Monday, December 31, 2012

ಒಲಿದೊಲಿದು ಸಾರುವಳು ಕಣ್ಹೊಳಪ ಬೀರುವಳು (340)

ಒಲಿದೊಲಿದು ಸಾರುವಳು ಕಣ್ಹೊಳಪ ಬೀರುವಳು |
ಕಿಲಕಿಲನೆ ನಗಿಸುವಳು ಕಚಕುಳಿಗಳಿಕ್ಕಿ ||
ಮಲಗಿ ನೀಂ ನಿದ್ರಿಸಿರೆ ಕುಳಿಯೊಳಕ್ಕುರುಳಿಪಳು |
ಛಲಗಾತಿಯೋ ಪ್ರಕೃತಿ - ಮರುಳ ಮುನಿಯ || (೩೪೦)

(ಒಲಿದು+ಒಲಿದು)(ಕಣ್+ಹೊಳಪ)(ಕಚಕುಳಿಗಳ್+ಇಕ್ಕಿ)(ನಿದ್ರಿಸಿ+ಇರೆ)(ಕುಳಿಯೊಳ್+ಒಕ್ಕು+ಉರುಳಿಪಳು)

ನಿನ್ನನ್ನು ಇಷ್ಟಪಟ್ಟು ಮೋಹಿಸಿ ಹತ್ತಿರ ಬರುತ್ತಾಳೆ (ಸಾರುವಳು). ತನ್ನ ಕಣ್ಣುಗಳಿಂದ ಕಾಂತಿಯನ್ನು ಬೀರುತ್ತಾಳೆ. ನಿನಗೆ ಕಚಕುಳಿಯಿಕ್ಕಿ ಕಿಲಕಿಲನೆ ನಗುವಂತೆ ಮಾಡುತ್ತಾಳೆ. ನೀನೇನಾದರೂ ಮೈಮರೆತು ಮಲ...ಗಿಕೊಂಡು ನಿದ್ರೆ ಮಾಡಿದರೆ, ನಿನ್ನನ್ನು ಒಂದು ಹಳ್ಳ(ಕುಳಿ)ದೊಳಕ್ಕೆ ತಳ್ಳಿ ಬೀಳಿಸುತ್ತಾಳೆ. ಪ್ರಕೃತಿಯು ಬಹಳ ಹಟಮಾರಿ.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Appearing to be much pleased she comes near and throws enchanting glances
She tickles you and makes you laugh in ringing ripples
When you are fast asleep she hurls you into a ditch
Very obstinate in Nature – Marula Muniya (340)
(Translation from "Thus Sang Marula Muniya" by Sri. Narasimha Bhat)

Friday, December 28, 2012

ಬಳಿಗೆ ಬಾರೆನ್ನುವಳು ಕರೆ ಕರೆದು ಮುದ್ದಿಪಳು (339)

ಬಳಿಗೆ ಬಾರೆನ್ನುವಳು ಕರೆ ಕರೆದು ಮುದ್ದಿಪಳು |
ಫಲಪುಷ್ಪ ಮಣಿಕನಕವಿತ್ತು ನಲಿಸುವಳು ||
ನಲಿದು ನೀಂ ಮೈಮರೆಯೆ ಮರ್ಮದಲಿ ಚಿವುಟುವಳು |
ಛಲಗಾತಿಯೊ ಪ್ರಕೃತಿ - ಮರುಳ ಮುನಿಯ || (೩೩೯)

(ಬಾ+ಎನ್ನುವಳು)(ಮಣಿಕನಕ+ಇತ್ತು)

ನಿನ್ನನ್ನು ಹತ್ತಿರಕ್ಕೆ ಬಾ ಎಂದು ಕರೆಯುತ್ತಾಳೆ, ಕರೆದು ಮುದ್ದಿಸುತ್ತಾಳೆ. ಹೂವು, ಹಣ್ಣು, ರತ್ನ ಮತ್ತು ಬಂಗಾರಗಳನ್ನು ಕೊಟ್ಟು ಸಂತೋಷಪಡಿಸುತ್ತಾಳೆ. ಆವಾಗ ನೀನು ಹಿಗ್ಗಿ ಕುಣಿದಾಡಿ ಮೈಮರೆತರೆ, ಗುಟ್ಟಾಗಿ ನಿನಗೆ ತಿಳಿಯದಂತೆ ನಿನ್ನನ್ನು ಜಿಗುಟುತ್ತಾಳೆ. ಪ್ರಕೃತಿಯು ಬಹಳ ಹಟಮಾರಿ. ಆದ್ದರಿಂದ ನಿನ್ನ ಹುಷಾರಿನಲ್ಲಿ ನೀನಿರು.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

“Come near me” she incites you and showers kisses on you,
She presents you with flowers, fruits, gems and gold and amuses you,
When you forget yourself in the amusement, she pinches your vital parts,
Very obstinate is Nature – Marula Muniya
(Translation from "Thus Sang Marula Muniya" by Sri. Narasimha Bhat)

Thursday, December 27, 2012

ಸಾದೃಶ್ಯ ಭಸ್ಮವನು ಕಣ್ಣಿಗೆರಚುತೆ ಪ್ರಕೃತಿ (338)

ಸಾದೃಶ್ಯ ಭಸ್ಮವನು ಕಣ್ಣಿಗೆರಚುತೆ ಪ್ರಕೃತಿ |
ಪ್ರತ್ಯೇಕತೆಯನದರೊಳಿಡುತೆ ಕಚಕುಳಿಯ ||
ಶತ್ರುಮಿತ್ರಪ್ರಮಾದದ ಗುಳಿಗೆಯುಣಿಸುತ್ತೆ |
ನೃತ್ಯಕೆಳೆವಳು ಜನವ - ಮರುಳ ಮುನಿಯ || (೩೩೮)

(ಕಣ್ಣಿಗೆ+ಎರಚುತೆ)(ಪ್ರತ್ಯೇಕತೆಯನ್+ಅದರೊಳ್+ಇಡುತೆ)(ಗುಳಿಗೆ+ಉಣಿಸುತ್ತೆ)(ನೃತ್ಯಕೆ+ಎಳೆವಳು)

ಪ್ರಕೃತಿಯು ಎಲ್ಲವೂ ಒಂದೇ ತರನಾಗಿ ಕಾಣಿಸುವಂತೆ ಮಾಡುವ (ಸಾದೃಶ್ಯ) ಒಂದು ಮಂಕು ಬೂದಿ(ಭಸ್ಮ)ಯನ್ನು ಮನುಷ್ಯರ ಕಣ್ಣುಗಳಿಗೆ ಎರಚುತ್ತಾಳೆ. ಆದರೆ ಅದರೊಳಗಡೆ ಭೇದ ಭಾವಗಳನ್ನು ಕಲ್ಪಿಸುತ್ತಾ ನಡುನಡುವೆ ಕಚಗುಳಿಯನ್ನು ಇಡುತ್ತಾ, ವೈರಿ ಮತ್ತು ಸ್ನೇಹಿತರುಗಳೆಂಬ ಅಜಾಗ್ರತೆಗಳ (ಪ್ರಮಾದ) ಮಾತ್ರೆಗಳನ್ನು ತಿನ್ನಿಸುತ್ತಾ, ಜನಗಳನ್ನು ತನ್ನ ತಾಳಕ್ಕೆ ತಕ್ಕಂತೆ ಕುಣಿಸುತ್ತಾಳೆ.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Nature throws the magic dust into men’s eyes and makes them
Conscious of the similarity among them. At the same time
She also tickles them with the sense of difference
The she makes them eat the pill of faulty sense of
Friendship and enmity and drags them into the dance-concert- Marula Muniya
(Translation from "Thus Sang Marula Muniya" by Sri. Narasimha Bhat)

Wednesday, December 26, 2012

ಅರ್ಧಾರ್ಧರುಚಿಗಳಿಂ ಕಣ್ಮನಂಗಳ ಕೆಣಕು- (337)

ಅರ್ಧಾರ್ಧರುಚಿಗಳಿಂ ಕಣ್ಮನಂಗಳ ಕೆಣಕು- |
ತುದ್ಯಮಂಗಳ ಗೆಯ್ಸಿ ಮನುಜನಿಂ ಪ್ರಕೃತಿ ||
ಬದ್ಧನಂಗೆಯ್ವಳುಳಿದರ್ಧಮಂ ಕೆಣಕಿಪಳು |
ವೃದ್ಧಿಯಿಂತವಳ ಸಿರಿ - ಮರುಳ ಮುನಿಯ || (೩೩೭)

(ಅರ್ಧ+ಅರ್ಧ+ರುಚಿಗಳಿಂ)(ಕಣ್+ಮನಂಗಳ)(ಕೆಣಕುತ+ಉದ್ಯಮಂಗಳ) (ಬದ್ಧನಂ+ಗೆಯ್ವಳು+ಉಳಿದ+ಅರ್ಧಮಂ)(ವೃದ್ಧಿಯಿಂತು+ಅವಳ)

ಪ್ರಕೃತಿಯ ಅರ್ಧಂಬರ್ಧ ಸವಿಗಳಿಂದ ಕಣ್ಣು ಮತ್ತು ಮನಸ್ಸುಗಳನ್ನು ಕೆರಳಿಸುತ್ತ, ಕೆಲಸಗಳಲ್ಲಿ (ಉದ್ಯಮಂ) ಅವನನ್ನು ತೊಡಗಿಸುತ್ತ, ಆ ಕಾರ್ಯದ ಅರ್ಧದಲ್ಲಿ ಅವನನ್ನು ಒಂದು ಕಟ್ಟುಪಾಡಿಗೆ ಒಳಪಡಿಸುತ್ತಾಳೆ. ಉಳಿದರ್ಧದಲ್ಲಿ ಅವನ ಮನಸ್ಸನ್ನು ಕೆರಳಿಸುತ್ತಾಳೆ. ಅವಳು ತನ್ನ ಸಂಪತ್ತನ್ನು ಈ ರೀತಿಯಾಗಿ ವೃದ್ಧಿಸಿಕೊಳ್ಳುತ್ತಾಳೆ.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Making us taste the first half and tempting our eyes and mind,
Nature encourages us to engage ourselves in varied occupations
Thus she holds in bondage and entices us to taste the other half
So increases Her wealth – Marula Muniya
(Translation from "Thus Sang Marula Muniya" by Sri. Narasimha Bhat)

Friday, December 21, 2012

ದಾರದುಂಡೆಯೊ ಲೋಕ ನೂರುಮಾರೆಳೆಯೊಂದೆ (336)

ದಾರದುಂಡೆಯೊ ಲೋಕ ನೂರುಮಾರೆಳೆಯೊಂದೆ |
ನೂರು ಬಣ್ಣಗಳಲ್ಲಿ ನೂರು ಸಿಕ್ಕದರೊಳ್ ||
ಹಾರದಂತದಖಂಡ ಮೊದಲು ಕೊನೆಗಳನಲ್ಲಿ |
ಬೇರೆ ತೋರುವುದೆಂತೊ - ಮರುಳ ಮುನಿಯ || (೩೩೬)
(ದಾರದ+ಉಂಡೆಯೊ)(ನೂರುಮಾರ್+ಎಳೆ+ಒಂದೆ)(ಸಿಕ್ಕು+ಅದರೊಳ್)(ಹಾರದಂತೆ+ಅದು+ಅಖಂಡ)(ಕೊನೆಗಳನ್+ಅಲ್ಲಿ)(ತೋರುವುದು+ಎಂತೊ)

ಈ ಪ್ರಪಂಚವೆನ್ನುವುದು ಒಂದು ದಾರದ ಉಂಡೆಯಂತಿದೆ. ಒಂದು ನೂರು ಮಾರುಗಳಷ್ಟು ಉದ್ದವಿದ್ದರೂ ಅದು ಒಂದೇ ಒಂದು ಎಳೆಯಿಂದ ಕೂಡಿದೆ. ಅದರ ನೂರಾರು ಬಣ್ಣಗಳಲ್ಲಿ ನೂರಾರು ಗೋಜಲು(ಸಿಕ್ಕು)ಗಳಿವೆ. ಮೊದಲು ಮತ್ತು ಕೊನೆಗಳಲ್ಲಿ ಅದು ಒಂದು ಹಾರದಂತೆ ಇಡಿಯಾಗಿದ್ದರೂ ಸಹ, ಅದು ಹೇಗೋ ಬೇರೆಯಾಗಿಯೇ ಕಂಡುಬರುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

This world is a ball of thread, hundreds and hundreds of meter long
Hundreds of colors and hundreds of tangles
It is unbroken like a garland
How can it beginning and end be traced? – Marula Muniya
(Translation from "Thus Sang Marula Muniya" by Sri. Narasimha Bhat)

Thursday, December 20, 2012

ಚಿಂತಿಸಲ್ಗಾಗದದ್ಭುತಶಕ್ತಿ ಸೃಷ್ಟಿಯದು (335)

ಚಿಂತಿಸಲ್ಗಾಗದದ್ಭುತಶಕ್ತಿ ಸೃಷ್ಟಿಯದು |
ಜಂತು ಜಂತುವಿಗಮೊಂದೊಂದು ಬೇರೆ ನಯ ||
ಅಂತರದ ತಂತ್ರವನು ಗೆಯ್ಸಿಹಳು ಜಗವಂತು |
ಸಂತತವು ನವನವವೊ - ಮರುಳ ಮುನಿಯ || (೩೩೫)

(ಚಿಂತಿಸಲ್ಕೆ+ಆಗದ+ಅದ್ಭುತಶಕ್ತಿ)(ಜಂತುವಿಗಂ+ಒಂದೊಂದು)(ಗೆಯ್ಸಿ+ಇಹಳು)(ಜಗವು+ಅಂತು)

ನಾವು ಯೋಚಿಸಲಿಕ್ಕೂ ಸಾಧ್ಯವಾಗದಂತಹ ಅತ್ಯಾಶ್ಚರ್ಯಕರವಾದ ಬಲ ಪ್ರಕೃತಿಮಾತೆಗೆ ಇದೆ. ಒಂದೊಂದು ಪ್ರಾಣಿಗೂ ಬೇರೆ ಬೇರೆ ನೀತಿಗಳನ್ನಿಟ್ಟು, ಒಳಗಡೆಯ (ಅಂತರದ) ವ್ಯವಸ್ಥೆಯನ್ನು ಬೇರೆ ಬೇರೆ ರೀತಿಯಾಗಿ ಮಾಡಿ ಜಗತ್ತನ್ನು ನಡೆಸುತ್ತಾಳೆ. ಸದಾ (ಸಂತತ) ಹೊಸ ಹೊಸದಾಗಿರುವುದೇ ಅದರ ಲಕ್ಷಣವಾಗಿರುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Nature’s power is so marvelous and unthinkable
Her attitude and treatment varies from creature to creature.
With her strategy of maintaining differences among things and beings
This would appears always new and novel – Marula Muniya
(Translation from "Thus Sang Marula Muniya" by Sri. Narasimha Bhat)

Wednesday, December 19, 2012

ನಿರಪೇಕ್ಷೆ ನಿರುಪೇಕ್ಷೆ ಸೃಷ್ಟಿ ಕರ್ಮದ ರೀತಿ (334)

ನಿರಪೇಕ್ಷೆ ನಿರುಪೇಕ್ಷೆ ಸೃಷ್ಟಿ ಕರ್ಮದ ರೀತಿ |
ಬೆರಲದಿರದಾ ಕಣ್ಣುದಾಸೀನಮಿರದು ||
ಕಿರಿದವಳಿಗೊಂದಿರದು ಪರಿಪೂರ್ಣವೊಂದಿರದು |
ಪರಿವರ್ತ್ಯಮೆಲ್ಲಮುಂ - ಮರುಳ ಮುನಿಯ || (೩೩೪)

(ನಿಃ+ಅಪೇಕ್ಷೆ)(ನಿಃ+ಉಪೇಕ್ಷೆ)(ಬೆರಲ್+ಅದಿರದು+ಆ)(ಕಣ್ಣ್+ಉದಾಸೀನಂ+ಇರದು)(ಕಿರಿದು+ಅವಳಿಗೆ+ಒಂದು+ಇರದು)(ಪರಿಪೂರ್ಣವೊಂದು+ಇರದು)(ಪರಿವರ್ತ್ಯಂ+ಎಲ್ಲಮುಂ)

ಸೃಷ್ಟಿದೇವಿಯು ಕೆಲಸ ಮಾಡುವ ಕ್ರಮದಲ್ಲಿ ಯಾವ ವಿಧವಾದ ಬಯಕೆ(ಅಪೇಕ್ಷೆ)ಗಳೂ ಇಲ್ಲ ಮತ್ತು ಯಾವುದೇ ತರಹದ ನಿರ್ಲಕ್ಷ್ಯವೂ (ಉಪೇಕ್ಷೆ) ಇಲ್ಲ. ಅವಳ ಬೆರಳುಗಳು ಕಂಪಿಸುವುದಿಲ್ಲ ಮತ್ತು ಆ ಕಣ್ಣುಗಳಲ್ಲಿ ಉದಾಸೀನತೆಯಿರುವುದಿಲ್ಲ. ಅವುಗಳಿಗೆ ಯಾವ ಕೆಲಸವೂ ಚಿಕ್ಕದೆಂದೆನಿಸುವುದಿಲ್ಲ ಮತ್ತು ಪರಿಪೂರ್ಣತೆಯೂ ಇರುವುದಿಲ್ಲ. ಅವಳು ಸೃಷ್ಟಿಯಲ್ಲಿರುವುದೆಲ್ಲವನ್ನೂ ಬದಲಾಯಿಸುವ ಕಾರ್ಯದಲ್ಲೆ ನಿರತಳಾಗಿರುತ್ತಾಳೆ.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Desirelessness and absence of disregard are the ways of Nature’s work.
She won’t lift her finger but she would be ever vigilant,
She considers nothing as small and nothing as perfect
Everything is ever changeable – Marula Muniya
(Translation from "Thus Sang Marula Muniya" by Sri. Narasimha Bhat)

Tuesday, December 18, 2012

ಹೃಸ್ವದಲಿ ದೀರ್ಘದಲಿ ಕುಟಿಲದಲಿ ಸರಳದಲಿ (333)

ಹೃಸ್ವದಲಿ ದೀರ್ಘದಲಿ ಕುಟಿಲದಲಿ ಸರಳದಲಿ |
ವಿಶ್ವಕಾಯಂ ಕಂಗಳಂಗವಿಭ್ರಮೆಯಿಂ- ||
ದೀಶ್ವರಂ ನಟಿಸುತಿರೆ ರಭಸವಳೆವವರಾರು? |
ಶಾಶ್ವತಂ ಮಿತಿಗಳವೆ ? - ಮರುಳ ಮುನಿಯ || (೩೩೩)

(ಕಂಗಳ್+ಅಂಗ+ವಿಭ್ರಮೆಯಿಂದ+ಈಶ್ವರಂ)(ನಟಿಸುತ+ಇರೆ)(ರಭಸವ+ಅಳೆವವರ್+ಆರು)(ಮಿತಿಗೆ+ಅಳವೆ)

ಚಿಕ್ಕದಾಗಿರುವುದರಲ್ಲಿ, ದೊಡ್ಡದಾಗಿರುವುದರಲ್ಲಿ, ಮೋಸ ವಂಚನೆಗಳಲ್ಲಿ ಮತ್ತು ನಿಷ್ಠಪಟತೆಯಲ್ಲಿ, ವಿಶ್ವವೇ ಶರೀರವಾಗಿರುವ ಪರಮಾತ್ಮನು (ವಿಶ್ವಕಾಯಂ) ಕಣ್ಣುಗಳ ಮತ್ತು ದೇಹದ ಭಾಗಗಳ ಬೆಡಗಿನಿಂದ ಅಭಿನಯಿಸುತ್ತಿರುವಾಗ, ಅವನ ಚಲನೆಯ ವೇಗವನ್ನು ಅಳೆಯುವವರ‍್ಯಾರಿದ್ದಾರೆ? ಸದಾಕಾಲವೂ ಇರುವ ಪರಮಾತ್ಮನಶಕ್ತಿಯು ನಮ್ಮ ಅಳತೆಗೆ ನಿಲುಕುವುದೇ?
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

With movements, slow and swift curved and straight
God in His cosmic body dances skillfully moving His eyes and limbs
Who then can measure His speed? Can the Eternal be measured
By the limited mind? – Marula Muniya
(Translation from "Thus Sang Marula Muniya" by Sri. Narasimha Bhat) 

Monday, December 17, 2012

ನಾನು ನೀನಾದಂದು ನೀನೆಲ್ಲರಾದಂದು (332)

ನಾನು ನೀನಾದಂದು ನೀನೆಲ್ಲರಾದಂದು |
ಲೀನನೆಲ್ಲರೊಳಗಾಗಿ ನಾನು ಸತ್ತಂದು ||
ಏನೊಂದುಮೆನ್ನ ಹೊರಗೆನ್ನ ಕಣ್ಗಿರದಂದು |
ಜ್ಞಾನ ಪರಿಪೂರ್ಣವೆಲೊ - ಮರುಳ ಮುನಿಯ || (೩೩೨)

(ನೀನ್+ಆದಂದು)(ನೀನ್+ಎಲ್ಲರ್+ಆದಂದು)(ಲೀನನ್+ಎಲ್ಲರೊಳಗೆ+ಆಗಿ)(ಏನೊಂದುಂ+ಎನ್ನ)(ಹೊರಗೆ+ಎನ್ನ)(ಕಣ್ಗೆ+ಇರದಂದು)(ಪರಿಪೂರ್ಣವೆಲೊ)

’ನಾನು’ ನೀನಾದ ದಿನ, ನೀನು ಎಲ್ಲರಲ್ಲೂ ಒಂದಾದ ದಿನ, ಎಲ್ಲರೊಳಗೂ ಸೇರಿಹೋಗಿ ’ನಾನು’ ಎನ್ನುವುದು ಅಳಿದ ದಿನ, "ನನ್ನ ಕಣ್ಣುಗಳಿಗೆ ಹೊರಗೆ ಬೇರೇನೂ ಕಾಣಿಸದು" ಎಂಬ ಅನುಭವ ಉಂಟಾದಾಗ ಸಂಪೂರ್ಣವಾದ ಜ್ಞಾನವು ದೊರಕುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

When I become you and you become all
When the ‘I’ in me dies by becoming one with all
When nothing appears alien to my eyes
The knowledge is complete – Marula Muniya
(Translation from "Thus Sang Marula Muniya" by Sri. Narasimha Bhat)

Friday, December 14, 2012

ಸೃಜಿಸಿ ಯಂತ್ರಾಯುಧಗಳಂ ಪ್ರಗತಿಸಾಧನೆಗೆ (331)

