Monday, December 2, 2013

ದೊರೆ ತನದು ಬಲಮೆಂದು ಜನ ತಮದು ನೆಲನೆಂದು (539)

ದೊರೆ ತನದು ಬಲಮೆಂದು ಜನ ತಮದು ನೆಲನೆಂದು |
ಪರಿಪಂಥದಲಿ ಪೊಣರೆ ರಾಜ್ಯ ವಿಷಮಿಸದೇಂ? ||
ದೊರೆಯವರ ಮನವರಿತು ಜನರವರ ಹೊರೆಯರಿತು |
ಇರುತನವಮೀರೆ ಸೊಗ - ಮರುಳ ಮುನಿಯ || (೫೩೯)

(ಬಲಮ್+ಎಂದು)(ನೆಲನ್+ಎಂದು)(ಇರುತನವ+ಮೀರೆ)

ರಾಜ್ಯವನ್ನು ನಡೆಸುವ ಭಾರವನ್ನು ಹೊತ್ತಿರುವ ರಾಜನು, ರಾಜ್ಯಾಧಿಕಾರ ತನ್ನದೆಂದೂ, ಆದರೆ ಜನರು ತಾವು ವಾಸಿಸುತ್ತಿರುವ ನಾಡು ತಮಗೇ ಸೇರಿದ್ದೆಂದು ಸ್ಪರ್ಧಾ ಮನೋಭಾವದಲ್ಲಿ(ಪರಿಪಂಥದಲಿ) ಹೋರಾಡಿದರೆ (ಪೊಣರೆ) ರಾಜ್ಯವು ಸಂಕಟ ಪರಿಸ್ಥಿತಿಯಲ್ಲಿ ಸಿಲುಕಿಕೊಳ್ಳದಿರುತ್ತದೆಯೇ? ರಾಜನು ತನ್ನ ಜನರ ಮನಸ್ಸನ್ನು ಅರ್ಥ ಮಾಡಿಕೊಂಡು, ಹಾಗೆಯೇ ಜನರೂ ಸಹ ದೊರೆಗಿರುವ ರಾಜ್ಯ ನಡೆಸುವ ಭಾರಗಳನ್ನು ತಿಳಿದುಕೊಂಡು, ಅವರಿಬ್ಬರೂ ಬೇರೆ ಬೇರೆ ಬೇರೆಯೆಂಬ ಭಾವನೆಯನ್ನು ಮೀರಿದರೆ ರಾಜ್ಯದಲ್ಲಿ ಸುಖ, ಶಾಂತಿಗಳು ನೆಲಸುತ್ತವೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The king asserts that all the power is his and the people claim that all land is theirs
Wouldn't the country be in difficulty if they fight like this?
Happiness ensues when the King understands their mind and
The people realize his burden and both overcome duality – Marula Muniya
(Translation from "Thus Sang Marula Muniya" by Sri. Narasimha Bhat)

No comments:

Post a Comment