Showing posts with label ಜಾಗರೂಕತೆ ಸಹನೆ ಸದಸದ್ವಿವೇಕಮೀ. Show all posts
Showing posts with label ಜಾಗರೂಕತೆ ಸಹನೆ ಸದಸದ್ವಿವೇಕಮೀ. Show all posts

Thursday, June 23, 2011

ಜಾಗರೂಕತೆ ಸಹನೆ ಸದಸದ್ವಿವೇಕಮೀ (29)

ಜಾಗರೂಕತೆ ಸಹನೆ ಸದಸದ್ವಿವೇಕಮೀ |
ತ್ರೈಗುಣ್ಯ ನೀಗುವುದು ಬಹು ಕಷ್ಟಗಳನು ||
ಆಗದೊಡೆ ದೈವಕ್ಕೆ ತಲೆಬಾಗು ಶರಣೆಂದು |
ಬಾಗು ತಲೆಯನು ನಗುತ - ಮರುಳ ಮುನಿಯ || (೨೯)

(ಸತ್+ಆಸತ್+ವಿವೇಕಂ+) (ಶರಣು+ಎಂದು)

ಸದಾ ಜಾಗರೂಕನಾಗಿ ಎಚ್ಚರತಪ್ಪದಿರುವುದು, ಮಾಡುವ ಕೆಲಸ ಕಾರ್ಯಗಳನ್ನು ಸಹನೆಯಿಂದ ಮಾಡುವುದು ಮತ್ತು ಯಾವುದು ಒಳಿತು ಮತ್ತು ಯಾವುದು ಕೆಟ್ಟದ್ದು ಎನ್ನುವ ವಿವೇಚನೆಯನ್ನು ಬೆಳಸಿಕೊಳ್ಳುವುದು, ಈ ಮೇಲಿನ ಮೂರು ಸ್ವಭಾವ(ತ್ರೈಗುಣ್ಯ)ಗಳ ಅಭ್ಯಾಸದಿಂದ ನಾವು ನಮ್ಮ ಬಹುತೇಕ ಕಷ್ಟಗಳನ್ನು ನಿವಾರಿಸಿಕೊಳ್ಳಬಹುದು. ಈ ರೀತಿಯ ಅಭ್ಯಾಸದಿಂದಲೂ ಕಾರ್ಯಸಿದ್ಧಿ ಆಗದಿದ್ದಲ್ಲಿ ಆ ದೈವಕ್ಕೆ ತಲೆಬಗ್ಗಿಸಿ ಮೊರೆಹೋಗು. ನಗುತ್ತಾ ತಲೆಯನ್ನು ಬಗ್ಗಿಸು.


 ಇಲ್ಲಿ ಮೊರೆಹೋಗು ಎಂದರೆ ನಿನ್ನಿಂದಾಗದ ಕೆಲಸವನ್ನು ದೇವರಲ್ಲಿ ಬೇಡು ಎನ್ನುವುದಲ್ಲ. ನಿನ್ನೆಲ್ಲಾ ಪ್ರಯತ್ನವೂ ವಿಫಲವಾಗಿ ಕಷ್ಟವು ನಿವಾರಣೆ ಆಗದಿದ್ದಾಗ, ’ನೋವ ನೀಂ ಪಡುವದೇ ದೈವೇಚ್ಛೆಎಂದುಕೊಂಡು ಆ ಕಷ್ಟವನ್ನು ಸಹಿಸಿಕೊಳ್ಳುತ್ತಾ, ನಗುತ್ತಾ ದೇವರ ಮುಂದೆ ಶರಣುಹೋಗು.