ಸೃಜಿಸಿ ಯಂತ್ರಾಯುಧಗಳಂ ಪ್ರಗತಿಸಾಧನೆಗೆ |
ನಿಜಲಕ್ಷಣೋನ್ನತಿಯನೇ ಮರೆತು ಮನುಜಂ ||
ರುಜಿತಾತ್ಮನಪ್ಪನಾ ಯಂತ್ರಾಪಘಾತದಿನೆ |
ವಿಜಯ ವಿಭ್ರಾಂತಿಯದು - ಮರುಳ ಮುನಿಯ || (೩೩೧)

(ಯಂತ್ರ+ಆಯುಧಗಳಂ)(ಲಕ್ಷಣ+ಉನ್ನತಿಯನೇ)(ರುಜಿತಾತ್ಮನ್+ಅಪ್ಪನ್+ಆ)(ಯಂತ್ರ+ಅಪಘಾತದಿನೆ)

ಏಳಿಗೆಯನ್ನು ಹೊಂದುವುದಕ್ಕಾಗಿ ಯಂತ್ರ ಮತ್ತು ಆಯುಧಗಳನ್ನು ಸೃಷ್ಟಿಮಾಡಿ, ತನ್ನ ಸ್ವಂತ ಅಭ್ಯುದಯದ ಚಿಹ್ನೆಗಳನ್ನು ಮರೆತು, ಮನುಷ್ಯನು, ಯಂತ್ರಗಳ ಅಪಘಾತಗಳಿಂದ ಬಾಧೆಗೆ ಒಳಗಾದವನಾಗುತ್ತಾನೆ (ರುಜಿತಾತ್ಮನ್). ಈ ಗೆಲುವು, ಒಂದು ಭ್ರಮೆಯೇ (ವಿಭ್ರಾಂತಿ) ಸರಿ.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

In his craze to achieve progress man manufactures machines and weapons
He forgets the greatness of his own true nature
And becomes sick in soul due to the mishap caused by machines
Isn’t his sense of victory a delusion? – Marula Muniya (331)
(Translation from "Thus Sang Marula Muniya" by Sri. Narasimha Bhat)

Wednesday, December 12, 2012

ಧರಣಿ ತರಣಿಗಳ ಗತಿಕ್ಲ್‍ಪ್ತವೆನುವವೊಲಿಹುದು (330)

ಧರಣಿ ತರಣಿಗಳ ಗತಿಕ್ಲ್‍ಪ್ತವೆನುವವೊಲಿಹುದು |
ಚಲಿಸುತಿರಲವರ ಬಲ ವೆಯವಾಗದಿಹುದೇಂ? ||
ಕರಗುವುದವರ‍್ಗಳೊಡಲವರಡಿಗಳದುರುವುವು |
ಕೊರೆಯಾರಿಗದರಿಂದೆ? - ಮರುಳ ಮುನಿಯ || (೩೩೦)

(ಕ್ಲ್‍ಪ್ತ+ಎನುವವೊಲ್+ಇಹುದು)(ಚಲಿಸುತಿರಲ್+ಅವರ)(ವೆಯ+ಆಗದೆ+ಇಹುದೇಂ)(ಕರಗುವುದು+ಅವರ‍್ಗಳ+ಒಡಲು+ಅವರ+ಅಡಿಗಳ್+ಅದುರುವುವು)

ಭೂಮಿ(ಧರಣಿ) ಮತ್ತು ಸೂರ್ಯ(ತರಣಿ)ರುಗಳ ಚಲನೆಗಳು ಒಂದು ನಿಗದಿಯಾದ ವ್ಯವಸ್ಥೆಗೆ ಮತ್ತು ಮಿತ ಜ್ಞಾನಕ್ಕೆ ಒಳಪಟ್ಟಿರುವೆಂತಿದೆ. ಆದರೂ ಅವುಗಳು ಚಲಿಸುತ್ತಿರುವಾಗ ಅವರುಗಳ ಶಕ್ತಿಯು ಖರ್ಚಾ(ವೆಯ)ಗದೆ ಇರುವುದೇನು? ಅವರ ದೇಹಗಳು ಕರಗಿಹೋಗುತ್ತವೆ ಮತ್ತು ಅವರ ಪಾದಗಳು ನಡಗುವುವು. ಇದರಿಂದ ಯಾರಿಗೆ ಕೊರತೆ ಅಥವಾ ನ್ಯೂನತೆಗಳುಂಟಾಗುತ್ತವೆ?
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The movements of the earth and the sun seem to be regular and prompt
Would not their energy get spent as they go on moving?
Their bodies may melt and their feet mat falter,
Who will be the loser on this account? – Marula Muniya
(Translation from "Thus Sang Marula Muniya" by Sri. Narasimha Bhat)

Tuesday, December 11, 2012

ಸುರಪ ಚಾಪದ ಗಾತ್ರ ವಿಸ್ತಾರ ಭಾರಗಳ (329)

ಸುರಪ ಚಾಪದ ಗಾತ್ರ ವಿಸ್ತಾರ ಭಾರಗಳ |
ಧರೆಯಿಂದಲಳೆಯುವೆಯ ಕೈ ಮೊಳಗಳಿಂದೆ? ||
ಪರಮಾನುಭವದೊಳದ್ವೈತವೋ ದ್ವೈತವೋ |
ಅರಿಯುವನೆ ಬರಿ ತರ್ಕಿ? - ಮರುಳ ಮುನಿಯ || (೩೨೯)
 
(ಧರೆಯಿಂದಲ್+ಅಳೆಯುವೆಯ)(ಪರಮಾನುಭವದೊಳು+ಅದ್ವೈತವೋ)

ಆಕಾಶದಲ್ಲಿ ಕಾಣುವ ಕಾಮನಬಿಲ್ಲಿನ (ಸುರಪ ಚಾಪದ) ದಪ್ಪ, ಉದ್ದಗಲ ಮತ್ತು ತೂಕಗಳನ್ನು ನೀನು ಭೂಮಿ(ಧರೆ)ಯಲ್ಲಿ ನಿಂತುಕೊಂಡು ನಿನ್ನ ಮೊಣಕೈಗಳಿಂದ ಮೊಳ ಹಾಕಿ ಅಳೆಯುವೆಯೇನು? ಪರಮಾತ್ಮನ ಇರುವಿಕೆಯ ಅನುಭವಗಳಲ್ಲಿ ಅದ್ವೈತವಿದೆಯೋ ಅಥವಾ ದ್ವೈತವಿದೆಯೋ, ಇದನ್ನು ಕೇವಲ ತರ್ಕ ಮಾತ್ರದಿಂದ ತಿಳಿಯಲು ಸಾಧ್ಯವೇನು?
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The volume, extent and weight of the rainbow above
Can you measure in cubits from the earth?
Can a dry logician understand whether the experience
Of the Supreme Truth is monism or dualism? – Marula Muniya
(Translation from "Thus Sang Marula Muniya" by Sri. Narasimha Bhat)

Monday, December 10, 2012

ಸ್ವಸ್ವರೂಪವನರಿತುಕೊಳುವ ಮುನ್ನವೆ ನರಂ (328)

ಸ್ವಸ್ವರೂಪವನರಿತುಕೊಳುವ ಮುನ್ನವೆ ನರಂ |
ವಿಶ್ವಪ್ರಕೃತಿ ಕಾರ್ಯಶಾಲೆಯೊಳಗುಟ್ಟನ್ ||
ವಶ್ಯವಾಗಿಸಿಕೊಳ್ಳಲುಜ್ಜಗಿಸಿ ತನಗೆ ತಾ - |
ನಸ್ವಸ್ಥನಾಗಿಹನೊ - ಮರುಳ ಮುನಿಯ || (೩೨೮)
(ಸ್ವಸ್ವರೂಪವನ್+ಅರಿತುಕೊಳುವ)(ಕಾರ್ಯಶಾಲೆಯ+ಒಳಗುಟ್ಟನ್)(ವಶ್ಯವಾಗಿಸಿಕೊಳ್ಳಲ್+ಉಜ್ಜಗಿಸಿ)(ತಾನ್+ಅಸ್ವಸ್ಥನಾಗಿ+ಇಹನೊ)

ತನ್ನ ನಿಜವಾದ ಸ್ವರೂಪವನ್ನು ತಾನು ತಿಳಿದುಕೊಳ್ಳುವ ಮೊದಲೇ, ಮನುಷ್ಯನು ಈ ಪ್ರಪಂಚದ ಪ್ರಕೃತಿಯ ಕಾರ್ಖಾನೆಯೆ ಒಳಗಿನ ರಹಸ್ಯವನ್ನು ತನ್ನ ಹತೋಟಿಗೆ ತೆಗೆದುಕೊಳ್ಳಲು(ವಶ್ಯ) ಪ್ರಯತ್ನಿಸಿ (ಉಜ್ಜುಗಿಸಿ), ತನ್ನ ಅರೋಗ್ಯವನ್ನು ಕಳೆದುಕೊಂಡಿದ್ದಾನೆ.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Long before realizing his own true self
Man attempts to uncover and usurp for himself
The secrets of the workshop of universal Nature,
But he fails, in his endeavor and becomes unhappy – Marula Muniya
(Translation from "Thus Sang Marula Muniya" by Sri. Narasimha Bhat)

Friday, December 7, 2012

ಸತ್ಯ ಸೂರ್ಯನವೊಲಪಾರವಸದಳ ನಿನಗೆ (327)

ಸತ್ಯ ಸೂರ್ಯನವೊಲಪಾರವಸದಳ ನಿನಗೆ |
ನಿತ್ಯ ಲಭ್ಯವು ನಿನಗೆ ಖಂಡ ಮಾತ್ರವದು ||
ಶ್ರುತಿ ಯುಕ್ತಿಗಳು ಕಣ್ಣಳವು ಸಮ್ಮತಿಯೊಳು ಸೇರೆ |
ಮಿತ ದೃಶ್ಯ ನಿನಗೆಲವೊ - ಮರುಳ ಮುನಿಯ || (೩೨೭)

(ಸೂರ್ಯನವೊಲು+ಅಪಾರ+ಅಸದಳ)(ಮಾತ್ರ+ಅದು)(ಕಣ್+ಅಳವು)(ನಿನಗೆ+ಎಲವೊ)

ಸತ್ಯವೆಂಬ ಸೂರ್ಯನಿಗಿರುವಂತಹ ಅಪಾರ ಶಕ್ತಿಯು, ನಿನಗೆ ಅಸಾಧ್ಯವಾದುದು (ಅಸದಳ). ಅದರಲ್ಲಿ ದಿನನಿತ್ಯವೂ ನಿನಗೆ ದೊರಕುವುದು ಒಂದು ಚೂರು ಮಾತ್ರ. ಕಿವಿಗಳ ಉಪಯೋಗ ಮತ್ತು ಕಣ್ಣುಗಳ ಶಕ್ತಿ (ಅಳವು) ಒಪ್ಪಿ, (ಸಮ್ಮತಿ) ಕೂಡಿಕೊಂಡಿದ್ದಲ್ಲಿ,ಮಿತ ಪ್ರಮಾಣದಲ್ಲಿ ಸತ್ಯವು ನಿನಗೆ ಗೋಚರವಾಗುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Truth is infinite and unbearable like the full sub
Only a part of it is ever accessible to you,
Even this limited vision you can enjoy when Vedic wisdom,
Your intelligence and eyesight come together in harmony – Marula Muniya
(Translation from "Thus Sang Marula Muniya" by Sri. Narasimha Bhat)

Thursday, December 6, 2012

ನಾನು ನಾನಾನೆನ್ನುತಿರುವೊಂದುಸಿರೆ ನಿನ್ನ (326)

ನಾನು ನಾನಾನೆನ್ನುತಿರುವೊಂದುಸಿರೆ ನಿನ್ನ |
ಮಾನಸದ ಚೀಲದಲಿ ತುಂಬಿ ಬೀಗುತಿರೆ ||
ತಾಣವದರೊಳಗೆಲ್ಲಿ ಬೇರೊಂದುಸಿರು ಹೋಗಲು |
ಕಾಣದದು ತತ್ತ್ವವನು - ಮರುಳ ಮುನಿಯ || (೩೨೬)

(ನಾನ್+ನಾನ್+ಎನ್ನುತಿರ+ಒಂದು+ಉಸಿರೆ)(ತಾಣ+ಅದರ+ಒಳಗೆ+ಎಲ್ಲಿ)(ಬೇರೆ+ಒಂದು+ಉಸಿರು)(ಕಾಣದು+ಅದು)

’ನಾನು ನಾನು’ ಎಂದೆನ್ನುತಿರುವ ಒಂದು ಉಸಿರು ನಿನ್ನ ಮನಸ್ಸಿನ ಚೀಲದೊಳಗೆ ತುಂಬಿಕೊಂಡು ಗರ್ವ(ಬೀಗು)ಪಡುತ್ತಿರಲು,
ನಿನ್ನ ಮನಸ್ಸಿನೊಳಗಡೆ ಬೇರೆ ಯಾವುದಾದರೂ ಉಸಿರು ಹೋಗಲು ಸ್ಥಳ(ತಾಣ)ವೆಲ್ಲಿದೆ? ಈ ಅಹಂತೆಯು ನಿನ್ನ
ತುಂಬಿಕೊಂಡಿರುವಾಗ ಪರಮಾತ್ಮನ ತತ್ತ್ವವನ್ನು ಅದು ಕಾಣಲು ಸಾಧ್ಯವಿಲ್ಲ.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

When every breath that fills the bag of your mind
Shouts I, I and I and swells with ego
Where then is room for another breath there?
So it fails to see the Truth – Marula Muniya
(Translation from "Thus Sang Marula Muniya" by Sri. Narasimha Bhat)

Wednesday, December 5, 2012

ಸಾಧಿಪ್ಪೆವೇನ ನಾಂ? ನಮಗಿರ್ಪ ಶಕ್ತಿಯೇಂ (325)

ಸಾಧಿಪ್ಪೆವೇನ ನಾಂ? ನಮಗಿರ್ಪ ಶಕ್ತಿಯೇಂ |
ಸಾಜವಂ ಮುರಿವೆವೇಂ ಕಿಂಕರರು ನಾವು ||
ಬೋಧಮುಂ ಪ್ರಕೃತಿಮಿತಮಾಶೆಯುಂ ಮಿತ ನಮಗೆ |
ಪಾದ ಬಿಡುವಕ್ಷಿ ಬಿಗಿ - ಮರುಳ ಮುನಿಯ || (೩೨೫)

(ಸಾಧಿಪ್ಪೆವು+ಏನ)(ನಮಗೆ+ಇರ್ಪ)(ಮುರಿವೆವು+ಏಂ)(ಪ್ರಕೃತಿಮಿತಂ+ಆಶೆಯುಂ)

ನಾವು ಸಾಧಿಸುವುದಾದರೂ ಏನನ್ನು? ನಮಗಿರುವ ಬಲಾಬಲಗಳಾದರೂ ಏನು? ಸಹಜವಾಗಿರುವುದನ್ನು ಮುರಿಯಲು ಸಾಧ್ಯವೇನು? ನಾವು ಕೇವಲ ಸೇವಕ(ಕಿಂಕರ)ರು ಮಾತ್ರ ಎನ್ನುವುದನ್ನು ಮರೆಯಬೇಡ. ಜ್ಞಾನ, ಪ್ರಕೃತಿ ಮತ್ತು ಆಶೆಯೂ ನಮ್ಮ ಪಾಲಿಗೆ ಮಿತವಾಗಿವೆ. ಪ್ರಯತ್ನ ಸಾಗಲಿ ಆದರೆ ಆಶಾದೃಷ್ಟಿಯಲ್ಲಿ ಹಿಡಿತವಿರಲಿ(ಅಕ್ಷಿಬಿಗಿ).
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

What can we achieve? What is our capacity?
Can we change our inborn nature? We are but its slaves
Our wisdom and desires are bridled by Nature
Carefully observe with your eyes and walk forward – Marula Muniya
(Translation from "Thus Sang Marula Muniya" by Sri. Narasimha Bhat)

Tuesday, December 4, 2012

ಸ್ರಷ್ಟನಾವನೊ ಆತನಾರಾದೊಡೇಂ ನಿನಗೆ (324)

ಸ್ರಷ್ಟನಾವನೊ ಆತನಾರಾದೊಡೇಂ ನಿನಗೆ |
ಶಿಷ್ಟನಾಗಿಪೆಯ ಏನವನ ನೀನು ? ||
ಶಿಷ್ಟರನು ಮಾಡು ಒಡಹುಟ್ಟುಗಳ ಮೊದಲು ನೀನ್ |
ಸೃಷ್ಟಿಯಂಶವೆ ಕಾಣೊ - ಮರುಳ ಮುನಿಯ || (೩೨೪)

(ಸ್ರಷ್ಟನ್+ಆವನೊ)(ಆತನಾರ್+ಆದೊಡೇಂ)(ಶಿಷ್ಟನ್+ಆಗಿಪೆಯ)(ಸೃಷ್ಟಿ+ಅಂಶವೆ)

ಈ ಜಗತ್ತನ್ನು ನಿರ್ಮಿಸಿದ ಬ್ರಹ್ಮನು (ಸ್ರಷ್ಟನ್) ಯಾರಾದರೇನು? ಅವನನ್ನು ನೀನು ಸಜ್ಜನನ್ನಾಗಿ ಮಾಡುವೆಯೇನು? ಆ ಕೆಲಸ ಮಾಡುವುದರ ಬದಲು ಮೊದಲಿಗೆ ನಿನ್ನೆ ಜೊತೆಯಲ್ಲಿ ಹುಟ್ಟಿರುವವರನ್ನು ಸಜ್ಜನರನ್ನಾಗಿ ಮಾಡು. ಅವರೆಲ್ಲರೂ ಈ ಸೃಷ್ಟಿಯ ಅಂಶವೇ ಆಗಿರುವ ಕಾರಣ ಸೃಷ್ಟಿಯನ್ನೇ ನೇರ ಮಾಡಲು ಯತ್ನಿಸಿದಂತೆ ಆಗುತ್ತದೆ. (ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Whoever may be the Creator, it matters not who He is!
Can you reform Him as a person of great virtues?
First make your brothers, the embodiments of virtues
Know that you are also a part of creation – Marula Muniya
(Translation from "Thus Sang Marula Muniya" by Sri. Narasimha Bhat)

Monday, December 3, 2012

ತ್ರಿಭುವನಗಳ್ಗೇಕೈಕನೀಶಂ ನಿರಂಕುಶಂ (323)

ತ್ರಿಭುವನಗಳ್ಗೇಕೈಕನೀಶಂ ನಿರಂಕುಶಂ |
ಸಭೆಯುಮಿಲ್ಲವನ ತಿದ್ದಿಸೆ ಜನದ ಕೂಗಿಂ ||
ಅಭಯನಾಳುವ ರಾಜ್ಯವನುದಿನಮುಮಿಂತು ಸಂ- |
ಕ್ಷುಭಿತಮಿಹುದಚ್ಚರಿಯೆ - ಮರುಳ ಮುನಿಯ || (೩೨೩)

(ತ್ರಿಭುವನಗಳ್ಗೆ+ಏಕೈಕನ್+ಈಶಂ)(ಸಭೆಯುಂ+ಇಲ್ಲ+ಅವನ)(ಅಭಯನ್+ಆಳುವ) (ರಾಜ್ಯವನ್+ಅನುದಿನಮುಂ+ಇಂತು)(ಸಂಕ್ಷುಭಿತಂ+ಇಹುದು+ಅಚ್ಚರಿಯೆ)

ಮೂರೂ ಲೋಕಗಳಿಗೆ ಯಾವ ವಿಧವಾದ ಅಂಕೆಯೂ ಇಲ್ಲದೆ ಒಡೆಯನಾಗಿರುವವನು ಒಬ್ಬನೇ ಒಬ್ಬನಾದ ಈಶ್ವರ. ಅಲ್ಲಿರುವ ಜನಗಳ ಕೂಗುಗಳಿಂದ ಅವನನ್ನು ತಿದ್ದಿಸಲು ಯಾವ ಪ್ರಜಾ ಪ್ರತಿನಿಧಿಸಭೆಯೂ ಇಲ್ಲ. ಯಾವ ವಿಧದ ಭಯವೂ ಇಲ್ಲದೆ ಈ ರಾಜ್ಯಗಳನ್ನು ಪ್ರತಿನಿತ್ಯವೂ ಹೀಗೆ ಅಳುತ್ತಿರುವಲ್ಲಿ, ಅಲ್ಲೋಲ ಕಲ್ಲೋಲಗಳು ಕಂಡುಬರುವುದು ಆಶ್ಚರ್ಯಕರವಾದ ವಿಷಯವೇನೂ ಅಲ್ಲ.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

One single dictator Monarch rules all the three worlds
There’s no assembly to correct Him as per the voiced wishes of the people
It is no surprise then if such a country is always in turmoil
When the fearless Autocrat rules over it – Marula Muniya
(Translation from "Thus Sang Marula Muniya" by Sri. Narasimha Bhat)

Friday, November 30, 2012

ಹಿತಬೋಧಕರು ಸಾಲದುದರಿಂದಲಲ್ಲ ವೀ (322)

ಹಿತಬೋಧಕರು ಸಾಲದುದರಿಂದಲಲ್ಲ ವೀ-|
ಕ್ಷಿತಿಗೆ ದುರ್ದಶೆ ಬಂದುದವಿಧೇಯರಿಂದ ||
ದ್ಯುತಿ ಕಣ್ಣೊಳಿರ್ದೊಡೇಂ ಶಿರದಿ ಮದ್ಯರಸಂಗ- |
ಳತಿಶಯಂ ಸೇರಿರಲು - ಮರುಳ ಮುನಿಯ || (೩೨೨)

(ಸಾಲದು+ಅದರಿಂದಲ್+ಅಲ್ಲ)(ಬಂದುದು+ಅವಿಧೇಯರಿಂದ)(ಕಣ್ಣೊಳ್+ಇರ್ದೊಡೇಂ)(ಮದ್ಯರಸಂಗಳ್+ಅತಿಶಯಂ)

ಒಳ್ಳೆಯದನ್ನು ಹೇಳುವವರು ಸಾಲದಿರುವುದರಿಂದಲ್ಲ, ಆದರೆ ಹೇಳಿದುದ್ದನ್ನು ಪಾಲಿಸದಿರುವವರಿಂದ, ಬದುಕಿಗೆ ಕೆಟ್ಟಸ್ಥಿತಿ ಬಂತು. ಮೆದುಳಿನಲ್ಲಿ ವಿಪರೀತವಾಗಿ ಮಾದಕದ್ರವ್ಯಗಳ ಪರಿಣಾಮ (ಶಿರದಿ ಮದ್ಯರಸಂಗಳ್) ಸೇರಿಕೊಂಡಿರುವಾಗ, ಕಣ್ಣುಗಳಲ್ಲಿ ಕಾಂತಿ(ದ್ಯುತಿ)ಯಿದ್ದರೂ ಏನು ಉಪಯೋಗ?

