Friday, October 5, 2012

ಮುಗಿಲಿಗೇರೆನುತಿಹರು ತತ್ತ್ವೋಪದೇಶಕರು (292)

ಮುಗಿಲಿಗೇರೆನುತಿಹರು ತತ್ತ್ವೋಪದೇಶಕರು |
ಬಿಗಿವುದಿಳೆಗೆಲ್ಲರನು ರೂಢಿಸಂಕೋಲೆ ||
ಗಗನ ಧರೆಯಿಂತು ದಡವಾಗೆ ಪರಿವುದು ನಡುವೆ |
ಜಗದ ಜೀವಿತದ ನದಿ - ಮರುಳ ಮುನಿಯ || (೨೯೨)

(ಮುಗಿಲಿಗೆ+ಏರ್+ಎನುತ+ಇಹರು)(ತತ್ತ್ವ+ಉಪದೇಶಕರು)(ಬಿಗಿವುದು+ಇಳೆಗೆ+ಎಲ್ಲರನು)(ದಡ+ಆಗೆ)

ಸಿದ್ಧಾಂತವನ್ನು ಬೋಧಿಸುವವರೆಲ್ಲರೂ ಆಕಾಶದೆತ್ತರಕ್ಕೇರಬೇಕೆಂದು ಹೇಳುತ್ತಾರೆ. ಆದರೆ ದಿನನಿತ್ಯದ ಅಭ್ಯಾಸಗಳ ಶೃಂಖಲೆ(ಸಂಕೋಲೆ)ಯು, ಎಲ್ಲರನ್ನೂ ಹಿಡಿದು ಜಗತ್ತಿಗೆ ಬಂಧಿಸುತ್ತದೆ. ಈ ರೀತಿಯಾಗಿ ಆಕಾಶ ಮತ್ತು ಭೂಮಿ(ಧರೆ)ಗಳು ದಡವಾಗಲು ಅವುಗಳ ಮಧ್ಯೆ ನಮ್ಮೆಲ್ಲರ ಜೀವನವೆಂಬ ನದಿಯು ಹರಿಯುತ್ತಿರುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Great preachers exhort us to live a skyhigh ideal life
But the shackles of worldly ways bind us to the world.
The river of worldly life thus flows between the two banks
Of the earth and sky – Marula Muniya (292)
(Translation from "Thus Sang Marula Muniya" by Sri. Narasimha Bhat)

No comments:

Post a Comment