Thursday, November 22, 2012

ಸತ್ತವರ ಯಶವೊಂದು ಶವಭಾರ ಲೋಕಕ್ಕೆ (298)

ಸತ್ತವರ ಯಶವೊಂದು ಶವಭಾರ ಲೋಕಕ್ಕೆ |
ಒತ್ತುತಿರಲದು ಮೇಲೆ ಯುವಕಗತಿಯೆಂತು ? ||
ಉತ್ತು ನೆಲದಲಿ ಬೆರಸು ಹಳೆ ಜಸವನದು ಬೆಳೆದು |
ಮತ್ತೆ ಹೊಸ ಪೈರಕ್ಕೆ - ಮರುಳ ಮುನಿಯ || (೨೯೮)

(ಒತ್ತುತ+ಇರಲು+ಅದು)(ಜಸವನ್+ಅದು)

ಈಗಾಗಲೇ ನಿಧನರಾಗಿರುವವರ ಕೀರ್ತಿ ಮತ್ತು ಯಶಸ್ಸುಗಳ ಭಾರವನ್ನು ಈ ಲೋಕ ಹೊತ್ತುಕೊಂಡಿದೆ. ಇವು ಮೇಲುಗಡೆಯಿಂದ ಅದುಮುತ್ತಾ ಇರಲು, ಈ ಲೋಕದಲ್ಲಿ ಸದ್ಯಕ್ಕೆ ಜೀವಿಸುತ್ತಿರುವ ಯುವಕರ ಅವಸ್ಥೆ ಏನಾಗುತ್ತದೆ? ಆದುದರಿಂದ ಪ್ರಾಚೀನರ ಯಶಸ್ಸು ಮತ್ತು ಕೀರ್ತಿಗಳನ್ನು ಈಗಿನ ಭೂಮಿಯಲ್ಲಿ ಉತ್ತಿ ಬೆರೆಸು. ಆವಾಗ ಆ ಪೂರ್ವಕಾಲದ ಯಶಸ್ಸು ಮತ್ತು ಕೀರ್ತಿಗಳು ಹೊಸ ಬೆಳೆಯನ್ನು ಬೆಳೆಸಲು ಸಹಾಯಕವಾಗುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The fame of the dead is a dead weight on the world,
How can the youth progress when it is weighing them down?
Plough back the old renown, and mix it well in the soil
Let it grow again as a new crop – Marula Muniya
(Translation from "Thus Sang Marula Muniya" by Sri. Narasimha Bhat)

No comments:

Post a Comment