Wednesday, September 12, 2012

ರಾಮಾನುಜರ್ ಮನೆಯ ಹೊರನಿಂತ ಶಿಷ್ಯನನು (279)

ರಾಮಾನುಜರ್ ಮನೆಯ ಹೊರನಿಂತ ಶಿಷ್ಯನನು |
ನಾಮವೇನೆನ್ನಲಾನಾನೆಂದನಾತಂ ||
ಬಾ ಮಗುವೆ ನಾಂ ಸತ್ತಮೇಲೆ ನೀಂ ಬರ‍್ಪುದೆಂ- |
ದಾ ಮುನಿಯ ಮಾತ ನೆನೆ - ಮರುಳ ಮುನಿಯ || (279)

(ನಾಮ+ಏನ್+ಎನ್ನಲ್+ಆ+ನಾನ್+ಎಂದನ್+ಆತಂ)(ಬರ‍್ಪುದು+ಎಂದ+ಆ)

ಶ್ರೀಮದ್ರಾಮಾನುಜರು ವಿಶಿಷ್ಟಾದ್ವೈತದ ಆಚಾರ‍್ಯರು. ಇವರು ನೆಲೆಸಿದ್ದ ಕುಟೀರದ ಹೊರಗೆ ಶಿಷ್ಯನೊಬ್ಬನು ಬಂದು ಬಾಗಿಲು ಬಡಿದನಂತೆ. ’ಯಾರು ನೀನು?’ ಎಂದು ಆಚಾರ‍್ಯರು ಪ್ರಸ್ನಿಸಲಾಗಿ ’ನಾನು, ನಾನು’ ಎಂದು ಶಿಷ್ಯನು ಹೇಳಿದನು. ಆಗ ಆಚಾರ‍್ಯರು ’ಮಗು ಒಳಗೆ ಬಾ, ಆದರೆ ನೀನು ನನ್ನ ಜೊತೆ ಬರುವುದು "ನಾನು" ಸತ್ತಮೇಲೆ ಮಾತ್ರ’ ಎಂದರು. ನಾನು ಎಂದರೆ ಅಹಂಕಾರ. ಅಹಂಕಾರವಳಿದರೆ ಮಾತ್ರ ಗುರುವಿನ ಲಾಭವಾಗುತ್ತದೆ. ಅದರಿಂದ ಸಗ್ದತಿ ದೊರೆಯುತ್ತದೆ - ಎಂದು ಅಭಿಪ್ರಾಯ. ಈ ಮುನಿಗಳ ಮಾತುಗಳನ್ನು ಸದಾಕಾಲವೂ ಜ್ಞಾಪಿಸಿಕೊಂಡು ಅಹಂಕಾರವನ್ನು ತೊರೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Ramanujar asked his disciple standing outside the house
What his name was and he replied, ‘This is I’
Then the sage said, ‘Come in child after the demise of ‘I’
Remember these words – Marula Muniya (279)
(Translation from "Thus Sang Marula Muniya" by Sri. Narasimha Bhat)


No comments:

Post a Comment