Friday, May 23, 2014

ಮಚ್ಚರಿಸಬೇಡ ಮಚ್ಚರವನಾಗಿಸಬೇಡ (620)

ಮಚ್ಚರಿಸಬೇಡ ಮಚ್ಚರವನಾಗಿಸಬೇಡ |
ಕಿಚ್ಚದಂಟಲು ಸುಡುವುದೆಲ್ಲ ನಿನ್ನದನು |
ಹೆಚ್ಚು ಕೊರೆಯವರವರ ಪೂರ್ವಕೃತ ತಾತ್‍ಕ್ಷಣಿಕ |
ಉಚ್ಚವಿರಿಸಾತ್ಮವನು - ಮರುಳ ಮುನಿಯ || (೬೨೦)

(ಮಚ್ಚರವನ್+ಆಗಿಸಬೇಡ)(ಕಿಚ್ಚು+ಅದು+ಅಂಟಲು)(ಸುಡುವುದು+ಎಲ್ಲ)(ಕೊರೆ+ಅವರ+ಅವರ)(ಉಚ್ಚ+ಇರಿಸು+ಆತ್ಮವನು)

ಮತ್ಸರ(ಮಚ್ಚರ)ವನ್ನು ಪಡಬೇಡ. ಮತ್ಸರವಾಗುವಂತಹ ಕೃತಿಗಳನ್ನು ಮಾಡಬೇಡ. ಬೆಂಕಿ(ಕಿಚ್ಚು)ಯು ಹೊತ್ತಿಕೊಳ್ಳಲು ನಿನ್ನೆಲ್ಲವನ್ನೂ ಸುಟ್ಟುಹಾಕುತ್ತದೆ. ಒಂದು ಕಡಿಮೆ ಅಥವಾ ಒಂದು ಹೆಚ್ಚಾಗಿರುವುದು ಅವರವರು ಪಡೆದುಕೊಂಡು ಬಂದ ಪೂರ್ವಜನ್ಮಗಳ ಫಲ. ಅದು ಆ ಕ್ಷಣಕ್ಕೆ ಮಾತ್ರ ಅನ್ವಯಿಸುವಂತಾದ್ದು. ಈ ಎಲ್ಲ ಭಾವಗಳನ್ನು ಮೀರಿ ನೀನು ನಿನ್ನ ಆತ್ಮಸ್ಥಿತಿಯನ್ನು ಮೇಲ್ಮಟ್ಟದಲ್ಲಿಟ್ಟುಕೊಂಡಿರು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Envy not others and provoke not envy in others,
When the fire of jealousy is kindled, it burns your everything,
Opulence and poverty are temporary and are the fruits of your karma
But preserve yourself always in excellence – Marula Muniya
(Translation from "Thus Sang Marula Muniya" by Sri. Narasimha Bhat)

No comments:

Post a Comment