಮಿರ‍್ಪುದೀ ನಿಮ್ಮಾಟ |
ವಿಧಿಯ ನಿತ್ಯವಿಲಾಸ - ಮರುಳ ಮುನಿಯ || (೫೦೪)

(ಕುಲುಕುತಿರುವ+ಅಂದು)(ಬದಲಾಗದು+ಎಂತು)(ನೀಂ+ಇರ‍್ಪುದು+ಈ)

ಜೀವನವೆನ್ನುವ ಹೆಸರಿನಲ್ಲಿ ಪ್ರಪಂಚವು ನಿನ್ನನ್ನು ಮತ್ತು ನೀನು ಪ್ರಪಂಚವನ್ನು ಕುದಿಸುತ್ತ ಕೆದಕುತ್ತ ಮತ್ತು ಅಲುಗಾಡಿಸುತ್ತಿರುವಾಗ, ನಿಮ್ಮಿಬ್ಬರ ಈ ಆಟವು ಬದಲಾಗದಿರಲು ಹೇಗೆ ಸಾಧ್ಯ? ಇದು ವಿಧಿಯ ಪ್ರತಿದಿನದ ಕ್ರೀಡೆ ಮತ್ತು ವಿಹಾರ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Living in this world, you and the world interact with each other
You boil, dig and shake each other ceaselessly
How then can you remain unchanged? All your interplay
Is really the regular play of Destiny – Marula Muniya
(Translation from "Thus Sang Marula Muniya" by Sri. Narasimha Bhat)

Wednesday, September 25, 2013

ಲ್ಯುಕ್ರೀಷಿಯಸ್ಸಿನಾ ಪ್ರಕೃತಿಪ್ರಲಯವಾದ (503)

ಲ್ಯುಕ್ರೀಷಿಯಸ್ಸಿನಾ ಪ್ರಕೃತಿಪ್ರಲಯವಾದ |
ನ್ಯಕ್ಕೃತಾಕ್ಷಿಯವಾದ ವಿಸ್ಮೃತಾತ್ಮನದು ||
ಸ್ವೀಕೃತಾಮರ್ತ್ಯಾತ್ಮಪಾರಮ್ಯ ದೃಗ್ವಾದ |
ಸಾಕ್ರೆಟೀಸನವಾದ - ಮರುಳ ಮುನಿಯ || (೫೦3)

(ವಿಸ್ಮೃತ+ಆತ್ಮನದು)(ಸ್ವೀಕೃತ+ಅಮರ್ತ್ಯ+ಅತ್ಮ)

ಲ್ಯುಕ್ರೀಷಿಯಸ್ ಎಂಬಾತನು ಸುಮಾರು ಕ್ರಿ.ಪೂ. ೯೬-೫೫ರಲ್ಲಿ ಇದ್ದ ಲ್ಯಾಟಿನ ಕವಿ. ಎಪಿಕ್ಯೂರಸ್ ತತ್ತ್ವಜ್ಞನ ಪಂಥಕ್ಕೆ ಸೇರಿದವನು. ಆ ಪಂಥದ ವಿಚಾರಧಾರೆಯನ್ನು ತಿಳಿಸುವುದು ಇವನ De Return Natura ವಸ್ತು ಸ್ವಭಾವ ಅಥವಾ ಜಗತ್ಸ್ವಭಾವ ಎಂಬ ಪದ್ಯ ಕಾವ್ಯ.