(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Our earth now is in a pitiable condition not because of the
Dearth of good advisers but because of disobedient people,
It is no use of the light shining in the eyes
When the head is reeling with excessive intoxication – Marula Muniya
(Translation from "Thus Sang Marula Muniya" by Sri. Narasimha Bhat)

Thursday, November 29, 2012

ಈ ದಿನದ ಸುಖಕೆ ನೀನಿಂದಿನಾ ಲಾಭಕ್ಕೆ (321)

ಈ ದಿನದ ಸುಖಕೆ ನೀನಿಂದಿನಾ ಲಾಭಕ್ಕೆ |
ಗೈದ ಕರ್ಮದ ಭೂತವಿಂದೆ ಮಲಗುವುದೇಂ? ||
ಕಾದು ಹೊಂಚಿಟ್ಟೆಂದೊ ನಿನ್ನನೆತ್ತಲೊ ಪಿಡಿದು |
ವೇಧಿಸದೆ ತೆರೆಳದದು - ಮರುಳ ಮುನಿಯ || (೩೨೧)

(ನೀನ್+ಇಂದಿನಾ)(ಭೂತ+ಇಂದೆ)(ಹೊಂಚಿಟ್ಟು+ಎಂದೊ)(ನಿನ್ನನ್+ಎತ್ತಲೊ)(ತೆರೆಳದು+ಅದು)

ಈವತ್ತಿನ ನಿನ್ನ ಸಂತೋಷ ಮತ್ತು ನೆಮ್ಮದಿಗಳಿಗೆ ಮತ್ತು ನಿನ್ನ ಈವತ್ತಿನ ಲಾಭಕ್ಕೋಸ್ಕರ ನೀನು ಹಿಂದೆ ಮಾಡಿದ ಕರ್ಮಗಳ ಫಲಗಳು ಸುಮ್ಮನಿರುತ್ತವೆಯೇನು? ಅವುಗಳು ಯಾರಿಗೂ ಕಾಣದಂತೆ ಬಚ್ಚಿಟ್ಟುಕೊಂಡು ಕಾದಿದ್ದು ನಿನ್ನನ್ನು ಯಾವುದೋ ಒಂದು ಸಮಯದಲ್ಲಿ ಹಿಡಿದು ಬಾಧಿಸದೆ(ವೇಧಿ) ಹೋಗುವುದಿಲ್ಲ.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Will the ghost of what you have done for today’s happiness and profit
Sleep today itself and take no revenge? What do you think?
It will bide time, pounce upon you at the right moment
And smash you before leaving you alone – Marula Muniya
(Translation from "Thus Sang Marula Muniya" by Sri. Narasimha Bhat)

Wednesday, November 28, 2012

ಕೃತಕರ್ಮಫಲ ಶೇಷವಂ ಜೀವಿಗುಣಿಸುವುದು (320)

ಕೃತಕರ್ಮಫಲ ಶೇಷವಂ ಜೀವಿಗುಣಿಸುವುದು |
ಇತರ ಜೀವಿಗತಿಗದನಿಮಿತ್ತವೆನಿಸುವುದು ||
ಸತತ ಧರ್ಮದಿ ಜಗವನೆಲ್ಲ ತಾಂ ಪೊರೆಯುವುದು |
ತ್ರಿತಯವಿದು ದೈವಗತಿ - ಮರುಳ ಮುನಿಯ || (೩೨೦)

(ಜೀವಿಗೆ+ಉಣಿಸುವುದು)(ಜೀವಿಗತಿಗೆ+ಅದು+ಅನಿಮಿತ್ತ+ಎನಿಸುವುದು)

ಹಿಂದಿನ ಜನ್ಮಗಳಲ್ಲಿ ಮಾಡಿದ ಉಳಿಕಗಳ ಪರಿಣಾಮಗಳನ್ನು ಅನುಭವಿಸುವಂತೆ ಮಾಡುವುದು. ಪ್ರಪಂಚದಲ್ಲಿರುವ ಬೇರೆ ಜೀವಿಗಳಿಗೆ ಇದನ್ನು ಆಕರಣವೆನ್ನಿಸುವುದು. ನಿರಂತರವಾದ ಧರ್ಮಪಾಲನೆಯಿಂದ ಪ್ರಪಂಚವೆಲ್ಲವನ್ನೂ ಕಾಪಾಡುವುದು. ಪ್ರಪಂಚದಲ್ಲಿ ದೇವರ ಸಂಕಲ್ಪ ಕ್ರಿಯೆಗಳು ಈ ರೀತಿ ಮೂರು ರೂಪಗಳನ್ನು ತಾಳುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Fate feeds a being with the fruits of his past karma
Fate makes it a cause to shape the lives of other beings
He sustains all the world with dharma
Thus threefold are the functions of Destiny – Marula Muniya
(Translation from "Thus Sang Marula Muniya" by Sri. Narasimha Bhat)

Tuesday, November 27, 2012

ತನ್ನ ತಾ ಗೆಲದೆ ಲೋಕದೊಳೆಲ್ಲ ಗೆಲುವವನು (319)

ತನ್ನ ತಾ ಗೆಲದೆ ಲೋಕದೊಳೆಲ್ಲ ಗೆಲುವವನು |
ಮುನ್ನ ರಾವಣನಹನು ನರರು ನಗುತಿಹರು ||
ತಿನ್ನುವನು ಜಗವ ತಾಂ ತನಗೆ ತುತ್ತಾಗುವನು |
ಪುಣ್ಯವೇನಿದರಲ್ಲಿ - ಮರುಳ ಮುನಿಯ || (೩೧೯)

(ಲೋಕದೊಳ್+ಎಲ್ಲ)(ಗೆಲುವ+ಅವನು)(ರಾವಣನ್+ಅಹನು)(ತುತ್ತು+ಆಗುವನು)(ಪುಣ್ಯ+ಏನ್+ಇದರಲ್ಲಿ)

ತನ್ನನ್ನು ತಾನೇ ಜಯಿಸಿಕೊಳ್ಳದೆ ಪ್ರಪಂಚದಲ್ಲಿರುವುದೆಲ್ಲವನು ಗೆಲ್ಲುವವನು, ಎಂಬುದಕ್ಕೆ ಮೊದಲ ಉದಾಹರಣೆ ಎಂದರೆ ರಾವಣ. ಮಿಕ್ಕ ಎಲ್ಲಾ ಜನರು ಅವನನ್ನು ನೋಡಿ ನಗುತ್ತಿದ್ದಾರೆ. ಜಗತ್ತನ್ನು ನುಂಗಿ ನೀರು ಕುಡಿಯಲು ಯತ್ನಿಸುವವನು ತನಗೆ ತಾನೇ ಕವಳವಾಗುತ್ತಾನೆ. ಇದರಲ್ಲಿ ಪುಣ್ಯದ ಪ್ರಶ್ನೆಯೇನೂ ಉದ್ಭವಿಸುವುದಿಲ್ಲ.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

If a person conquers everything in the world except his own self
People will nickname him Ravana and will ridicule him
He who eats the world will have to eat himself at last
What is the virtue in it? – Marula Muniya
(Translation from "Thus Sang Marula Muniya" by Sri. Narasimha Bhat)

Monday, November 26, 2012

ಕಾರ್ಮುಗಿಲು ನಿನ್ನ ಕುರುಡಾಗಿಪ್ಪುದರಗಳಿಗೆ (318)

ಕಾರ್ಮುಗಿಲು ನಿನ್ನ ಕುರುಡಾಗಿಪ್ಪುದರಗಳಿಗೆ |
ಕರ್ಮಪಟಲವುಮಂತು ಸುಳಿದು ಪಾರುವುದು ||
ನಿರ್ಮಲಂ ಗಗನಮಪ್ಪಂದು ತೂಂಕಡಿಸದಿರು |
ಪೆರ‍್ಮೆಯದು ಪುರುಷತೆಗೆ - ಮರುಳ ಮುನಿಯ || (೩೧೮)

(ಕುರುಡು+ಆಗಿಪ್ಪುದು+ಅರಗಳಿಗೆ)(ಕರ್ಮಪಟಲವುಂ+ಅಂತು)(ಗಗನಂ+ಅಪ್ಪಂದು)(ತೂಂಕಡಿಸದೆ+ಇರು)(ಪೆರ‍್ಮೆ+ಅದು)
ಕಪ್ಪು ಮೋಡಗಳು (ಕಾರ್ಮುಗಿಲು) ಒಂದು ಅರ್ಧಗಳಿಗೆಯಷ್ಟು ಸಮಯ ನಿನ್ನನ್ನು ಕುರುಡನನ್ನಾಗಿಸಿಸುತ್ತವೆ. ಕರ್ಮದ ಪೊರೆ(ಪಟಲ)ಯೂ ಸಹ ಇದೇ ರೀತಿ ಸುಳಿದು ಹಾರುತ್ತದೆ. ಕಪ್ಪು ಮೋಡಗಳು ಕರಗಿ ಆಕಾಶವು ಸ್ವಚ್ಛವಾಗಿರುವಾಗ ನೀನು ತೂಕಡಿಸಬೇಡ. ಅದು ನಿನ್ನ ಪುರುಷತ್ವವನ್ನು ಹಿರದ(ಪೆರ‍್ಮೆ)ನ್ನಾಗಿಸುವ ಸಮಯ. ಅದನ್ನು ಕಳೆದುಕೊಳ್ಳಬೇಡ.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Dark clouds may blind your vision for a short time
The veil of Karma likewise may hover for sometime and disappear
But do not doze when the sky become cloudless
This would add to the greatness of man – Marula Muniya || (318)
(Translation from "Thus Sang Marula Muniya" by Sri. Narasimha Bhat)

Friday, November 23, 2012

ಗೈದ ಪಾಪದ ನೆನಪಿನಿರಿತವಾತ್ಮಕೆ ಮದ್ದು (317)

ಗೈದ ಪಾಪದ ನೆನಪಿನಿರಿತವಾತ್ಮಕೆ ಮದ್ದು |
ಆದೊಡೆಳುವೇಂ ಪಾಲೆ ಜೀವ ಪೋಷಣೆಗೆ? ||
ರೋದನೆಯನುಳಿದಾತ್ಮಶೋಧನೆಯನಾಗಿಪುದು |
ಸಾಧು ನಿಷ್ಕ್ರುತಿಮಾರ್ಗ - ಮರುಳ ಮುನಿಯ || (೩೧೭)

(ನೆನಪಿನ+ಇರಿತ+ಆತ್ಮಕೆ)(ಆದೊಡು+ಅಳುವೇಂ)(ರೋದನೆಯಂ+ಉಳಿದ+ಆತ್ಮಶೋಧನೆಯನ್+ಆಗಿಪುದು) 

ಮಾಡಿದ ಹೀನಕಾರ್ಯಗಳ ಚುಚ್ಚುವ ನೆನಪು ಆತ್ಮಕ್ಕೆ ಔಷದಿ ಆಗುತ್ತದೆ. ಆದರೆ ಅಳುವುದು ಜೀವವನ್ನು ಪೋಷಿಸುವ ಹಾಲಿನಂತಾಗಲು ಸಾಧ್ಯವೇನು? ಅಳುವನ್ನು (ರೋದನೆಯನ್) ತೊರೆದ ಆತ್ಮವನ್ನು ಶುದ್ಧಿಮಾಡುವಿಕೆ ಉತ್ತಮವಾದ (ಸಾಧು) ಪರಿಹಾರದ (ನಿಷ್ಕ್ರುತಿ) ದಾರಿ.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The stabbing memories of the past sins are medicines to the sick soul
But can sorrow offer nourishment to life like milk?
In doing soul-searching and giving up all wailing
Lies the proper remedial course – Marula Muniya
(Translation from "Thus Sang Marula Muniya" by Sri. Narasimha Bhat)

Thursday, November 22, 2012

ಪೌರುಷ ಪ್ರಗತಿಮಾರ್ಗಗಳ ನೋಡೇಸುಜನ (316)

ಪೌರುಷ ಪ್ರಗತಿಮಾರ್ಗಗಳ ನೋಡೇಸುಜನ |
ದೂರದಿಂ ಕಂಡು ಶುಭ ಮೇರುಶಿಖರವನು ||
ಧೀರ ಸಾಹಸದಿಂದೆ ಪಾರಮಾರ್ಥಿಕದಿಂದೆ |
ದಾರಿಪಂಜುವೊಲಿರು - ಮರುಳ ಮುನಿಯ || (೩೧೬)

(ನೋಡೆ+ಏಸುಜನ)(ದಾರಿಪಂಜುವೊಲ್+ಇರು)

ಶೌರ್ಯ ಮತ್ತು ಏಳಿಗೆಗಳ ದಾರಿಗಳನ್ನು ಕಾಣಲು, ಎಷ್ಟೋ ಜನರು ದೂರದಿಂದ ಮಂಗಳಕರವಾದ ಮೇರುಪರ್ವತದ ಶಿಖರವನ್ನು ನೋಡಿ ತಮ್ಮ ಧೈರ್ಯ, ಸಾಹಸ ಮತ್ತು ಪರಲೋಕಕ್ಕೆ ಅನುಗುಣವಾದ ಧರ್ಮದಿಂದ, ಆ ಹಾದಿಗೆ, ದಾರಿದೀಪ(ಪಂಜು)ಗಳಿಂತಿರುವರು.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Seeing the summit of the auspicious Mount Meru
How many people are inspired to scale new heights
And walk the path of progress and valour! With the spirit of adventure
And spiritual vision they live as beacon-lights – Marula Muniya
(Translation from "Thus Sang Marula Muniya" by Sri. Narasimha Bhat)

ವಿಧಿಯನೆದುರಿಸಿ ಹೋರಿ ಪುರುಷತೆಯ ತುದಿಗೇರಿ (315)

ವಿಧಿಯನೆದುರಿಸಿ ಹೋರಿ ಪುರುಷತೆಯ ತುದಿಗೇರಿ |
ಬದುಕಿನೆಲ್ಲನುಭವಗಳಿಂ ಪಕ್ವನಾಗಿ ||
ಹೃದಯದಲಿ ಜಗದಾತ್ಮನಂ ಭಜಿಪ ನಿರ್ದ್ವಂದ್ವ - |
ನಧಿಪುರುಷನೆನಿಸುವನೊ - ಮರುಳ ಮುನಿಯ || (೩೧೫)

(ವಿಧಿಯನ್+ಎದುರಿಸಿ)(ತುದಿಗೆ+ಏರಿ)(ಬದುಕಿನ+ಎಲ್ಲ+ಅನುಭವಗಳಿಂ)(ನಿರ್ದ್ವಂದ್ವನ್+ಅಧಿಪುರುಷನ್+ಎನಿಸುವನೊ)

ವಿಧಿಯನ್ನು ಎದುರಿಸಿ, ಅದರ ಜೊತೆ ಹೋರಾಡಿ, ಪುರುಷತೆಯ ಉನ್ನತ ಶಿಖರವನ್ನು ಹತ್ತಿ, ಬಾಳಿನ ಸಕಲ ಅನುಭವಗಳಿಂದ ಮಾಗಿ, ತನ್ನ ಹೃದಯದಲ್ಲಿ ಪರಮಾತ್ಮನನ್ನು ಅರಾಧಿಸುವ ಮತ್ತು ಸುಖ ದುಃಖಾದಿ ದ್ವಂದ್ವರಹಿತನಾಗಿರುವವನು (ನಿರ್ದ್ವಂದ್ವ) ಪುರುಷೋತ್ತಮ(ಅಧಿಪುರುಷ)ನೆಂದೆನ್ನಿಸಿಕೊಳ್ಳುತ್ತಾನೆ.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

One who bravely fights Fate and reaches the acme of human state
One who has become fully ripe imbibing all the experience of life
One who always prays to the universal soul in heart
And rises above dualities is the Superhuman Self – Marula Muniya
(Translation from "Thus Sang Marula Muniya" by Sri. Narasimha Bhat)

ಶಿರವ ಬಾಗದೆ ನಿಂದು ನಿನ್ನ ವಿಧಿ ಬಡಿವಂದು (314)

ಶಿರವ ಬಾಗದೆ ನಿಂದು ನಿನ್ನ ವಿಧಿ ಬಡಿವಂದು |
ಸರಸಿಯಾಗಿಯೆ ಜಗದ್ವಂದ್ವಗಳ ಹಾಯ್ದು ||
ಪುರುಷಪದದಿಂದೆ ನೀನಧಿಪುರುಷ ಪದಕೇರು |
ಗುರಿಯದುವೆ ಜಾಣಂಗೆ - ಮರುಳ ಮುನಿಯ || (೩೧೪)

ನಿನ್ನನ್ನು ವಿಧಿಯು ಶಿಕ್ಷಿಸುವಾಗ, ನೀನು ನಿನ್ನ ತಲೆಯನ್ನು ಬಗ್ಗಿಸದೆ ನಿಂತು, ರಸಿಕನಾಗಿಯೇ ಈ ಜಗತ್ತಿನ ಜಟಿಲತೆಗಳನ್ನು ದಾಟಿ, ಪುರುಷನ ಸ್ಥಾನದಿಂದ ಪುರುಷೋತ್ತಮ (ಅಧಿಪುರುಷ)ನ ಸ್ಥಾನಕ್ಕೆ ಅರ್ಹನಾಗು. ಬುದ್ಧಿವಂತನಾದವನಿಗೇ ಇದೇ ಧ್ಯೇಯವಾಗಿರಬೇಕು.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ -ತಾತ್ಪರ್ಯ")

Standing erect with your head held high when Fate whacks you
Cross the pairs of opposites with unfailing cheerfulness
Rise from the human state to the Superhuman plane
This itself is the goal for the wise – Marula Muniya (314)
(Translation from "Thus Sang Marula Muniya" by Sri. Narasimha Bhat)

ಸೀಮೆ ಜಗಕೆಲ್ಲಿಹುದು ವ್ಯೋಮದೊಳಗೇನಿಲ್ಲ (313)

ಸೀಮೆ ಜಗಕೆಲ್ಲಿಹುದು ವ್ಯೋಮದೊಳಗೇನಿಲ್ಲ |
ನೇಮಿಯಿರದಾಚಕ್ರದಲಿ ನಾಭಿ ನೀನು ||
ನಾಮರೂಪಾಭಾಸ ನಭದ ಮೇಘವಿಲಾಸ |
ಸ್ಥೇಮಿ ಚಿನ್ಮಯ ನೀನು - ಮರುಳ ಮುನಿಯ || (೩೧೩)

(ಜಗಕೆ+ಎಲ್ಲಿ+ಇಹುದು)(ವ್ಯೋಮದೊಳಗೆ+ಏನಿಲ್ಲ)(ನೇಮಿಯಿರದ+ಆ+ಚಕ್ರದಲಿ)(ನಾಮರೂಪ+ಆಭಾಸ)

ಈ ಜಗತ್ತಿನ ಗಡಿ (ಸೀಮೆ) ಎಲ್ಲಿಯವರೆಗಿದೆ? ಅದು ಆಕಾಶಕ್ಕೆ (ವ್ಯೋಮ) ಸೀಮಿತವಾಗಿಲ್ಲ. ಸುತ್ತುಬಳೆ (ನೇಮಿ) ಇಲ್ಲದಿರುವ ಈ ಚಕ್ರದಲ್ಲಿ ನೀನು ಗಾಲಿಯ ಗುಂಬ. ಹೆಸರು ಮತ್ತು ಆಕಾರಗಳ ಭ್ರಾಂತಿ ಆಕಾಶ(ನಭ)ದಲ್ಲಿರುವ ಮೋಡ(ಮೇಘ)ಗಳ ಕ್ರೀಡೆ. ಪರಮಾತ್ಮನೇ ಸ್ಥಿರ (ಸ್ಥೇಮಿ).
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Where lies the boundary of universe? Is there anything that is not in the sky?
You are the hub of a wheel that has no rim
The outer appearance of names and forms is akin to the playfulness of clouds in the sky
You are the Eternal omniscient entity – Marula Muniya (313)
(Translation from "Thus Sang Marula Muniya" by Sri. Narasimha Bhat)

ಜೀವಕೆ ನಮೋಯೆನ್ನು ದೈವ ತಾಂ ಜೀವವಲ (312)

ಜೀವಕೆ ನಮೋಯೆನ್ನು ದೈವ ತಾಂ ಜೀವವಲ |
ಜೀವತವನಂತ ಚಿತ್ಸತ್ತ್ವ ಲೀಲೆಯಲ ||
ಜೀವಹೊರತೇಂ ದೈವ, ದೈವಹೊರತೇಂ ಜೀವ |
ಜೀವಕ್ಕೆ ಜಯವೆನ್ನು - ಮರುಳ ಮುನಿಯ || (೩೧೨)

(ಜೀವತವು+ಅನಂತ)(ಚಿತ್+ಸತ್ತ್ವ+ಲೀಲೆ+ಅಲ)(ಜಯ+ಎನ್ನು)

ಜೀವಕ್ಕೆ ನಮಸ್ಕರಿಸು, ಏಕೆಂದರೆ ದೇವರೇ ತಾನೆ ಜೀವಿಯ ರೂಪವನ್ನು ತೊಟ್ಟು ಕೊಂಡಿರುವುದು. ಬದುಕಿಗೆ ಅಂತ್ಯವಿಲ್ಲ. ಅದು ಪರಮಾತ್ಮನ ಸಾರದ ಒಂದು ಆಟ ತಾನೆ. ಜೀವವನ್ನು ತೊರೆದು ದೈವವಿರಲಾರದು. ಅಂತೆಯೇ ದೈವವನ್ನು ತೊರೆದು ಜೀವವೂ ಇರಲಾರದು. ಜೀವಕ್ಕೆ ಜಯವಾಗಲಿ ಎನ್ನು.

