Showing posts with label ಚಿತ್ತವಿಕ್ಷೋಬೆ ತಾಂ ಮೃತ್ಯುಸಾಕ್ಷಾದ್ರೂಪ. Show all posts
Showing posts with label ಚಿತ್ತವಿಕ್ಷೋಬೆ ತಾಂ ಮೃತ್ಯುಸಾಕ್ಷಾದ್ರೂಪ. Show all posts

Monday, February 10, 2014

ಚಿತ್ತವಿಕ್ಷೋಬೆ ತಾಂ ಮೃತ್ಯುಸಾಕ್ಷಾದ್ರೂಪ (568)

ಚಿತ್ತವಿಕ್ಷೋಬೆ ತಾಂ ಮೃತ್ಯುಸಾಕ್ಷಾದ್ರೂಪ |
ಪ್ರತ್ಯಕ್ಷಯಮನು ನಿನ್ನೊಳೆದ್ದಿಹ ಕ್ರೋಧ ||
ಕತ್ತಿಯೊಂದಲಗು ತರಿಯಲ್ಪಗೆಯನಿನ್ನೊಂದು |
ಕೆತ್ತುವುದು ನಿನ್ನನೇ - ಮರುಳ ಮುನಿಯ || (೫೬೮)

(ಸಾಕ್ಷಾದ್+ರೂಪ)(ನಿನ್ನೊಳ್+ಎದ್ದಿಹ)(ಕತ್ತಿಯ+ಒಂದು+ಅಲಗು)(ತರಿಯಲ್+ಪಗೆಯನ್+ಇನ್ನೊಂದು)

ಮನಸ್ಸಿನ ಅಸ್ಥಿರತೆ (ವಿಕ್ಷೋಭೆ) ಸಾವಿನ ಪ್ರತ್ಯಕ್ಷ ರೂಪ. ನಿನ್ನೊಳಗೆ ಭುಗಿಲೆದ್ದಿರುವ ಕೋಪ(ಕ್ರೋಧ)ವು ಸಾಕ್ಷಾತ್ ಯಮಧರ್ಮರಾಯನೇ ಹೌದು. ಇಬ್ಬಾಯಿ ಕತ್ತಿಯ ಹರಿತವಾದ ಒಂದು ತುದಿ ನಿನ್ನ ಹಗೆಯನ್ನು ತರಚಿ, ಗೀರಿದರೆ ಅದರ ಇನ್ನೊಂದು ತುದಿ ಮಾತ್ರ ನಿನ್ನನ್ನೇ ಕತ್ತರಿಸುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Mental commotion is the very incarnation of Death
Anger burning in mind is nothing but death
When one blade of the double-end edged sword pierces the enemy
The other one pierces your own body into pieces – Marula Muniya
(Translation from "Thus Sang Marula Muniya" by Sri. Narasimha Bhat)