Monday, September 15, 2014

ಕರ್ಮಗಳನನುಕ್ಷಣಮುಮೆಸಗದಿಹನಾರಯ್ಯ (665)

ಕರ್ಮಗಳನನುಕ್ಷಣಮುಮೆಸಗದಿಹನಾರಯ್ಯ |
ಕರ್ಮಗಳ್ ತನಗಾಗಿ ನೈಜದಿಂ ತಾನೆ ||
ಉಣ್ಣಿಪ್ಪವದು ಫಲವ ಶೇಷಮಂ ಭುಕಿಸಲ್ಕೆ |
ಜನ್ಮಾಂತರದ ವಿಧಿಯೊ - ಮರುಳ ಮುನಿಯ || (೬೬೫)

(ಕರ್ಮಗಳನ್+ಅನುಕ್ಷಣಮುಂ+ಎಸಗದೆ+ಇಹನ್+ಆರಯ್ಯ)(ಉಣ್ಣಿಪ್ಪ+ಅದು)

ನಾವು ಪ್ರತಿಯೊಂದು ಕ್ಷಣವೂ ಏನಾದರೂ ಕರ್ಮಗಳನ್ನು ಮಾಡುತ್ತಲೇ ಇರುತ್ತೇವೆ. ಈ ರೀತಿಯಾಗಿ ಕರ್ಮಗಳನ್ನು ಮಾಡದಿರುವ ಮನುಷ್ಯರು ಯಾರೂ ಇಲ್ಲ. ಕರ್ಮಗಳು ಸಹಜವಾಗಿ ಅವುಗಳ ಫಲವನ್ನು ಮನುಷ್ಯನು ತಾನೇ ಉಣ್ಣುವಂತೆ ಮಾಡಿ, ಮಿಕ್ಕಿರುವುದನ್ನು ಅನುಭವಿಸಲು ಪುನಃ ಜನ್ಮಗಳನ್ನೆತ್ತುವಂತೆ ಮಾಡುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Is there anyone who is not engaged in activity every moment?
The action done for one’s own sake would make him
Eat their fruits and the soul passes through rebirths,
To experience the balance of his Karma – Marula Muniya (665)
(Translation from "Thus Sang Marula Muniya" by Sri. Narasimha Bhat)

No comments:

Post a Comment