Thursday, November 22, 2012

ಸಜ್ಜೀವನಕೆ ಸೂತ್ರವೆರಡು ಮೂರದು ಸರಳ (296)

ಸಜ್ಜೀವನಕೆ ಸೂತ್ರವೆರಡು ಮೂರದು ಸರಳ |
ಹೊಟ್ಟೆ ಪಾಡಿಗೆ ವೃತ್ತಿ ಸತ್ಯಬಿಡದಿಹುದು ||
ಚಿತ್ತವೀಶನೊಳದುವೆ ಚಿಂತೆಗಳ ಬಿಟ್ಟಿಹುದು |
ಮೈತ್ರಿ ಲೋಕಕೆಲ್ಲ - ಮರುಳ ಮುನಿಯ || (೨೯೬)

ಒಳ್ಳೆಯ ಜೀವನವನ್ನು ನಡೆಸಲು ಎರಡು ಮುರು ಸರಳ ಮತ್ತು ಸುಲಭವಾದ ಉಪಾಯಗಳಿವೆ. ಜೀವನವನ್ನು ಪೋಷಿಸುವುದಕ್ಕೋಸ್ಕರ ಒಂದು ಕೆಲಸ ಮತ್ತು ಉದ್ಯೊಗ. ಯಾವಾಗಲೂ ನಿಜವನ್ನೇ ಹೇಳುವುದು. ಪರಮಾತ್ಮನಲ್ಲಿ ಮನಸ್ಸನ್ನು (ಚಿತ್ತ) ನೆಟ್ಟಿರುವುದು ಮತ್ತು ಅದರಿಂದ ಚಿಂತೆಗಳನ್ನು ಹಚ್ಚಿಕೊಳ್ಳದಿರುವುದು. ಪ್ರಪಂಚದೆಲ್ಲದರ ಜೊತೆ ಸ್ನೇಹ(ಮೈತ್ರಿ)ದಿಂದಿರುವುದು.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Simple principles two or three for life divine
Pursuing a truthful occupation to earn the daily bread
Bidding farewell to all worries by rooting the mind in God
And extending friendship to the entire world – Marula Muniya
(Translation from "Thus Sang Marula Muniya" by Sri. Narasimha Bhat)

No comments:

Post a Comment