Showing posts with label ನರನುಮಂತಲೆಯವೋಲ್ ಪರಿಪರಿದು ಬಸವಳಿದು. Show all posts
Showing posts with label ನರನುಮಂತಲೆಯವೋಲ್ ಪರಿಪರಿದು ಬಸವಳಿದು. Show all posts

Friday, June 15, 2012

ನರನುಮಂತಲೆಯವೋಲ್ ಪರಿಪರಿದು ಬಸವಳಿದು (226)

ನರನುಮಂತಲೆಯವೋಲ್ ಪರಿಪರಿದು ಬಸವಳಿದು |
ಬೆರೆತು ಜನಜೀವನದಿ ತನ್ನತನವಳಿಯೆ ||
ಚರ ಜಗನ್ಮೂಲದ ಸ್ಥಿರತತ್ತ್ವವನು ಬಯಸಿ |
ಕರಗುವುದೆ ಮುಕ್ತಿಪದ - ಮರುಳ ಮುನಿಯ || (೨೨೬)

(ನರನುಮಂತು+ಎಲೆಯವೋಲ್)(ತನ್ನತನವ+ಅಳಿಯೆ)(ಜಗತ್+ಮೂಲದ)

ಮನುಷ್ಯನೂ ಸಹ ನೀರಿನ ಅಲೆಗಳಂತೆ ಹರಿದು, ಸುಸ್ತಾಗಿ ಜನಜೀವನದಲ್ಲಿ ಒಂದಾಗಿ ಸೇರಿಕೊಂಡು ತಾನೇ ಬೇರೆ ಎನ್ನುವ ಅಭಿಪ್ರಾಯವನ್ನು ಕಳೆದುಕೊಂಡು, ಚಲಿಸುತ್ತಿರುವ ಜಗತ್ತಿನ ಆದಿ ಮತ್ತು ಹುಟ್ಟಿನ ಸ್ಥಿರ ಸಿದ್ಧಾಂತವನ್ನು ಅಪೇಕ್ಷಿಸಿ ಅದರಲ್ಲಿ ಕರಗಿಹೋಗುವುದೇ ಮೋಕ್ಷಕ್ಕೆ ದಾರಿ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

A water wave flows on and on and finally gets exhausted
Likewise a man’s losing his separate identity living with fellow beings
And melting himself yearning for the Eternal Truth,
The every root of the all this changing world is liberation – Marula Muniya
(Translation from "Thus Sang Marula Muniya" by Sri. Narasimha Bhat)