"ಈ ಜಗತ್ತು ಕೇವಲ ಪರಮಾಣುಗಳ ಸಂಯೋಗ-ವಿಯೋಗಾದಿ ನಾನಾ ವಿಕಾರ ಪರಿಣಾಮಗಳಿಂದ ಉಂಟಾದದ್ದು. ಇದಕ್ಕೆ ಬೇರೆ ನಿಯಾಮಕನು ಯಾರೂ ಇರುವಂತಿಲ್ಲ. ಮನುಷ್ಯನು ಸಾಧಿಸಬಹುದಾದದ್ದು ಬಹು ಸ್ವಲ್ಪ. ಅವನ ಬುದ್ಧಿವಂತಿಕೆಯೇನಿದ್ದರೂ ಬಂದದ್ದನ್ನು ಸಹಿಸಿಕೊಂಡು ಶಾಂತಚಿತ್ತನಾಗಿರುವುದರಲ್ಲಿ. ಭೋಗವನ್ನು ಜೀವನದ ಪರಮಾರ್ಥವನ್ನಾಗಿ ಮಾಡಿಕೊಳ್ಳತಕ್ಕದ್ದಲ್ಲ. ನಾವು ಹುಡುಕಬೇಕಾದದ್ದು ಭೋಗವನ್ನಲ್ಲ; ಸಮಾಧಾನವನ್ನು. ಇದಕ್ಕಾಗಿ ಅತ್ಯಾಶೆಗಳನ್ನು ಅದುಮಬೇಕು. ರಾಗಾವೇಶಗಳನ್ನು ತಡೆಯಬೇಕು. ಕ್ಷುದ್ರದೈವಗಳ ಭೀತಿಯನ್ನು ನೀಗಬೇಕು. ಇಂದ್ರಿಯ ಸಂಯಮ, ಲಬ್ಧ ಸಂತೃಪ್ತಿ, ವಿರಕ್ತಭಾವ ಇದರಿಂದಲೇ ನಿಜವಾದ ಸುಖ"- ಇದು ಲ್ಯುಕ್ರೀಷಿಯಸ್‍ನ ಬೋಧೆ.

ನ್ಯಕ್ಕೃತಾಕ್ಷಿಯವಾದ: ನೃಕ್ಕೃತ ಕೆಳಗೆ (ಪಾದದಲ್ಲಿ) ಇರುವ ಕಣ್ಣು ಯಾರಿಗೋ ಅವನು ನ್ಯಕ್ಕೃತಾಕ್ಷಿ. ಅಕ್ಷಪಾದನೆಂಬ ಅಭಿಪ್ರಾಯ. ಈತನು ನ್ಯಾಯಶಾಸ್ತ್ರವನ್ನು ರಚಿಸಿದ ಗೌತಮಮಹರ್ಷಿ. ಲ್ಯುಕ್ರೀಷಿಯಸ್‍ನ ಸಿದ್ಧಾಂತದಂತೆ ನ್ಯಾಯಶಾಸ್ತ್ರವು ಪರಮಾಣುವಾದವನ್ನು ಮುಂದಿಡುತ್ತದೆ. ಆದರೆ ಜೀವಾತ್ಮ ಪರಮಾತ್ಮರನ್ನು ನ್ಯಾಯಶಾಸ್ತ್ರ ಅಂಗೀಕರಿಸುತ್ತದೆ. ಈ ಆಸ್ತೀತ್ವವನ್ನು ತೆಗೆದು ಹಾಕಿದರೆ ಅದು ಲ್ಯುಕ್ರೀಷಿಯಸ್‍ನ ವಾದವೇ ಆಗುತ್ತದೆ. ಸಾಕ್ರೆಟಿಸ್ ಎಂಬ ಗ್ರೀಕ ತತ್ತ್ವಜ್ಞಾನಿ ಅಮರನಾದ ಆತ್ಮನನ್ನು ಅಂಗೀಕರಿಸುತ್ತಾನೆ.

ಲ್ಯುಕ್ರೀಷಿಯಸ್‍ನ, ಪ್ರಕೃತಿ ಪ್ರಲಯಗಳು ಮಾತ್ರ ನಿಜ, ಪ್ರಪಂಚವೆಲ್ಲವೂ ಪರಮಾಣುಗಳ ಸಂಯೋಗ ಮತ್ತು ವಿಯೋಗದಿಂದಾದ್ದು, ಇದಕ್ಕೆ ಬೇರೆ ಯಾವ ನಿಯಾಮಕನೂ ಇರುವಂತಿಲ್ಲವೆನ್ನುವ ಒಂದು ಚರ್ಚೆ. ಪರಮಾಣುವಾದವನ್ನು ಮುಂದಿಟ್ಟರೂ ಜೀವಾತ್ಮ ಮತ್ತು ಪರಮಾತ್ಮನನ್ನು ಅಂಗೀಕರಿಸುವ ನ್ಯಾಯಶಾಸ್ತ್ರವನ್ನು ರಚಿಸಿದ ಗೌತಮ ಮಹರ್ಷಿಯ ವಾದ ಇನ್ನೊಂದು. ಅಮರನಾದ ಆತ್ಮವನ್ನು ಅಂಗೀಕರಿಸುವ ಸಾಕ್ರೆಟಿಸನ ಮತ್ತೊಂದು ತರ್ಕ. ಸೃಷ್ಟಿಯ ಮತ್ತು ಪ್ರಪಂಚದ ಬಗ್ಗೆ ಈ ಮೂರು ವಿಧವಾದ ಅಭಿಪ್ರಾಯಗಳಿವೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Automatic creation and dissolution by atoms was the philosophy of Lucretiues
Nyakrutakshi advocated the existence of soul forgotten by Lucretiues
Immortality and supremacy of the soul
Was the philosophy of Socrates – Marula Muniya
(Translation from "Thus Sang Marula Muniya" by Sri. Narasimha Bhat)

