Wednesday, May 14, 2014

ತನ್ನ ಕೈಸೇರಿದೈಸಿರಿಯನನ್ಯಂಗಿತ್ತು (616)

ತನ್ನ ಕೈಸೇರಿದೈಸಿರಿಯನನ್ಯಂಗಿತ್ತು |
ತನ್ನಿನನ್ಯಂ ಸಿರಿಯ ಕಸಿದೋಡಿದಂದು ||
ಅನ್ಯಾಯಿಗನನರಸಿ ದಂಡಿಸಿದ ರಾಘವನೆ |
ಸಂನ್ಯಸನಕಾದರ್ಶ - ಮರುಳ ಮುನಿಯ || (೬೧೬)

(ಕೈಸೇರಿದ+ಐಸಿರಿಯನ್+ಅನ್ಯಂಗೆ+ಇತ್ತು)(ತನ್ನಿನ್+ಅನ್ಯಂ)(ಕಸಿದು+ಓಡಿದಂದು)(ಅನ್ಯಾಯಿಗನನ್+ಅರಸಿ)
(ಸಂನ್ಯಸನಕೆ+ಆದರ್ಶ)

ತನ್ನ ಕೈಗೆ ದೊರಕಿದ ಐಶ್ವರ್ಯ(ಸಿರಿ)ವಾದ ಕೋಸಲ ರಾಜ್ಯವನ್ನು ಭರತನಿಗೆ ಕೊಟ್ಟು ತನ್ನ ಐಶ್ವರ್ಯವಾದ ಸೀತಾದೇವಿಯನ್ನು ರಾವಣನು ಅಪಹರಿಸಿಕೊಂಡು ಹೋದಾಗ ತಪ್ಪು ಮಾಡಿದ ರಾವಣನನ್ನು ಶಿಕ್ಷಿಸಿ ಸಂಹರಿಸಿದ ಶ್ರೀರಾಮನ ನಡತೆಯು ವೈರಾಗ್ಯದ ಬಾಳಿಗೆ ಮಾದರಿಯಾಗಿದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Sri Rama renounced his kingship in favour of his brother Bharatha
But when Ravana kidnapped his wife, his precious treasure
He found out the wicked Ravana ad punished him
Sri Rama is certainly an ideal renouncer – Marula Muniya (616)
(Translation from "Thus Sang Marula Muniya" by Sri. Narasimha Bhat)

No comments:

Post a Comment