(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Say “salutation to soul”, is not God Himself in soul?
Is not life a deathless sport of the Godself?
What is God without soul and soul without God?
Proclaim “Victory, victory to soul” – Marula Muniya (312)
(Translation from "Thus Sang Marula Muniya" by Sri. Narasimha Bhat)

ಭಾವದ ವಿಕಾರಂಗಳಳಿದ ಜೀವವೆ ದೈವ (311)

ಭಾವದ ವಿಕಾರಂಗಳಳಿದ ಜೀವವೆ ದೈವ |
ಭಾವವೇಂ ದೈವದೊಂದುಚ್ಛಸನ ಹಸನ ||
ಜೀವಿತಂ ದ್ವಂದ್ವ ದೈವತ್ವದೊಳದ್ವಂದ್ವ |
ಜೀವರೂಪಿಯೊ ದೈವ - ಮರುಳ ಮುನಿಯ || (೩೧೧)

(ವಿಕಾರಂಗಳ್+ಅಳಿದ)(ದೈವದ+ಒಂದು+ಉಚ್ಛಸನ)(ದೈವತ್ವದೊಳು+ಅದ್ವಂದ್ವ)

ಭಾವನೆಗಳ ವ್ಯತ್ಯಾಸಗಳು ನಾಶವಾಗಿರುವ ಜೀವವೇ ದೈವ. ಭಾವನೆಗಳು ದೈವದ ಕೇವಲ ಒಂದು ನಿಶ್ವಾಸ(ಉಚ್ಛಸನ) ಮತ್ತು ನಗು(ಹಸನ)ಗಳಿಷ್ಟೆ. ಜೀವನವೆನ್ನುವುದು ಬೇರೆ ಬೇರೆ ವಿರುದ್ಧ ಗತಿಗಳಿಂದ ಕೂಡಿದ ಜೋಡಿಗಳು (ದ್ವಂದ್ವ). ಆದರೆ ದೈವತ್ವದೊಳಗಿರುವುದು ಅವಿರುದ್ಧವಾದ ಏಕತೆ(ಅದ್ವಂದ್ವ). ದೈವವು ಜೀವಿಯ ರೂಪವನ್ನು ತೊಟ್ಟುಕೊಂಡಿದೆ.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The soul, freed from all distorted emotions is God
Human emotions are nothing but the breaths and smiles of God
Human life is replete with dualities but God is nondual
God is in the form of self – Marula Muniya (311)
(Translation from "Thus Sang Marula Muniya" by Sri. Narasimha Bhat)

ಪುರುಷಮತಿಯೊಳ್ ಧರ್ಮ ಪ್ರಕೃತಿಯೊಳ್ ಧರ್ಮಮೇಂ ? (310)

ಪುರುಷಮತಿಯೊಳ್ ಧರ್ಮ ಪ್ರಕೃತಿಯೊಳ್ ಧರ್ಮಮೇಂ ? |
ಸರಿಯೆ ಜೀವಿಗೆ ಜೀವನಂ ಜೀವಿಯಹುದು ? ||
ಪಿರಿದು ಧರ್ಮಂ ಪ್ರಕೃತಿತಂತ್ರದಿಂದದರಿಂದೆ |
ಶಿರವೊ ಸೃಷ್ಟಿಗೆ ನರನು - ಮರುಳ ಮುನಿಯ || (೩೧೦)

(ಜೀವಿ+ಅಹುದು)(ಪ್ರಕೃತಿತಂತ್ರದಿಂದ+ಅದರಿಂದೆ)

ಮನುಷ್ಯನ ಬುದ್ಧಿ ಮತ್ತು ಮನಸ್ಸಿನಲ್ಲಿ ಧರ್ಮದ ಬಗ್ಗೆ ಒಂದು ನಿರ್ದಿಷ್ಟವಾದ ಕಲ್ಪನೆ ಇದೆ. ಆದರೆ ನಿಸರ್ಗದಲ್ಲಿ ಧರ್ಮ ಯಾವುದು? ಒಂದು ಜೀವಿಗೆ ಜೀವನವು ಇನ್ನೊಂದು ಜೀವಿಯಿಂದಲೇ ಎನ್ನುವುದು ಸರಿಯೇನು? ಪ್ರಕೃತಿಯ ಉಪಾಯ ಮತ್ತು ಕುಶಲತೆಗಳಿಗಿಂತ ಹಿರಿದಾದದ್ದು ಧರ್ಮ. ಆದ್ದರಿಂದ ಸೃಷ್ಟಿಗೆ ಶಿಖರಪ್ರಾಯನಾಗಿರುವನು ಈ ಮನುಷ್ಯ.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Dharma’s abode is human mind, is there dharma in Nature?
It is proper for an animal to live just like a living being
Dharma is far greater than the mechanism of Nature
Hence, man is the crown of creation – Marula Muniya
(Translation from "Thus Sang Marula Muniya" by Sri. Narasimha Bhat)

ಅಪರಿಪಕ್ವದ ರಚನೆ ಜಗವಿದು ವಿಧಾತನದು (309)

ಅಪರಿಪಕ್ವದ ರಚನೆ ಜಗವಿದು ವಿಧಾತನದು |
ನಿಪುಣ ನಾನಿದನು ಪಕ್ವಿಪೆನೆಂದು ಮನುಜಂ ||
ಚಪಲದಿಂ ಪೆಣಗಾಡಿ ವಿಪರೀತವಾಗಿಪನು |
ಉಪವಿಧಾತನೊ ನರನು - ಮರುಳ ಮುನಿಯ || (೩೦೯)

(ಪಕ್ವಿಪೆನ್+ಎಂದು)(ವಿಪರೀತ+ಆಗಿಪನು)

ಬ್ರಹ್ಮ(ವಿಧಾತ)ನು ಸೃಷ್ಟಿಸಿರುವ ಈ ಜಗತ್ತು ಚೆನ್ನಾಗಿಲ್ಲ. ನಾನು ಬಹಳ ಚತುರನಾದದ್ದರಿಂದ ಈ ಜಗತ್ತನ್ನು ಚೆನ್ನಾಗಿ ಮಾಡುತ್ತೇನೆಂದು ಮನುಷ್ಯನು ಹೊರಡುತ್ತಾನೆ. ಚಂಚಲತೆಯಿಂದ ಹೆಣಗಾಡಿ(ಪೆಣಗಾಡಿ) ಅದನ್ನು ತಿರುವು ಮುರುವು ಮಾಡಿಬಿಡುತ್ತಾನೆ. ಮನುಷ್ಯನೆಂಬ ಇವನು ಒಬ್ಬ ಚಿಕ್ಕ ಬ್ರಹ್ಮನೇ ಸರಿ.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

This universe of the Creator is an imperfect work
I would make it perfect so thinks the wayward man
With all this fickleness he struggles and makes all things topsy turvy
He acts like a subcreator – Marula Muniya
(Translation from "Thus Sang Marula Muniya" by Sri. Narasimha Bhat)

ಸೃಷ್ಟಿಚಿತ್ರದ ನಡುವೆ ನರನದೊಂದುಪಸೃಷ್ಟಿ (308)

ಸೃಷ್ಟಿಚಿತ್ರದ ನಡುವೆ ನರನದೊಂದುಪಸೃಷ್ಟಿ |
ಚೇಷ್ಟಿಪ್ಪುದವನ ಕೈ ಪ್ರಕೃತಿಕೃತಿಗಳಲಿ ||
ಸೊಟ್ಟಗಿರೆ ನೆಟ್ಟಗಿಸಿ ನೆಟ್ಟಗಿರೆ ಸೊಟ್ಟಿಪುದು |
ಪುಟ್ಟು ಬೊಮ್ಮನೊ ನರನು - ಮರುಳ ಮುನಿಯ || (೩೦೮)

(ನರನದೊಂದು+ಉಪಸೃಷ್ಟಿ)(ಚೇಷ್ಟಿಪ್ಪುದು+ಅವನ)

ಸೃಷ್ಟಿಯ ಚಿತ್ರಗಳ ನಡುವೆ ಮನುಷ್ಯನದೂ ಒಂದು ಚಿಕ್ಕ ರಚನೆ. ನಿಸರ್ಗದ ರಚನೆಗಳಲ್ಲಿ ಇವನೂ ಸಹ ಕೈಯಾಡಿಸುತ್ತಾನೆ. ಸೊಟ್ಟಾಗಿರುವುದನ್ನು ನೆಟ್ಟಗಾಗಿಸಿ. ನೆಟ್ಟಗಿರುವುದನ್ನು ಸೊಟ್ಟಗೆ ಮಾಡುತ್ತಾನೆ. ಈ ರೀತಿಯಾಗಿ ಮನುಷ್ಯನೂ ಸಹ ಹುಟ್ಟಿನಿಂದಲೇ ಒಬ್ಬ ಪರಬ್ರಹ್ಮ.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Amidst the gargantuan picture of creation, man’s is a secondary creation
Human hands meddle in the works of Nature
He straightens the curved and bends the straight
Man has become a mini Brahma – Marula Muniya
(Translation from "Thus Sang Marula Muniya" by Sri. Narasimha Bhat)

ತರುವಲ್ಕದಂತೆ ನರಮಮತೆ ಜೀವಕೆ ಕವಚ (307)

ತರುವಲ್ಕದಂತೆ ನರಮಮತೆ ಜೀವಕೆ ಕವಚ |
ಬಿರುಸಾಗಲದು ತಾನೆ ಬಾಳ್ಗೆ ಸಂಕೋಲೆ ||
ಪರುಷತೆಯ ಮೇಲೇಳ್ದ ಪುರುಷತೆಯೆ ಕಲ್ಪಲತೆ |
ಸರಸತೆಯೆ ಮರಕಂದ - ಮರುಳ ಮುನಿಯ || (೩೦೭)

(ಬಿರುಸು+ಆಗಲು+ಅದು)(ಮೇಲೆ+ಏಳ್ದ)

ಮರಕ್ಕೆ ತೊಗಟೆ(ವಲ್ಕ) ಹೇಗೋ ಹಾಗೆ, ಮನುಷ್ಯನ ಮಮಕಾರವು ಅವನಿಗೆ ಒಂದು ಹೊದಿಕೆಯಾಗಿರುತ್ತದೆ. ಆದರೆ ಅದು ಬಹಳ ಗಟ್ಟಿ(ಬಿರುಸು)ಯಾದಲ್ಲಿ ಅದು ಜೀವನಕ್ಕೆ ಒಂದು ಕೈಕೋಳವಾಗುತ್ತದೆ. ಬಿರುಸುತನದಿಂದ ಮೇಲಕ್ಕೆ ಎದ್ದ ಪುರುಷತೆಯೇ ನಮ್ಮ ಅಭೀಷ್ಟಗಳನ್ನೀಡೇರಿಸುವ ಬಳ್ಳಿ (ಕಲ್ಪಲತೆ). ವಿನೋದ ಮತ್ತು ಚೇಷ್ಟೆಗಳೇ ಹೂವಿನ ರಸ (ಮಕರಂದ).
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Human attachment is a protective armour like treebark
But it binds like chain when it becomes too hard
Human valour that grows from hard strength is a
Wish fulfilling creeper and affability is its nectar – Marula Muniya
(Translation from "Thus Sang Marula Muniya" by Sri. Narasimha Bhat)

ಮಾನ್ಯವಲ್ತೆನಗೆ ವಧೆಯಿಂ ಬರ‍್ಪ ಜಯವೆಂದು (306)

ಮಾನ್ಯವಲ್ತೆನಗೆ ವಧೆಯಿಂ ಬರ‍್ಪ ಜಯವೆಂದು |
ಸಂನ್ಯಾಸದಾಭಾಸಿ ಪಾರ್ಥನಾದಂದು ||
ಅನ್ಯಾಯ ಸಹನೆ ವೈರಾಗ್ಯವೆಂತಹುದೆಂದು - |
ಪನ್ಯಸಿಸಿದಂ ಕೃಷ್ಣ - ಮರುಳ ಮುನಿಯ || (೩೦೬)

(ಮಾನ್ಯವಲ್ತು+ಎನಗೆ)(ಸಂನ್ಯಾಸದ+ಆಭಾಸಿ)(ಪಾರ್ಥನಾದ+ಅಂದು)(ವೈರಾಗ್ಯ+ಎಂತು+ಅಹುದು+ಎಂದು+ಉಪನ್ಯಸಿಸಿದಂ)

ಇತರರನ್ನು ವಧಿಸಿ ದೊರೆಯುವ ಗೆಲುವು ತನಗೆ ಒಪ್ಪತಕ್ಕಂತಹುದಲ್ಲವೆಂದು, ಸಂನ್ಯಾಸಿಯಂತೆ ನೋಟಮಾತ್ರಕ್ಕೆ ಕಾಣಿಸುತ್ತಿದ್ದ (ಸನ್ಯಾಸದಾಭಾಸಿ) ಅರ್ಜುನ(ಪಾರ್ಥ)ನು ಹೇಳಿದಾಗ, ಅನ್ಯಾಯಗಳನ್ನು ಸಹಿಸಿಕೊಳ್ಳುವುದು ಹೇಗೆ ವಿರಕ್ತಿಯಾಗುತ್ತದೆಂದು, ಶ್ರೀ ಕೃಷ್ಣ ಪರಮಾತ್ಮನು ಅವನಿಗೆ ಉಪದೇಶಿಸಿದನು.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

In a fleeting spree of renunciation Partha declared
That the victory gained through cruel killings was unacceptable
Then Krishna in a preaching mood asked him how
Tolerating injustice could be acclaimed as renunciation – Marula Muniya
(Translation from "Thus Sang Marula Muniya" by Sri. Narasimha Bhat)

ಶಾರೀರವೆಂತೊ ಮಾನಸಬಲವುಮಂತು ಮಿತ (305)

ಶಾರೀರವೆಂತೊ ಮಾನಸಬಲವುಮಂತು ಮಿತ |
ಆರಯ್ದು ನೋಡದಕೆ ತಕ್ಕ ಪಥ್ಯಗಳ ||
ವೀರೋಪವಾಸಗಳ ಪೂರ ಜಾಗರಣೆಗಳ |
ಭಾರಕದು ಕುಸಿದೀತು - ಮರುಳ ಮುನಿಯ || (೩೦೫)

(ಶಾರೀರವು+ಎಂತೊ)(ಮಾನಸಬಲವುಂ+ಅಂತು)(ಆರ್+ಅಯ್ದು)(ವೀರ+ಉಪವಾಸಗಳ)(ಭಾರಕೆ+ಅದು)

ಮನುಷ್ಯನ ಶರೀರಶಕ್ತಿಯು ಹೇಗೆ ಒಂದು ಎಲ್ಲೆಗೆ ಒಳಪಟ್ಟಿದೆಯೋ, ಅವನ ಮನಸ್ಸಿನ ಶಕ್ತಿಯೂ ಹಾಗೆಯೇ ಒಂದು ಮಿತಿಗೆ ಒಳಪಟ್ಟಿದೆ. ಅದಕ್ಕೆ ಐದಾರು ಉಚಿತವಾದ ಆಹಾರ ನಿಯಮಗಳುಂಟು. ಭಯಂಕರವಾದ ಉಪವಾಸ ಮತ್ತು ಸಂಪೂರ್ಣವಾಗಿ ನಿದ್ರೆ ಮಾಡದಿರುವ ವೃತಗಳ ಭಾರದಿಂದ ಅದು ಕುಸಿದು ಹೋದೀತು.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Like physical strength, strength of mind is also limited
Carefully choose proper diet for both
Severe fasting and fullnight sleepless vigil
May cause their breakdown – Marula Muniya (305)
(Translation from "Thus Sang Marula Muniya" by Sri. Narasimha Bhat)

ಸುಡು ಕಾಮಮೂಲವನು ಸುಡಲಾಗದೊಡೆ ಬೇಗ (304)

ಸುಡು ಕಾಮಮೂಲವನು ಸುಡಲಾಗದೊಡೆ ಬೇಗ |
ಕೊಡು ಕಾಮಿತವನೆಂದು ಬೇಡು ದೈವವನು ||
ಕೆಡುವುದೀ ಜೀವ ಕೊರಗಿ ಕಾಯುತ ಕರಟಿ |
ನಡೆವುದಿಹ ತೋರ‍್ಕೆಯಿಂ - ಮರುಳ ಮುನಿಯ || (೩೦೪)

(ಸುಡಲ್+ಆಗದ+ಒಡೆ)(ಕಾಮಿತವನ್+ಎಂದು)(ಕೆಡುವುದು+ಈ)(ನಡೆವುದು+ಇಹ)

ವಿಷಯಲಾಭಿಲಾಷೆ ಮತ್ತು ಬಯಕೆಗಳ ಬೇರುಗಳನ್ನು ಸುಟ್ಟುಹಾಕು. ಈ ಕೆಲಸಗಳನ್ನು ಮಾಡಲಾಗದಿದ್ದಲ್ಲಿ, ನೀನು ಅಪೇಕ್ಷಿಸಿದ್ದನ್ನು ತ್ವರಿತವಾಗಿ ನೀಡೆಂದು ದೇವರಲ್ಲಿ ಕೇಳಿಕೊ. ಇಲ್ಲದಿದ್ದಲ್ಲಿ ಈ ಜೀವವು ಅತಿಯಾದ ಚಿಂತೆಯಿಂದ ಸೊರಗಿ ಕಾದು, ಕರಕಾಗಿ, ಬೆಳವಣಿಗೆ ನಿಂತುಹೋಗಿ ಕೆಟ್ಟುಹೋಗುತ್ತದೆ. ಆವಾಗ ಅದು ಹೊರನೋಟಕ್ಕೆ ಮಾತ್ರ ನಡೆಯುತ್ತಿರುವಂತೆ ಕಾಣುತ್ತದೆ. ಒಳಗೆ ಕರಕಾಗಿ ಹಾಳಾಗಿ ಹೋಗುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Burn the roots of desire and if you can’t do so
Pray to God to grant your desires.
Grieving and waiting, the scorched soul would languish
The worldly life appears to go on with pretences – Marula Muniya (304)
(Translation from "Thus Sang Marula Muniya" by Sri. Narasimha Bhat)

ತನಯ ಮಡದಿಯರಿಂಗೆ ಪರಮಗತಿ ತಾನೆಂದು (303)

ತನಯ ಮಡದಿಯರಿಂಗೆ ಪರಮಗತಿ ತಾನೆಂದು |
ಧನಕನಕ ದಾಯನಿಧಿ ದೈವ ಸಮವೆಂದು ||
ಋಣಜಾಲವನು ಬೆಳಸಿ ವಿಪರೀತಗೆಯ್ವಂಗೆ |
ಮನೆಯೆ ಸೆರೆಮನೆಯಹುದೊ - ಮರುಳ ಮುನಿಯ || (೩೦೩)

(ತಾನ್+ಎಂದು)(ಸಮ+ಎಂದು)(ಸೆರೆಮನೆ+ಅಹುದೊ)

ತನ್ನ ಸತಿ ಮತ್ತು ಸುತರಿಗೆ ತಾನೇ ದಿಕ್ಕೆಂದು ಮತ್ತು ಐಶ್ವರ್ಯ, ಹೊನ್ನು, ಆಸ್ತಿ (ದಾಯ) ಮತ್ತು ಕೂಡಿಟ್ಟ ಸಂಪತ್ತುಗಳು ದೇವರಿಗೆ ಸಮಾನವಾದದ್ದೆನ್ನುವ ನಡವಳಿಕೆಗಳಿಂದ ಋಣದ ಬಲೆಯನ್ನು ಬೆಳೆಸೆ, ಅದನ್ನೇ ಹೆಚ್ಚು ಮಾಡುವವನಿಗೆ, ತನ್ನ ಗೃಹವೇ ಕಾರಾಗೃಹವಾಗಿ, ಅವನು ಈ ಪ್ರಪಂಚಕ್ಕೆ ಶಾಶ್ವತವಾಗಿ ಬಂಧಿಸಲ್ಪಡುತ್ತಾನೆ.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

To one who thinks that he alone is the sole protector of his wife and children
And to one who worships, money, gold and property as though they are semi-god
And strengthen the bonds of Karma committing excesses
His own house becomes his prison – Marula Muniya (303)
(Translation from "Thus Sang Marula Muniya" by Sri. Narasimha Bhat)

ಒಳಿತೊಂದೆ ಶಾಶ್ವತವೊ ಉಳಿದೆಲ್ಲವಳಿಯುವುದೊ (302)

ಒಳಿತೊಂದೆ ಶಾಶ್ವತವೊ ಉಳಿದೆಲ್ಲವಳಿಯುವುದೊ |
ಅಳುವ ನೀನೊರಸಿದುದು ನಗುವ ನಗಿಸುದುದು ||
ಒಲಿದು ನೀಂ ನೀಡಿದುದು ನಲವ ನೀನೆಸಗಿದುದು |
ನೆಲಸುವುವು ಬೊಮ್ಮನಲಿ - ಮರುಳ ಮುನಿಯ || (೩೦೨)

(ಒಳಿತು+ಒಂದೆ)(ಉಳಿದೆಲ್ಲ+ಅಳಿಯುವುದೊ)(ನೀನ್+ಒರಸಿದುದು)(ನೀನ್+ಎಸಗಿದುದು)

ಪ್ರಪಂಚದಲ್ಲಿ ಶಾಶ್ವತವಾಗಿ ಉಳಿಯುವುದು ನಾವು ಮಾಡುವ ಒಳ್ಳೆಯ ಕೆಲಸಗಳು ಮಾತ್ರ. ಮಿಕ್ಕವೆಲ್ಲವೂ ನಾಶವಾಗಿ ಹೋಗುತ್ತದೆ. ಇತರರ ದುಃಖವನ್ನು ನೀನು ಹೋಗಲಾಡಿಸಿದ್ದು, ನೀನೂ ನಕ್ಕು ಅವರುಗಳನ್ನೂ ನಗಿಸಿದ್ದು, ಪ್ರೀತಿಯಿಂದ ಅವರುಗಳಿಗೆ ನೀನು ಕೊಟ್ಟಿದ್ದು ಮತ್ತು ಸಂತೋಷವನ್ನುಂಟುಮಾಡಿದ್ದು, ಇವುಗಳೆಲ್ಲವೂ ಪರಬ್ರಹ್ಮನಲ್ಲಿ ಶಾಶ್ವತವಾಗಿ ಕಟ್ಟಿಟ್ಟ ಬುತ್ತಿ ಆಗಿರುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Goodness alone is eternal and all else is subject to annihilation
Your wiping of others’ tears and making them smile
Your generous gifts and your loving acts
Would live forever in Brahma – Marula Muniya (302)
(Translation from "Thus Sang Marula Muniya" by Sri. Narasimha Bhat)

ಸೃಷ್ಟಿ ಶಿಶುವಾದೊಡಂ ಪೂರುಷಂ ತನ್ನಾತ್ಮ (301)

ಸೃಷ್ಟಿ ಶಿಶುವಾದೊಡಂ ಪೂರುಷಂ ತನ್ನಾತ್ಮ |
ಶಿಷ್ಟಿಯಿಂದವಳ ಮಾಯಾಪಟವ ಪರಿದು ||
ನಿಷ್ಠುರ ಜಗದ್ದ್ವಂದ್ವಗಳ ದಾಟಿ ಬಾಳ್ವುದೆ ವಿ - |
ಶಿಷ್ಟ ಧರ್ಮಮವಂಗೆ - ಮರುಳ ಮುನಿಯ || (೩೦೧)

