Monday, February 10, 2014

ಚಿತ್ತವಿಕ್ಷೋಬೆ ತಾಂ ಮೃತ್ಯುಸಾಕ್ಷಾದ್ರೂಪ (568)

ಚಿತ್ತವಿಕ್ಷೋಬೆ ತಾಂ ಮೃತ್ಯುಸಾಕ್ಷಾದ್ರೂಪ |
ಪ್ರತ್ಯಕ್ಷಯಮನು ನಿನ್ನೊಳೆದ್ದಿಹ ಕ್ರೋಧ ||
ಕತ್ತಿಯೊಂದಲಗು ತರಿಯಲ್ಪಗೆಯನಿನ್ನೊಂದು |
ಕೆತ್ತುವುದು ನಿನ್ನನೇ - ಮರುಳ ಮುನಿಯ || (೫೬೮)

(ಸಾಕ್ಷಾದ್+ರೂಪ)(ನಿನ್ನೊಳ್+ಎದ್ದಿಹ)(ಕತ್ತಿಯ+ಒಂದು+ಅಲಗು)(ತರಿಯಲ್+ಪಗೆಯನ್+ಇನ್ನೊಂದು)

ಮನಸ್ಸಿನ ಅಸ್ಥಿರತೆ (ವಿಕ್ಷೋಭೆ) ಸಾವಿನ ಪ್ರತ್ಯಕ್ಷ ರೂಪ. ನಿನ್ನೊಳಗೆ ಭುಗಿಲೆದ್ದಿರುವ ಕೋಪ(ಕ್ರೋಧ)ವು ಸಾಕ್ಷಾತ್ ಯಮಧರ್ಮರಾಯನೇ ಹೌದು. ಇಬ್ಬಾಯಿ ಕತ್ತಿಯ ಹರಿತವಾದ ಒಂದು ತುದಿ ನಿನ್ನ ಹಗೆಯನ್ನು ತರಚಿ, ಗೀರಿದರೆ ಅದರ ಇನ್ನೊಂದು ತುದಿ ಮಾತ್ರ ನಿನ್ನನ್ನೇ ಕತ್ತರಿಸುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Mental commotion is the very incarnation of Death
Anger burning in mind is nothing but death
When one blade of the double-end edged sword pierces the enemy
The other one pierces your own body into pieces – Marula Muniya
(Translation from "Thus Sang Marula Muniya" by Sri. Narasimha Bhat)

No comments:

Post a Comment