Friday, September 20, 2013

ನರಲೋಕವೇನಸುರವೆನಿಪ ಜಗದಿಂ ಘೋರ (502)

ನರಲೋಕವೇನಸುರವೆನಿಪ ಜಗದಿಂ ಘೋರ |
ಮರಣವೇಂ ಜನದಿಂದ ಜನಕೆ ಉಪಕಾರ ||
ಪರಮಾತ್ಮಚಿಂತೆಯೆತ್ತಲಾತ್ಮಸಂಯಮವೆತ್ತ |
ನರಕಮಾರ್ಗಿಯೊ ಲೋಕ - ಮರುಳ ಮುನಿಯ || (೫೦೨)

(ನರಲೋಕವೇನ್+ಅಸುರ+ಎನಿಪ)(ಪರಮಾತ್ಮಚಿಂತೆ+ಎತ್ತಲ್+ಆತ್ಮಸಂಯಮ+ಎತ್ತ)

ಮನುಷ್ಯನು ವಾಸಿಸುವ ಈ ಪ್ರಪಂಚವು ರಾಕ್ಷಸರ ಜಗತ್ತಿಗಿಂತಲೂ ಭಯಂಕರವಾದದು. ಸಾವೆನ್ನುವುದು ಒಬ್ಬರಿಂದ ಇನ್ನೊಬ್ಬರಿಗೆ ಯೋಗ್ಯವಾಗಿ ಸಂದ ಸಹಾಯ. ಪರಮಾತ್ಮನ ಬಗ್ಗೆ ಚಿಂತಿಸುವಾಗ ಆತ್ಮ ಸಂಯಮವು ಎಲ್ಲಿ ಹೋಗುತ್ತದೆ? ಪ್ರಪಂಚವು ನರಕಕ್ಕೆ ದಾರಿ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

This world of human beings seems to be more terrible than the world of demons
Death seems to be more helpful to mankind than birth
Where’s the thought of God and where’s the idea of self-control?
This world is moving hellward – Marula Muniya
(Translation from "Thus Sang Marula Muniya" by Sri. Narasimha Bhat)

Thursday, September 19, 2013

ಶರಣು ಶರಣಿರುವುದಕೆ ಸತ್ಯಕ್ಕೆ ತತ್ತ್ವಕ್ಕೆ (501)

ಶರಣು ಶರಣಿರುವುದಕೆ ಸತ್ಯಕ್ಕೆ ತತ್ತ್ವಕ್ಕೆ |
ಹರಡಿಹುದದೆತ್ತಲೆತ್ತಲುಮೆಂದದೆಂದೂ ||
ಇರದುದರ ಮಾತೇಕೆ ಸುಳ್ಳು ಶೂನ್ಯಕೆ ಬುರುಡೆ |
ಇರುವುದೇ ಮೊದಲಿಳಿಗೆ - ಮರುಳ ಮುನಿಯ || (೫೦೧)

(ಶರಣು+ಇರುವುದಕೆ)(ಹರಡಿಹುದು+ಅದು+ಎತ್ತಲೆತ್ತಲುಂ+ಎಂದು+ಅದು+ಎಂದೂ)(ಮೊದಲು+ಇಳಿಗೆ)

