Friday, February 14, 2014

ಮೃಗದಂಶವಳಿವನಕ ಮೃಗತೃಷ್ಣೆ ಕಳೆವನಕ (571)

ಮೃಗದಂಶವಳಿವನಕ ಮೃಗತೃಷ್ಣೆ ಕಳೆವನಕ |
ಮಿಗಿಲು ತನುವಾತ್ಮದಿಂದೆಂಬುದಿರುವನಕ ||
ಸೊಗವೇಕೆ ಸೋದರಂಗೆಂಬ ಕರುಬಿರುವನಕ |
ಜಗಕೆ ಶಾಂತಿಯದೆಂತೊ? - ಮರುಳ ಮುನಿಯ || (೫೭೧)

(ಮೃಗದ+ಅಂಶ+ಅಳಿವನಕ)(ತನುವು+ಆತ್ಮದಿಂದ+ಎಂಬುದು+ಇರುವನಕ)(ಸೊಗವು+ಏಕೆ)(ಸೋದರಂಗೆ+ಎಂಬ)(ಕರುಬು+ಇರುವನಕ)(ಶಾಂತಿ+ಅದು+ಎಂತೊ)

ಮನುಷ್ಯರ ಮನಸ್ಸುಗಳಲ್ಲಿರುವ ಪಶುವಿನ ಅಂಶವು ನಾಶವಾಗುವತನಕ, ಅವನು ಮರೀಚೆಕೆ(ಮೃಗತೃಷ್ಣೆ)ಯನ್ನು ಹಿಂಬಾಲಿಸಿ ಓಡಿಹೋಗುವುದನ್ನು ತ್ಯಜಿಸುವತನಕ, ದೇಹವು ಆತ್ಮಕ್ಕಿಂತ ದೊಡ್ಡದು ಎಂಬ ತಪ್ಪು ಕಲ್ಪನೆ ಇರುವತನಕ, ತನ್ನ ಸಹೋದರರು ಏತಕ್ಕಾಗಿ ಸುಖ, ಸಂತೋಷಗಳನ್ನು ಅನುಭವಿಸಬೇಕೆಂಬ ಮತ್ಸರವು ಮನುಷ್ಯನಲ್ಲಿರುವ ತನಕ, ಜಗತ್ತಿಗೆ ಶಾಶ್ವತವಾದ ಸುಖ, ಶಾಂತಿ ಮತ್ತು ನೆಮ್ಮದಿಗಳು ಹೇಗೆ ತಾನೆ ಸಿಗುತ್ತದೆ?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Until animal nature becomes extinct or his beasty desires die,
As long as man considers his body is superior to his soul,
So long as one envies one’s own brother enjoying happiness
How can there be peace on earth? – Marula Muniya
(Translation from "Thus Sang Marula Muniya" by Sri. Narasimha Bhat)

No comments:

Post a Comment