Tuesday, March 24, 2015

ಆತುರಿಸದಿರು ಮುಕ್ತಿಗಾತುರಿಸದಿರು ತತ್ತ್ವ (746)

ಆತುರಿಸದಿರು ಮುಕ್ತಿಗಾತುರಿಸದಿರು ತತ್ತ್ವ- |
ಕಾತುರಿಸಬೇಡಾತ್ಮ ಪರಿಪಾಕಕೆಂದುಂ ||
ಆತುರಾನ್ನದೊಳರ್ಧಪಕ್ವಾತಿಪಕ್ವಗಳು |
ಯಾತನೆಗೆ ಮೂಲವಲೆ - ಮರುಳ ಮುನಿಯ || (೭೪೬)

(ಆತುರಿಸದೆ+ಇರು)(ಮುಕ್ತಿಗೆ+ಆತುರಿಸದೆ+ಇರು)(ತತ್ತ್ವಕೆ+ಆತುರಿಸಬೇಡ+ಆತ್ಮ)(ಪರಿಪಾಕಕೆ+ಎಂದುಂ)(ಆತುರ+ಅನ್ನದ+ಒಳ್+ಅರ್ಧಪಕ್ವ+ಅತಿಪಕ್ಷಗಳು)(ಮೂಲ+ಅಲೆ)

ಮೋಕ್ಷವನ್ನು ಪಡೆಯಲು ಆತುರಿಸಬೇಡ. ಪರಮಾತ್ಮನ ತತ್ತ್ವವನ್ನು ಅರಿಯಲು ಆತುರಪಡಬೇಡ. ಆತ್ಮವನ್ನು ಸಂಪೂರ್ಣವಾಗಿ ಪಕ್ವಗೊಳಿಸಲು ಆತುರದ ಕೆಲಸ ಮಾಡಿದರೆ ಆಗುವುದಿಲ್ಲ. ಅಕ್ಕಿಯನ್ನು ಬೇಯಿಸುವಾಗ ಆತುರಪಟ್ಟರೆ, ಕೆಲವು ಭಾಗದಲ್ಲಿರುವ ಅಕ್ಕಿಯು ಅರ್ಧಬೆಂದು ಕೆಲವು ಭಾಗದಲ್ಲಿರುವ ಅಕ್ಕಿಯು ಹೆಚ್ಚಾಗಿ ಬೆಂದುಹೋಗುತ್ತದೆ. ಆತುರದ ಕಾರ್ಯಗಳು ವೇದನೆಗೆ ಕಾರಣವಾಗುತ್ತವೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Hurry not for salvation and hurry not for the realization of the Truth
Hurry not for the ripening and refinement of the soul
Rice cooked in haste may become half cooked or overcooked
Hurry is the root of worry and pain – Marula Muniya
(Translation from "Thus Sang Marula Muniya" by Sri. Narasimha Bhat)

No comments:

Post a Comment