ಸತ್ಯದ ಅಸ್ತಿತ್ವಕ್ಕೆ ತತ್ತ್ವದ ಸ್ವರೂಪಕ್ಕೆ ನಮಿಸುತ್ತಿದ್ದೇನೆ. ಅದು ಸದಾ ಕಾಲವೂ ಎಲ್ಲೆಲ್ಲಿಯೂ ವ್ಯಾಪಿಸಿಕೊಂಡಿದೆ. ಇಲ್ಲದಿರುವುದರ ಬಗ್ಗೆ ಮಾತನಾಡಿ ಏನು ಉಪಯೋಗ? ಸುಳ್ಳೆನ್ನುವುದು ಶೂನ್ಯಕ್ಕೆ ಬುರುಡೆ. ಪ್ರಪಂಚದಲ್ಲಿ ಮೊದಲು ಇರುವುದೇ ಅದೇ ಒಂದು ಸದ್ವಸ್ತು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Surrender to the Truth, the Divine Reality worthy of surrender
It pervades every place and it exists in all times
Why talk about which exists not? It is untruth and a bulb of void
That which exists is of top priority on the earth – Marula Muniya
(Translation from "Thus Sang Marula Muniya" by Sri. Narasimha Bhat)

Wednesday, September 18, 2013

ಹುಲ್ಲು ಬಯಲೊಳು ನೀನು ಹೂವುಗಳ ಹುಡುಕುತ್ತ (500)

ಹುಲ್ಲು ಬಯಲೊಳು ನೀನು ಹೂವುಗಳ ಹುಡುಕುತ್ತ |
ಕಲ್ಲುಗಳ ನಡುವೆ ನೀಂ ರನ್ನಗಳನರಸುತ್ತ ||
ತಲ್ಲಣದ ನಡುವೆ ನೀಂ ತಾಳ್ಮೆದಾಳುತ್ತ |
ಬೆಲ್ಲವಿರು ಕಹಿಗಳೊಳು - ಮರುಳ ಮುನಿಯ || (೫೦೦)

(ರನ್ನಗಳನು+ಅರಸುತ್ತ)(ಕಹಿಗಯ+ಒಳು)

ಹುಲ್ಲುಗಾವಲಿನಲ್ಲಿ ಹೂವುಗಳನ್ನು ಅರಸುತ್ತಾ, ಕಲ್ಲುಗಳ ಮಧ್ಯದಲ್ಲಿ ರತ್ನ(ರನ್ನ)ಗಳನ್ನು ಹುಡುಕುತ್ತಾ, ಹೆದರಿಕೆ ಮತ್ತು ತಳಮಳಗಳ ಮಧ್ಯೆ ಸಹನೆಯನ್ನು ತಂದುಕೊಳ್ಳುತ್ತಾ ಜೀವನದ ಕಹಿಗಳಲ್ಲಿ ಸಿಹಿಯಾದ ಬೆಲ್ಲದಂತಿರು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Searching flowers in grassland
Seeking gems in the large mass of stones
Remaining patient in the midst of anxieties,
Remain sweet in the midst of bitterness – Marula Muniya
(Translation from "Thus Sang Marula Muniya" by Sri. Narasimha Bhat)

Tuesday, September 17, 2013

ನೀರು ಮೂರ್ ಬಾನಿಂದ ಮಳೆ ನೆಲದಿನೂಟೆ ಇವು (499)

ನೀರು ಮೂರ್ ಬಾನಿಂದ ಮಳೆ ನೆಲದಿನೂಟೆ ಇವು |
ಸೇರಿ ಕೆರೆ ಹಳೆಯುಳಿಕೆ ಊರಿಗುಪಯೋಗ ||
ಮೂರುಣಿಸು ನಿನಗಂ ನಿಜಾರ್ಜಿತಂ ಸೃಷ್ಟ್ಯಂಶ |
ಪ್ರಾರಬ್ಧವೀ ತ್ರಿತಯ - ಮರುಳ ಮುನಿಯ ||(೪೯೯)

(ಬಾನ್+ಇಂದ)(ನೆಲದಿಂ+ಊಟೆ)(ಊರಿಗೆ+ಉಪಯೋಗ)(ಮೂರ್+ಉಣಿಸು)(ನಿಜ+ಆರ್ಜಿತಂ)(ಸೃಷ್ಟಿ+ಅಂಶ)

