Thursday, September 3, 2015

ಸೈಸುವನೆ ಜೈಸುವನು ತಾಳ್ಮೆಯೇ ಮೇಲ್ಮೆಯೈ (790)

ಸೈಸುವನೆ ಜೈಸುವನು ತಾಳ್ಮೆಯೇ ಮೇಲ್ಮೆಯೈ |
ಸಾಸರೋಷಗಳಹುದು ದೋಷ ಭೀಷಣವು ||
ಸೈಸೇನು ಸೋಲಲ್ಲ ಅನ್ಯಾಯದೊಪ್ಪಲ್ಲ |
ಸೈಸುತೆದುರಿಸು ವಿಧಿಯ - ಮರುಳ ಮುನಿಯ || (೭೯೦)

(ಸಾಸ+ರೋಷಗಳ್+ಅಹುದು)(ಸೈಸುತ+ಎದುರಿಸು)

ಸಹಿಸು(ಸೈಸು)ವವನೇ ಜಯಿಸುತ್ತಾನೆ. ತಾಳುಮೆಯೇ ಮೇಲೇಳುವುದು. ತಾಳಿದವನು ಬಾಳಿಯಾನು. ವಿಚಾರಶೂನ್ಯ ಅಪೇಕ್ಷೆ (ಸಾಸ) ಮತ್ತು ಕೋಪ(ರೋಷ)ಗಳಿಂದ, ತಪ್ಪು ಮತ್ತು ಭಯಂಕರ(ಭೀಷಣ) ಅನಾಹುತಗಳಾಗಬಹುದು. ಸಹಿಸಿಕೊಂಡಿರುವುದು ಸೋತುಹೋದಂತೇನಲ್ಲ. ಅದು ಅನ್ಯಾಯವನ್ನು ಒಪ್ಪಿಕೊಂಡಂತೆಯೂ ಅಲ್ಲ. ಆದುದ್ದರಿಂದ ಸಹಿಸಿಕೊಂಡೇ ವಿಧಿಯನ್ನು ಎದುರಿಸು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

He who endures wins, patience itself is excellence,
Mad adventure and anger may end is dangerous blunder
Endurance isn’t defeat and acquiescence isn’t injustice
Endure and bravely face the Fate – Marula Muniya (790)
(Translation from "Thus Sang Marula Muniya" by Sri. Narasimha Bhat) #dvg,#kagga

No comments:

Post a Comment