Showing posts with label ಗೀತರಾಗಂ ನಾದಮಾನದಿಂ ರುಚಿಪಂತೆ. Show all posts
Showing posts with label ಗೀತರಾಗಂ ನಾದಮಾನದಿಂ ರುಚಿಪಂತೆ. Show all posts

Wednesday, October 29, 2014

ಗೀತರಾಗಂ ನಾದಮಾನದಿಂ ರುಚಿಪಂತೆ (686)

ಗೀತರಾಗಂ ನಾದಮಾನದಿಂ ರುಚಿಪಂತೆ |
ಮಾತು ಛಂದಸು ಕೂಡಿ ಪದ್ಯವಪ್ಪಂತೆ ||
ಸ್ರೋತಂ ತಟಾನುಗತಿಯಿಂ ಯೋಗ್ಯವೆನಿಪಂತೆ |
ಸ್ವಾತಂತ್ರ್ಯ ಶಾಸ್ತಿಯಿಂ - ಮರುಳ ಮುನಿಯ || (೬೮೬)

(ಪದ್ಯವು+ಅಪ್ಪಂತೆ)(ತಟ+ಅನುಗತಿಯಿಂ)(ಯೋಗ್ಯ+ಎನಿಪಂತೆ)

ಹಾಡು ಮತ್ತು ರಾಗಗಳು ಮಧುರವಾದ ಧ್ವನಿಯಿಂದಲೊಡಗೂಡಿ ನಮಗೆ ಸವಿಯನ್ನು ಉಂಟುಮಾಡುವಂತೆ, ಮಾತು ಮತ್ತು ಛಂದಸ್ಸು ಕೂಡಿ ಒಂದು ಪದ್ಯವಾಗುವಂತೆ, ನದಿಯ ಪ್ರವಾಹ(ಸ್ರೋತ)ವು ಅದರ ದಡ(ತಟ)ಗಳ ನಿಯಂತ್ರಣದಿಂದ ಅನುಕೂಲವೆನ್ನಿಸುವಂತೆ, ಸ್ವಾತಂತ್ರ್ಯದ ಪ್ರಯೋಜನವು ನಿಯಮಪಾಲನೆಯಿಂದ ಸಾರ್ಥಕವಾಗುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Songs and tunes in measured tones become melodious,
Words arranged in suitable meter becomes song
River flowing between its banks becomes useful,
Likewise freedom flowers with discipline – Marula Muniya
(Translation from "Thus Sang Marula Muniya" by Sri. Narasimha Bhat)