ಪ್ರಪಂಚದಲ್ಲಿ ನೀರು ನಮಗೆ ಮುರು ವಿಧಗಳಲ್ಲಿ ಸಿಗುತ್ತದೆ. ಆಕಾಶದಿಂದ ಬರುವ ಮಳೆಯಿಂದ ಮತ್ತು ಭೂಮಿಯಲ್ಲಿ ಉಕ್ಕುವ ಚಿಲುಮೆಯಿಂದ. ಹಾಗೆಯೇ ಇವುಗಳು ಸೇರಿ ಒಂದು ಕೆರೆಯಾಗಿ ಹಳೆಯ ನೀರನ್ನು ಕೂಡಿಕೊಂಡು ಊರಿನ ಉಪಯೋಗಕ್ಕಾಗುತ್ತದೆ. ನಿನಗೂ ಸಹ ಇದೇ ರೀತಿ ಮೂರು ವಿಧವಾದ ಊಟಗಳಿವೆ. ನೀನು ಸ್ವತಃ ಸಂಪಾದಿಸಿದ ಐಶ್ವರ್ಯ, ನಿಶ್ಚಿತವಾಗಿರುವ ಪಾಲುಗಳು ಮತ್ತು ವಿಧಿ ನಿನಗೆ ಕೊಡುವ ಉಡುಗೊರೆಗಳು. ಅದೃಷ್ಟವು ಈ ಮೂರು ಬಗೆಗಳಲ್ಲಿ ಬರುತ್ತವೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Sources of water to the people are three
The rain, the bubbling spring and the stored water in tanks and wells
Your past karma, your present earnings and the gifts of nature
These three meals you eat – Marula Muniya
(Translation from "Thus Sang Marula Muniya" by Sri. Narasimha Bhat)

Thursday, September 12, 2013

ಅನ್ನ ಕೋಶಕ್ಕೆ ನೆರೆ ಮಲಕೋಶ ದೇಹದಲಿ (498)

ಅನ್ನ ಕೋಶಕ್ಕೆ ನೆರೆ ಮಲಕೋಶ ದೇಹದಲಿ |
ಪುಣ್ಯಗಂಧಕೆ ಪಾಪಗಂಧ ನೆರೆ ಮನದಿ ||
ಮಣ್ಣುಮುಂಡುಗೋಲ ಪುಡಿಯುಂ ಬೆರೆತು ನರರಚನೆ |
ನಿನ್ನೆಚ್ಚರದೆ ಶುದ್ಧಿ - ಮರುಳ ಮುನಿಯ ||(೪೯೮)

(ಮಣ್ಣು+ಉಂಡುಗೋಲ)(ನಿನ್ನ+ಎಚ್ಚರದೆ)

ಮನುಷ್ಯನ ದೇಹದಲ್ಲಿ ಅನ್ನ ಇರುವ ಸಂಚಿ(ಕೋಶ)ಯ ಪಕ್ಕದಲ್ಲೇ ಮಲವಿರುವ ಸಂಚಿಯೂ ಇದೆ. ಮನುಷ್ಯನ ಮನಸ್ಸಿನಲ್ಲಿ ಪುಣ್ಯದ ಸುಗಂಧದ ಪಕ್ಕದಲ್ಲಿಯೇ ಪಾಪದ ದುರ್ನಾತವೂ ಹೊಡೆಯುತ್ತಿದೆ. ಮಣ್ಣು ಮತ್ತು ಆಕಾಶದಲ್ಲಿರುವ ನಕ್ಷತ್ರಲೋಕದ(ಉಡುಗೋಲ) ಪುಡಿಗಳೂ ಕೂಡಿಕೊಂಡು ಮನುಷ್ಯನ ದೇಹದ ರಚನೆಯಾಗಿದೆ. ನೀನು ನಿನ್ನ ಜಾಗ್ರತೆಯಲ್ಲಿದ್ದರೆ ಮಾತ್ರ ಚೊಕ್ಕಟವಾಗಿರಲು ಸಾಧ್ಯ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The sack of excreta lies close to stomach in human body
The stink of sins is adjacent to the scent of virtues in the mind
Human body is formed with the dust of earth and dust of stars
You can remain pure only if you are vigilant – Marula Muniya
(Translation from "Thus Sang Marula Muniya" by Sri. Narasimha Bhat)

Wednesday, September 11, 2013

ಮರ್ತ್ಯಾಂಗರೂಪದೊಳಮರ್ತ್ಯಾಂಶದವತಾರ (497)

