Showing posts with label ಶರಣು ಶರಣಿರುವುದಕೆ ಸತ್ಯಕ್ಕೆ ತತ್ತ್ವಕ್ಕೆ. Show all posts
Showing posts with label ಶರಣು ಶರಣಿರುವುದಕೆ ಸತ್ಯಕ್ಕೆ ತತ್ತ್ವಕ್ಕೆ. Show all posts

Thursday, September 19, 2013

ಶರಣು ಶರಣಿರುವುದಕೆ ಸತ್ಯಕ್ಕೆ ತತ್ತ್ವಕ್ಕೆ (501)

ಶರಣು ಶರಣಿರುವುದಕೆ ಸತ್ಯಕ್ಕೆ ತತ್ತ್ವಕ್ಕೆ |
ಹರಡಿಹುದದೆತ್ತಲೆತ್ತಲುಮೆಂದದೆಂದೂ ||
ಇರದುದರ ಮಾತೇಕೆ ಸುಳ್ಳು ಶೂನ್ಯಕೆ ಬುರುಡೆ |
ಇರುವುದೇ ಮೊದಲಿಳಿಗೆ - ಮರುಳ ಮುನಿಯ || (೫೦೧)

(ಶರಣು+ಇರುವುದಕೆ)(ಹರಡಿಹುದು+ಅದು+ಎತ್ತಲೆತ್ತಲುಂ+ಎಂದು+ಅದು+ಎಂದೂ)(ಮೊದಲು+ಇಳಿಗೆ)

ಸತ್ಯದ ಅಸ್ತಿತ್ವಕ್ಕೆ ತತ್ತ್ವದ ಸ್ವರೂಪಕ್ಕೆ ನಮಿಸುತ್ತಿದ್ದೇನೆ. ಅದು ಸದಾ ಕಾಲವೂ ಎಲ್ಲೆಲ್ಲಿಯೂ ವ್ಯಾಪಿಸಿಕೊಂಡಿದೆ. ಇಲ್ಲದಿರುವುದರ ಬಗ್ಗೆ ಮಾತನಾಡಿ ಏನು ಉಪಯೋಗ? ಸುಳ್ಳೆನ್ನುವುದು ಶೂನ್ಯಕ್ಕೆ ಬುರುಡೆ. ಪ್ರಪಂಚದಲ್ಲಿ ಮೊದಲು ಇರುವುದೇ ಅದೇ ಒಂದು ಸದ್ವಸ್ತು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Surrender to the Truth, the Divine Reality worthy of surrender
It pervades every place and it exists in all times
Why talk about which exists not? It is untruth and a bulb of void
That which exists is of top priority on the earth – Marula Muniya
(Translation from "Thus Sang Marula Muniya" by Sri. Narasimha Bhat)