Wednesday, August 29, 2012

ಕಡೆಗೆ ಜಗ ಸತ್ಯಕ್ಕೆ, ಜಯವೇನೊ ದಿಟವಂತೆ (269)

ಕಡೆಗೆ ಜಗ ಸತ್ಯಕ್ಕೆ, ಜಯವೇನೊ ದಿಟವಂತೆ |
ತಡವೇಕೊ ! ಶೀಘ್ರದಿನೆ ಜಯ ಬಾರದೇಕೋ ! ||
ಪೊಡವಿ ಸತಿಸುತರು ಮತ್ತೈತರೆ ಹರಿಶ್ಚಂದ್ರ |
ನುಡುಗಿದ್ದ ಮುದಕನಲಿ - ಮರುಳ ಮುನಿಯ || (೨೬೯)

(ತಡ+ಏಕೊ)(ಬಾರದು+ಏಕೋ)(ಮತ್ತೆ+ಐತರೆ)(ಹರಿಶ್ಚಂದ್ರನು+ಉಡುಗಿದ್ದ)

’ಸತ್ಯಮೇವ ಜಯತೇ’ ಸತ್ಯಕ್ಕೆ ಎಂದಿಗೂ ಗೆಲುವು. ಅದು ನಿಜ, ಎಂದು ಜಗತ್ತು ಹೇಳುತ್ತದೆ. ಆದರೆ ಸತ್ಯಕ್ಕೆ ಗೆಲುವು ತಡವಾಗಿ ಏಕೆ ಬರುತ್ತದೆ? ಶೀಘ್ರವಾಗಿ ಬರಬಹುದಾಗಿತ್ತಲ್ಲ ! ಹರಿಶ್ಚಂದ್ರನಿಗೆ ಈ ಭೂಮಿ ಪತ್ನಿ ಮತ್ತು ಪುತ್ರರು ಮತ್ತೆ ದೊರೆಕುವ ಕಾಲಕ್ಕೆ ಅವನು ವೃದ್ಧನಾಗಿದ್ದ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Victory to dharma at the end is sure they say,
Why so much delay, why isn’t victory quick to come?
Harishchandra had become quite old when his kingdom
Wife and son returned to him – Marula Muniya (269)
(Translation from "Thus Sang Marula Muniya" by Sri. Narasimha Bhat)

No comments:

Post a Comment