Wednesday, February 25, 2015

ಬಹುಜೀವದೊಳಗೇಕೆ ಜೀವದ ವಿಲೀಕರಣ (728)

ಬಹುಜೀವದೊಳಗೇಕೆ ಜೀವದ ವಿಲೀಕರಣ |
ಬಹುತೆಯಿಂದೇಕತ್ವ ಏಕದಿಂ ಬಹುತೆ ||
ಇಹದೊಳಿದು ಪರಮಾರ್ಥವಿದರಿಂದಲಾನಂದ |
ವಿಹಿತಮಿದು ಮುಕ್ತಂಗೆ - ಮರುಳ ಮುನಿಯ || (೭೨೮)

(ಬಹುಜೀವದ+ಒಳಗೆ+ಏಕೆ)(ಬಹುತೆಯಿಂದ+ಏಕತ್ವ)(ಇಹದೊಳು+ಇದು)
(ಪರಮಾರ್ಥ+ಇದರಿಂದಲ್+ಆನಂದ)(ವಿಹಿತಮ್+ಇದು)

ಅನೇಕಾನೇಕ ಜೀವಗಳ ಒಳಗೆ ಒಂದು ಜೀವ ಏಕೆ ಸೇರಿಕೊಂಡು ಹೋಗಿದೆ? ಏಕೆಂದರೆ ಈ ಅನೇಕದಿಂದ ಒಂದಾಗುವುದು ಮತ್ತೂ ಒಂದರಿಂದ ಅನೇಕವಾಗುವುದು ಪ್ರಪಂಚದಲ್ಲಿ ಪುನರಾವರ್ತಿತವಾಗುತ್ತಿರುತ್ತದೆ. ಅದು ಈ ಪ್ರಪಂಚದಲ್ಲಿ ಪರಮಾತ್ಮನ ಇರುವಿಕೆಯನ್ನೂ ನಮಗೆ ತಿಳಿಸಿಕೊಡುತ್ತದೆ ಮತ್ತು ಅದರಿಂದ ನಮಗೆ ಸಂತೋಷವುಂಟಾಗುತ್ತದೆ. ಪ್ರಪಂಚದಿಂದ ಬಿಡುಗಡೆಯಾಗ ಬಯಸುವವನಿಗೆ, ಈ ಭಾವನೆ ಅಗತ್ಯವಾದುದ್ದಾಗಿದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Merging of one soul with many other souls in the world,
One from many and many from one,
This is the Divine Truth and happiness from this in the world.
This principle is the best to the liberated one – Marula Muniya (728)
(Translation from "Thus Sang Marula Muniya" by Sri. Narasimha Bhat)

No comments:

Post a Comment