(ಶಿಶು+ಆದೊಡಂ)(ತನ್ನಾ+ಆತ್ಮ)(ಶಿಷ್ಟಿಯಿಂದ+ಅವಳ)(ಧರ್ಮಂ+ಅವಂಗೆ)

ಮನುಷ್ಯನು ಸೃಷ್ಟಿಯ ಮಗುವಾದರೂ ಸಹ, ಅವನು ತನ್ನ ಆತ್ಮದ ಶಿಕ್ಷಣದಿಂದ ಸೃಷ್ಟಿಯ ಮಾಯಾ ತೆರೆಯನ್ನು ಹರಿದು, ಈ ಪ್ರಪಂಚದ ಕಠಿಣವಾದ ದ್ವೈತಭಾವವನ್ನು ಮೀರಿ, ಜೀವನವನ್ನು ನಡೆಸುವುದೇ ಅವನಿಗೆ ಶ್ರೇಷ್ಠವಾದ ಧರ್ಮವಾಗುತ್ತದೆ.
(ಕೃಪೆ: ಶ್ರೀ.ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Even though man is a child of nature
He should tear off the veil of Maya with self-culture and self-control
He should rise above the harsh dualities of the world and live in peace
This is his unique duty – Marula Muniya (301)
(Translation from "Thus Sang Marula Muniya" by Sri. Narasimha Bhat)

ಬಾಳುವೆಯ ಬಯಸದಿರು ಸಾವನುಂ ಬಯಸದಿರು (300)

ಬಾಳುವೆಯ ಬಯಸದಿರು ಸಾವನುಂ ಬಯಸದಿರು |
ವೇಳೆ ವೇಳೆಯು ತೋರ‍್ಪ ಧರ್ಮವೆಸಗುತಿರು ||
ಕಾಲನಾತುರಿಸದನು ಪಾಲುಮಾರದನವನು |
ಆಳು ಕರ್ಮಋಣಕ್ಕೆ - ಮರುಳ ಮುನಿಯ || (೩೦೦)

(ಬಯಸದೆ+ಇರು)(ಧರ್ಮವ+ಎಸಗುತ+ಇರು)(ಕಾಲನ್+ಆತುರಿಸದನು)(ಪಾಲುಮಾರದನ್+ಅವನು)

ಬದುಕು ಮತ್ತು ಜೀವನವನ್ನು ಆಶಿಸಬೇಡ, ಹಾಗೆಯೇ ಸಾವನ್ನೂ ಸಹ ಅಪೇಕ್ಷಿಸಬೇಡ. ಆಯಾ ಕಾಲವು ತೋರಿಸುವ, ಸದಾಚಾರ ಮತ್ತು ಧರ್ಮಗಳನ್ನು ಮಾಡು(ಎಸಗು)ತ್ತಿರು. ಕಾಲನು ಅವಸರಿಸುವುದಿಲ್ಲ, ತ್ವರೆ ಮಾಡುವುದಿಲ್ಲ. ಅವನು ಸೋಮಾರಿಯೂ (ಪಾಲುಮಾರ್) ಅಲ್ಲ. ನಿನ್ನ ಕರ್ಮದ ಋಣಗಳನ್ನು ತೀರಿಸುವುದಕ್ಕಾಗಿ ಜೀವನವನ್ನು ನಡೆಸು.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Desire not life and desire not death
Discharge the duties that come to you from time to time
Kala, the God of time is neither hasty nor lazy
Like a faithful servant, he would discharge the obligations of Karma – Marula Muniya (300)
(Translation from "Thus Sang Marula Muniya" by Sri. Narasimha Bhat)

ಮರಣವನು ಬೇಡದಿರು ಜೀವಿತವ ಬೇಡದಿರು (299)

ಮರಣವನು ಬೇಡದಿರು ಜೀವಿತವ ಬೇಡದಿರು |
ತರುವುದೆಲ್ಲವ ಸಕಾಲಕೆ ಕರ್ಮಚಕ್ರಂ ||
ಪರಿಚಾರನೊಡೆಯನಾಜ್ಞೆಯನಿದಿರು ನೋಳ್ಪವೋ- |
ಲಿರು ತಾಳ್ಮೆಯಿಂ ನಿಂತು - ಮರುಳ ಮುನಿಯ || (೨೯೯)

(ತರುವುದು+ಎಲ್ಲವ)(ಪರಿಚಾರನ್+ಒಡೆಯನ್+ಆಜ್ಞೆಯನ್+ಇದಿರು)(ಅರನೊಡೆಯನಾಜ್ಞೆಯನಿದಿರು)(ನೋಳ್ಪವೋಲ್+ಇರು)

ಸಾವು ಬರಲೆಂದು ನೀನಾಗಿಯೇ ಎಂದೂ ಬಯಸಬೇಡ. ಅಂತೆಯೇ ಹೆಚ್ಚಿನ ಜೀವನವ(ಆಯಸ್ಸು)ನ್ನೂ ಬಯಸಬೇಡ. ನೀನು ಬಯಸಿದರೂ ಬಯಸಿದಿದ್ದರೂ ಕಾಲಧರ್ಮಕ್ಕೆ ತಕ್ಕಂತೆ ನಿನ್ನ ಕರ್ಮಚಕ್ರವು ಎಲ್ಲವನ್ನೂ ತರುತ್ತದೆ. ಸೇವಕ(ಪರಿಚಾರ)ನು ತನ್ನ ಸ್ವಾಮಿಯ ಅಪ್ಪಣೆಯನ್ನು ಎದುರು ನೋಡು(ನೋಳ್ಪ)ತ್ತಿರುವಂತೆ ನೀನೂ ಸಹನೆ(ತಾಳ್ಮೆ)ಯಿಂದ ಕಾದಿರು.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Pray not for death and pray not for life,
The wheel of Karma would bring you everything in time,
Stand and wait patiently like a servant expecting
His master’s orders – Marula Muniya
(Translation from "Thus Sang Marula Muniya" by Sri. Narasimha Bhat)

ಸತ್ತವರ ಯಶವೊಂದು ಶವಭಾರ ಲೋಕಕ್ಕೆ (298)

ಸತ್ತವರ ಯಶವೊಂದು ಶವಭಾರ ಲೋಕಕ್ಕೆ |
ಒತ್ತುತಿರಲದು ಮೇಲೆ ಯುವಕಗತಿಯೆಂತು ? ||
ಉತ್ತು ನೆಲದಲಿ ಬೆರಸು ಹಳೆ ಜಸವನದು ಬೆಳೆದು |
ಮತ್ತೆ ಹೊಸ ಪೈರಕ್ಕೆ - ಮರುಳ ಮುನಿಯ || (೨೯೮)

(ಒತ್ತುತ+ಇರಲು+ಅದು)(ಜಸವನ್+ಅದು)

ಈಗಾಗಲೇ ನಿಧನರಾಗಿರುವವರ ಕೀರ್ತಿ ಮತ್ತು ಯಶಸ್ಸುಗಳ ಭಾರವನ್ನು ಈ ಲೋಕ ಹೊತ್ತುಕೊಂಡಿದೆ. ಇವು ಮೇಲುಗಡೆಯಿಂದ ಅದುಮುತ್ತಾ ಇರಲು, ಈ ಲೋಕದಲ್ಲಿ ಸದ್ಯಕ್ಕೆ ಜೀವಿಸುತ್ತಿರುವ ಯುವಕರ ಅವಸ್ಥೆ ಏನಾಗುತ್ತದೆ? ಆದುದರಿಂದ ಪ್ರಾಚೀನರ ಯಶಸ್ಸು ಮತ್ತು ಕೀರ್ತಿಗಳನ್ನು ಈಗಿನ ಭೂಮಿಯಲ್ಲಿ ಉತ್ತಿ ಬೆರೆಸು. ಆವಾಗ ಆ ಪೂರ್ವಕಾಲದ ಯಶಸ್ಸು ಮತ್ತು ಕೀರ್ತಿಗಳು ಹೊಸ ಬೆಳೆಯನ್ನು ಬೆಳೆಸಲು ಸಹಾಯಕವಾಗುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The fame of the dead is a dead weight on the world,
How can the youth progress when it is weighing them down?
Plough back the old renown, and mix it well in the soil
Let it grow again as a new crop – Marula Muniya
(Translation from "Thus Sang Marula Muniya" by Sri. Narasimha Bhat)

ಏಕಾಕಿಯಿರ‍್ದು ಸಾಕಾಲ್ಯಕಾರ‍್ಜಿಸು ಬಲವ (297)

ಏಕಾಕಿಯಿರ‍್ದು ಸಾಕಾಲ್ಯಕಾರ‍್ಜಿಸು ಬಲವ |
ಸಾಕಲ್ಯವೃತ್ತಿಯಿಂದೇಕತೆಗೆ ಬಲವ ||
ಕಾಕಾಕ್ಷಿಯುಗದೇಕಗೋದಲವೊಲಿರೆ ಜಯವು |
ಲೋಕ ನಿರ್ಲೋಕಗಳ - ಮರುಳ ಮುನಿಯ || (೨೯೭)

ಕಾಗೆಗೆ ಎರಡು ಕಣ್ಣುಗಳಿದ್ದರೂ ನೋಡುವ ಶಕ್ತಿಯಿರುವುದು ಒಂದು ಕಣ್ಣುಗುಡ್ಡೆಗೆ ಮಾತ್ರ. ಕಾಗೆ ಎಡಬಲಗಳಿಗೆ ನೋಡುವಾಗ ಈ ಕಣ್ಣುಗುಡ್ಡೆ ಎಡಬಲಗಳಿಗೆ ಸರಿದಾಡುವುದೆಂಬ ನಂಬಿಕೆ ಇದೆ. ಇದಕ್ಕೆ ಕಾಕಾಕ್ಷಿಗೋಳಕ ನ್ಯಾಯ ಎಂದು ಹೆಸರು.

ನೀನು ಒಬ್ಬನೇ ಆದರೂ ಪರಿಪೂರ್ಣತೆಗೋಸ್ಕರ (ಸಾಕಲ್ಯ) ನಿನ್ನ ಶಕ್ತಿಯನ್ನು ಉಪಯೋಗಿಸು. ಎಲ್ಲ ತೆರನಾದ ಮತ್ತು ಎಲ್ಲವೂ ಸೇರಿರುವ (ಸಾಕಲ್ಯ) ಉದ್ಯೋಗದಿಂದ ಏಕತೆಗಾಗಿ ಬಲವನ್ನು ಸಂಪಾದಿಸು. ಕಾಗೆಗೆ ಎರಡು ಕಣ್ಣುಗಳಿದ್ದರೂ ಅದು ಯಾವಾಗಲೂ ಒಂದೇ ಕಣ್ಣಿನಿಂದ ನೋಡುವಂತೆ ನಿನ್ನ ದೃಷ್ಟಿಯೂ ಇದ್ದಲ್ಲಿ, ನಿನಗೆ ಈ ಪ್ರಪಂಚ ಮತ್ತು ಪರಲೋಕಗಳಲ್ಲಿಯೂ ಗೆಲುವು ದೊರಕುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Living alone in solitude, gain strength to live with all in the world
Living with all in the world earn strength to live alone
When you can be like a uniglobal dual eyes of the crow
You can win over the entire universe – Marula Muniya
(Translation from "Thus Sang Marula Muniya" by Sri. Narasimha Bhat)

ಸಜ್ಜೀವನಕೆ ಸೂತ್ರವೆರಡು ಮೂರದು ಸರಳ (296)

ಸಜ್ಜೀವನಕೆ ಸೂತ್ರವೆರಡು ಮೂರದು ಸರಳ |
ಹೊಟ್ಟೆ ಪಾಡಿಗೆ ವೃತ್ತಿ ಸತ್ಯಬಿಡದಿಹುದು ||
ಚಿತ್ತವೀಶನೊಳದುವೆ ಚಿಂತೆಗಳ ಬಿಟ್ಟಿಹುದು |
ಮೈತ್ರಿ ಲೋಕಕೆಲ್ಲ - ಮರುಳ ಮುನಿಯ || (೨೯೬)

ಒಳ್ಳೆಯ ಜೀವನವನ್ನು ನಡೆಸಲು ಎರಡು ಮುರು ಸರಳ ಮತ್ತು ಸುಲಭವಾದ ಉಪಾಯಗಳಿವೆ. ಜೀವನವನ್ನು ಪೋಷಿಸುವುದಕ್ಕೋಸ್ಕರ ಒಂದು ಕೆಲಸ ಮತ್ತು ಉದ್ಯೊಗ. ಯಾವಾಗಲೂ ನಿಜವನ್ನೇ ಹೇಳುವುದು. ಪರಮಾತ್ಮನಲ್ಲಿ ಮನಸ್ಸನ್ನು (ಚಿತ್ತ) ನೆಟ್ಟಿರುವುದು ಮತ್ತು ಅದರಿಂದ ಚಿಂತೆಗಳನ್ನು ಹಚ್ಚಿಕೊಳ್ಳದಿರುವುದು. ಪ್ರಪಂಚದೆಲ್ಲದರ ಜೊತೆ ಸ್ನೇಹ(ಮೈತ್ರಿ)ದಿಂದಿರುವುದು.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Simple principles two or three for life divine
Pursuing a truthful occupation to earn the daily bread
Bidding farewell to all worries by rooting the mind in God
And extending friendship to the entire world – Marula Muniya
(Translation from "Thus Sang Marula Muniya" by Sri. Narasimha Bhat)

ಅಲುಗಾಡುವೆಲೆ ಮೇಲೆ ನೆಲೆ ನೆಲಸಿ ಬೇರ್ ಕೆಳಗೆ (295)

ಅಲುಗಾಡುವೆಲೆ ಮೇಲೆ ನೆಲೆ ನೆಲಸಿ ಬೇರ್ ಕೆಳಗೆ |
ಚೆಲುವರ್ಧ ಬಲವರ್ಧ ಸೇರಿ ಮರವೊಂದು ||
ತಿಳಿವುದೀ ಪ್ರಕೃತಿ ಸಂಯೋಜನೆಯ ಸೂತ್ರವನು |
ಸುಳುವಹುದು ಬಾಳ ಹೊರೆ - ಮರುಳ ಮುನಿಯ || (೨೯೫)

(ಅಲುಗಾಡುವ+ಎಲೆ)(ಚೆಲುವು+ಅರ್ಧ)(ಬಲವು+ಅರ್ಧ)(ತಿಳಿವುದು+ಈ)(ಸುಳು+ಅಹುದು)

ಒಂದು ಗಿಡದ ಎಲೆಯು ಮೇಲೆ ಅಲುಗಾಡುತ್ತಿರುತ್ತದೆ. ಅದರ ಕೆಳಗೆ ಅದರ ಬೇರು ದೃಢವಾಗಿ ನಿಂತಿರುತ್ತದೆ. ಈ ರೀತಿಯಾಗಿ ಮರವು ಅರ್ಧ ಸೊಗಸು ಮತ್ತು ಅರ್ಧ ಶಕ್ತಿಯಿಂದೊಡಗೂಡಿದೆ. ಪ್ರಕೃತಿಯ ಕ್ರಮವಾಗಿ ಹೊಂದಿಸುವ ನಿಯಮ ಮತ್ತು ಕಟ್ಟಳೆಗಳನ್ನು ಅರಿತರೆ, ಜೀವನದ ಭಾರವು ಹೊರುವುದಕ್ಕೆ ಸುಲಭ (ಸುಳು)ವಾಗುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Ever moving leaves above and firm roots underground
Beauty and strength in equal measure make the complete tree,
Understand this principle of coordination in nature
Then you come to know how to discharge your obligatory duties in life – Marula Muniya
(Translation from "Thus Sang Marula Muniya" by Sri. Narasimha Bhat)

Friday, October 12, 2012

ಶ್ರಯಿಸು ನೀಂ ಸತ್ಯವನೆ ಭಾಗ್ಯವೆಂತಾದೊಡಂ (294)

ಶ್ರಯಿಸು ನೀಂ ಸತ್ಯವನೆ ಭಾಗ್ಯವೆಂತಾದೊಡಂ |
ಬಯಸು ಧರ್ಮವ ಲಾಭವೆಂತು ಪೋದೊಡೆಯುಂ ||
ನಿಯಮಪಾಲನೆಯಿಂದ ಜಯ ಲೋಕಸಂಸ್ಥಿತಿಗೆ |
ಜಯವದು ನಿಜಾತ್ಮಕ್ಕೆ - ಮರುಳ ಮುನಿಯ || (೨೯೪)

(ಭಾಗ್ಯ+ಎಂತಾದೊಡಂ)

ನಿನಗೆಷ್ಟೇ ಸೌಭಾಗ್ಯ ಮತ್ತು ಸಂಪತ್ತುಗಳು ದೊರೆಯುವಂತಿದ್ದರೂ, ಯಾವಾಗಲೂ ಸತ್ಯವನ್ನೇ ಅವಲಂಬಿಸು (ಶ್ರಯಿಸು). ನಿನ್ನ ಲಾಭಗಳೆಷ್ಟು ಹೋದರೂ ಸದಾಕಾಲವೂ ಧರ್ಮಾಚರಣೆಯನ್ನೇ ಅಪೇಕ್ಷಿಸು. ಕಟ್ಟುಪಾಡು ಮತ್ತು ಕಟ್ಟಳೆಗಳನ್ನು ಅನುಸರಿಸುವುದರಿಂದಲೇ ಪ್ರಪಂಚಕ್ಕೆ ಒಳ್ಳೆಯ ಸ್ಥಿತಿ ಉಂಟಾಗುತ್ತದೆ. ಅದು ತನ್ನ ಆತ್ಮಕ್ಕೆ ಗೆಲುವನ್ನು ತಂದುಕೊಡುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")


Whatever may be your fortune, take refuge only in Truth
Stick to Dharma even though you suffer losses
Pursuing rules and regulations ensures healthy upkeep of the world,
It brings success to one’s own self – Marula Muniya

(Translation from "Thus Sang Marula Muniya" by Sri. Narasimha Bhat)

Thursday, October 11, 2012

ಪ್ರೀತಿಸಲು ಬಿಡುವಿಲ್ಲ ನೀತಿಕಥೆ ಬೇಕಿಲ್ಲ (293)

ಪ್ರೀತಿಸಲು ಬಿಡುವಿಲ್ಲ ನೀತಿಕಥೆ ಬೇಕಿಲ್ಲ |
ಮಾತಂಗಡಿಯ ಕೊಳ್ಳು ಕೊಡುಬಿಡುಗಳಂತೆ ||
ಯಾತ ನಿರ್ಯಾತಂಗಳೇ ದೊಡ್ಡ ಬದುಕಂತೆ |
ಆತುರತೆ ಜಗಕಿಂದು - ಮರುಳ ಮುನಿಯ || (೨೯೩)

(ಬಿಡುವು+ಇಲ್ಲ)(ಮಾತು+ಅಂಗಡಿಯ)(ಕೊಡುಬಿಡುಗಳು+ಅಂತೆ)(ಬದುಕು+ಅಂತೆ)(ಜಗಕೆ+ಇಂದು)

ಈಗಿನ ಜನಜೀವನದ ಸ್ಥಿಥಿಯು ರೀತಿಯಾಗಿದೆ. ಅವರಿಗೆ ದಯೆ, ಕರುಣೆ ಮತ್ತು ಪ್ರೇಮಗಳನ್ನು ತೋರಿಸಲು ಸಮಯವಿಲ್ಲ. ಒಳ್ಳೆಯ ನಡತೆ ಮತ್ತು ಸದಾಚಾರಗಳನ್ನು ಹೇಳುವ ಕಥೆಗಳು ಅವರಿಗೆ ಬೇಡವಾಗಿದೆ. ಮಾತು ಅಂಗಡಿಯಲ್ಲಿ ಕೊಂಡುಕೊಳ್ಳುವ ಮತ್ತು ಕೊಟ್ಟು ತೆಗೆದುಕೊಳ್ಳುವ ವಸ್ತುವಿನಂತೆ ಆಗಿಹೋಗಿದೆ. ಹೋಗುವುದು ಮತ್ತು ಬರುವುದು, ಕೊಡುವುದು ಮತ್ತು ತೆಗೆದುಕೊಳ್ಳುವುದು, ಇವುಗಳೇ ಒಂದು ಬೃಹತ್ ಜೀವನವಾಗಿ ಇವರಿಗೆ ಕಾಣಿಸುತ್ತಿದೆ. ಜನರಿಗೆ ಯಾವುದಕ್ಕೂ ಸಮಯವಿಲ್ಲ ಮತ್ತು ಸದಾಕಾಲವೂ ಆತುರರಾಗಿಯೇ ಇರುತ್ತಾರೆ.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

There is no time for mutual human love and no one needs moral stories,
Mutual talk is just like business transactions in shops,
Just coming and going have become great events of life,
All people are always in a hurry – Marula Muniya (293)

(Translation from "Thus Sang Marula Muniya" by Sri. Narasimha Bhat)

Friday, October 5, 2012

ಮುಗಿಲಿಗೇರೆನುತಿಹರು ತತ್ತ್ವೋಪದೇಶಕರು (292)

ಮುಗಿಲಿಗೇರೆನುತಿಹರು ತತ್ತ್ವೋಪದೇಶಕರು |
ಬಿಗಿವುದಿಳೆಗೆಲ್ಲರನು ರೂಢಿಸಂಕೋಲೆ ||
ಗಗನ ಧರೆಯಿಂತು ದಡವಾಗೆ ಪರಿವುದು ನಡುವೆ |
ಜಗದ ಜೀವಿತದ ನದಿ - ಮರುಳ ಮುನಿಯ || (೨೯೨)

(ಮುಗಿಲಿಗೆ+ಏರ್+ಎನುತ+ಇಹರು)(ತತ್ತ್ವ+ಉಪದೇಶಕರು)(ಬಿಗಿವುದು+ಇಳೆಗೆ+ಎಲ್ಲರನು)(ದಡ+ಆಗೆ)