ಮರ್ತ್ಯಾಂಗರೂಪದೊಳಮರ್ತ್ಯಾಂಶದವತಾರ |
ದೈತ್ಯ ವಾಸನೆಗಳೊಡನಮರ ಸುಮಸುರಭಿ ||
ವ್ಯತ್ಯಯಾಭಾಸಂಗಳುದರದೊಳು ಪರಸತ್ಯ |
ಮಿಥ್ಯೆ ಸತ್ಯದ ಹೊದಕೆ - ಮರುಳ ಮುನಿಯ || (೪೯೭)

(ಮರ್ತ್ಯ+ಅಂಗರೂಪದೊಳ್+ಅಮರ್ತ್ಯಾಂಶದ+ಅವತಾರ)(ವಾಸನೆಗಳೊಡನೆ+ಅಮರ)(ವ್ಯತ್ಯಯಾಭಾಸಂಗಳ+ಉದರದೊಳು)

ಒಂದು ದಿನ ಮರಣಿಸುವ ಮನುಷ್ಯನ ಆಕಾರದೊಳಗೆ ಮರಣವಿಲ್ಲದಿರುವ ದೇವ(ಅಮರ್ತ್ಯ)ತ್ವದ ಅಂಶಗಳು ಇಳಿದುಬಂದಿದೆ. ರಾಕ್ಷಸ(ದೈತ್ಯ) ವಾಸನೆಗಳ ಜೊತೆ, ಪಾರಿಜಾತ(ಅಮರಸುಮ)ದ ಸುವಾಸನೆಗಳಿವೆ. ಈ ರೀತಿಯ ವಿರೋಧಾಭಾಸಗಳ (ವ್ಯತ್ಯಯಾಭಾಸಂಗಳ) ಹೊಟ್ಟೆ(ಉದರ)ಯಲ್ಲಿ ಶ್ರೇಷ್ಠವಾದ ಪರಮ ಸತ್ಯವನ್ನು ನಾವು ಕಾಣುತ್ತೇವೆ. ಏಕೆಂದರೆ ಸತ್ಯಕ್ಕೆ ಸುಳ್ಳಿ(ಮಿಥ್ಯೆ)ನ ಹೊದಿಕೆ ಇದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Immortal soul incarnates in the mortal human body
The scent of Heavenly flower with demonic stench
Divine Truth in the bosom of apparent contradictions
The Real is behind the mask of the unreal – Marula Muniya
(Translation from "Thus Sang Marula Muniya" by Sri. Narasimha Bhat)

Tuesday, September 10, 2013

ಗುಡಿಯ ಕಟ್ಟುವನಿತ್ತು ಭಕ್ತಿಯಿರದೊಡೆ ಬೇಡ (496)

ಗುಡಿಯ ಕಟ್ಟುವನಿತ್ತು ಭಕ್ತಿಯಿರದೊಡೆ ಬೇಡ |
ಗುಡಿಯನೊಡೆಯುವನಿತ್ತು ಸತ್ಯಾಸ್ಥೆಯಿಹುದೇಂ? ||
ದೃಢ ನಿಶ್ಚಯವನರಸದಿರ್ಪುದಾಸೀನತೆಯ- |
ನುಡುಗಿ ನಶಿಸುವುದಾತ್ಮ - ಮರುಳ ಮುನಿಯ || (೪೯೬)

(ಕಟ್ಟುವ+ಅನಿತ್ತು)(ಭಕ್ತಿಯಿರದ+ಒಡೆ)(ಗುಡಿಯನ್+ಒಡೆಯುವ+ಅನಿತ್ತು)(ಸತ್ಯ+ಆಸ್ಥೆ+ಇಹುದೇಂ)(ನಿಶ್ಚಯವನ್+ಅರಸದೆ+ಇರ್ಪ+ಉದಾಸೀನತೆಯನ್+ಉಡುಗಿ)(ನಶಿಸುವುದು+ಆತ್ಮ)

