Friday, October 12, 2012

ಶ್ರಯಿಸು ನೀಂ ಸತ್ಯವನೆ ಭಾಗ್ಯವೆಂತಾದೊಡಂ (294)

ಶ್ರಯಿಸು ನೀಂ ಸತ್ಯವನೆ ಭಾಗ್ಯವೆಂತಾದೊಡಂ |
ಬಯಸು ಧರ್ಮವ ಲಾಭವೆಂತು ಪೋದೊಡೆಯುಂ ||
ನಿಯಮಪಾಲನೆಯಿಂದ ಜಯ ಲೋಕಸಂಸ್ಥಿತಿಗೆ |
ಜಯವದು ನಿಜಾತ್ಮಕ್ಕೆ - ಮರುಳ ಮುನಿಯ || (೨೯೪)

(ಭಾಗ್ಯ+ಎಂತಾದೊಡಂ)

ನಿನಗೆಷ್ಟೇ ಸೌಭಾಗ್ಯ ಮತ್ತು ಸಂಪತ್ತುಗಳು ದೊರೆಯುವಂತಿದ್ದರೂ, ಯಾವಾಗಲೂ ಸತ್ಯವನ್ನೇ ಅವಲಂಬಿಸು (ಶ್ರಯಿಸು). ನಿನ್ನ ಲಾಭಗಳೆಷ್ಟು ಹೋದರೂ ಸದಾಕಾಲವೂ ಧರ್ಮಾಚರಣೆಯನ್ನೇ ಅಪೇಕ್ಷಿಸು. ಕಟ್ಟುಪಾಡು ಮತ್ತು ಕಟ್ಟಳೆಗಳನ್ನು ಅನುಸರಿಸುವುದರಿಂದಲೇ ಪ್ರಪಂಚಕ್ಕೆ ಒಳ್ಳೆಯ ಸ್ಥಿತಿ ಉಂಟಾಗುತ್ತದೆ. ಅದು ತನ್ನ ಆತ್ಮಕ್ಕೆ ಗೆಲುವನ್ನು ತಂದುಕೊಡುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")


Whatever may be your fortune, take refuge only in Truth
Stick to Dharma even though you suffer losses
Pursuing rules and regulations ensures healthy upkeep of the world,
It brings success to one’s own self – Marula Muniya

(Translation from "Thus Sang Marula Muniya" by Sri. Narasimha Bhat)

No comments:

Post a Comment