Showing posts with label ಸೃಷ್ಟಿ ಶಿಶುವಾದೊಡಂ ಪೂರುಷಂ ತನ್ನಾತ್ಮ. Show all posts
Showing posts with label ಸೃಷ್ಟಿ ಶಿಶುವಾದೊಡಂ ಪೂರುಷಂ ತನ್ನಾತ್ಮ. Show all posts

Thursday, November 22, 2012

ಸೃಷ್ಟಿ ಶಿಶುವಾದೊಡಂ ಪೂರುಷಂ ತನ್ನಾತ್ಮ (301)

ಸೃಷ್ಟಿ ಶಿಶುವಾದೊಡಂ ಪೂರುಷಂ ತನ್ನಾತ್ಮ |
ಶಿಷ್ಟಿಯಿಂದವಳ ಮಾಯಾಪಟವ ಪರಿದು ||
ನಿಷ್ಠುರ ಜಗದ್ದ್ವಂದ್ವಗಳ ದಾಟಿ ಬಾಳ್ವುದೆ ವಿ - |
ಶಿಷ್ಟ ಧರ್ಮಮವಂಗೆ - ಮರುಳ ಮುನಿಯ || (೩೦೧)

(ಶಿಶು+ಆದೊಡಂ)(ತನ್ನಾ+ಆತ್ಮ)(ಶಿಷ್ಟಿಯಿಂದ+ಅವಳ)(ಧರ್ಮಂ+ಅವಂಗೆ)

ಮನುಷ್ಯನು ಸೃಷ್ಟಿಯ ಮಗುವಾದರೂ ಸಹ, ಅವನು ತನ್ನ ಆತ್ಮದ ಶಿಕ್ಷಣದಿಂದ ಸೃಷ್ಟಿಯ ಮಾಯಾ ತೆರೆಯನ್ನು ಹರಿದು, ಈ ಪ್ರಪಂಚದ ಕಠಿಣವಾದ ದ್ವೈತಭಾವವನ್ನು ಮೀರಿ, ಜೀವನವನ್ನು ನಡೆಸುವುದೇ ಅವನಿಗೆ ಶ್ರೇಷ್ಠವಾದ ಧರ್ಮವಾಗುತ್ತದೆ.
(ಕೃಪೆ: ಶ್ರೀ.ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Even though man is a child of nature
He should tear off the veil of Maya with self-culture and self-control
He should rise above the harsh dualities of the world and live in peace
This is his unique duty – Marula Muniya (301)
(Translation from "Thus Sang Marula Muniya" by Sri. Narasimha Bhat)