Tuesday, April 7, 2015

ನೆಲ ಪರಿಯುತಿರೆ ಮನೆಯು (ನಿಂತೀತೆ ಮುರಿದದೆಯೆ?)

ನೆಲ ಪರಿಯುತಿರೆ ಮನೆಯು (ನಿಂತೀತೆ ಮುರಿದದೆಯೆ?)|
ಜಲ ಪರಿಯದಿರೆ ಜನರ್ ಕುಡಿಯಲಹುದೇನು? ||
ಜ್ವಲನ ತಂಪಾಗುವನೆ ಬಿಸಿಕೊಡುವರಾರಾಗ? |
ಕೆಲಸಮೊರ‍್ವರಿಗೊಂದು - ಮರುಳ ಮುನಿಯ || (೭೫೫)

(ಪರಿಯುತ+ಇರೆ)(ಪರಿಯದೆ+ಇರೆ)(ಕುಡಿಯಲ್+ಅಹುದು+ಏನು)(ತಂಪು+ಆಗುವನೆ)(ಬಿಸಿಕೊಡುವರ್+ಆರ್+ಆಗ)(ಕೆಲಸಂ+ಒರ‍್ವರಿಗೆ+ಒಂದು)

ಭೂಮಿಯು ಸ್ಥಿರವಾಗಿ ನಿಲ್ಲದೆ ನೀರಿನ ಪ್ರವಾಹದಂತೆ ಹರಿಯುತ್ತಿದ್ದರೆ, ಅದರ ಮೇಲೆ ಕಟ್ಟಿರುವ ಮನೆಯು ಮುರಿಯದೆ ನಿಂತುಕೊಳ್ಳಲಾದೀತೇನು? ಹಾಗೆಯೇ ನೀರು ಎಲ್ಲೂ ಹರಿಯದೆ ಒಂದೇ ಕಡೆ ನಿಂತುಕೊಂಡುಬಿಟ್ಟರೆ, ವಿವಿಧ ಪ್ರದೇಶದಲ್ಲಿರುವ ಜನರಿಗೆ ಕುಡಿಯಲು ನೀರು ಇರಲಾರದು. ಬೆಂಕಿಯು(ಜ್ವಲ) ಉಷ್ಣತೆಯನ್ನು ಕೊಡದೆ ತಣ್ಣಗಿದ್ದಲ್ಲಿ ಇನ್ಯಾರು ತಾನೆ ಶಾಖ ದೊರಕಿಸುತ್ತಾರೆ? ಈ ಪ್ರಪಂಚದಲ್ಲಿ ಪ್ರತಿಯೊಬ್ಬರಿಗೂ ಒಂದೊಂದು ಕಾರ್ಯವನ್ನು ಭಗವಂತನು ಗೊತ್ತುಪಡಿಸಿದ್ದಾನೆ. ಅವರು ಅದರಂತೆಯೇ ನಡೆದುಕೊಳ್ಳಬೇಕು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Won’t the house collapse when the earth itself starts swaying?
What will the people drink when there’s no rainfall and flow of water?
Who will produce heat when fire itself becomes cold?
Each has its own quality and duty – Marula Muniya (755)
(Translation from "Thus Sang Marula Muniya" by Sri. Narasimha Bhat)

No comments:

Post a Comment