Monday, December 19, 2011

ಸರಸತಿಯ ಸತ್ರ ಬಳಿಯಿರೆ ತೊರೆದು ದೂರದಾ (126)

ಸರಸತಿಯ ಸತ್ರ ಬಳಿಯಿರೆ ತೊರೆದು ದೂರದಾ |
ಸಿರಿದೇವಿಯಂಗಡಿಯನರಸಿ ತಟವಟಿಸಿ ||
ಹೊರ ಹೊಳಪಿನಾಸೆಯಿಂದೊಳಮಬ್ಬನಪ್ಪುವನು |
ಕುರುಡನೇ ಕಂಡವನೊ - ಮರುಳ ಮುನಿಯ || (೧೨೬)

(ಸಿರಿದೇವಿಯ+ಅಂಗಡಿಯನ್+ಅರಸಿ)(ಹೊಳಪಿನ+ಆಸೆಯಿಂದ+ಒಳಮಬ್ಬನ್+ಅಪ್ಪುವನು)

ಸರಸ್ವತಿದೇವಿಯ ಛತ್ರ ತನ್ನ ಹತ್ರದಲ್ಲೇ ಇದ್ದರೂ ಸಹ, ಅದನ್ನು ಬಿಟ್ಟು ದೂರದಲ್ಲಿರುವ ಲಕ್ಷ್ಮಿದೇವಿಯ ಅಂಗಡಿಯನ್ನು ಹುಡುಕಿಕೊಂಡುಹೋಗಿ, ಮೋಸಹೋಗಿ, ಹೊರಗಿನ ಕಾಂತಿಯ (ಹೊಳಪು) ಆಸೆಯಿಂದ ತನ್ನ ಒಳಗಡೆ ಕತ್ತಲೆ(ಮಬ್ಬು)ಯನ್ನು ಹೊಂದುತ್ತಾನೆ. ಅವನು ಒಬ್ಬ ಕುರುಡನೇ ಎಂದು ತಿಳಿ.

No comments:

Post a Comment