ದೇವಸ್ಥಾನವನ್ನು ಕಟ್ಟುವಷ್ಟಾದರೂ ದೈವಭಕ್ತಿ ಇರದಿದ್ದರೆ ಬೇಡ, ಆ ದೇವಸ್ಥಾನವನ್ನು ಒಡೆಯುವುದರಲ್ಲಾದರೂ ತಾನು ಮಾಡುತ್ತಿರುವುದು ಸರಿಯಾದ ಕೆಲಸವೆಂಬ ನಂಬಿಕೆ ಇದೆಯೊ? ಅದೂ ಇಲ್ಲ, ಇದೂ ಇಲ್ಲ. ಒಂದು ಗಟ್ಟಿಯಾದ ನಿರ್ಣಯವನ್ನು ಹುಡುಕಿಕೊಳ್ಳದಿರುವ ಆಲಕ್ಷ್ಯತೆಯಿಂದ ಆತ್ಮವು ತಗ್ಗಿ ಸಂಪೂರ್ಣವಾಗಿ ನಾಶವಾಗಿ ಹೋಗುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Leave if you do not have the devotion to build a shrine
Do you have real interest to demolish it?
The self withers and dies due to half-heartedness
In the absence of the resolute will – Marula Muniya
(Translation from "Thus Sang Marula Muniya" by Sri. Narasimha Bhat)

Friday, September 6, 2013

ಲೋಕವನು ತಿದ್ದಲಿಕೆ ಹೊರಟು ಗೆದ್ದವರಾರು? (495)

ಲೋಕವನು ತಿದ್ದಲಿಕೆ ಹೊರಟು ಗೆದ್ದವರಾರು? |
ಕಾಕುತ್ಸ್ಠನೇ ಕೃಷ್ಣನೇ ಬುದ್ಧ ಜಿನರೆ ||
ಸಾಕ್ರಟೀಸ್ ಏಸರೇ ಮೋಸಸ್ ಮಹಮ್ಮದರೆ |
ಸ್ವೀಕರಿಸಿತಾರನದು - ಮರುಳ ಮುನಿಯ || (೪೯೫)

(ಗೆದ್ದವರು+ಆರು)(ಸ್ವೀಕರಿಸಿತು+ಆರನ್+ಅದು)

ಪ್ರಪಂಚದಲ್ಲಿ ಸೊಟ್ಟಾಗಿರುವುದನ್ನು ತಿದ್ದಿ ಅದನ್ನು ಒಂದು ಸುಂದರವಾದ ತಾಣವನ್ನಾಗಿ ಮಾದಲು ಪ್ರಯತ್ನಿಸಿ ಗೆದ್ದವರು ಯಾರಿದ್ದಾರೆ? ರಾಮನೇ (ಕಾಕುತ್ಸ್ಠ), ಕೃಷ್ಣನೇ?, ಗೌತಮ ಬುದ್ಧನೇ, ಜೈನ ಪಂಥದ ಮಹಾವೀರರೇ, ಗ್ರೀಕ್ ದೇಶದ ತತ್ತ್ವಜ್ಞಾನಿಯಾದ ಸಾಕ್ರಟೀಸ್‍ನೇ, ಕ್ರಿಸ್ತ ಧರ್ಮವನ್ನು ಸ್ಥಾಪಿಸಿದ ಏಸುಕ್ರಿಸ್ತ, ಯಹೂದಿಯರ ಮೋಸಸ್ ಅಥವಾ ಇಸ್ಲಾಂ ಧರ್ಮದ ಸಂಸ್ಥಾಪಕನಾದ ಪ್ರವಾದಿ ಮಹಮ್ಮದರೆ? ಇವರನ್ನಾರನ್ನಾದರೂ ಜಗತ್ತು ಒಪ್ಪಿಕೊಂಡಿತೇನು? ಅವರವರ ಕಾಲದಲ್ಲಿ ಅವರೆಲ್ಲರನ್ನೂ ಜಗತ್ತು ಅವಹೇಳನ ಮಾಡಿ ತಿರಸ್ಕರಿಸಿತ್ತು ಎಂಬುದನ್ನು ನಾವು ಮರೆಯಬಾರದು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Has anyone ever succeeded in reforming this world?
Is it Rama or Krishna? Is it Buddha or Jina?
Is it Socrates or Jesus? Is it Moses or Mohammad?
Whom has the world accepted? – Marula Muniya
(Translation from "Thus Sang Marula Muniya" by Sri. Narasimha Bhat)

Thursday, September 5, 2013

ವಾನರನ ಲಾಂಗೂಲವೆರಡಾದೊಡದರಿನವ (494)

