Monday, December 3, 2012

ತ್ರಿಭುವನಗಳ್ಗೇಕೈಕನೀಶಂ ನಿರಂಕುಶಂ (323)

ತ್ರಿಭುವನಗಳ್ಗೇಕೈಕನೀಶಂ ನಿರಂಕುಶಂ |
ಸಭೆಯುಮಿಲ್ಲವನ ತಿದ್ದಿಸೆ ಜನದ ಕೂಗಿಂ ||
ಅಭಯನಾಳುವ ರಾಜ್ಯವನುದಿನಮುಮಿಂತು ಸಂ- |
ಕ್ಷುಭಿತಮಿಹುದಚ್ಚರಿಯೆ - ಮರುಳ ಮುನಿಯ || (೩೨೩)

(ತ್ರಿಭುವನಗಳ್ಗೆ+ಏಕೈಕನ್+ಈಶಂ)(ಸಭೆಯುಂ+ಇಲ್ಲ+ಅವನ)(ಅಭಯನ್+ಆಳುವ) (ರಾಜ್ಯವನ್+ಅನುದಿನಮುಂ+ಇಂತು)(ಸಂಕ್ಷುಭಿತಂ+ಇಹುದು+ಅಚ್ಚರಿಯೆ)

ಮೂರೂ ಲೋಕಗಳಿಗೆ ಯಾವ ವಿಧವಾದ ಅಂಕೆಯೂ ಇಲ್ಲದೆ ಒಡೆಯನಾಗಿರುವವನು ಒಬ್ಬನೇ ಒಬ್ಬನಾದ ಈಶ್ವರ. ಅಲ್ಲಿರುವ ಜನಗಳ ಕೂಗುಗಳಿಂದ ಅವನನ್ನು ತಿದ್ದಿಸಲು ಯಾವ ಪ್ರಜಾ ಪ್ರತಿನಿಧಿಸಭೆಯೂ ಇಲ್ಲ. ಯಾವ ವಿಧದ ಭಯವೂ ಇಲ್ಲದೆ ಈ ರಾಜ್ಯಗಳನ್ನು ಪ್ರತಿನಿತ್ಯವೂ ಹೀಗೆ ಅಳುತ್ತಿರುವಲ್ಲಿ, ಅಲ್ಲೋಲ ಕಲ್ಲೋಲಗಳು ಕಂಡುಬರುವುದು ಆಶ್ಚರ್ಯಕರವಾದ ವಿಷಯವೇನೂ ಅಲ್ಲ.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

One single dictator Monarch rules all the three worlds
There’s no assembly to correct Him as per the voiced wishes of the people
It is no surprise then if such a country is always in turmoil
When the fearless Autocrat rules over it – Marula Muniya
(Translation from "Thus Sang Marula Muniya" by Sri. Narasimha Bhat)

No comments:

Post a Comment