ಸಿದ್ಧಾಂತವನ್ನು ಬೋಧಿಸುವವರೆಲ್ಲರೂ ಆಕಾಶದೆತ್ತರಕ್ಕೇರಬೇಕೆಂದು ಹೇಳುತ್ತಾರೆ. ಆದರೆ ದಿನನಿತ್ಯದ ಅಭ್ಯಾಸಗಳ ಶೃಂಖಲೆ(ಸಂಕೋಲೆ)ಯು, ಎಲ್ಲರನ್ನೂ ಹಿಡಿದು ಜಗತ್ತಿಗೆ ಬಂಧಿಸುತ್ತದೆ. ಈ ರೀತಿಯಾಗಿ ಆಕಾಶ ಮತ್ತು ಭೂಮಿ(ಧರೆ)ಗಳು ದಡವಾಗಲು ಅವುಗಳ ಮಧ್ಯೆ ನಮ್ಮೆಲ್ಲರ ಜೀವನವೆಂಬ ನದಿಯು ಹರಿಯುತ್ತಿರುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Great preachers exhort us to live a skyhigh ideal life
But the shackles of worldly ways bind us to the world.
The river of worldly life thus flows between the two banks
Of the earth and sky – Marula Muniya (292)
(Translation from "Thus Sang Marula Muniya" by Sri. Narasimha Bhat)

Thursday, October 4, 2012

ರಾಮಚಂದ್ರನ ಚರಿತೆ ಲೋಕಧರ್ಮಾದರ್ಶ (291)

ರಾಮಚಂದ್ರನ ಚರಿತೆ ಲೋಕಧರ್ಮಾದರ್ಶ |
ಶ್ಯಾಮಸುಂದರ ಚರಿತೆ ವಿಷಮ ಸಮಯನಮ ||
ಸೋಮೇಶ್ವರನ ರೂಪ ನಿರ್ದ್ವಂದ್ವ ಶಾಂತಿಮಯ |
ಈ ಮೂವರನು ಭಜಿಸೊ - ಮರುಳ ಮುನಿಯ || (೨೯೧)

(ಲೋಕಧರ್ಮ+ಆದರ್ಶ)

ರಾಮನ ಚರಿತ್ರೆ ಪ್ರಪಂಚಕ್ಕೆ ಆದರ್ಶವಾದದ್ದು. ಶ್ರೀಕೃಷ್ಣ ಪರಮಾತ್ಮನ ಚರಿತ್ರೆಯು ಸಂಕಟಕಾಲ (ವಿಷಮಸಮಯ)ಗಳನ್ನು ಯುಕ್ತಿಯಿಂದ ನಿಭಾಯಿಸುವುದನ್ನು ತೋರಿಸಿಕೊಡುತ್ತದೆ. ಈಶ್ವರನ ಆಕಾರವಾದರೋ ಭೇದಭಾವಗಳನ್ನು ತೊರೆದು ಹಾಕಿ ಸಮತಾಸ್ವರೂಪದಿಂದ ಮನಸ್ಸಿಗೆ ನೆಮ್ಮದಿಯನ್ನು ಕೊಡುತ್ತದೆ. ನೀನು ಈ ಮೂವರನ್ನೂ ಅರಾಧಿಸು.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Shri Rama’s life is a shining example of ideal human conduct in the world
Shri Krishna’s conduct is a model of human conduct in different matters in different situations
Shiva’s very appearance is an embodiment of peace and transcendence
Offer your prayer to all the three – Marula Muniya (291)
(Translation from "Thus Sang Marula Muniya" by Sri. Narasimha Bhat)

Wednesday, October 3, 2012

ಮಲವಿರದ ಮೈಯಿರದು ಕೊಳೆಯಿರದ ಮನವಿರದು (290)

ಮಲವಿರದ ಮೈಯಿರದು ಕೊಳೆಯಿರದ ಮನವಿರದು |
ಗಳಿಗೆ ಗಳಿಗೆಯ ಬೆವರೆ ಬಾಳಿಕೆಯ ಕುರುಹು ||
ಕೊಳೆವುದಚ್ಚರಿಯಲ್ಲ, ಕೊಳೆಯದಿಹುದಚ್ಚರಿಯೊ |
ಜಳಕವಾಗಿಸು ಬಾಳ್ಗೆ - ಮರುಳ ಮುನಿಯ || (೨೯೦)

(ಕೊಳೆವುದು+ಅಚ್ಚರಿಯಲ್ಲ)(ಕೊಳೆಯದೆ+ಇಹುದು+ಅಚ್ಚರಿಯೊ)(ಜಳಕ+ಆಗಿಸು)

ಹೊಲಸು ಆಗದೆ ಇರುವ ದೇಹ ಇರುವುದಿಲ್ಲ. ಕಶ್ಮಲವಿರದಿರುವ ಮನಸ್ಸೂ ಇರುವುದಿಲ್ಲ. ಪ್ರತಿ ಕ್ಷಣಕ್ಕೂ ಮೈ ಬೆವರುವುದೇ ನಾವು ಬಳುತ್ತಿದ್ದೇವೆ ಎನ್ನುವುದರ ಚಿಹ್ನೆ. ಕಶ್ಮಲವಾಗುವುದು ಆಶ್ಚರ್ಯವೇನಲ್ಲ, ಕಶ್ಮಲವಾಗದಿರುವುದು ಆಶ್ಚರ್ಯಕರವಾದ ವಿಷಯ. ಆದ್ದರಿಂದ ಈ ಕಶ್ಮಲವನ್ನು ಕಳೆಯಲು ಇರುವ ಉಪಾಯವೆಂದರೆ ನಿನ್ನ ಬಾಳನ್ನು ಸ್ನಾನ ಮಾಡಿಸಿ ಶುದ್ಧಗೊಳಿಸಿಕೊಳ್ಳುತ್ತಿರು.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

There is no body without filth and no mind without impurities
The sweat oozing out now and then is a sign of life,
Becoming filthy is not unusual but not becoming filthy is unusual
Bathe and clean your life – Marula Muniya || (290)
(Translation from "Thus Sang Marula Muniya" by Sri. Narasimha Bhat)

Thursday, September 27, 2012

ಬಿಡಿಸು ಜೀವವನೆಲ್ಲ ಜಗದ ತೊಡಕುಗಳಿಂದ (287)

ಬಿಡಿಸು ಜೀವವನೆಲ್ಲ ಜಗದ ತೊಡಕುಗಳಿಂದ |
ಬಿಡು ಮಮತೆಯನುಮೆಲ್ಲ ಪುಣ್ಯದಾಶೆಯನುಂ ||
ದುಡಿದು ಲೋಕಕ್ಕದರ ಕಡಿತಕ್ಕೆ ಜಡನಾಗಿ |
ಕಡಿಯೆಲ್ಲ ಪಾಶಗಳ - ಮರುಳ ಮುನಿಯ || (೨೮೭)

(ಜೀವವನ್+ಎಲ್ಲ)(ಮಮತೆಯನುಂ+ಎಲ್ಲ)(ಲೋಕಕ್ಕೆ+ಅದರ)

ಈ ಜಗತ್ತಿನ ಗೋಜು ಮತ್ತು ಗೊಂದಲಗಳಿಂದ ಜೀವವನ್ನು ವಿಮೋಚನೆ ಮಾಡು. ಸ್ವಾರ್ಥ, ಅಹಂಕಾರ ಮತ್ತು ಮಮತೆಗಳನ್ನು ಮತ್ತು ಪುಣ್ಯವನ್ನು ಸಂಪಾದಿಸಬೇಕೆಂಬ ಆಶೆಗಳನ್ನು ತ್ಯಜಿಸು. ಪ್ರಪಂಚದ ಕಡಿತಗಳಿಗೆ ಜಡನಾಗಿ ಕಷ್ಟಪಟ್ಟು ದುಡಿ. ಎಲ್ಲಾ ಬಂಧನ(ಪಾಶ)ಗಳನ್ನು ಕತ್ತರಿಸು.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Free your soul from all the tangles of the world,
Shed slowly all attachments, even the desire for punya,
Work for the welfare of the world but be immune to all its bites
And cut asunder all bonds – Marula Muniya
(Translation from "Thus Sang Marula Muniya" by Sri. Narasimha Bhat)

Wednesday, September 26, 2012

ಮಲರ ಕಂಪಂದಿನೆಲರಿನಲೆಗಳ ಪಿಡಿದು (286)

ಮಲರ ಕಂಪಂದಿನೆಲರಿನಲೆಗಳ ಪಿಡಿದು |
ಕಲೆತು ಕರಗುವುದಲ್ತೆ ಕಾಲ ಜಲಧಿಯಲಿ ||
ಒಳಿತು ಕೆಡಕುಗಳಂತು ನಿನ್ನ ಬಾಳರಲುಗಳು |
ಉಳಿಯುವುವನಂತದಲಿ - ಮರುಳ ಮುನಿಯ || (೨೮೬)

(ಕಂಪು+ಅಂದಿನ+ಎಲರಿನ+ಅಲೆಗಳ)(ಕರಗುವುದು+ಅಲ್ತೆ)(ಕೆಡಕುಗಳು+ಅಂತು)(ಬಾಳ್+ಅರಲುಗಳು)(ಉಳಿಯುವುವು+ಅನಂತದಲಿ)

ಹೂವಿನ (ಮಲರ್) ಸುಗಂಧ(ಕಂಪು)ವು ಆ ದಿನದ ಗಾಳಿ(ಎಲರ್)ಯ ಅಲೆಗಳನ್ನು ಹಿಡಿದು ಕಾಲವೆಂಬ ಸಮುದ್ರ(ಜಲಧಿ)ದಲ್ಲಿ ಸೇರಿಕೊಂಡು ಕರಗಿಹೋಗುವುದು ತಾನೆ? ಒಳ್ಳೆಯದು ಮತ್ತು ಕೆಟ್ಟದ್ದು ನಿನ್ನ ಜೀವನದ ಹೂವು(ಅಲರ್)ಗಳು. ಅವೂ ಸಹ ಅನಂತದಲ್ಲಿ ಲೀನವಾಗುತ್ತವೆ.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The fragrance of flowers sails on the waves of air,
Melts and mingles in the ocean of Eternity
Likewise the flowers of your life, your good and evil
Live forever in the Infinite – Marula Muniya (286)
(Translation from "Thus Sang Marula Muniya" by Sri. Narasimha Bhat)

Tuesday, September 25, 2012

ಅರುಣೋದಯದಾನಂದ ಗಿರಿಶೃಂಗದಾನಂದ (285)

ಅರುಣೋದಯದಾನಂದ ಗಿರಿಶೃಂಗದಾನಂದ |
ತೊರೆಯ ತೆರೆಯಾನಂದ ಹಸುರಿನಾನಂದ ||
ಮಲರು ತಳಿರಾನಂದವಿವು ಸೃಷ್ಟಿಯಾನಂದ |
ನಿರಹಂತೆಯಾನಂದ - ಮರುಳ ಮುನಿಯ || (೨೮೫)

(ಅರುಣೋದಯದ+ಆನಂದ)(ಗಿರಿಶೃಂಗದ+ಆನಂದ)(ತೆರೆಯ+ಆನಂದ)(ತಳಿರ+ಆನಂದವು+ಇವು) (ಸೃಷ್ಟಿಯ+ಆನಂದ)(ನಿರಹಂತೆಯ+ಆನಂದ)

ಸೂರ್ಯನು ಹುಟ್ಟುವುದನ್ನು ನೋಡುವಾಗ ಸಿಗುವ ಸಂತೋಷ. ಪರ್ವತದ ತುತ್ತ ತುದಿಯನ್ನು ವೀಕ್ಷಿಸುವಾಗ ದೊರೆಯುವ ಆನಂದ. ಹೊಳೆಯ ಅಲೆಗಳನ್ನು ಕಾಣುವಾಗ ದೊರೆಯುವ ಸುಖ, ಹಸುರಾಗಿರುವ ಪ್ರಕೃತಿಯ ಚೆಲುವನ್ನು ನೋಡಿದಾಗ ಸಿಗುವ ಆನಂದ. ಹೂವು (ಮಲರು) ಮತ್ತು ಚಿಗುರುಗಳು ಗಿಡದಲ್ಲಿ ಬಿಡುವುದನ್ನು ಕಂಡಾಗ ಬರುವ ಸಂತೋಷ. ಇವುಗಳೆಲ್ಲವೂ ಸೃಷ್ಟಿಯು ನಮಗಿತ್ತಿರುವ ಸಂತೋಷಗಳು. ಅಹಂಕಾರವಿಲ್ಲದಿರುವುದೂ ಆನಂದವನ್ನು ಕೊಡುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The joy of glowing dawn and the joy of mountain peak,
The joy of ripples in stream and the joy of green vegetation
The joy of flowers and springs are the joys, of nature
Egolessness is the joy of self – Marula Muniya (285)
(Translation from "Thus Sang Marula Muniya" by Sri. Narasimha Bhat)

Monday, September 24, 2012

ಹರಿಭಜನೆಯಾನಂದ ಕಿರಿಮಕ್ಕಳಾನಂದ (284)

ಹರಿಭಜನೆಯಾನಂದ ಕಿರಿಮಕ್ಕಳಾನಂದ |
ಸರಸಗೀತಾನಂದ ಕರುಣೆಯಾನಂದ ||
ಪರಕಾರ್ಯದಾನಂದ ನಿಃಸ್ವಾರ್ಥದಾನಂದ |
ಪುರುಷಹರುಷಂಗಳಿವು - ಮರುಳ ಮುನಿಯ || (೨೮೪)

(ಹರಿಭಜನೆ+ಆನಂದ)(ಕಿರಿಮಕ್ಕಳ+ಆನಂದ)(ಸರಸಗೀತ+ಆನಂದ)(ಕರುಣೆಯ+ಆನಂದ) (ಪರಕಾರ್ಯದ+ಆನಂದ)(ನಿಃಸ್ವಾರ್ಥದ+ಆನಂದ)(ಹರುಷಂಗಳು+ಇವು)

ಪರಮಾತ್ಮನನ್ನು ಭಜಿಸಲು ಸಂತೊಷದಿಂದ ಹಾಡುವುದು. ಚಿಕ್ಕಮಕ್ಕಳ ಜೊತೆ ಆಟಗಳನ್ನಾಡಿಕೊಂಡು ಸಂತೋಷದಿಂದಿರುವುದು. ಇಂಪಾದ ಸಂಗೀತವನ್ನು ಕೇಳಿ ಆನಂದಿಸುವುದು. ಇನ್ನೊಬ್ಬರಲ್ಲಿ ದಯೆ ತೋರಿಸಿ ಪಡುವ ಹಿಗ್ಗು. ಬೇರೆಯವರ ಕೆಲಸಗಳನ್ನು ನೆರೆವೇರಿಸಿ ಗಳಿಸುವ ಖುಶಿ. ಸ್ವಾರ್ಥವನ್ನು ತೊರೆದು ಮಾಡುವ ಕೆಲಸಗಳಿಂದ ಪಡೆಯುವ ಸುಖ, ಇವುಗಳೆಲ್ಲವೂ ಮನುಷ್ಯನಿಗೆ ನಿಜವಾಗಿಯೂ ಸಂತೊಷ ಕೊಡುವ ಕಾರ್ಯಗಳು.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The joy of singing God’s praise and the joy in the company of small children,
The joy of sweet music and the joy of compassion,
The joy of serving others and the joy of unselfishness,
These are the joys of man – Marula Muniya (284)
(Translation from "Thus Sang Marula Muniya" by Sri. Narasimha Bhat)

Friday, September 21, 2012

ನಿನ್ನನಾರ್ ನಿಯಮಿಸಿದರನ್ನವಸ್ತ್ರದನೆಂದು (283)

ನಿನ್ನನಾರ್ ನಿಯಮಿಸಿದರನ್ನವಸ್ತ್ರದನೆಂದು |
ಶೂನ್ಯವಪ್ಪುದೆ ಲೋಕ ನಿನ್ನ ಹಂಗಿರದೆ ? ||
ಸ್ವರ್ಣಗರ್ಭನ ಪಟ್ಟವನು ಧರಿಸಿ ನೀಂ ಜಗಕೆ |
ಕನ್ನವಿಡೆ ಬಂದಿಹೆಯ? - ಮರುಳ ಮುನಿಯ || (೨೮೩)

(ನಿನ್ನನ್+ಆರ್)(ನಿಯಮಿಸಿದರ್+ಅನ್ನವಸ್ತ್ರದನ್+ಎಂದು)

ಯಾರದರೂ ನಿನ್ನನ್ನು ಈ ಜಗತ್ತಿಗೆ ಆಹಾರ ಮತ್ತು ಬಟ್ಟೆಗಳನ್ನು ನೀಡುವವನೆಂದು ನೇಮಕ ಮಾಡಿರುವರೇನು? ನಿನ್ನ ಹಂಗಿಲ್ಲದಿದ್ದರೆ ಜಗತ್ತು ಏನೂ ಇಲ್ಲದೆ ಹಾಳಾಗಿ ಹೋಗುವುದೇನು? ಬ್ರಹ್ಮ(ಸ್ವರ್ಣಗರ್ಭ)ನ ಪದವಿಯನ್ನು ಹೊತ್ತುಕೊಂಡು ಈಪ್ರಪಂಚಕ್ಕೆ ಕನ್ನ
ಹಾಕಲು ಬಂದಿರುವೆಯೇನು?
(ಕೃಪೆ: ಶ್ರೀ. ಶ್ರೀಕಾಂತ್ರಗವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Who has appointed you as the giver of food and clothing?
Would the world become a zero but for your generosity?
Have you come to the world with the authority of Brahma
Only to burgle it? – Marula Muniya (283)
(Translation from "Thus Sang Marula Muniya" by Sri. Narasimha Bhat)

Monday, September 17, 2012

ನಿನ್ನ ಪಾಪವ ತೊಳೆಯೆ ನಿನ್ನ ಸತ್ಕರ್ಮಗಳು (282)

ನಿನ್ನ ಪಾಪವ ತೊಳೆಯೆ ನಿನ್ನ ಸತ್ಕರ್ಮಗಳು |
ಅನ್ಯರ‍್ಗದುಪಕಾರವೆನ್ನುವುದಹಂತೆ ||
ಪುಣ್ಯಂ ಕುಟುಂಬಪೋಷಣೆಯೆಂಬ ನೆವದಿನಿಳೆ- |
ಗನ್ಯಾಯವಾಗಿಪುದೆ? - ಮರುಳ ಮುನಿಯ || (೨೮೨)

(ಸತ್+ಕರ್ಮಗಳು)(ಅನ್ಯರ‍್ಗೆ+ಅದು+ಉಪಕಾರ+ಎನ್ನುವುದು+ಅಹಂತೆ)(ನೆವದಿನ್+ಇಳೆಗೆ+ಅನ್ಯಾಯವಾಗಿಪುದೆ)

ನೀನು ಮಾಡುವ ಒಳ್ಳೆಯ ಕೆಲಸಗಳು ನಿನ್ನ ಪಾಪವನ್ನು ತೊಳೆಯುತ್ತವೆ. ನೀನು ಮಾಡುವ ಸತ್ಕರ್ಮಗಳು ಇತರರಿಗೆ ಸಹಾಯವಾಗುತ್ತದೆ ಎನ್ನುವುದು ಅಹಂಕಾರದ ಮಾತಾಗುತ್ತದೆ. ಸಂಸಾರವನ್ನು ಪೋಷಿಸುವುದೂ ಒಂದು ಪುಣ್ಯದ ಕೆಲಸ ಎನ್ನುವ ನೆಪದಿಂದ ಜಗತ್ತಿಗೆ ಅನ್ಯಾಯವನ್ನು ಮಾಡಬೇಡ.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")
Only the one who does all his duties in the world with the sole purpose of
Becoming egoless truly aspires after liberation,
All others orally shout, Dharma, Dharma and nourish the ego
Egolessness itself is salvation – Marula Muniya (282)
(Translation from "Thus Sang Marula Muniya" by Sri. Narasimha Bhat)

Friday, September 14, 2012

ನಿರ್ಮಮತೆಯಭ್ಯಾಸಕೆಂದು ಲೋಕದೊಳೆಲ್ಲ (281)

ನಿರ್ಮಮತೆಯಭ್ಯಾಸಕೆಂದು ಲೋಕದೊಳೆಲ್ಲ |
ಕರ್ಮಗಳ ಗೆಯ್ವನೆ ಮುಮುಕ್ಷು ಮಿಕ್ಕ ಜನ ||
ಧರ್ಮ ಧರ್ಮವೆನುತ್ತೆ ಪೋಷಿಪರಹಂಮತಿಯ |
ನಿರ್ಮಮತೆಯೇ ಮೋಕ್ಷ - ಮರುಳ ಮುನಿಯ || (೨೮೧)

(ನಿರ್ಮಮತೆ+ಅಭ್ಯಾಸಕೆ+ಎಂದು)(ಲೋಕದೊಳು+ಎಲ್ಲ)(ಧರ್ಮ+ಎನುತ್ತೆ)(ಪೋಷಿಪರ್+ಅಹಂಮತಿಯ)

ನಿರಹಂಕಾರ ಮತ್ತು ನಿಃಸ್ವಾರ್ಥತೆಯನ್ನು ರೂಢಿಸಿಕೊಳ್ಳುವುದಕ್ಕಾಗಿ ಪ್ರಪಂಚದಲ್ಲಿ ಏಲ್ಲಾ ಕೆಲಸಗಳನ್ನು ಮಾಡುವವನೇ ಮೋಕ್ಷಾರ್ಥಿ (ಮುಮುಕ್ಷು). ಮಿಕ್ಕಾ ಎಲ್ಲಾ ಜನರು ಧರ್ಮ, ಧರ್ಮವೆಂದೆನುತ್ತ ಅಹಂಕಾರ ಮತ್ತು ಸ್ವಾರ್ಥತೆಯನ್ನು ಪೋಷಿಸುತ್ತಾರೆ. ಆದರೆ ನಿರಹಂಕಾರ ಮತ್ತು ನಿಃಸ್ವಾರ್ಥತೆಯೇ ಮೋಕ್ಷ.
(ಕೃಪೆ: ಶ್ರೀ. ಶ್ರೀಕಾಂತ್ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Only the one who does all his duties in the world with the sole purpose of
Becoming egoless truly aspires after liberation,
All others orally shout, Dharma, Dharma and nourish the ego
Egolessness itself is salvation – Marula Muniya (281)
(Translation from "Thus Sang Marula Muniya" by Sri. Narasimha Bhat)

Thursday, September 13, 2012

ಅಹಿತನಾರ್ ನಿನಗಿಹದಿ ಪರದೊಳೆಲ್ಲಾದೊಡಂ (280)

ಅಹಿತನಾರ್ ನಿನಗಿಹದಿ ಪರದೊಳೆಲ್ಲಾದೊಡಂ |
ಇಹನವಂ ನಿನ್ನೊಳಿಲ್ಲಿಯೆ ಮನದ ಗವಿಯೊಳ್ ||
ಅಹಮೆಂಬ ರಾಕ್ಷಸಂ ಬಹುರೂಪಿ ಬಹುಮಾಯಿ |
ದಹಿಸು ನೀಂ ಮೊದಲವನ - ಮರುಳ ಮುನಿಯ || (೨೮೦)

