Friday, September 6, 2013

ಲೋಕವನು ತಿದ್ದಲಿಕೆ ಹೊರಟು ಗೆದ್ದವರಾರು? (495)

ಲೋಕವನು ತಿದ್ದಲಿಕೆ ಹೊರಟು ಗೆದ್ದವರಾರು? |
ಕಾಕುತ್ಸ್ಠನೇ ಕೃಷ್ಣನೇ ಬುದ್ಧ ಜಿನರೆ ||
ಸಾಕ್ರಟೀಸ್ ಏಸರೇ ಮೋಸಸ್ ಮಹಮ್ಮದರೆ |
ಸ್ವೀಕರಿಸಿತಾರನದು - ಮರುಳ ಮುನಿಯ || (೪೯೫)

(ಗೆದ್ದವರು+ಆರು)(ಸ್ವೀಕರಿಸಿತು+ಆರನ್+ಅದು)

ಪ್ರಪಂಚದಲ್ಲಿ ಸೊಟ್ಟಾಗಿರುವುದನ್ನು ತಿದ್ದಿ ಅದನ್ನು ಒಂದು ಸುಂದರವಾದ ತಾಣವನ್ನಾಗಿ ಮಾದಲು ಪ್ರಯತ್ನಿಸಿ ಗೆದ್ದವರು ಯಾರಿದ್ದಾರೆ? ರಾಮನೇ (ಕಾಕುತ್ಸ್ಠ), ಕೃಷ್ಣನೇ?, ಗೌತಮ ಬುದ್ಧನೇ, ಜೈನ ಪಂಥದ ಮಹಾವೀರರೇ, ಗ್ರೀಕ್ ದೇಶದ ತತ್ತ್ವಜ್ಞಾನಿಯಾದ ಸಾಕ್ರಟೀಸ್‍ನೇ, ಕ್ರಿಸ್ತ ಧರ್ಮವನ್ನು ಸ್ಥಾಪಿಸಿದ ಏಸುಕ್ರಿಸ್ತ, ಯಹೂದಿಯರ ಮೋಸಸ್ ಅಥವಾ ಇಸ್ಲಾಂ ಧರ್ಮದ ಸಂಸ್ಥಾಪಕನಾದ ಪ್ರವಾದಿ ಮಹಮ್ಮದರೆ? ಇವರನ್ನಾರನ್ನಾದರೂ ಜಗತ್ತು ಒಪ್ಪಿಕೊಂಡಿತೇನು? ಅವರವರ ಕಾಲದಲ್ಲಿ ಅವರೆಲ್ಲರನ್ನೂ ಜಗತ್ತು ಅವಹೇಳನ ಮಾಡಿ ತಿರಸ್ಕರಿಸಿತ್ತು ಎಂಬುದನ್ನು ನಾವು ಮರೆಯಬಾರದು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Has anyone ever succeeded in reforming this world?
Is it Rama or Krishna? Is it Buddha or Jina?
Is it Socrates or Jesus? Is it Moses or Mohammad?
Whom has the world accepted? – Marula Muniya
(Translation from "Thus Sang Marula Muniya" by Sri. Narasimha Bhat)

No comments:

Post a Comment