Thursday, February 20, 2014

ವಾಮಚರ‍್ಯೆಗಳಿರ‍್ಪುದುಂಟು ಮೈಮೆಯ ತಳದಿ (574)

ವಾಮಚರ‍್ಯೆಗಳಿರ‍್ಪುದುಂಟು ಮೈಮೆಯ ತಳದಿ |
ಗ್ರಾಮಸಾರವ ಕೊಳ್ಳದಾರಾಮವುಂಟೆ ? ||
ತಾಮರಸವನು ಬೇಳ್ಪೊಡದರ ಕೀಳ್‍ಕೆಸರಮರೆ |
ಶ್ಯಾಮಸಿತ ದಾಂಪತ್ಯ - ಮರುಳ ಮುನಿಯ || (೫೭೪)

(ವಾಮಚರ‍್ಯೆಗಳ್+ಇರ‍್ಪುದು+ಉಂಟು)(ಕೊಳ್ಳದೆ+ಆರಾಮ+ಉಂಟೆ)(ಬೇಳ್ಪೊಡೆ+ಅದರ)(ಕೀಳ್‍ಕೆಸರ್+ಅಮರೆ)

ಮಹಿಮೆ(ಮೈಮೆ)ಗಳ ತಳಭಾಗದಲ್ಲಿ ಪ್ರತಿಕೂಲ(ವಾಮ) ನಡತೆಗಳು ಇರುವುದುಂಟು. ತ್ಯಾಜ್ಯನೀರನ್ನು ಉಪಯೋಗಿಸದೆ ತೋಟವು(ಆರಾಮ) ಬೆಳೆಯಲು ಸಾಧ್ಯವೇನು? ತಾವರೆಯ ಹೂ(ತಾಮರಸ)ವನ್ನು ಅಪೇಕ್ಷಿಸುವಾಗ ಅದರ ಬಳ್ಳಿಯ ಬುಡದಲ್ಲಿರುವ ಕೆಸರನ್ನು ನೀನು ಮರೆಯಬೇಕು. ದಾಂಪತ್ಯ ಜೀವನದಲ್ಲೂ, ಇದೇ ರೀತಿ ಕಪ್ಪು(ಶ್ಯಾಮ) ಬಿಳುಪು(ಸಿತ)ಗಳು ಕೂಡಿರುತ್ತವೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Some misconduct there may be at the bottom of greatness,
Is there any garden that does not draw sustenance from sewage?
If you wish to pluck a lotus, forget the slush at its root
Married life is a mixture of black and white – Marula Muniya
(Translation from "Thus Sang Marula Muniya" by Sri. Narasimha Bhat)

No comments:

Post a Comment