(ಅಹಿತನ್+ಆರ್)(ನಿನಗೆ+ಇಹದಿ)(ಪರದೊಳ್+ಎಲ್ಲಾದೊಡಂ)(ಇಹನ್+ಅವಂ)(ನಿನ್ನೊಳ್+ಇಲ್ಲಿಯೆ)(ಅಹಂ+ಎಂಬ)(ಮೊದಲ್+ಅವನ)

ನಿನಗೆ ಈ ಪ್ರಪಂಚದಲ್ಲಿ, ಪರಲೋಕದಲ್ಲಿ ಮತ್ತು ಎಲ್ಲೆಲ್ಲಿಯೂ ಇರುವ ಶತ್ರು ಯಾರೆಂದರೆ, ಅವನು ನಿನ್ನೊಳಗಡೆಯೇ ನಿನ್ನ ಮನಸ್ಸಿನ ಗುಹೆಯಲ್ಲಿಯೇ ಇದ್ದಾನೆ. ಅವನು ಹಲವಾರು ಆಕಾರಗಳನ್ನು ಮತ್ತು ಮಾಯಾರೂಪಗಳನ್ನು ತಾಳಿರುವ ಅಹಂಕಾರವೆಂಬ ರಾಕ್ಷಸ. ಮೊಟ್ಟಮೊದಲಿಗೆ ಆ ಅಹಂಕಾರವನ್ನು ಸುಟ್ಟುಹಾಕು (ದಹಿಸು).
(ಕೃಪೆ: ಶ್ರೀ. ಶ್ರೀಕಾಂತ್ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Who is your enemy in this world, in the other world and anywhere else?
Here he is in the cave of your own mind,
He is your ego, a demon of many guises and tricks
Reduce him to ashes first – Marula Muniya (280)
(Translation from "Thus Sang Marula Muniya" by Sri. Narasimha Bhat)

Wednesday, September 12, 2012

ರಾಮಾನುಜರ್ ಮನೆಯ ಹೊರನಿಂತ ಶಿಷ್ಯನನು (279)

ರಾಮಾನುಜರ್ ಮನೆಯ ಹೊರನಿಂತ ಶಿಷ್ಯನನು |
ನಾಮವೇನೆನ್ನಲಾನಾನೆಂದನಾತಂ ||
ಬಾ ಮಗುವೆ ನಾಂ ಸತ್ತಮೇಲೆ ನೀಂ ಬರ‍್ಪುದೆಂ- |
ದಾ ಮುನಿಯ ಮಾತ ನೆನೆ - ಮರುಳ ಮುನಿಯ || (279)

(ನಾಮ+ಏನ್+ಎನ್ನಲ್+ಆ+ನಾನ್+ಎಂದನ್+ಆತಂ)(ಬರ‍್ಪುದು+ಎಂದ+ಆ)

ಶ್ರೀಮದ್ರಾಮಾನುಜರು ವಿಶಿಷ್ಟಾದ್ವೈತದ ಆಚಾರ‍್ಯರು. ಇವರು ನೆಲೆಸಿದ್ದ ಕುಟೀರದ ಹೊರಗೆ ಶಿಷ್ಯನೊಬ್ಬನು ಬಂದು ಬಾಗಿಲು ಬಡಿದನಂತೆ. ’ಯಾರು ನೀನು?’ ಎಂದು ಆಚಾರ‍್ಯರು ಪ್ರಸ್ನಿಸಲಾಗಿ ’ನಾನು, ನಾನು’ ಎಂದು ಶಿಷ್ಯನು ಹೇಳಿದನು. ಆಗ ಆಚಾರ‍್ಯರು ’ಮಗು ಒಳಗೆ ಬಾ, ಆದರೆ ನೀನು ನನ್ನ ಜೊತೆ ಬರುವುದು "ನಾನು" ಸತ್ತಮೇಲೆ ಮಾತ್ರ’ ಎಂದರು. ನಾನು ಎಂದರೆ ಅಹಂಕಾರ. ಅಹಂಕಾರವಳಿದರೆ ಮಾತ್ರ ಗುರುವಿನ ಲಾಭವಾಗುತ್ತದೆ. ಅದರಿಂದ ಸಗ್ದತಿ ದೊರೆಯುತ್ತದೆ - ಎಂದು ಅಭಿಪ್ರಾಯ. ಈ ಮುನಿಗಳ ಮಾತುಗಳನ್ನು ಸದಾಕಾಲವೂ ಜ್ಞಾಪಿಸಿಕೊಂಡು ಅಹಂಕಾರವನ್ನು ತೊರೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Ramanujar asked his disciple standing outside the house
What his name was and he replied, ‘This is I’
Then the sage said, ‘Come in child after the demise of ‘I’
Remember these words – Marula Muniya (279)
(Translation from "Thus Sang Marula Muniya" by Sri. Narasimha Bhat)


Monday, September 10, 2012

ತ್ಯಜಿಸಿ ನೀಂ ಭುಜಿಸುವುದು ಮನೆ ಸತ್ರವೆಂಬವೊಲು (278)

ತ್ಯಜಿಸಿ ನೀಂ ಭುಜಿಸುವುದು ಮನೆ ಸತ್ರವೆಂಬವೊಲು |
ಯಜಮಾನನಲ್ಲ ನೀನತಿಥಿಯೆಂಬವೊಲು ||
ಭುಜವ ಭಾರಕೆ ನೀಡು ರುಚಿಗೆ ರಸನೆಯ ನೀಡು |
ಭುಜಿಸು ಮಮತೆಯ ಮರೆತು - ಮರುಳ ಮುನಿಯ || (278)

(ಸತ್ರ+ಎಂಬವೊಲು)(ನೀನ್+ಅತಿಥಿ+ಎಂಬವೊಲು)

ನೀನು ವಾಸಿಸುತ್ತಿರುವ ಗೃಹವೇ ಒಂದು ಸಾರ್ವಜನಿಕ ಸತ್ರವೆಂದು ಭಾವಿಸು. ನೀನು ಅದಕ್ಕೆ ಒಡೆಯನಲ್ಲ. ಆದರೆ ನೀನು ಅಲ್ಲಿರುವ ಒಬ್ಬ ಅತಿಥಿಯೆನ್ನುವಂತೆ ನಡೆದುಕೊಂಡು, ತ್ಯಾಗದ ಭಾವದಿಂದ ನೀನು ಊಟ ಮಾಡು. ಅಲ್ಲಿರುವ ಕಾರ್ಯಭಾರಕ್ಕೆ ನಿನ್ನ ಭುಜವನ್ನು ಒಡ್ಡು. ದೊರೆತ ಸವಿಗೆ ನಿನ್ನ ನಾಲಿಗೆಯನ್ನು ನೀಡು. ಅಹಂಕಾರ ಮತ್ತು ಸ್ವಾರ್ಥಗಳನ್ನು ಬಿಟ್ಟು ಆಹಾರವನ್ನು ಸೇವಿಸು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Regard your home as a choultry and accept food renouncing the sense of ownership
Conduct yourself, not as a master but as a guest,
Give your shoulder to the burden and your tongue to the taste,
But eat forgetting your ego – Marula Muniya (278)
(Translation from "Thus Sang Marula Muniya" by Sri. Narasimha Bhat)

ಲೋಕೋಪಕಾರ ಶಿವನೊರ‍್ವನೆತ್ತುವ ಭಾರ (277)

ಲೋಕೋಪಕಾರ ಶಿವನೊರ‍್ವನೆತ್ತುವ ಭಾರ |
ಏಕೆ ನಿನಗದನು ಹೊರುವಧಿಕಾರವವನು ||
ಬೇಕಾದವೊಲು ಗೆಯ್ಗೆ, ನಿನ್ನ ಮಮತಾಕ್ಷಯಕೆ |
ಲೋಕದಿಂದುಪಕಾರ - ಮರುಳ ಮುನಿಯ || (೨೭೭)

(ಶಿವನ್+ಒರ‍್ವನ್+ಎತ್ತುವ)(ಹೊರುವ+ಅಧಿಕಾರವು+ಅವನು)(ಲೋಕದಿಂದ+ಉಪಕಾರ)

ಈ ಪ್ರಪಂಚದ ಭಾರವನ್ನು ಹೊರುವುದು, ಪರಮಾತ್ಮನೊಬ್ಬನೇ ಪ್ರಪಂಚಕ್ಕೆ ಮಾಡುವ ಸಹಾಯ. ನಿನಗೇತಕ್ಕೆ ಆ ಹೊರೆಯನ್ನು ಹೊರುವ ಅಧಿಕಾರ? ಅದು ಅವನಿಗೇ ಬಿಟ್ಟದ್ದು. ನಿನ್ನ ಕೈಲಾದಷ್ಟು ಕೆಲಸವನ್ನು ನೀನು ಮಾಡಿದರೆ, ನಿನ್ನ ಮೋಹ ಮತ್ತು ಅಹಂಕಾರಗಳನ್ನು ನಶಿಸಲು ಪ್ರಪಂಚದಿಂದ ಸಹಾಯವಾಗುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Helping the world is the sole responsibility shouldered by Lord Shiva
Why do you usurp the authority of shouldering it yourself?
Let Shiva manage it as He wills, know that the world helps you
To wear out your ego-sense – Marula Muniya (277)
(Translation from "Thus Sang Marula Muniya" by Sri. Narasimha Bhat)

Friday, September 7, 2012

ಬೆನ್ನಲುಬನುಪಕೃತನೊಳುಡುಗಿಪುಪಕೃತಿಯೇನು ? (276)

ಬೆನ್ನಲುಬನುಪಕೃತನೊಳುಡುಗಿಪುಪಕೃತಿಯೇನು ? |
ಅನ್ಯಾಶ್ರಯವ ಕಲಿತ ಲತೆ ನೆಟ್ಟಗಿಹುದೇ ? ||
ತನ್ನಿಂದ ತಾನೆ ಅಬಲಂ ಬಲಿಯಲನುವಾಗಿ |
ನಿನ್ನ ನೀಂ ಮರೆಯಿಸಿಕೊ - ಮರುಳ ಮುನಿಯ || (೨೭೬)

(ಬೆನ್ನಲುಬನು+ಉಪಕೃತನೊಳು+ಉಡುಗಿಪ+ಉಪಕೃತಿಯೇನು)(ಅನ್ಯ+ಆಶ್ರಯವ)(ನೆಟ್ಟಗೆ+ಇಹುದೇ)(ಬಲಿಯಲು+ಅನುವಾಗಿ)

ಬೆನ್ನುಮೂಳೆಗಳನ್ನು ನಿನ್ನಿಂದ ಉಪಕಾರ ಹೊಂದಿದವ(ಉಪಕೃತ)ನ ಒಳಗಡೆ ಅಡಗಿಸಿಡುವ ನೆರವನ್ನೇಕೆ ಮಾಡುತ್ತೀಯೆ? ಬೇರೆಯವರ ಅಧಾರದಿಂದ ನಿಂತಿರುವ (ಕಲಿತ) ಬಳ್ಳಿ ತನ್ನಿಂದ ತಾನೇ ನೆಟ್ಟಗೆ ನಿಲ್ಲಲಾದೀತೇನು? ಅಶಕ್ತನಾದವನು ತನ್ನ ಸ್ವಂತ ಪ್ರಯತ್ನದಿಂದಲೇ ಬಲಿಷ್ಠನಾಗಲು ಸಿದ್ಧನಾಗುವಂತೆ, ನಿನ್ನನ್ನು ನೀನೇ ಮರೆಯುವಂತೆ ರೂಪಿಸಿಕೊ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Can the help that weakens the backbone of the receiver be called help?
Can the creeper that always depends on other’s support stand erect on its own?
Never flaunt yourself but help the weak
To become strong by self-effort – Marula Muniya (276)
(Translation from "Thus Sang Marula Muniya" by Sri. Narasimha Bhat)

Thursday, September 6, 2012

ನಾನು ನಾನೆಂದುರುಬಿ ನೋಡು ನಿನ್ನಿಕ್ಕೆಲದಿ (275)

ನಾನು ನಾನೆಂದುರುಬಿ ನೋಡು ನಿನ್ನಿಕ್ಕೆಲದಿ |
ನಾನು ನಾನುಗಳ ಮರು ಬೊಬ್ಬೆ ಕೆರಳಿಹುದು ||
ನಾನು ನೀನುಗಳ ಬೊಬ್ಬೆಯೆ ಲೋಕದಲಿ ಹಬ್ಬ |
ಕ್ಷೀಣವಾಗಲಿ ನಾನು - ಮರುಳ ಮುನಿಯ || (೨೭೫)

(ನಾನ್+ಎಂದು+ಉರುಬಿ)(ನಿನ್ನ+ಇಕ್ಕೆಲದಿ)(ಕ್ಷೀಣ+ಆಗಲಿ)

ನಾನು, ನಾನು ಎಂದು ರಭಸದಿಂದ ಮೇಲೆ ಬಿದ್ದು (ಉರುಬಿ) ನಿನ್ನ ಎರಡೂ ಪಕ್ಕಗಳನ್ನೂ ನೋಡಿದರೆ, ಪ್ರತಿಯೊಬ್ಬರ ನಾನು ನಾನುಗಳ ಮರು ಕೂಗಾಟ ಮತ್ತು ಕೆರಳುವಿಕೆಗಳನ್ನು ನೀನು ಕಾಣುತ್ತೀಯೆ. ಈ ರೀತಿಯಾದ ನಾನು ಮತ್ತು ನೀನುಗಳ ಒದರಾಟಗಳೇ ಪ್ರಪಂಚದಲ್ಲಿ ಎಲ್ಲೆಲ್ಲೂ ಮೆರೆಯುತ್ತಿದೆ. ಆದ ಕಾರಣ ’ನಾನು’ ಎಂಬ ಅಹಂತೆ ಪ್ರತಿಯೊಬ್ಬರಲ್ಲಿ ಸೊರಗಿಹೋಗಲಿ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

You are shouting I, I, I, see your two sides,
Irritated people are also shouting I, I, I
Riotous revelry in the shouting world of I and you
May the egoistic I wane away – Marula Muniya (275)
(Translation from "Thus Sang Marula Muniya" by Sri. Narasimha Bhat)

Wednesday, September 5, 2012

ಮೊದಲು ನಾನೆನಗೆ ಮೊದಲೂಟ ಮೊದಲಿನ ಪೀಠ (274)

ಮೊದಲು ನಾನೆನಗೆ ಮೊದಲೂಟ ಮೊದಲಿನ ಪೀಠ |
ಮೊದಲು ನಾನೆನ್ನವರು ಬಳಿಕ ಉಳಿದವರು ||
ಇದು ಲೋಕದೆಲ್ಲ ಕಲಹಗಳ ದುಃಖದ ಮೂಲ |
ಅದುಮಿಕೊ ಅಹಂತೆಯನು - ಮರುಳ ಮುನಿಯ || (೨೭೪)

(ನಾನ್+ಎನಗೆ)(ಮೊದಲ್+ಊಟ)(ನಾನ್+ಎನ್ನವರು)(ಲೋಕದ+ಎಲ್ಲ)

ಮೊದಲು ನಾನು. ಮೊದಲು ನನಗೆ ಊಟವನ್ನು ಹಾಕಬೇಕು. ಮೊದಲಮಣೆ ನನಗೆ ಮೀಸಲಾಗಿರಬೇಕು. ಮೊದಲು ನಾನು ಮತ್ತು ನನ್ನವರು, ನಂತರ ಉಳಿದವರ ಬಗ್ಗೆ ಯೋಚಿಸೋಣ. ಈ ಬಗೆಯ ಅಹಂಭಾವನೆಗಳು ಪ್ರಪಂಚದ ಎಲ್ಲಾ ಜಗಳ ಮತ್ತು ದುಃಖಗಳ ಮೂಲ. ಆದ್ದರಿಂದ ನಿನ್ನ ಅಹಂಕಾರವನ್ನು ಯಾವಾಗಲೂ ಅದುಮಿಟ್ಟುಕೊಂಡಿರು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

First I, server the dinner first to me and offer the first seat to me,
I and my people first and all others afterwards
This attitude is the root of all fights and sorrows in the world
Subdue this Ego – Marula Muniya (274)
(Translation from "Thus Sang Marula Muniya" by Sri. Narasimha Bhat)

Tuesday, September 4, 2012

ಹೃದಯಾಂಗಣದ ಗರ್ಭದೊಳಗಿಹುದು ತಿಳಿಚಿಲುಮೆ (273)

ಹೃದಯಾಂಗಣದ ಗರ್ಭದೊಳಗಿಹುದು ತಿಳಿಚಿಲುಮೆ |
ವಿಧವಿಧದ ಲೋಕಾನುಭವದ ಹಾರೆಗಳು ||
ಬೆದಕಿ ಬಾವಿಯನಗೆಯೆ ಸತ್ಕಲೆಯ ಘಟಗಳಲಿ |
ಬದುಕಿಗೊದಗುವುದಮೃತ - ಮರುಳ ಮುನಿಯ || (೨೭೩)

(ಹೃದಯ+ಅಂಗಣದ)(ಗರ್ಭದೊಳಗೆ+ಇಹುದು)(ಲೋಕ+ಅನುಭವದ)(ಬಾವಿಯನ್+ಅಗೆಯೆ)(ಸತ್+ಕಲೆಯ) (ಬದುಕಿಗೆ+ಒದಗುವುದು+ಅಮೃತ)

ಹೃದಯದ ಅಂಗಳದೊಳಗಿನ ಗರ್ಭದಲ್ಲಿ ತಿಳಿಯಾದ ನೀರಿನ ಬುಗ್ಗೆಯಿದೆ. ಜಗತ್ತಿನ ಬಗೆಬಗೆಯ ಅನುಭವಗಳೆಂಬ ಹಾರೆಗಳಿಂದ, ಈ ಅಂಗಳದಲ್ಲಿ ಬಾವಿಯನ್ನು ತೋಡಿದರೆ, ಶ್ರೇಷ್ಠವಾದ ಕಲೆಗಳ ಬಿಂದಿಗೆ(ಘಟ)ಗಳಲ್ಲಿ, ನಮ್ಮಗಳ ಜೀವನಕ್ಕೆ ಬೇಕಾದ ಅಮೃತವು ದೊರಕುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

A limpid spring lies hidden in the depth of human heart,
When the spades of many varieties of life experiences
Prod and dig a well there, the ambrosia would be available
In the vessels of fine-arts – Marula Muniya (273)
(Translation from "Thus Sang Marula Muniya" by Sri. Narasimha Bhat)

Monday, September 3, 2012

ಶುಭ ಅಶುಭಗಳಿಗಂಜೆ ಸುಖದುಃಖಗಳಿಗಂಜೆ (272)

ಶುಭ ಅಶುಭಗಳಿಗಂಜೆ ಸುಖದುಃಖಗಳಿಗಂಜೆ |
ಅಭಯ ಭಯಗಳಿಗಂಜೆ ಲೋಗರಿಂಗಂಜೆ ||
ಉಭಯಗಳ ಮೀರ್ದ ಶಾಂತಿಯ ಸತ್ಯವೊಂದಿಹುದು |
ಲಭಿಸಲದು ಶಾಶ್ವತವೊ - ಮರುಳ ಮುನಿಯ || (೨೭೨)

(ಅಶುಭಗಳಿಗೆ+ಅಂಜೆ)(ಸುಖದುಃಖಗಳಿಗೆ+ಅಂಜೆ)(ಭಯಗಳಿಗೆ+ಅಂಜೆ)(ಲೋಗರಿಂಗೆ+ಅಂಜೆ)(ಸತ್ಯವೊಂದು+ಇಹುದು) (ಲಭಿಸಲ್+ಅದು)

ಮಂಗಳ ಮತ್ತು ಅಮಂಗಳಕರವಾದುದಕ್ಕೆ, ಸಂತೋಷ ಮತ್ತು ನೋವುಗಳಿಗೆ, ಹೆದರಿಕೆ ಮತ್ತು ಭಯವಿಲ್ಲದಿರುವುದಕ್ಕೆ ಮತ್ತು ಜನಗಳಿಗೆ, ಇವುಗಳೆಲ್ಲಕ್ಕೂ ನಾವು ಹೆದರದಿರೆ, ಈ ಎರಡನ್ನೂ ದಾಟಿದ ನಮಗೆ ನೆಮ್ಮದಿಯನ್ನು ನೀಡುವ ಸತ್ಯ ಒಂದಿದೆ. ಆ ಸತ್ಯವು ನಿನೆಗೆ ದೊರಕಿದಾಗ ನಿನಗೆ ಶಾಶ್ವತವಾದ ನೆಮ್ಮದಿ ಸಿಗುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

There exists the Truth, the adobe of peace, it transcends all dualities,
It is unafraid of all things, auspicious and inauspicious
Happiness and sorrow, fear and fearlessness, unafraid of any person
It remains with you forever if once attained – Marula Muniya (272)
(Translation from "Thus Sang Marula Muniya" by Sri. Narasimha Bhat)

Friday, August 31, 2012

ಇರುವುದೆನಲೆಂದೆಂದುಮೆತ್ತೆತ್ತಲುಂ ನೆರೆದು (271)

ಇರುವುದೆನಲೆಂದೆಂದುಮೆತ್ತೆತ್ತಲುಂ ನೆರೆದು |
ಕೊರೆವಡದೆ ಮಾರ‍್ಪಡದೆ ತಿರುಗದಲುಗದೆಯೆ ||
ಭರಿಪುದು ಚರಾಚರೋಭಯನವನದು ಧರಿಸಿಹುದು |
ಸ್ಥಿರತೆಯದು ಸತ್ಯವೆಲೊ - ಮರುಳ ಮುನಿಯ || (೨೭೧)

(ಇರುವುದು+ಎನಲು+ಎಂದೆಂದುಂ+ಎತ್ತೆತ್ತಲುಂ)(ತಿರುಗದು+ಅಲುಗದೆಯೆ)(ಚರ+ಅಚರ+ಉಭಯನವನು+ಅದು)
(ಸ್ಥಿರತೆ+ಅದು)(ಸತ್ಯ+ಎಲೊ)

