Monday, August 27, 2012

ನ್ಯಾಯಕೇ ಜಯವಂತೆ, ಧರ್ಮಜನೆ ಸಾಕ್ಷಿಯಲ (267)

ನ್ಯಾಯಕೇ ಜಯವಂತೆ , ಧರ್ಮಜನೆ ಸಾಕ್ಷಿಯಲ  |
ದಾಯಿಗರ ಸದೆದು ದೊರೆತನವ ಗೆದ್ದನಲ   ||
ಆಯಸಂಬಟ್ಟುಂಡುದೇನೆನ್ನದಿರ್ ಪೈತ್ರ |
ವಾಯಸಗಳುಂಡುವಲ , - ಮರುಳ ಮುನಿಯ || (೨೬೭)

(ಆಯಸಂಬಟ್ಟು+ಉಂಡುದು+ಏನು+ಎನ್ನದಿರ್)(ವಾಯಸಗಳ್+ಉಂಡು+ಅಲ)

ಪ್ರಪಂಚದಲ್ಲಿ ಯಾವತ್ತಿಗೇ ನ್ಯಾಯಕ್ಕೇ ಗೆಲುವು ಎಂದು ನಾವು ತಿಳಿದಿದ್ದೇವೆ. ಇದಕ್ಕೆ ಪುರಾವೆಯಾಗಿ ಧರ್ಮರಾಜನನ್ನು ಉದಾಹರಿಸಬಹುದು. ತನ್ನ ಜ್ಞಾತಿಗಳನ್ನೇ(ದಾಯಿಗರ) ನಾಶಪಡಿಸಿ ಸಾಮ್ರಾಜ್ಯವನ್ನು ಗೆದ್ದ ತಾನೆ? ಬಳಲಿಕೆ ಮತ್ತು ನೋವುಗಳನ್ನು ಪಟ್ಟು ಅವನು ಅನುಭವಿಸುದುದು ಏನು ಎಂದು ಕೇಳಬೇಡ. ಪಿತೃ ದೇವತೆಗಳಿಗೆ (ಪೈತ್ರ) ಸಂಬಂಧಿಸಿದ ಪಿಂಡಗಳನ್ನು ಕಾಗೆಗಳು (ವಾಯಸ) ತಿಂದುದೇ ಅವನಿಗೆ ದೊರಕಿದ ಲಾಭ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Justice alone wins they say, Was not Dharmaja a witness to that?
Didn’t he win the throne by destroying his cousins?
Don’t comment on what he enjoyed after such a hard struggle.
Don’t crows eat the rice balls he offered to the manes? – Marula Muniya (267)
(Translation from "Thus Sang Marula Muniya" by Sri. Narasimha Bhat)

No comments:

Post a Comment