ವಾನರನ ಲಾಂಗೂಲವೆರಡಾದೊಡದರಿನವ - |
ನಾನನದ ಚೇಷ್ಟೆಯೇನರೆಯೊ ಇಮ್ಮಡಿಯೊ ||
ಮಾನವನೊಳಾತ್ಮ ಬಲಿಯದೆ ಬಾಹ್ಯವೈಭವಗ |
ಳೇನಾದೊಡೇಂ ಲಾಭ - ಮರುಳ ಮುನಿಯ || (೪೯೪)

(ಲಾಂಗೂಲ+ಎರಡು+ಆದೊಡೆ+ಅದರಿನ್+ಅವನ+ಆನನದ)(ಚೇಷ್ಟೆ+ಏನ್+ಅರೆಯೊ)(ಮಾನವನೊಳ್+ಆತ್ಮ)(ಬಾಹ್ಯವೈಭವಗಳ್+ಏನ್+ಆದೊಡೆ+ಏಂ)

ಕಪಿಯ ಬಾಲಗಳು (ಲಾಂಗೂಲ) ಎರಡಾದರೂ ಅದರಿಂದ ಅದರ ಮುಖದ (ಆನನದ) ಚೇಷ್ಟೆಗಳು ಅರ್ಧವಾಗುತ್ತದೆಯೋ ಅಥವಾ ಅದೂ ಎರಡರಷ್ಟಾಗುತ್ತದೆಯೋ? ಇದೇ ರೀತಿ ಮನುಷ್ಯನೊಳಗಡೆಯ ಆತ್ಮವು ಬಲಿಷ್ಠವಾಗದೆ ಹೊರಗಡೆಗೆ ಕಾಣಿಸುವಂತಹ ಆಡಂಬರಗಳು ಹೇಗಿದ್ದರೇನಂತೆ? ಅವುಗಳಿಂದ ಆತ್ಮಕ್ಕೆ ಯಾವ ವಿಧವಾದ ಲಾಭವೂ ಆಗುವುದಿಲ್ಲ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

If a monkey is blessed with two tails instead of one
Dies his facial expressions become doubled or halved?
What’s the benefit from any outward exhibition of grandeur
Unless one is well established in self – Marula Muniya
(Translation from "Thus Sang Marula Muniya" by Sri. Narasimha Bhat)

Wednesday, September 4, 2013

ಸಂಗ ನಿಸ್ಸಂಗಾದಿ ನಿಯಮ ವ್ರತಾಚಾರ (493)

ಸಂಗ ನಿಸ್ಸಂಗಾದಿ ನಿಯಮ ವ್ರತಾಚಾರ |
ಅಂಗಾರ ತಿರುನಾಮ (ಕಾಷಾಯ) ಬೂದಿ ||
ಅಂಗಾಂಗ ಭಾವರಸ ಚಿಹ್ನೆ ಚೇಷ್ಟೆಗಳೆಲ್ಲ |
ಮಂಗಾಟವೀಶಂಗೆ - ಮರುಳ ಮುನಿಯ || (೪೯೩)

(ನಿಸ್ಸಂಗ+ಆದಿ)(ವ್ರತ+ಆಚಾರ)(ಚೇಷ್ಟೆಗಳ್+ಎಲ್ಲ)

ಆಸಕ್ತಿ ಮತ್ತು ಅನಾಸಕ್ತಿ, ಕಟ್ಟಳೆಗಳು, ವ್ರತ, ಆಚಾರಗಳನ್ನು ಪಾಲಿಸುವುದು, ಅಂಗಾರ, ತಿರುನಾಮ ಮತ್ತು ವಿಭೂತಿಗಳನ್ನು ಧರಿಸುವುದು; ಈ ತರಹದ ಶಾರೀರಿಕ ಭಾವನೆ, ಸತ್ತ್ವ ಪ್ರತೀಕಗಳು ಮತ್ತು ಆಟಗಳೆಲ್ಲವೂ ಕಪಿಚೇಷ್ಟೆಗಳಂತೆ ಶಿವನಿಗೆ ಭಾಸವಾಗುತ್ತವೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Attachment and detachment, religious observances rites and rituals
Sacred marks of carbon, sandal and ash on body parts
Variety of body movements, signs and expressions of emotions
All these are just monkeyish pranks to the Lord – Marula Muniya
(Translation from "Thus Sang Marula Muniya" by Sri. Narasimha Bhat)