ನಾವು ಯಾವುದನ್ನು ಇದೆ ಎಂದು ಹೇಳುತ್ತಿರುವೆವೋ ಅದು ಎಲ್ಲಾ ಕಡೆಯಲ್ಲಿಯೂ ತುಂಬಿಕೊಂಡು, ಕೊರತೆಯಿಲ್ಲದೆ, ಬದಲಾವಣೆಯಾಗದೆ, ತಿರುಗದೆ ಮತ್ತು ಅಲ್ಲಾಡದೆಯೇ ಇದೆ. ಅದು ಎಲ್ಲವನ್ನೂ ಹೊತ್ತುಕೊಂಡಿದೆ. ಈ ಜಗತ್ತಿನಲ್ಲಿರುವ ಸ್ಥಾವರ ಮತ್ತು ಜಂಗಮವೆಂಬ ಎರಡು ರೂಪಗಳನ್ನೂ ಅದು ಹೊಂದಿದೆ. ಅದು ಶಾಶ್ವತವಾಗಿರುವಂತಹುದು. ಇದೇ ಸತ್ಯ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

What exists, exists for ever and fills every place in every direction
It doesn’t wear out, doesn’t change, doesn’t turn and tremble,
It supports and rules over all movable and immovable existence
Truth is eternal – Marula Muniya (271)
(Translation from "Thus Sang Marula Muniya" by Sri. Narasimha Bhat)

Thursday, August 30, 2012

ಸತ್ಯಕೇ ಜಯವಂತೆ, ಜಯವೆ ಸತ್ಯಕ್ಕಿರಲು (270)


ಸತ್ಯಕೇ ಜಯವಂತೆ ! ಜಯವೆ ಸತ್ಯಕ್ಕಿರಲು |
ಮುತ್ತುವುವದೇಕದನು ಕಲಹ ಕಷ್ಟಗಳು ? ||
ಬತ್ತಿ ಸೊರಗದ ತುಟಿಗೆ ರುಚಿಸದೇ ಜಯದ ಫಲ ? |
ಪಟ್ಟೆತಲೆಗೇಹೂವು ? - ಮರುಳ ಮುನಿಯ || (೨೭೦)

(ಸತ್ಯಕ್ಕೆ+ಇರಲು)(ಮುತ್ತುವುವು+ಅದು+ಏಕೆ+ಅದನು)

ಸತ್ಯಕ್ಕೆ ಯಾವಾಗಲೂ ಗೆಲುವು ಎಂದರೂ ಆ ಸತ್ಯವನ್ನು ಜಗಳ ಮತ್ತು ಕಷ್ಟಗಳು ಏಕೆ ಮುತ್ತುತ್ತವೆ? ತುಟಿಯು ಬತ್ತಿ ಸೊರಗದಿದ್ದರೆ ಅದಕ್ಕೆ ಗೆಲುವಿನ ಫಲವು ರುಚಿಸಲಾರದೇನು? ಬೋಳು ತಲೆಯನ್ನು ಅಲಂಕರಿಸಲು ಹೂವೇಕೇ ಬೇಕು?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Victory to truth they say; if victory to truth is certain
Why do fights and sufferings make it so strenuous?
Doesn’t the fruit of victory taste well unless the lips become parched?
Are flowers reserved only for bald heads? – Marula Muniya (270)
(Translation from "Thus Sang Marula Muniya" by Sri. Narasimha Bhat)

Wednesday, August 29, 2012

ಕಡೆಗೆ ಜಗ ಸತ್ಯಕ್ಕೆ, ಜಯವೇನೊ ದಿಟವಂತೆ (269)

ಕಡೆಗೆ ಜಗ ಸತ್ಯಕ್ಕೆ, ಜಯವೇನೊ ದಿಟವಂತೆ |
ತಡವೇಕೊ ! ಶೀಘ್ರದಿನೆ ಜಯ ಬಾರದೇಕೋ ! ||
ಪೊಡವಿ ಸತಿಸುತರು ಮತ್ತೈತರೆ ಹರಿಶ್ಚಂದ್ರ |
ನುಡುಗಿದ್ದ ಮುದಕನಲಿ - ಮರುಳ ಮುನಿಯ || (೨೬೯)

(ತಡ+ಏಕೊ)(ಬಾರದು+ಏಕೋ)(ಮತ್ತೆ+ಐತರೆ)(ಹರಿಶ್ಚಂದ್ರನು+ಉಡುಗಿದ್ದ)

’ಸತ್ಯಮೇವ ಜಯತೇ’ ಸತ್ಯಕ್ಕೆ ಎಂದಿಗೂ ಗೆಲುವು. ಅದು ನಿಜ, ಎಂದು ಜಗತ್ತು ಹೇಳುತ್ತದೆ. ಆದರೆ ಸತ್ಯಕ್ಕೆ ಗೆಲುವು ತಡವಾಗಿ ಏಕೆ ಬರುತ್ತದೆ? ಶೀಘ್ರವಾಗಿ ಬರಬಹುದಾಗಿತ್ತಲ್ಲ ! ಹರಿಶ್ಚಂದ್ರನಿಗೆ ಈ ಭೂಮಿ ಪತ್ನಿ ಮತ್ತು ಪುತ್ರರು ಮತ್ತೆ ದೊರೆಕುವ ಕಾಲಕ್ಕೆ ಅವನು ವೃದ್ಧನಾಗಿದ್ದ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Victory to dharma at the end is sure they say,
Why so much delay, why isn’t victory quick to come?
Harishchandra had become quite old when his kingdom
Wife and son returned to him – Marula Muniya (269)
(Translation from "Thus Sang Marula Muniya" by Sri. Narasimha Bhat)

Tuesday, August 28, 2012

ಜಯವಂತೆ ಧರ್ಮಕ್ಕೆ, ಧರ್ಮ ಜಯಿಸುವತನಕ (268)

ಜಯವಂತೆ ಧರ್ಮಕ್ಕೆ, ಧರ್ಮ ಜಯಿಸುವತನಕ |
ವ್ಯಯವೆಷ್ಟು ? ಲೋಗರಾತ್ಮಕ್ಕೆ ಗಾಯವೆಷ್ಟು ? ||
ಭಯಪಡಿಸಿ ದಯೆಬಿಡಿಸಿ ನಯಗೆಡಿಸಿ ಬಂದ ಜಯ |
ಜಯವೊ? ಅಪಜಯಸಮವೊ? - ಮರುಳ ಮುನಿಯ || (೨೬೮)

(ವ್ಯಯ+ಎಷ್ಟು)(ಲೋಗರ್+ಆತ್ಮಕ್ಕೆ)(ಗಾಯ+ಎಷ್ಟು)

ಎಂದೆಂದಿಗೂ ಧರ್ಮಕ್ಕೆ ಜಯವೆಂದು ಜಗತ್ತು ಹೇಳುತ್ತದೆ. ಆದರೆ ಧರ್ಮವು ಗೆಲ್ಲುವತನಕ ಆಗುವ ಕಷ್ಟನಷ್ಟಗಳೆಷ್ಟು? ಜನಗಳ ಆತ್ಮಕ್ಕಾಗುವ ಗಾಯಗಳೆಷ್ಟು? ಜನಗಳಲ್ಲಿ ಹೆದರಿಕೆಯನ್ನುಂಟುಮಾಡಿ, ಕರುಣೆಗಳನ್ನು ಹೋಗಲಾಡಿಸಿ, ಸಭ್ಯತೆಯನ್ನೂ ಇಲ್ಲದಂತಾಗಿಸಿ ಬಂದಿರುವ ಗೆಲುವನ್ನು, ಗೆಲವು ಎಂದು ಕರೆಯಬೇಕೋ ಅಥವಾ ಅದು ಸೋಲಿಗೆ ಸಮಾನವಾದುದ್ದೆಂದು ತಿಳಿಯಬೇಕೋ? ಸ್ವಲ್ಪ ಯೋಚಿಸಿನೋಡು. 
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Victory to Dharma they say! What a colossal waste there was till dharma won?
Were not innumerable injuries inflicted on the souls of the people?
Is victory won by means of threats, cruelty and cunningness?
A true victory? Is it not really a defeat? – Marula Muniya (268)
(Translation from "Thus Sang Marula Muniya" by Sri. Narasimha Bhat)

Monday, August 27, 2012

ನ್ಯಾಯಕೇ ಜಯವಂತೆ, ಧರ್ಮಜನೆ ಸಾಕ್ಷಿಯಲ (267)

ನ್ಯಾಯಕೇ ಜಯವಂತೆ , ಧರ್ಮಜನೆ ಸಾಕ್ಷಿಯಲ  |
ದಾಯಿಗರ ಸದೆದು ದೊರೆತನವ ಗೆದ್ದನಲ   ||
ಆಯಸಂಬಟ್ಟುಂಡುದೇನೆನ್ನದಿರ್ ಪೈತ್ರ |
ವಾಯಸಗಳುಂಡುವಲ , - ಮರುಳ ಮುನಿಯ || (೨೬೭)

(ಆಯಸಂಬಟ್ಟು+ಉಂಡುದು+ಏನು+ಎನ್ನದಿರ್)(ವಾಯಸಗಳ್+ಉಂಡು+ಅಲ)

ಪ್ರಪಂಚದಲ್ಲಿ ಯಾವತ್ತಿಗೇ ನ್ಯಾಯಕ್ಕೇ ಗೆಲುವು ಎಂದು ನಾವು ತಿಳಿದಿದ್ದೇವೆ. ಇದಕ್ಕೆ ಪುರಾವೆಯಾಗಿ ಧರ್ಮರಾಜನನ್ನು ಉದಾಹರಿಸಬಹುದು. ತನ್ನ ಜ್ಞಾತಿಗಳನ್ನೇ(ದಾಯಿಗರ) ನಾಶಪಡಿಸಿ ಸಾಮ್ರಾಜ್ಯವನ್ನು ಗೆದ್ದ ತಾನೆ? ಬಳಲಿಕೆ ಮತ್ತು ನೋವುಗಳನ್ನು ಪಟ್ಟು ಅವನು ಅನುಭವಿಸುದುದು ಏನು ಎಂದು ಕೇಳಬೇಡ. ಪಿತೃ ದೇವತೆಗಳಿಗೆ (ಪೈತ್ರ) ಸಂಬಂಧಿಸಿದ ಪಿಂಡಗಳನ್ನು ಕಾಗೆಗಳು (ವಾಯಸ) ತಿಂದುದೇ ಅವನಿಗೆ ದೊರಕಿದ ಲಾಭ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Justice alone wins they say, Was not Dharmaja a witness to that?
Didn’t he win the throne by destroying his cousins?
Don’t comment on what he enjoyed after such a hard struggle.
Don’t crows eat the rice balls he offered to the manes? – Marula Muniya (267)
(Translation from "Thus Sang Marula Muniya" by Sri. Narasimha Bhat)

Friday, August 24, 2012

ಜಯವೆಲ್ಲಿ ಧರ್ಮಕಮಧರ್ಮಕಂ ಜಯವೆಲ್ಲಿ ? (266)

ಜಯವೆಲ್ಲಿ ಧರ್ಮಕಮಧರ್ಮಕಂ ಜಯವೆಲ್ಲಿ ? |
ಜಯವೇನಜಯವೇನನಂತಕೇಳಿಯಲಿ ? ||
ಜಯದ ಹಾದಿಗಳೆಲ್ಲ ಧರ್ಮದೀಪ್ತಗಳಲ್ಲ |
ಸ್ವಯಮಲಿಪ್ತನಿಗೆ ಜಯ- ಮರುಳ ಮುನಿಯ || (೨೬೬)

(ಧರ್ಮಕಂ+ಅಧರ್ಮಕಂ)(ಜಯವೇನು+ಅಜಯವೇನು+ಅನಂತ ಕೇಳಿಯಲಿ)(ಹಾದಿಗಳು+ಎಲ್ಲ)(ಧರ್ಮದೀಪ್ತಗಳ್+ಅಲ್ಲ) (ಸ್ವಯಂ+ಅಲಿಪ್ತನಿಗೆ)

ಧರ್ಮ ಮತ್ತು ಅಧರ್ಮಗಳಿಗೆ ಗೆಲುವು ಎಲ್ಲಿದೆ? ಈ ಕೊನೆಯಿಲ್ಲದ(ಅನಂತ) ಕ್ರೀಡೆಯಲ್ಲಿ ಗೆಲುವೇನು ಅಥವಾ ಸೋಲೇನು ? ಗೆಲುವಿನ ದಾರಿಗಳೆಲ್ಲವೂ ಧರ್ಮದ ಜ್ವಲಿಸುವ ದೀಪ(ದೀಪ್ತ)ಗಳೇನಲ್ಲ. ಸ್ವತಃ ಯಾವುದಕ್ಕೂ ಅಂಟಿಕೊಳ್ಳದವನಿಗೇ ಗೆಲುವು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Where is victory to dharma and where is victory to adharma?
What is victory and what is defeat in the endless play?
All the roads to victory are not lit by dharma
True victory is only to the unattached one – Marula Muniya (266)
(Translation from "Thus Sang Marula Muniya" by Sri. Narasimha Bhat)

Thursday, August 23, 2012

ಗಿರಿಶಿಖರದಲಿ ತತ್ತ್ವ, ಧರೆಯ ಹಳ್ಳದಿ ನೀನು (265)

ಗಿರಿಶಿಖರದಲಿ ತತ್ತ್ವ, ಧರೆಯ ಹಳ್ಳದಿ ನೀನು |
ಗರುಡರಕ್ಕೆಯನು ನೀಂ ಪಡೆಯದಿರ‍್ದೊಡೆಯುಂ ||
ಸ್ಪುರಿಸಲಿನಿತಾಗಾಗ ಶಿಖರ ನಿನ್ನಯ ಕಣ್ಗೆ |
ಪುರುಳಹುದೊ ಕಾಲಿಗದು - ಮರುಳ ಮುನಿಯ || (೨೬೫)

(ಪಡೆಯದೆ+ಇರ‍್ದೊಡೆಯುಂ)(ಸ್ಪುರಿಸಲು+ಇನಿತು+ಆಗಾಗ)(ಪುರುಳ್+ಅಹುದೊ)(ಕಾಲಿಗೆ+ಅದು)

ಉನ್ನತ ಪರ್ವತದ ತುದಿಯಲ್ಲಿ ತತ್ತ್ವ ಇದೆ. ಆದರೆ ನೀನು ನಿಂತಿರುವುದು ಮಾತ್ರ ಈ ಭೂಮಿಯ (ಧರೆಯ) ಒಂದು ಗುಣಿಯಲ್ಲಿ. ಗರುಡ ಪಕ್ಷಿಯಂತೆ ನೀನು ರೆಕ್ಕೆಗಳನ್ನು ಹೊಂದಿರದಿದ್ದರೂ, ಯಾವಾಗ ಈ ಶಿಖರವು ನಿನ್ನ ಕಣ್ಣುಗಳಿಗೆ ಗೋಚರವಾಗುವುದೋ, ಆವಾಗ ಆ ಶಿಖರವನ್ನೇರಲು ಹಳ್ಳದಲ್ಲಿ ನಿಂತಿರುವ ನಿನ್ನ ಕಾಲುಗಳಿಗೆ ಆ ಚೈತನ್ಯ ದೊರಕುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The Truth is high up on the hill top and you are in the valley below,
Even though you possess not the wings of Garuda, the king of birds
You can see the hill top now and then and draw inspiration
It would strengthen your legs – Marula Muniya (265)
(Translation from "Thus Sang Marula Muniya" by Sri. Narasimha Bhat)

Wednesday, August 22, 2012

ಬಾಹ್ಯದಿಂದಂತರಕಮಂತರದೆ ಬಾಹ್ಯಕಂ (264)

ಬಾಹ್ಯದಿಂದಂತರಕಮಂತರದೆ ಬಾಹ್ಯಕಂ |
ಗ್ರಾಹ್ಯಮಾಗಿಹುದೊಂದಖಂಡೈಕ ರಸವು ||
ಗುಹ್ಯವದು ನಿತ್ಯಾನುಸಂಧಾನದಿಂದ ಲವ- |
ಗಾಹ್ಯವಾ ರಸತತ್ತ್ವ - ಮರುಳ ಮುನಿಯ || (೨೬೪)

(ಬಾಹ್ಯದಿಂದ+ಅಂತರಕಂ+ಅಂತರದೆ)(ಗ್ರಾಹ್ಯಂ+ಆಗಿ+ಇಹುದು+ಒಂದು+ಅಖಂಡ+ಏಕ)(ಗುಹ್ಯ+ಅದು)(ನಿತ್ಯಾ+ಅನುಸಂಧಾನದಿಂದ)(ಲವಗಾಹ್ಯವು+ಆ)

ಹೊರ ಜಗತ್ತಿ(ಬಾಹ್ಯ)ನಿಂದ ಒಳಮನಸ್ಸಿ(ಅಂತರಕಂ)ಗೆ ಮತ್ತು ಒಳಮನಸ್ಸಿನಿಂದ ಹೊರಜಗತ್ತಿಗೆ, ಹೀಗೆ ಸ್ವೀಕರಿಸಲು ಯೋಗ್ಯವಾದ (ಗ್ರಾಹ್ಯ), ಎಲ್ಲರನ್ನೂ ಕೂಡಿದ ಮತ್ತು ಇಡಿಯಾಗಿ (ಅಖಂಡ) ಏಕವಾಗಿರುವ (ಏಕ) ಒಂದು ರಸ ಸತ್ತ್ವವು ಬಚ್ಚಿಟ್ಟು(ಗುಹ್ಯ)ಕೊಂಡಿದೆ. ಪ್ರತಿದಿನದ ಪರೀಕ್ಷಣೆಯಿಂದ ಈ ಸಿದ್ಧಾಂತದ ರಸ ಸತ್ತ್ವವನ್ನು ಕೊಂಚಮಟ್ಟಿಗೆ ತಿಳಿಯಲು ಸಾಧ್ಯವಾಗುತ್ತದೆ (ಲಹಗಾವ್ಯ).
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Worthy of experiences in the unbroken stream of rasa,
That flows from outside to inside and from inside to outside
The mysterious rasa can be experienced only
Through ceaseless search – Marula Muniya (264)
(Translation from "Thus Sang Marula Muniya" by Sri. Narasimha Bhat)

Tuesday, August 21, 2012

ಗುರಿಯೊಂದು ಬೇಕು ಜಗದಡವಿಯಲಿ ಪಥ ಕಾಣೆ (263)

ಗುರಿಯೊಂದು ಬೇಕು ಜಗದಡವಿಯಲಿ ಪಥ ಕಾಣೆ |
ತಿರುತಿರುಗಿ ಬಳಬಳಲಿ ಪಾಳಾಗದಿರೆ ಬಾಳ್ ||
ಸ್ಥಿರಸತ್ಯವಿರಬೇಕು ಬಾಳ್ ಪ್ರದಕ್ಷಿಣವದಕೆ |
ಅರಸು ನೀನದನುರದಿ - ಮರುಳ ಮುನಿಯ || (೨೬೩)

(ಗುರಿ+ಒಂದು)(ಜಗದ+ಅಡವಿಯಲಿ)(ಪಾಳಾಗದೆ+ಇರೆ)(ಸ್ಥಿರಸತ್ಯ+ಇರಬೇಕು)(ಪ್ರದಕ್ಷಿಣೆ+ಅವದಕೆ)(ನೀನ್+ಅದನು+ಉರದಿ)

ಈ ಜಗತ್ತೆಂಬ ಅರಣ್ಯದಲ್ಲಿ ಸುತ್ತಿ ಅಲೆದಾಡಿ ಆಯಾಸಗೊಂಡು ನಮ್ಮ ಬಾಳನ್ನು ಹಾಳುಮಾಡಿಕೊಳ್ಳದೆಯೇ ದಾರಿಯನ್ನು ಕಾಣಲು, ನಾವು ಒಂದು ಧ್ಯೇಯವನ್ನಿಟ್ಟುಕೊಂಡಿರಬೇಕು. ಶಾಶ್ವತವಾದ ಸಿದ್ಧಾಂತವಿರಬೇಕು. ನಮ್ಮ ಬಾಳು ಅದನ್ನು ಯಾವಾಗಲೂ ಅನುಸರಿಸುತ್ತಿರಬೇಕು. ಅದನ್ನು ನೀನು ನಿನ್ನ ಅಂತರಂಗದ ಒಳಗಡೆ ಹುಡುಕು (ಅರಸು).
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

You must have a goal lest you should lose track in the world-forest
And lest your life should become a waste, wandering and getting exhausted,
Your life is a circumambulation around the constant Truth
Search and find it out in your own heart – Marula Muniya (263)
(Translation from "Thus Sang Marula Muniya" by Sri. Narasimha Bhat)

Thursday, August 16, 2012

ಇಂದ್ರಿಯ ಸಮಸ್ತದಖಿಲಾನುಭವಗಳ ನೀನು (262)

ಇಂದ್ರಿಯ ಸಮಸ್ತದಖಿಲಾನುಭವಗಳ ನೀನು |
ಕೇಂದ್ರೀಕೃತಂಗೆಯ್ದು ಮನನದಿಂ ಮಥಿಸಿ ||
ತಂದ್ರಿಯಿರದಾತ್ಮ ಚಿಚ್ಛಕ್ತಿಯಿಂದುಜ್ಜುಗಿಸೆ |
ಸಾಂದ್ರತತ್ತ್ವಪ್ರಾಪ್ತಿ - ಮರುಳ ಮುನಿಯ || (೨೬೨)

(ಸಮಸ್ತದ+ಅಖಿಲ+ಅನುಭವಗಳ)(ತಂದ್ರಿಯಿರದ+ಆತ್ಮ)(ಚಿಚ್ಛಕ್ತಿಯಿಂದ+ಉಜ್ಜುಗಿಸೆ)

ಇಂದ್ರಿಯಗಳಿಗೆ ಸಂಬಂಧಪಟ್ಟ ಎಲ್ಲಾ ಅನುಭವಗಳನ್ನು ನೀನು ಅಂತರಂಗದಲ್ಲಿ ಏಕಾಗ್ರಗೊಳಿಸಿ, ಮನಸ್ಸಿನೊಳಗಡೆ ಅವುಗಳನ್ನು ನಿರಂತರ ಚಿಂತನ ಮಂಥನಗಳಿಂದ ಕೂಲಂಕುಷವಾಗಿ ಆಲೋಚಿಸಿ, ಆಲಸ್ಯ(ತಂದ್ರಿ)ದಿಂದರದ ಆತ್ಮದ ಜ್ಞಾನಶಕ್ತಿ(ಚಿಚ್ಛಕ್ತಿ)ಯಿಂದ ಸಾಧನೆಗೈದಲ್ಲಿ ಪರಬ್ರಹ್ಮ ಸಾಕ್ಷಾತ್ಕಾರ ಆಗುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Gather all your experiences of all senses and focus them on one point,
Think deeply, reflect and churn them in the mind,
Endeavour with the will power of the awakened soul,
You would then attain the eternal Truth – Marula Muniya
(Translation from "Thus Sang Marula Muniya" by Sri. Narasimha Bhat)