Tuesday, February 11, 2014

ದೇಶ ದೇಶದ ಚರಿತೆ ಮಾನುಷ್ಯನಾಶಕಥೆ (569)

ದೇಶ ದೇಶದ ಚರಿತೆ ಮಾನುಷ್ಯನಾಶಕಥೆ |
ಘಾಸ ಪಸಿರೆಂತಂತು ಮಸಣಮುಂಟಲ್ಲಿ ||
ರೋಷ ಮತ್ಸರಬೀಜ ಮನುಜವಿಧ್ವಂಸಕ್ಕೆ |
ಶಾಶ್ವತರಹಸ್ಯವದು - ಮರುಳ ಮುನಿಯ || (೫೬೯)

(ಪಸಿರ್+ಎಂತು+ಅಂತು)(ಮಸಣಮ್+ಉಂಟಲ್ಲಿ)

ಪ್ರತಿಯೊಂದು ದೇಶದ ಕಥೆಯೂ ಮನುಷ್ಯರುಗಳ ನಾಶದ ಕಥೆಯೇ ಹೌದು. ಒಬ್ಬೊರನ್ನೊಬ್ಬರು ಕಾದಾಡಿ ಭೂಮಿಯನ್ನು ಒಂದು ಸ್ಮಶಾನವನ್ನಾಗಿ ಮಾಡುತ್ತಿರುವಾಗ ಅಲ್ಲಿ ಸೊಂಪಾದ ಹಸಿರು(ಪಸಿರು) ಹುಲ್ಲು(ಘಾಸ)ಗಾವಲನ್ನು ಕಾಣಲಾದೀತೇನು? ರೋಷ, ದ್ವೇಷ ಮತ್ತು ಅಸೂಯೆಗಳು ಮನುಷ್ಯನ ಸಂಪೂರ್ಣ ವಿನಾಶಕ್ಕೆ ಕಾರಣವಾಗುತ್ತದೆ. ಇದು ಎಲ್ಲ ಕಾಲಕ್ಕೂ ಇರುವ ಗುಟ್ಟು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The history of every nation is the tale of human destruction
Cremation grounds and green patches of grass exist side by side
The seeds of anger and jealousy lead to human destruction
This is an eternal mystery – Marula Muniya
(Translation from "Thus Sang Marula Muniya" by Sri. Narasimha Bhat)

No comments:

Post a Comment