Tuesday, September 9, 2014

ಪ್ರಾರಭ್ದವಾಸನಾ ಋಣ ಗುಣೋತ್ಕರಮೊಂದು (662)

ಪ್ರಾರಭ್ದವಾಸನಾ ಋಣ ಗುಣೋತ್ಕರಮೊಂದು |
ಪೌರುಷದ ಸಾಂಪ್ರತ ವಿವೇಕಮೊಂದಿಂತು ||
ಹೋರುತಿರೆ ನರನೆರಡು ಪಕ್ಷಗಳ್ ನ್ಯಾಯಮಂ |
ತೀರುಗೊಳಿಪಂ ಸ್ವಾಮಿ - ಮರುಳ ಮುನಿಯ || (೬೬೨)

(ಗುಣ+ಉತ್ಕರಂ+ಒಂದು)(ವಿವೇಕಂ+ಒಂದು+ಇಂತು)(ಹೋರುತ+ಇರೆ)(ನರನ್+ಎರಡು)

ಹಿಂದಿನ ಜನ್ಮಗಳ ಕರ್ಮಗಳಿಂದ(ಪ್ರಾರಬ್ಧ) ಹುಟ್ಟಿದ ಬಯಕೆಗಳ(ವಾಸನೆ) ಋಣಗಳನ್ನು ತೀರಿಸುವ ಸ್ವಭಾವಗಳ ರಾಶಿ(ಉತ್ಕರ) ಒಂದು ಕಡೆ. ಸದ್ಯ ಇರುವ ಪ್ರಪಂಚಕ್ಕೆ ಸಂಬಂಧಪಟ್ಟ ಉಚಿತವಾದ (ಸಾಂಪ್ರತ) ಪೌರುಷದ ವಿವೇಚನಾಶಕ್ತಿ ಇನ್ನೊಂದು ಕಡೆ. ಇವೆರಡು ಪಕ್ಷಗಳ ನಡುವೆ ಮನುಷ್ಯನು ಹೋರಾಡುತ್ತಿರಲಾಗಿ, ಪರಮಾತ್ಮನು ನ್ಯಾಯವನ್ನು ತೀರ್ಪುಗೊಳಿಸುತ್ತಾನೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The debts of past Karma and instincts are on one side,
Your wisdom and manliness are on another side,
These two sides in man fight for justice,
The Lord would deliver His verdict in time – Marula Muniya
(Translation from "Thus Sang Marula Muniya" by Sri. Narasimha Bhat)

No comments:

Post a Comment