Friday, December 14, 2012

ಸೃಜಿಸಿ ಯಂತ್ರಾಯುಧಗಳಂ ಪ್ರಗತಿಸಾಧನೆಗೆ (331)

ಸೃಜಿಸಿ ಯಂತ್ರಾಯುಧಗಳಂ ಪ್ರಗತಿಸಾಧನೆಗೆ |
ನಿಜಲಕ್ಷಣೋನ್ನತಿಯನೇ ಮರೆತು ಮನುಜಂ ||
ರುಜಿತಾತ್ಮನಪ್ಪನಾ ಯಂತ್ರಾಪಘಾತದಿನೆ |
ವಿಜಯ ವಿಭ್ರಾಂತಿಯದು - ಮರುಳ ಮುನಿಯ || (೩೩೧)

(ಯಂತ್ರ+ಆಯುಧಗಳಂ)(ಲಕ್ಷಣ+ಉನ್ನತಿಯನೇ)(ರುಜಿತಾತ್ಮನ್+ಅಪ್ಪನ್+ಆ)(ಯಂತ್ರ+ಅಪಘಾತದಿನೆ)

ಏಳಿಗೆಯನ್ನು ಹೊಂದುವುದಕ್ಕಾಗಿ ಯಂತ್ರ ಮತ್ತು ಆಯುಧಗಳನ್ನು ಸೃಷ್ಟಿಮಾಡಿ, ತನ್ನ ಸ್ವಂತ ಅಭ್ಯುದಯದ ಚಿಹ್ನೆಗಳನ್ನು ಮರೆತು, ಮನುಷ್ಯನು, ಯಂತ್ರಗಳ ಅಪಘಾತಗಳಿಂದ ಬಾಧೆಗೆ ಒಳಗಾದವನಾಗುತ್ತಾನೆ (ರುಜಿತಾತ್ಮನ್). ಈ ಗೆಲುವು, ಒಂದು ಭ್ರಮೆಯೇ (ವಿಭ್ರಾಂತಿ) ಸರಿ.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

In his craze to achieve progress man manufactures machines and weapons
He forgets the greatness of his own true nature
And becomes sick in soul due to the mishap caused by machines
Isn’t his sense of victory a delusion? – Marula Muniya (331)
(Translation from "Thus Sang Marula Muniya" by Sri. Narasimha Bhat)

No comments:

Post a Comment