Monday, April 6, 2015

ಇಂದ್ರಿಯನಿರೋಧದಿಂ ಸರಸ ಜೀವನ ಭಂಗ (754)

ಇಂದ್ರಿಯನಿರೋಧದಿಂ ಸರಸ ಜೀವನ ಭಂಗ |
ರುಂದ್ರ ರಾಸಿಕ್ಕದಿಂದಾತ್ಮಗತಿ ಭಂಗ ||
ದ್ವಂದ್ವದ ಸಮನ್ವಯದ ಬಂಧುರತೆಯಿಂದೆ ನೀಂ |
ಸಾಂದ್ರಾತ್ಮ ಜೀವಿಯಿರು - ಮರುಳ ಮುನಿಯ || (೭೫೪)

(ರಾಸಿಕ್ಕದಿಂದ+ಆತ್ಮಗತಿ)(ಸಾಂದ್ರ+ಆತ್ಮ)

ಇಂದ್ರಿಯಗಳನ್ನು ಪ್ರತಿಬಂಧಿಸಿ (ನಿರೋಧ) ನಡೆಯುವುದರಿಂದ ವಿನೋದಕರವಾದ ಜೀವನವು ಮುರಿದುಬೀಳುತ್ತದೆ. ಘೋರ ರೀತಿಯಲ್ಲಿ (ರುಂದ್ರ) ಇಂದ್ರಿಯ ಸುಖಾಭಿಲಾಶೆಗಳನ್ನು ಅನುಭವಿಸುವುದರಿಂದ, ಆತ್ಮದ ಸಹಜಗತಿ ಕುಂಠಿತವಾಗುತ್ತದೆ. ವೈರುದ್ದ್ಯದ ಹೊಂದಾಣಿಕೆ(ಸಮನ್ವಯ)ಯ ಸುಂದರತೆ(ಬಂಧುರತೆ)ಯಿಂದ ನೀನು ಉನ್ನತವಾದ ಆತ್ಮವನ್ನು ಹೊಂದಿರುವ ಜೀವಿಯಾಗಿರು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Suppression of senses jeopardizes happy harmonious life,
Excessive lasciviousness hinders the pilgrimage of self,
Harmoniously coordinate all dualities of life
And be a well-saturated soul – Marula Muniya (754)
(Translation from "Thus Sang Marula Muniya" by Sri. Narasimha Bhat)

No comments:

Post a Comment