Showing posts with label ತಾಯಿ ಮಕ್ಕಳಿಗೂಟವಿಡುವಾಗಲೊಂದಕ್ಕೆ. Show all posts
Showing posts with label ತಾಯಿ ಮಕ್ಕಳಿಗೂಟವಿಡುವಾಗಲೊಂದಕ್ಕೆ. Show all posts

Thursday, February 13, 2014

ತಾಯಿ ಮಕ್ಕಳಿಗೂಟವಿಡುವಾಗಲೊಂದಕ್ಕೆ (570)

ತಾಯಿ ಮಕ್ಕಳಿಗೂಟವಿಡುವಾಗಲೊಂದಕ್ಕೆ |
ಕಾಯಿ ಹೆಚ್ಚಿತು ಕೆನೆಮೊಸರೊಂದಕ್ಕೆ ತಮಗ- ||
ನ್ಯಾಯಮೆಲ್ಲೆಂದಣ್ಣತಮ್ಮದಿರು ಹೋರುವರೆ |
ದಾಯವಂತಿಕೆಯೊಳಗೆ - ಮರುಳ ಮುನಿಯ || (೫೭೦)

(ಮಕ್ಕಳಿಗೆ+ಊಟ+ಇಡುವಾಗಲ್+ಒಂದಕ್ಕೆ)(ಕೆನೆಮೊಸರು+ಒಂದಕ್ಕೆ)(ನ್ಯಾಯ+ಎಲ್ಲಿ+ಎಂದು+ಅಣ್ಣತಮ್ಮದಿರು)(ದಾಯವಂತಿಕೆಯು+ಒಳಗೆ)

ತಾಯಿಯು ತನ್ನ ಮಕ್ಕಳಿಗೆ ಊಟವನ್ನು ಬಡಿಸುವಾಗ, ಒಂದು ಮಗುವಿಗೆ ಕಾಯಿ ಪಲ್ಯವನ್ನು ಹೆಚ್ಚಾಗಿ ಹಾಕಿ, ಇನ್ನೊಂದು ಮಗುವಿಗೆ ಒಂದು ಸೌಟು ಕೆನೆಮೊಸರನ್ನು ಹೆಚ್ಚಾಗಿ ಹಾಕಿದ್ದಲ್ಲಿ, ತಮಗೆ ಭಾಗವಿಡುವುದರಲ್ಲಿ ನ್ಯಾಯ ಎಲ್ಲಿದೆ? ಎಂದು ಅಣ್ಣ ತಮ್ಮಂದಿರು ಕಾದಾಡುತ್ತಾರೇನು? ಪ್ರಪಂಚದಲ್ಲಿರುವ ದೇಶಗಳೆಲ್ಲವೂ ಹೀಗೆಯೇ ಅರಿತುಕೊಂಡು ನಡೆದರೆ ಮನುಜಕುಲದ ನಿನಾಶದ ಹಾದಿಯನ್ನು ತಪ್ಪಿಸಬಹುದೇನೋ?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

When mother serves food to her children during lunch,
One may get more vegetable pieces and another may get a little more curd
Do the brothers then fight among themselves accusing
unjustly to them? – Marula Muniya (570)
(Translation from "Thus Sang Marula Muniya" by Sri. Narasimha Bhat)