Friday, November 30, 2012

ಹಿತಬೋಧಕರು ಸಾಲದುದರಿಂದಲಲ್ಲ ವೀ (322)

ಹಿತಬೋಧಕರು ಸಾಲದುದರಿಂದಲಲ್ಲ ವೀ-|
ಕ್ಷಿತಿಗೆ ದುರ್ದಶೆ ಬಂದುದವಿಧೇಯರಿಂದ ||
ದ್ಯುತಿ ಕಣ್ಣೊಳಿರ್ದೊಡೇಂ ಶಿರದಿ ಮದ್ಯರಸಂಗ- |
ಳತಿಶಯಂ ಸೇರಿರಲು - ಮರುಳ ಮುನಿಯ || (೩೨೨)

(ಸಾಲದು+ಅದರಿಂದಲ್+ಅಲ್ಲ)(ಬಂದುದು+ಅವಿಧೇಯರಿಂದ)(ಕಣ್ಣೊಳ್+ಇರ್ದೊಡೇಂ)(ಮದ್ಯರಸಂಗಳ್+ಅತಿಶಯಂ)

ಒಳ್ಳೆಯದನ್ನು ಹೇಳುವವರು ಸಾಲದಿರುವುದರಿಂದಲ್ಲ, ಆದರೆ ಹೇಳಿದುದ್ದನ್ನು ಪಾಲಿಸದಿರುವವರಿಂದ, ಬದುಕಿಗೆ ಕೆಟ್ಟಸ್ಥಿತಿ ಬಂತು. ಮೆದುಳಿನಲ್ಲಿ ವಿಪರೀತವಾಗಿ ಮಾದಕದ್ರವ್ಯಗಳ ಪರಿಣಾಮ (ಶಿರದಿ ಮದ್ಯರಸಂಗಳ್) ಸೇರಿಕೊಂಡಿರುವಾಗ, ಕಣ್ಣುಗಳಲ್ಲಿ ಕಾಂತಿ(ದ್ಯುತಿ)ಯಿದ್ದರೂ ಏನು ಉಪಯೋಗ?

(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Our earth now is in a pitiable condition not because of the
Dearth of good advisers but because of disobedient people,
It is no use of the light shining in the eyes
When the head is reeling with excessive intoxication – Marula Muniya
(Translation from "Thus Sang Marula Muniya" by Sri. Narasimha Bhat)

No comments:

Post a Comment