Thursday, November 22, 2012

ಮಾನ್ಯವಲ್ತೆನಗೆ ವಧೆಯಿಂ ಬರ‍್ಪ ಜಯವೆಂದು (306)

ಮಾನ್ಯವಲ್ತೆನಗೆ ವಧೆಯಿಂ ಬರ‍್ಪ ಜಯವೆಂದು |
ಸಂನ್ಯಾಸದಾಭಾಸಿ ಪಾರ್ಥನಾದಂದು ||
ಅನ್ಯಾಯ ಸಹನೆ ವೈರಾಗ್ಯವೆಂತಹುದೆಂದು - |
ಪನ್ಯಸಿಸಿದಂ ಕೃಷ್ಣ - ಮರುಳ ಮುನಿಯ || (೩೦೬)

(ಮಾನ್ಯವಲ್ತು+ಎನಗೆ)(ಸಂನ್ಯಾಸದ+ಆಭಾಸಿ)(ಪಾರ್ಥನಾದ+ಅಂದು)(ವೈರಾಗ್ಯ+ಎಂತು+ಅಹುದು+ಎಂದು+ಉಪನ್ಯಸಿಸಿದಂ)

ಇತರರನ್ನು ವಧಿಸಿ ದೊರೆಯುವ ಗೆಲುವು ತನಗೆ ಒಪ್ಪತಕ್ಕಂತಹುದಲ್ಲವೆಂದು, ಸಂನ್ಯಾಸಿಯಂತೆ ನೋಟಮಾತ್ರಕ್ಕೆ ಕಾಣಿಸುತ್ತಿದ್ದ (ಸನ್ಯಾಸದಾಭಾಸಿ) ಅರ್ಜುನ(ಪಾರ್ಥ)ನು ಹೇಳಿದಾಗ, ಅನ್ಯಾಯಗಳನ್ನು ಸಹಿಸಿಕೊಳ್ಳುವುದು ಹೇಗೆ ವಿರಕ್ತಿಯಾಗುತ್ತದೆಂದು, ಶ್ರೀ ಕೃಷ್ಣ ಪರಮಾತ್ಮನು ಅವನಿಗೆ ಉಪದೇಶಿಸಿದನು.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

In a fleeting spree of renunciation Partha declared
That the victory gained through cruel killings was unacceptable
Then Krishna in a preaching mood asked him how
Tolerating injustice could be acclaimed as renunciation – Marula Muniya
(Translation from "Thus Sang Marula Muniya" by Sri. Narasimha Bhat)

No comments:

Post a Comment