Showing posts with label ಕೇತಕಿ ಗುಲಾಬಿ ಪೊದೆಗಳ ಮೇಲೆ ಬಿದ್ದರಿವೆ. Show all posts
Showing posts with label ಕೇತಕಿ ಗುಲಾಬಿ ಪೊದೆಗಳ ಮೇಲೆ ಬಿದ್ದರಿವೆ. Show all posts

Thursday, May 29, 2014

ಕೇತಕಿ ಗುಲಾಬಿ ಪೊದೆಗಳ ಮೇಲೆ ಬಿದ್ದರಿವೆ (623)

ಕೇತಕಿ ಗುಲಾಬಿ ಪೊದೆಗಳ ಮೇಲೆ ಬಿದ್ದರಿವೆ- |
ಯಾತುರದಿ ಕೀಳೆ ಹರಿಯುವುದು ಚೂರಾಗಿ ||
ಚೇತಸದ ಪಾಡಂತು ಜಗದ ಮುಳ್ಗಳಿನದನು |
ಸೈತರಿತು ಬಿಡಿಸಿಕೊಳೊ - ಮರುಳ ಮುನಿಯ || (೬೨೩)

(ಬಿದ್ದ+ಅರಿವೆ+ಆತುರದಿ)(ಪಾಡು+ಅಂತು)(ಮುಳ್ಗಳಿಂ+ಅದನು)

ತಾಳೆ ಹೂ ಮತ್ತು ಗುಲಾಬಿ ಹೂ ಗಿಡಗಳ ಪೊದೆಗಳ ಮೇಲೆ ಬಿದ್ದಿರುವ ಬಟ್ಟೆಯನ್ನು ಆತುರದಿಂದ ಬಿಡಿಸಿಕೊಳ್ಳಲು ಹೋದರೆ ಆ ಬಟ್ಟೆಯು ಹರಿದು ಛಿದ್ರವಾಗುವುದು ಖಂಡಿತ. ಅದೇ ರೀತಿ ಮನಸ್ಸಿನ ಅವಸ್ಥೆ. ಇಂತಹ ಮನಸ್ಸಿನ ಅವಸ್ಥೆಗಳನ್ನು ಜಗತ್ತಿನ ಕಷ್ಟಗಳೆಂಬ ಮುಳ್ಳುಗಳಿಂದ ಶಾಂತವಾಗಿ ಸದ್ದಿಲ್ಲದೆ ಬಿಡಿಸಿಕೊಂಡು ಪಾರಾಗು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The cloth fallen on fragrant screw-pine or rose
Will be torn into shreds if you pull it with force
Same is the fate of human mind entangled in worldly thorns
Disentangle it carefully – Marula Muniya (623)
(Translation from "Thus Sang Marula Muniya" by Sri. Narasimha Bhat)