Friday, October 11, 2013

ಅರಿಯಾರು ಮಿತ್ರನಾರ್ ಪ್ರಕೃತಿಕರವೆರೆಡರಲಿ (511)

ಅರಿಯಾರು ಮಿತ್ರನಾರ್ ಪ್ರಕೃತಿಕರವೆರೆಡರಲಿ |
ಇರವೀವುದೊಂದಿರಲು ತೆರಪೀವುದೊಂದು ||
ಪರಿವೃತ್ತಕಂದುಕಾಕ್ರೀಡೆ ವಿಧಿಯಮರೊಳಗೆ |
ಬರಿಯ ಕಂದುಕ ನಾವು - ಮರುಳ ಮುನಿಯ || (೫೧೧)

(ಪ್ರಕೃತಿಕರ+ಎರೆಡರಲಿ)(ಇರವು+ಈವುದು+ಒಂದು+ಇರಲು)(ತೆರಪು+ಈವುದು+ಒಂದು)

ಶತ್ರು(ಅರಿ) ಯಾರು ಮತ್ತು ಸ್ನೇಹಿತನು ಯಾರು? ಇವೆರಡರಲ್ಲೂ ಪ್ರಕೃತಿಯ ಕೈವಾಡವಿದೆ. ಒಂದು ನಮಗೆ ಅಸ್ತಿತ್ವವನ್ನು ಕೊಟ್ಟಿದೆ. ಮತ್ತೊಂದು ಬಿಡುವನ್ನು ಕೊಟ್ಟಿದೆ. ವಿಧಿ ಮತ್ತು ಯಮರ ನಡುವೆ ಚೆಂಡಿ(ಕಂದುಕ)ನಾಟ ನಡೆಯುತ್ತಿದೆ. ಚೆಂಡು ಒಂದೊಂದು ಸಲ ಒಬ್ಬೊಬ್ಬರ ಬಳಿ ಇರುತ್ತದೆ. ನಾವು ಕೇವಲ ಚೆಂಡು. ಆದದ್ದರಿಂದ, ಅವರು ಎಲ್ಲಿಗೆ ಹೊಡೆಯುತ್ತಾರೋ, ಅಲ್ಲಿಗೆ ಹೋಗಿ ಬೀಳುತ್ತೇವೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Who is foe and who is friend? Nature handles both.
One allows us to stay and the other forces us to quit
This life is a game of ball between Fate and the God of death
Within the marked circle and we are just the ball – Marula Muniya
(Translation from "Thus Sang Marula Muniya" by Sri. Narasimha Bhat) 

No comments:

Post a Comment